Don't Miss!
- Lifestyle ಮಳೆ ನಿರೀಕ್ಷೆಯಲ್ಲಿದ್ದವರಿಗೆ ಶಾಕ್ ಕೊಟ್ಟ ಹವಾಮಾನ ಇಲಾಖೆ..!
- News ಕರ್ನಾಟಕಕ್ಕೆ ವಸೂಲಿಗೆ ಬಂದಿದ್ದ ರಣದೀಪ್ ಸುರ್ಜೇವಾಲ: ಪ್ರಹ್ಲಾದ್ ಜೋಶಿ
- Automobiles Tata: ಒಬ್ಬರೇ ಬಂದು 2 ಸಾವಿರ ಟಾಟಾ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಿ ಹೋಗಿಬಿಟ್ಟರು!
- Technology ಮೇ 1 ರಂದು ವಿವೋ T3x 5G ಮೊಬೈಲ್ ಮತ್ತೆ ಖರೀದಿಗೆ ಲಭ್ಯ!..ಅಗ್ಗದ ಬೆಲೆ ಇದೆ!
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪ್ರೀತಿಸುವ ಅಭಿಮಾನಿಗಳ ಜೊತೆ 'ಜೋಡಿಹಕ್ಕಿ'ಯ 300ರ ಸಂಭ್ರಮ
ಹಳ್ಳಿಗಾಡಿನ ಹಸಿರ ಮಧ್ಯೆ ಅರಳಿ ನಿಲ್ಲೋ ಜೋಡಿಹಕ್ಕಿ. ಮುಖ್ಯ ಪಾತ್ರಧಾರಿಗಳಾದ ಪೈಲ್ವಾನ್ ರಾಮಣ್ಣನ ಮುಗ್ಧ ಪ್ರೀತಿ, ಜಾನಕಿ ಟೀಚರ್ ಮುದ್ದು ಮಾತುಗಳ ಮೂಲಕವೇ ವೀಕ್ಷಕರ ಮನಗೆದ್ದಿರುವ ಧಾರಾವಾಹಿ. ಹಳ್ಳಿಯ ಸೊಗಡನ್ನೇ ಉಸಿರಾಡುವ ಕಲ್ಲುಬಂಡೆಯಂತಹ ಪೈಲ್ವಾನ್ ರಾಮಣ್ಣ, ಸಿಟಿಯಿಂದ ಬರೋ ಜಾನಕಿ ಟೀಚರ್ ಪ್ರೀತಿಗೆ ಮನಸೋತು ಮದುವೆಯಾಗಿ ಒಟ್ಟಿಗೆ ಬದುಕೋ ಸುಮಧುರ ಕತೆ ಸಾಕಷ್ಟು ವೀಕ್ಷಕರನ್ನ ರಂಜಸಿದೆ.
ಕರ್ನಾಟಕದುದ್ದಕ್ಕೂ ಜೋಡಿಹಕ್ಕಿ ಧಾರಾವಾಹಿ ಅಪಾರ ಅಭಿಮಾನಿ ಬಳಗವನ್ನೇ ಗಳಿಸಿ, ಸದ್ಯ, ಯಶಸ್ವಿ 300 ಸಂಚಿಕೆಗಳನ್ನು ಪೂರೈಸಿದೆ. ಕಿರುತೆರೆಯ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಧಾರಾವಾಹಿ ತಂಡವೊಂದು ತನ್ನ ಅಭಿಮಾನಿಗಳಿಗಾಗೇ ಒಂದು ದಿನವನ್ನು ಮೀಸಲಿಟ್ಟು ಅವರಿಗಾಗಿ ವೇದಿಕೆಯೊಂದನ್ನು ನಿರ್ಮಿಸಿ 300ರ ಸಂಭ್ರಮನ್ನು ತನ್ನ ಅಭಿಮಾನಿಗಳೊಟ್ಟಿಗೇ ಆಚರಿಸಿದೆ.
