ತಂಗಿ ಜೀವನ ಕಾಪಾಡಲು ಹೊರಟ ಲೀಲಾ? ಎಲ್ಲರ ಮುಂದೆ ಸೋಲಲು ಕಾರಣವೇನು?
'ಹಿಟ್ಲರ್ ಕಲ್ಯಾಣ' ಧಾರಾವಾಹಿ ಅದ್ಭುತವಾಗಿ ಮೂಡಿ ಬರುತ್ತಿದೆ ಆದರೆ ಇದೀಗ ಏಜೇ ನಡೆ ಮಾತ್ರ ವಿಚಿತ್ರವಾಗಿದೆ. ಇದೀಗ ದೇವ್ ಮಾತಿಗೆ ಮರುಳಾದ ರೇವತಿ ಮನೆ ಬಿಟ್ಟು ಹೊರಬಂದಿದ್ದಾಳೆ. ಆದರೆ ಲೀಲಾಳನ್ನು ಕಂಡು ರೇವತಿ ತಬ್ಬಿಬ್ಬಾಗಿದ್ದಾಳೆ ಎಲ್ಲಿಗೆ ಹೊರಯಿದ್ದಿಯ ರೇವತಿ ಎಂದು ಕೇಳಿದಾಗ ರೇವತಿಗೆ ದಿಕ್ಕೇ ತೋಚದ ಹಾಗೆ ಆಗುತ್ತದೆ. ಇತ್ತ ದೇವ್ ಏಜೆ ಬಳಿ ಮಾತನಾಡುತ್ತಾ ಇರಬೇಕಾದರೆ ಲೀಲಾ ಹಾಗೂ ರೇವತಿಯನ್ನು ಕಂಡು ದಂಗಾಗುತ್ತಾನೆ.
ಆದರೆ ರೇವತಿ ಮಾತ್ರ ಅಕ್ಕ ಪರ ನಿಲ್ಲದೆ ದೇವ್ ಪರ ನಿಂತಿದ್ದಕ್ಕೆ ರೇವತಿಗೆ ಬಹಳ ನೋವಾಗುತ್ತದೆ. ಆದರೆ ಅದನ್ನು ತೀರಿಸಿಕೊಳ್ಳುವುದು ಇಲ್ಲ. ಈಗ ಏಜೆ ರೇವತಿ ಬಳಿ ಪ್ರಶ್ನೆ ಮಾಡಿದ್ದಾರೆ. ರೇವತಿ ನೀನು ಫ್ರೆಂಡ್ ಮನೆಗೆ ಹೋಗುವುದಾದರೆ ಇಷ್ಟು ದೊಡ್ಡ ಲಗೇಜ್ ಬೇಕಾ ಎಂದು ಕೇಳಿದ ವೇಳೆ ರೇವತಿ ತಬ್ಬಿಬ್ಬಾಗುತ್ತಾಳೆ. ಅದಕ್ಕೆ ರೇವತಿ ಹೇಳುತ್ತಾಳೆ ಅವಳಿಗೆ ಬಟ್ಟೆ ಬೇಕಿತ್ತಂತೆ ಅದಕ್ಕೆ ಕೊಡೋದಕ್ಕೆ ಹೋಗಿದ್ದೆ ಅಕ್ಕ. ಅದನ್ನು ತಪ್ಪು ತಿಳಿದರೆ ನಾನೇನು ಮಾಡಕ್ಕಾಗುತ್ತೆ ಎಂದು ಹೇಳುತ್ತಾಳೆ.
ಅದಕ್ಕೆ ದೇವ್ ಹೇಳುತ್ತಾನೆ ಛೇ ನನ್ನ ಹಣೆ ಬರಹವೇ ಸರಿ ಇಲ್ಲ. ನಾನು ತಪ್ಪು ಮಾಡದೇ ಇದ್ದರೂ ಎಲ್ಲಾ ಪ್ರಾಬ್ಲಂ ನನ್ನನ್ನೇ ಹುಡುಕಿಕೊಂಡು ಬರುತ್ತದೆ ಎಂದಾಗ ಲೀಲಾ "ದೇವ್ ಎಲ್ಲಾ ಗೊತ್ತಿದ್ದರೂ ನೀವು ಸುಳ್ಳು ಹೇಳಬೇಡಿ ದೇವ್. ನೀವು ಮಾತನಾಡಿದ್ದನ್ನು ನಾನೇ ಕೇಳಿಸಿಕೊಂಡೆ ಎಂದು ಹೇಳಿ ದೇವ್ ಹತ್ತಿರ ಬಂದು ದೇವ್ ನಿಮ್ಮ ಫೋನ್ ಕೊಡಿ, ನಿಮ್ಮ ಗುಟ್ಟನ್ನು ಬಯಲು ಮಾಡುತ್ತೇನೆ ಆಗ ಗೊತ್ತಾಗುತ್ತೆ ಯಾರು ನಿಜ ಹೇಳುತ್ತಾರೆ ಎಂದು ಹೇಳುತ್ತಾಳೆ.
