ಲೀಲಾಳನ್ನು ಅಡ್ಡದಾರಿಗೆ ತಳ್ಳಿದ ಲಕ್ಷ್ಮಿ

By ಪೂರ್ವ

'ಹಿಟ್ಲರ್ ಕಲ್ಯಾಣ' ಧಾರವಾಹಿ ಉತ್ತಮವಾಗಿ ಪ್ರದರ್ಶನಗೊಳ್ಳುತ್ತಿದೆ. ಮಗನ ಜೀವನ ಸರಿಹೋಗಬೇಕು ಎಂದೆಲ್ಲ ಅಮ್ಮ ಕಷ್ಟ ಪಡುತ್ತಿದ್ದಾರೆ. ಆದರೆ ಏಜೆಗೆ ಮೊದಲ ಹೆಂಡತಿಯನ್ನು ಮರೆಯಲು ಸಾಧ್ಯವಾಗದೆ ಇರೋದರಿಂದ ಲೀಲಾಳೊಂದಿಗೆ ಸಂಸಾರ ನಡೆಸಲು ಸಾಧ್ಯವಾಗಲಿಲ್ಲ. ಆದರೂ ಅಜ್ಜಿ ಮಾತನ್ನು ಏಜೆ ಎಂದು ಧಿಕ್ಕರಿಸುವುದಿಲ್ಲ.

ಅಜ್ಜಿ ಪ್ರಯತ್ನದಿಂದ ಏಜೆ ಮತ್ತು ಲೀಲಾ ಒಂದಾಗುತ್ತಿದ್ದಾರೆ. ಇನ್ನೂ ಲೀಲಾ ಮತ್ತು ಅಜ್ಜಿ ಮನೆಯಲ್ಲಿ ಒಟ್ಟಿಗೆ ಮಾತನಾಡುತ್ತಾ, ಅಜ್ಜಿ ಲೀಲಾ ಗೆ ಹೇಳುತ್ತಾರೆ, ಲೀಲಾ ನಾಳೆ ಸ್ವಲ್ಪ ಬೇಗ ಎದ್ದೇಳು ತುಂಬಾ ಮುಖ್ಯವಾದ ಕೆಲಸ ಇದೆ ಎಂದು. ಅದಕ್ಕೆ ಲೀಲಾ ಏನಜ್ಜಿ ಅದು ಕೇಳುತ್ತಾಳೆ ಅದಕ್ಕೆ ಅಜ್ಜಿ ಗುರುಗಳೊಬ್ಬರು ತೀರ್ಥ ಕ್ಷೇತ್ರಕ್ಕೆ ಹೋಗಿದ್ದರು. ನಮ್ಮನೆ ದೃಷ್ಟಿ ತೆಗಿಸಲು ಅಲ್ಲಿಂದ ಕಾಯಿ ಕಳುಹಿಸಿದ್ದಾರೆ. ನೀನೇ ನಿನ್ನ ಕೈಯಾರೆ ಪೂಜೆ ಮಾಡಿ ಕಾಯನ್ನು ಒಡೆದು ದೃಷ್ಟಿ ತೆಗಿಯಬೇಕು ಎಂದು ಹೇಳುತ್ತಾರೆ.

ಅದಕ್ಕೆ ಲೀಲಾ ಹೇಳುತ್ತಾಳೆ ಅಜ್ಜಿ ಎದ್ದೇಳುತ್ತೇನೆ, ನೀವು ಹೇಳಿದ ಟೈಮ್ ಗೆ ಎದ್ದು ನೀವು ಹೇಳಿದ ಕೆಲಸ ಮಾಡುತ್ತೇನೆ ಎಂದು. ಅದಕ್ಕೆ ಅಜ್ಜಿ ನಾಳೆ ಬೇಗ ಎದ್ದೆಳಬೇಕು... ನೀನು ಬೇಗ ಹೋಗಿ ಮಲಗು ಎಂದು ಅಜ್ಜಿ ಹೇಳುತ್ತಾರೆ. ಅದಕ್ಕೆ ಲೀಲಾ ಸರಿ ಅಜ್ಜಿ ನಾನು ಮಲಗುತ್ತೇನೆ. ಗುಡ್ ನೈಟ್ ಎಂದು ಹೇಳುತ್ತಾರೆ. ಬಳಿಕ ಅಲ್ಲಿಂದ ತೆರಳುತ್ತಾಳೆ. ಇತ್ತ ಲೀಲಾ ರೂಮ್ ಗೆ ತೆರಳ ಬೇಕಾದರೆ ಲಕ್ಷ್ಮಿ ಸಿಗುತ್ತಾಳೆ.

