Lakshmi Baramma: ಲಕ್ಷ್ಮಿ ನನ್ನ ಹೆಂಡತಿ ಅಂತ ವೈಷ್ಣವ್ ಹೇಳ್ತಿದ್ರೆ.. ಸುಮ್ಮನೆ ಬಿಡ್ತಾಳಾ ಕೀರ್ತಿ?

By ಎಸ್ ಸುಮಂತ್

ವೈಷ್ಣವ್ ಸದ್ಯ ಬಿಸಿ ತುಪ್ಪ ಬಾಯಲ್ಲಿ ಹಾಕಿಕೊಂಡ ಪರಿಸ್ಥಿತಿಗೆ ಬಂದು ನಿಂತಿದ್ದಾನೆ. ಆ ಕಡೆ ಉಗುಳುವುದಕ್ಕೂ ಆಗದೆ ಈ ಕಡೆ ನುಂಗುವುದಕ್ಕೂ ಆಗದೆ ಇರುವಂತೆ ಆಗಿದೆ ಕೀರ್ತಿಯಿಂದಾಗಿ. ಆದರೆ ಅದೆಲ್ಲವನ್ನು ಮೀರಿ ಲಕ್ಷ್ಮೀಯ ಪರವಾಗಿ‌ ನಿಲ್ಲುತ್ತಿದ್ದಾನೆ. ತಾನು ಅವಳ ಗಂಡ ಎಂಬುದನ್ನು ಕೀರ್ತಿಗೂ ಪದೇ ಪದೇ ಅರಿವು ಮಾಡಿಕೊಡುತ್ತಿದ್ದಾನೆ.

ಕೀರ್ತಿ ಏನೋ ಮಾಡುವುದಕ್ಕೆ ಹೋಗಿ ಎಲ್ಲವೂ ಉಲ್ಟಾ ಆಗುತ್ತಿದೆ. ಆ ಕಡೆ ಮಾಡದೆ ಇರುವ ತಪ್ಪನ್ನ ಕಾವೇರಿ ತಲೆ ಮೇಲೆ ಎಳೆದುಕೊಳ್ಳುವಂತೆ ಆಗಿದೆ. ಈ ಎಲ್ಲವೂ ಆಗುತ್ತಿರುವುದು ಸುಪ್ರೀತಾಳಿಂದಾಗಿಯೇ. ಸತ್ಯ ತಿಳಿಯುವ ಬಯಕೆಯಲ್ಲಿ ಸುಪ್ರೀತಾ ಮಾಡಲು ಹೊರಟಿರುವುದು ಒಂದೆರಡಲ್ಲ. ಮುಂದೆ ಕಾವೇರಿಗೆ ಅದೇನು ಕಂಟಕ‌ ಕಾದಿದೆಯೋ ಏನೋ..?

Lakshmi Baramma Serial July 21th episode Update

ಹೆಂಡತಿ ಪರವಾಗಿ ನಿಂತ ವೈಷ್ಣವ್

ಸುಪ್ರೀತಾಳ ಮಾತು ಕೇಳಿದ ಮಾಧ್ಯಮದವರು ಲಕ್ಷ್ಮೀಯನ್ನು ಅಡ್ಡ ಹಾಕಿ, ಪ್ರಶ್ನೆ ಮಾಡುವುದಕ್ಕೆ ಶುರು ಮಾಡಿದ್ದರು. ಅದಕ್ಕೆ ವೈಷ್ಣವ್ ಸರಿಯಾಗಿಯೇ ಉತ್ತರ ಕೊಟ್ಟಿದ್ದಾನೆ. ಲಕ್ಷ್ಮೀ ಫ್ಯಾಮಿಲಿಗೆ ಹೆಚ್ಚು ಬೆಲೆ ಕೊಡುವಂತ ಹುಡುಗಿ. ಜವಾಬ್ದಾರಿ ಇರುವ ಹುಡುಗಿ. ಇನ್ನು ಲವ್ವು ಗಿವ್ವು ಎಲ್ಲಿಂದ ಮಾಡ್ತಾಳೆ. ಇದು ಪಕ್ಕಾ ಅರೇಂಜ್ಡ್ ಮ್ಯಾರೇಜ್ ಮದುವೆ. ನಾನೇ‌ ಮೊದಲು ಲಕ್ಷ್ಮೀಯನ್ನು ಮದುವೆ ಆಗ್ತೀಯ ಅಂತ ಕೇಳಿದ್ದು. ಇದನ್ನು ನೀವೂ ಗಂಡ ಹೆಂಡತಿ ಇಬ್ಬರ ಬಳಿಯೂ ಕೇಳಬೇಕು ಅಲ್ವಾ ಎಂದು ಸರಿಯಾಗಿ ತಿರುಗೇಟು ನೀಡಿದ್ದಾನೆ.