ಯಾರು ಸುಳ್ಳು ಹೇಳುತ್ತಾರೆ ಎಂದು ಹೇಳಿ ಫೋನ್ ತೆಗೆದುಕೊಂಡು ಕಾಲ್ ಹಿಸ್ಟರಿ ನೋಡುತ್ತಾಳೆ. ಆದರೆ ಲೀಲಾ ಅಲ್ಲಿ ಕೂಡಾ ಸೋತಳು. ದೇವ್ ಬಳಿ ಹೇಳುತ್ತಾಳೆ. ನಿನ್ನೆ ಮಾತನಾಡಿದ ಕಾಲ್ ಹಿಸ್ಟ್ರಿನೇ ಡಿಲಿಟ್ ಮಾಡಿದ್ದೀರಾ. ಏಜೆ ಇವರು ನಿನ್ನೆ ಕಾಲ್ ಅಲ್ಲಿ ಮಾತನ್ನಾಡಿದ್ದರು. ಅದನ್ನು ನಾನೇ ಕೇಳಿಸಿಕೊಂಡಿದ್ದೇನೆ. ಆದರೆ ಇದೀಗ ನಂಬರ್ ಡಿಲಿಟ್ ಮಾಡಿದ್ದಾರೆ ಅಂದಾಗ, ಸರಸ್ವತಿ ಹೇಳುತ್ತಾಳೆ ಸಾಕು ಅತ್ತೆ. ಸುಳ್ಳು ಎಲ್ಲಾ ಸುಳ್ಳು ಮೊದಲು ನಮ್ಮ ಮೇಲೆ ಪ್ರಾಬ್ಲಂ ಕ್ರಿಯೇಟ್ ಮಾಡಲು ನೋಡಿದರೂ ಆಗಲಿಲ್ಲ. ಆಮೇಲೆ ಈ ಮನೆ ಮೇಲೆ ಪ್ರಾಬ್ಲಂ ಕ್ರಿಯೇಟ್ ಮಾಡಲು ಟ್ರೈ ಮಾಡಿದರು. ಅದು ಆಗಲಿಲ್ಲ. ಈಗ ಈ ಮನೆಗೆ ಸಂಬಂಧ ಪಟ್ಟವರ ಮೇಲೆ ಪ್ರಾಬ್ಲಂ ಕ್ರಿಯೇಟ್ ಮಾಡಲು ಸಂಚು ಮಾಡುತ್ತಿದ್ದಾರೆ.

"ನಮ್ಮ ಅಣ್ಣ ನಿಮಗೆ ಎನು ಮಾಡಿದ್ದ ಅತ್ತೆ. ನಮ್ಮ ಅಣ್ಣನೇ ಬೇಕಿತ್ತಾ ನಿಮಗೆ ಎಂದು ಹೇಳುತ್ತಾಳೆ. ಅದಕ್ಕೆ ದುರ್ಗಾ ಏಜೆಯನ್ನೂ ಕರೆಯುತ್ತಾಳೆ. ಏಜೆ ಹೀಗೆ ಹೇಳುತ್ತಿದ್ದೇನೆ ಎಂದು ತಪ್ಪು ತಿಳಿಬೇಡಿ. ನಿನ್ನೆ ಲೀಲಾ ತಾಯಿ ಇಲ್ಲಿಂದ ಹೋಗುವಾಗಲೂ ಕೆಟ್ಟದಾಗಿ ಬಿಹೇವ್ ಮಾಡಿ ಶಾಪ ಹಾಕಿ ಹೋದರು. ಪಾಪ ಸಾರ್ ಹೆದರಿಕೊಂಡು ನಿದ್ದೆ ಸಹ ಮಾಡಲಿಲ್ಲ. ನಾನೇ ಹೋಗಿ ಸಮಾಧಾನ ಮಾಡಬೇಕಾಗಿ ಬಂತು. ಬೇಕಿದ್ದರೆ, ನೀವೇ ಕೇಳಿ ನೋಡಿ . ಲೀಲಾ ಅವರೇ ನಿನ್ನೆ ನಿಮ್ಮ ತಾಯಿ ಹೋಗುವಾಗ ಜಗಳ ಮಾಡಲಿಲ್ವಾ ಎಂದಾಗ ಲೀಲಾ ಮಾತನಾಡದೆ ಸುಮ್ಮನಾಗುತ್ತಾಳೆ. ಬಳಿಕ ಮಾತು ಮುಂದುವರಿಸಿದ ಸರ್ ನೋಡಿದ್ರಾ, ಏಜೇ ಇಷ್ಟೆಲ್ಲಾ ಆದಮೇಲೆ ನೀವು ಏನು ನಿರ್ಧಾರ ತೆಗೆದುಕೊಳ್ಳುತ್ತೀರಾ ಆದೆ ನಮಗೆ ಒಪ್ಪಿಗೆ ಎಂದು ಹೇಳುತ್ತಾಳೆ. ಮುಂದೇನಾಗುತ್ತದೆ ಎಂಬುವುದನ್ನು ಕಾದು ನೋಡಬೇಕಿದೆ.


Click it and Unblock the Notifications