ಲೀಲಾಗೆ ಅಡ್ಡ ಸಿಕ್ಕುವ ಲಕ್ಷ್ಮಿ

ಲೀಲಾಗೆ ಅಡ್ಡ ಸಿಕ್ಕುವ ಲಕ್ಷ್ಮಿ

ಏನು ಅತ್ತೆ ಎನು ಯೋಚನೆ ಮಾಡಿಕೊಂಡು ಬರುತ್ತಿದ್ದಿರಾ ನನಗೂ ಏನು ಅಂತ ಹೇಳಿ ನಾನು ಡೀಪ್ ಆಗಿ ಯೋಚನೆ ಮಾಡುತ್ತೇನೆ ಎಂದು ಹೇಳಿದಾಗ ಲೀಲಾ ಹೇಳುತ್ತಾಳೆ ಡೀಪ್ ಏನಿಲ್ಲ, ಅಜ್ಜಿ ಏನೋ ಪೂಜೆ ಮಾಡಿಸಬೇಕು ಎಂದು ಹೇಳಿದರು. ಅವರ ಗುರುಗಳು ಮನೆ ಪೂಜೆ ಮಾಡಿಸಲು ಒಂದು ಕಾಯಿ ಕಳುಹಿಸಿಕೊಡುತ್ತಿದ್ದಾರೆ ಅದಕ್ಕೆ ಮಡಿ ಉಟ್ಟುಕೊಂಡು ಪೂಜೆ ಮಾಡಿ ಮನೆ ಮುಂದೆ ದೃಷ್ಟಿ ತೆಗೆಯಬೇಕೆಂದು ಅಜ್ಜಿ ಹೇಳಿದ್ದಾರೆ. ಅದರ ಬಗ್ಗೆ ಯೋಚನೆ ಮಾಡುತ್ತಿದ್ದೆನೆ. ಅದಕ್ಕೆ ಲಕ್ಷ್ಮಿ ಮನದಲ್ಲಿ ಯೋಚಿಸುತ್ತಾಳೆ ಇದರಲ್ಲಿ ಏನಾದ್ರು ಕಿತಾಪತಿ ಮಾಡಬೇಕಲ್ಲ. ಏನು ಮಾಡಲಿ ಎಂದು ಯೋಚನೆ ಮಾಡುತ್ತಿದ್ದರು.

ಕೈಯಲ್ಲಿ ಕರ್ಪೂರ ಹಿಡಿದು ದೃಷ್ಟಿ ತೆಗೆಯುತ್ತೇವೆ ಎಂದ ಲಕ್ಷ್ಮಿ

ಕೈಯಲ್ಲಿ ಕರ್ಪೂರ ಹಿಡಿದು ದೃಷ್ಟಿ ತೆಗೆಯುತ್ತೇವೆ ಎಂದ ಲಕ್ಷ್ಮಿ

ಮನಸಿನ ಮಾತು ಕೇಳದೆ ಇರಕಾಗುತ್ತಾ ಹಾಗಾದ್ರೆ ಅದನ್ನೇ ಮಾಡುವ ಎಂದು ಹೇಳಿ ಆತ್ತೆ ದೃಷ್ಟಿ ಹೇಗೆ ತೆಗೆಯುತ್ತಾರೆ ಹೇಳಿ ಎಂದಾಗ ಲೀಲಾ ಹೇಳುತ್ತಾಳೆ ಕಾಯಿ ಒಡೆದು ದೃಷ್ಟಿ ತೆಗೆಯೋದು ಮತ್ತೆ ಹೇಗೆ ಎಂದಾಗ ಲಕ್ಷ್ಮಿ ಹೇಳುತ್ತಾಳೆ. ಕೈಯಲ್ಲಿ ಕರ್ಪೂರ ಹಿಡಿದು ಆರತಿ ಮಾಡಿ ಕಾಯಿ ಒಡೆಯುತ್ತೇವೆ ಆದರೆ ನೀವು ಏನೋ ಬೇರೆ ರೀತಿ ಹೇಳುತ್ತಿದ್ದೀರ ಅಂದಾಗ ಲೀಲಾ ಹೇಳುತ್ತಾಳೆ ಏನು ಕಿಂಡಲ್ ಮಾಡುತ್ತಿದ್ದೀರಾ ಅಥವಾ ನೀವೇನಾದರೂ ಪ್ಲಾನ್ ಮಾಡುತ್ತಿದ್ದೀರಾ ಪ್ರಪಂಚದಲ್ಲಿ ಎಲ್ಲರೂ ನಾನು ಹೇಳೋದನ್ನೇ ಮಾಡೋದು ಅದಕ್ಕೆ ಲಕ್ಷ್ಮಿ ಏನೋ ನನಗೆ ಗೊತ್ತಿರೋದು ಅನ್ನು ಹೇಳಿದೆ ಎಂದು ಹೇಳುತ್ತಾಳೆ. ಅದಕ್ಕೆ ಲೀಲಾ ನನಗೆ ಏನೋ ಸಂಶಯ ಬರುತ್ತಿದೆ ನಿಮ್ಮ ಮೇಲೆ ಸರಿ ನಾನು ಆಜ್ಜಿನ ಕೇಳಿ ಬರುತ್ತೇನೆ ಎಂದು ಕೇಳಲು ಹೋಗುತ್ತಾಳೆ.

