Hitler Kalyana: ಅಂತರ ರೂಪಧಾರಿ ಆಗಿ ಬದವಳು ಯಾರು? ಏಜೆ - ಲೀಲಾ ಬದುಕಲ್ಲಿ ಮಹಾ ತಿರುವು!
ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಈಗ ಮಹತ್ತರ ತಿರುವು ಸಿಕ್ಕಿದ್ದು ನೋಡುಗರಿಗೆ ಇನ್ನಷ್ಟು ಕುತೂಹಲ ಮೂಡಿಸುತ್ತಾ ಇದೆ . ಹೌದು ಇದೀಗ ಮನೆಗೆ ಬಂದಿರುವುದು ಅಂತರ ಎಂದುಕೊಂಡಿರುವವರಿಗೆ ಬಿಗ್ ಶಾಕ್ ಆಗಿದೆ. ಏಜೆ ಹೆಂಡತಿ ಸತ್ತು ಹೋಗಿದ್ದಾಳೆ ಆದರೆ ಆಕೆಯ ತದ್ರೂಪಿ ಆಗಿರುವ ಅಂತರ ಹೆಸರಲ್ಲಿ ಏಜೆ ಮನೆ ಸೇರಿಕೊಂಡಿರುವಾಕೆ ಯಾರು ಎಂಬುವುದು ಎಲ್ಲರಿಗೂ ಕಾಡುತ್ತಿರುವ ಬಹು ದೊಡ್ಡ ಪ್ರಶ್ನೆ ಆಗಿದೆ.
ಇನ್ನು ಹಳೆಯ ಬಂಗಲೆಯ ಬಳಿ ಬಂದ ಅಂತರ ತದ್ರೂಪಿ ಅಂತರ ಫೋಟೋ ಬಳಿ ಬಂದು ನಿನ್ನ ಜಾಗಕ್ಕೆ ನಾನು ಹೋಗುತ್ತೇನೆ ಅಂದುಕೊಂಡಿದ್ದೆ, ಲೀಲಾ ಏಜೆಗೆ ಹತ್ತಿರ ಆಗುತ್ತಾಳೆ, ಆದರೆ ನಾನು ಏಜೇಯಿಂದ ಮತ್ತಷ್ಟು ದೂರ ಹೋಗುತ್ತಾ ಇದ್ದೇನೆ ಎಂದು ಜೋರಾಗಿ ಕೂಗಿಕೊಳ್ಳುತ್ತಿರುವ ಪ್ರೋಮೋ ಇದೀಗ ವೈರಲ್ ಆಗಿದೆ.

ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಅಂತರ ಆಗಮಿಸಿದಾಗ ಇನ್ನು ಲೀಲಾ ಗತಿ ಏನು ಎಂದು ಜನರು ಪ್ರಶ್ನೆ ಮಾಡುತ್ತಾ ಇದ್ದರು. ಆದರೆ ಮನೆಗೆ ಬಂದಾಕೆ ಅಂತರ ಅಲ್ಲ ಎಂದು ತಿಳಿದ ಧಾರವಾಹಿ ನೋಡುಗರಿಗೆ ಬಹಳಷ್ಟು ಖುಷಿ ಆಗಿದೆ. ಕೌಸಲ್ಯ ಜೋರಾಗಿ ಎಲ್ಲರನ್ನೂ ಕರೆದು ಕಿರುಚಾಟ ಮಾಡುತ್ತಾ ಇರುತ್ತಾಳೆ .
ಲೀಲಾ ವಿಚಾರವನ್ನು ಅಂತರ ಮುಂದೆ ಹೇಳಿ ಬಿಡುತ್ತೇನೆ ಎಂದೆಲ್ಲ ಜೋರಾಗಿ ಮಾತನಾಡುತ್ತಾ ಇರುವಾಗ ಲೀಲಾಗೆ ಮತ್ತು ಏಜೇಗೆ ಇನ್ನಷ್ಟು ಭಯ ಆಗುತ್ತದೆ. ಯಾಕೆ ಹೀಗೆಲ್ಲ ಮಾಡುತ್ತಾ ಇದ್ದಾರೆ ಅಮ್ಮ ಎಂದು ನೊಂದುಕೊಂಡಿರುತ್ತಾಳೆ. ಇನ್ನು ಕೌಸಲ್ಯಗೆ ಹಣದ ಹುಚ್ಚು, ಆಕೆಗೆ ದುರ್ಗಾ ಹಣದ ಆಮಿಷ ಒಡ್ಡಿರುತ್ತಾಳೆ.
ಆ ಕಾರಣದಿಂದ ಆಗಿ ಏಜೇ ಹಾಗೂ ಲೀಲಾನ ಬೇರೆ ಮಾಡಲೇ ಬೇಕು ಎಂದು ಹೇಳುತ್ತ ಇರುವಾಗ ಕೋಪಗೊಂಡ ಚಂದ್ರಶೇಖರ್ ಕೌಸಲ್ಯ ಕೆನ್ನೆ ಮೇಲೆ ಬಲವಾಗಿ ಎರಡು ಬಾರಿಸುತ್ತಾನೆ. ಗಂಡನ ವರ್ತನೆ ನೋಡಿ ನನಗೆ ಎಲ್ಲರ ಮುಂದೆ ಹೊಡಿತಿರ ನೀವು ಎಂದಾಗ ಚಂದ್ರಶೇಖರ್ ಮನೆಯ ಗಂಡಸು ಗಂಡಸಾಗಿ ಇದ್ದರೆ ಚೆನ್ನ, ಬದಲಾಗಿ ಹೆಂಡತಿ ಗಂಡಸು ಆಗಲು ಬಂದರೆ ನಾನು ಸುಮ್ಮನೆ ಇರುವುದಿಲ್ಲ ಎಂದು ಹೇಳಿದಾಗ ಕೌಸಲ್ಯ ನಾನು ಸತ್ತು ಹೋಗುತ್ತೇನೆ ಎಂದು ಹೇಳ್ತಾಳೆ. ಚಂದ್ರಶೇಖರ್ ಆಕೆಗೆ ಸೀಮೆ ಎಣ್ಣೆ ತಂದು ಕೊಡುತ್ತಾನೆ. ಇದೆಲ್ಲವನ್ನೂ ನೋಡಿದ ಕೌಸಲ್ಯ ನನ್ನ ಹಾಗೂ ಗಂಡನ ನಡುವೆ ಇದೀಗ ನಡೆಯಬಾರದ್ದು ನಡೆಯುತ್ತದೆ ಎಂದುಕೊಂಡು ಗಂಡನ ಕಾಲಿಗೆ ಬೀಳುತ್ತಾಳೆ. ಇದನ್ನು ನೋಡಿದ ಲೀಲಾ ಮನೆ ಮಂದಿ ನಿಟ್ಟುಸಿರು ಬಿಡುತ್ತಾರೆ.


Click it and Unblock the Notifications