ಅಪಾರ ಅಭಿಮಾನಿಗಳಿಗಾಗೇ ಒಂದು ದಿನವನ್ನು ಮೀಸಲಿಟ್ಟು ಅವರನ್ನು ರಂಜಿಸಬೇಕೆಂಬ ಹಂಬಲದೊಂದಿಗೆ ಅಭಿಮಾನಿಗಳೊಂದಿಗೆ 'ಜೋಡಿಹಕ್ಕಿ' ಧಾರಾವಾಹಿಯ 300ರ ಸಂಭ್ರಮವನ್ನು ನಡೆಸಿ ಅಭಿಮಾನಿಗಳೊಟ್ಟಿಗೆ ಸಂತಸ ಹಂಚಿಕೊಂಡಿದ್ದಾರೆ ಕಿರುತೆರೆಯ ಯಶಸ್ವಿ ನಿರ್ದೇಶಕ ಆರೂರು ಜಗದೀಶ್. ಈ ಅಮೋಘ ಕಾರ್ಯಕ್ರಮಕ್ಕೆ ಕರ್ನಾಟಕ ಮೂಲೆ ಮೂಲೆಯಿಂದಲೂ ಅಭಿಮಾನಿಗಳು ಬಂದು ಧಾರಾವಾಹಿ ತಂಡದೊಟ್ಟಿಗೆ ಸಂಭ್ರಮಿಸಿದ್ದು ವಿಶೇಷ.
ಸಿನಿ ಸಂಭ್ರಮದಂತೆಯೇ ಪ್ರತಿಯೊಬ್ಬ ಧಾರಾವಾಹಿಯ ನಟ ನಟಿಯರ ಕಟೌಟ್ ಗಳು ಕಾರ್ಯಕ್ರಮದಲ್ಲಿ ರಾರಾಜಿಸುತ್ತಿದ್ದವು. ಇಡೀ ದಿನವನ್ನು ಅಭಿಮಾನಿಗಳಿಗಾಗಿ ಮೀಸಲಿಟ್ಟ ಧಾರಾವಾಹಿ ತಂಡ, ಅವರೆಲ್ಲರ ಪ್ರಶ್ನೆಗಳಿಗೆ ಉತ್ತರಿಸಿ ಖುಷಿಪಡಿಸಿತು. ಕಾರ್ಯಕ್ರಮದಲ್ಲಿ ಮತ್ತೊಂದು ಮಹೋನ್ನತ ಕಾರ್ಯ ಕೈಗೊಂಡ ಜೋಡಿಹಕ್ಕಿ ತಂಡ.. ಧಾರಾವಾಹಿಯಲ್ಲಿ ಪಾತ್ರ ನಿರ್ವಹಿಸುತ್ತಿದ್ದ ದಿ. ಭೂಪಾರವರ ಕುಟುಂಬಕ್ಕೆ 1 ಲಕ್ಷ ರೂ ನೀಡಿ ಕಾರ್ಯಕ್ರಮಕ್ಕೆ ಮತ್ತೊಂದು ಸಾರ್ಥಕತೆ ತಂದುಕೊಟ್ಟಿತು.
ಇದೇ ವೇಳೆ ವೇದಿಕೆಯಲ್ಲಿ ಉಪಸ್ಥಿತರಿದ್ದ ಜೀ ಕನ್ನಡ ವಾಹಿನಿಯ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರ್ ಇದೊಂದು ವಿಶಿಷ್ಟ ಕಥಾಹಂದರವುಳ್ಳ ಧಾರಾವಾಹಿ.. ನಾವೆಷ್ಟು ಪ್ರೀತಿಯಿಂದ ಇದನ್ನು ನಿರ್ಮಿಸಿದ್ದೆವೋ ಅದಕ್ಕೂ ಮಿಗಿಲಾಗಿ ಇದನ್ನು ಪ್ರೀತಿಸಿ, ಪ್ರೋತ್ಸಾಹಿಸಿದ್ದೀರಿ ಎಂದು ಅಭಿಮಾನಿ ವೃಂದಕ್ಕೆ ಅಭಿನಂದನೆ ತಿಳಿಸಿದರು. 'ಜೋಡಿಹಕ್ಕಿ ಅಭಿಮಾನಿಗಳೊಂದಿಗೆ 300ರ ಸಂಭ್ರಮ' ಈ ಅದ್ದೂರಿ ಕಾರ್ಯಕ್ರಮ ಅತೀ ಶೀಘ್ರದಲ್ಲೇ ಜೀó ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.