ಕೈ ಮೇಲೆ ಆರತಿ ಎತ್ತುವಂತೆ ಹೇಳುವ ಲಕ್ಷ್ಮಿ

ಕೈ ಮೇಲೆ ಆರತಿ ಎತ್ತುವಂತೆ ಹೇಳುವ ಲಕ್ಷ್ಮಿ

ಅದಕ್ಕೆ ಲಕ್ಷ್ಮೀ ಹೋಗಿ ಹೋಗಿ ಏಜೆ ಹೆಂಡತಿಗೆ ಇಷ್ಟು ಚಿಕ್ಕ ವಿಷಯವನ್ನೂ ಗೊತ್ತಿಲ್ವಾ ಎಂದುಕೊಳ್ಳುತ್ತಾರೆ ಹೋಗಿ ಹೇಳಿ ಎಂದಾಗ ಲೀಲಾ ಹೇಳುತ್ತಾಳೆ ಹಾಗಾದರೆ ನೀವು ಹೇಳಿದ ಹಾಗೆಯೇ ಕೈ ಮೇಲೆ ಕರ್ಪೂರ ಹಚ್ಚಿ ಆರತಿ ಬೆಳಗ ಬೇಕಾ ಎಂದು ಕೇಳುತ್ತಾಳೆ ಅದಕ್ಕೆ ಲಕ್ಷ್ಮೀ ಹಾಗೆ ಮಾಡಿದರೆ ಒಳ್ಳೆದಾಗುವುದು, ಮಿಕ್ಕಿದ್ದು ನಿಮ್ಮಿಷ್ಟ ಎಂದು ಹೇಳುತ್ತಾಳೆ. ಬಳಿಕ ಅಲ್ಲಿಂದ ಹೋಗುತ್ತಾರೆ. ಇನ್ನೂ ಲೀಲಾ ಹೇಳುತ್ತಾಳೆ ಕೈ ಮೇಲೆ ಕರ್ಪೂರ ಹಾಕಿ ಪೂಜೆ ಮಾಡೋದಾ ಇರ್ಲಿ ಮನೆಗೆ ಒಳ್ಳೆದಾಗುತ್ತದೆ ಎಂದು ಮನದಲ್ಲಿ ಹೇಳಿಕೊಳ್ಳುತ್ತಾಳೆ.

ಕೈ ಮೇಲೆ ಕರ್ಪೂರ ಹಚ್ಚಿಕೊಳ್ಳುತ್ತಾಳಾ ಲೀಲಾ

ಕೈ ಮೇಲೆ ಕರ್ಪೂರ ಹಚ್ಚಿಕೊಳ್ಳುತ್ತಾಳಾ ಲೀಲಾ

ಇನ್ನೂ ಮರುದಿನ ಲಕ್ಷ್ಮಿ ಹೊರಗಡೆ ಎದ್ದು ಕದ್ದು ನೋಡುತ್ತಾಳೆ. ತಡೆದುಕೊಳ್ಳಲು ಆಗುತ್ತಿಲ್ಲ, ಇವಳ ಕೈಗೆ ಯಾವಾಗ ಬೆಂಕಿ ಬಿಳುತ್ತೋ ಎಂದು ಹೇಳುತ್ತಿರುತ್ತಾರೆ. ಇನ್ನೂ ಲೀಲಾ ಪೂಜೆ ಮಾಡುತ್ತಾಳೆ. ಅಜ್ಜಿ ಹೇಳುತ್ತಾರೆ ಮನೆಯ ದೃಷ್ಟಿ ಪರಿಹಾರ ಆಗಲಿ ಎಂದು ಬೇಡಿಕೊಂಡು ಕರ್ಪೂರ ಹಚ್ಚಿ ಕಾಯಿ ಒಡೆದು ಹಾಕು ಎಂದು ಅದಕ್ಕೆ ಲೀಲಾ ಅಯ್ಯೋ ಕೈ ಯಲ್ಲಿ ಕರ್ಪೂರ ಹಚ್ಚಿ ಕೈ ಸುಟ್ಟು ಹೋಗುತ್ತದೆ ಅಲ್ವಾ ಈ ಅಜ್ಜಿ ಏಷ್ಟು ಪ್ರೀತಿ ಮಾಡುತ್ತಾರೆ ಅಲ್ವಾ ಏಜೆ ನನಗೋಸ್ಕರ ಏಷ್ಟು ಕೆಲಸ ಮಾಡಿದ್ದಾರೆ. ಅವರಿಗೆ ಒಳ್ಳೆದಾಗುತ್ತೆ ಅಂದ್ರೆ ನಾನೇನಾದರೂ ಮಾಡಲೇ ಬೇಕು ಎಂದು ಯೋಚನೆ ಮಾಡುತ್ತಾಳೆ. ಇನ್ನೂ ಮುಂದೇನಾಗುತ್ತದೆ ಎಂಬುವುದನ್ನು ಕಾದುನೋಡಬೇಕಿದೆ.

More from Filmibeat

English summary
Kannada serial Hitler kalyana written updated on 10th July. Bonding between AJ and Leela happening slowly.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X