ವೈಷ್ಣವ್ ಮಾತು ಕೇಳಿ ಕಳೆದು ಹೋದ ಲಕ್ಷ್ಮೀ

ಲಕ್ಷ್ಮೀಯ ಬಗ್ಗೆ ಹೇಳುತ್ತಾ, ಇವಳು ನನ್ನ ಹೆಂಡತಿ. ನಾನು ಇಷ್ಟಪಟ್ಟು ಮದುವೆಯಾದ ಹೆಂಡತಿ. ನನ್ನ ಹೆಂಡತಿ ಬಗ್ಗೆ ನಿಮ್ಮ ಪ್ರಶ್ನೆಗಳು ಇನ್ನು ಏನು ಇಲ್ಲ ಅಲ್ವಾ ಅಂತ ವೈಷ್ಣವ್ ಪದೇ ಪದೇ ನನ್ನ ಹೆಂಡತಿ ಹೆಂಡತಿ ಎನ್ನುತ್ತಿರುವಾಗ, ಲಕ್ಷ್ಮೀ ಎಲ್ಲಿಯೋ ತೇಲಿದಂತೆ ಆಗಿದ್ದಾಳೆ. ಮುಖದಲ್ಲಿ ನಗು, ನಾಚಿಕೆ ಬಿಟ್ಟರೆ ಬೇರೆ ಏನು ಕಾಣಿಸುತ್ತಲೇ ಇಲ್ಲ. ಅದರಲ್ಲೂ ಲಕ್ಷ್ಮೀಯನ್ನು ಕೈ ಹಿಡಿದು ಕರೆದುಕೊಂಡು ಹೋಗಿದ್ದಾನೆ. ಇದೆಲ್ಲವೂ ಲಕ್ಷ್ಮೀಗೆ ಕನಸಿನಂತೆ ಭಾಸವಾಗಿದೆ.

Lakshmi Baramma Serial July 21th episode Update

ಕೀರ್ತಿಗೆ ವಾರ್ನಿಂಗ್ ಕೊಟ್ಟ ವೈಷ್ಣವ್

ಈ ಕಡೆ ಕೀರ್ತಿಗೆ ಎಲ್ಲಾ ಪ್ಲ್ಯಾನ್ ಫೇಲ್ ಆಯ್ತು ಎಂದು ಗೊತ್ತಾದ ಕೂಡಲೇ ವೈಷ್ಣವ್ ಬಳಿ ಓಡೋಡಿ ಬಂದಿದ್ದಾಳೆ. ನಮ್ಮ ಆಲ್ಬಂ ಸಾಂಗ್ ಬಗ್ಗೆ ಪ್ರೆಸ್ ಕಾನ್ಫರೆನ್ಸ್ ಆಗಲೇ ಇಲ್ಲ. ಏನು ಮಾಡೋದು ಎಂದು ಕೇಳಿದ್ದಾಳೆ‌. ಆಗ ವೈಷ್ಣವ್, ಕೀರ್ತಿಗೂ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾನೆ. ಆಲ್ಬಂ ಸಾಂಗ್ ಅಥವಾ ನನ್ನ ಹೆಂಡತಿ ಎಂದು ಬಂದರೆ ಮೊದಲು ನಾನು ಆಯ್ಕೆ ಮಾಡಿಕೊಳ್ಳೋದು ನನ್ನ ಹೆಂಡತಿಯನ್ನೇ ಎಂದಿದ್ದಾನೆ. ಕಾರು ಹತ್ತು ಅಂದ್ರೆ ನಾನು ಬರಲ್ಲ ಎಂದಾಗ ಬಿಟ್ಟು ಸುಮ್ಮನೆ ಹೋಗಿಯೇ ಬಿಟ್ಟಿದ್ದಾನೆ.

ಕಾವೇರಿಯನ್ನು ಸುಮ್ಮನೆ ಬಿಡುತ್ತಾಳಾ ಕೀರ್ತಿ?

ವೈಷ್ಣವ್ ತನ್ನ ನಿರ್ಧಾರದಲ್ಲಿ ಸ್ಟ್ರಾಂಗ್ ಆಗಿದ್ದಾನೆ. ಲಕ್ಷ್ಮೀ ದಿನೇ ದಿನೇ ಹತ್ತಿರವಾಗಲೂ ಬಯಸುತ್ತಿದ್ದಾನೆ. ಇದನ್ನ ಕೀರ್ತಿ ಸಹಿಸುತ್ತಿಲ್ಲ. ಪ್ರೋಗ್ರಾಂಗೆ ಲಕ್ಷ್ಮೀಯನ್ನು ಕರೆಸಿದ್ದಾದರೂ ಯಾರು ಎಂದು ಪ್ರಶ್ನೆ ಮಾಡಿಕೊಂಡಿದ್ದಾಳೆ. ನೇರ ಒಳಗೆ ಹೋಗಿ ವಿಚಾರಿಸಿದಾಗ ಕಾವೇರಿಯ ಹೆಸರು ಬಂದಿದೆ. ಸುಪ್ರೀತಾ ಮೊದಲೇ ಎಲ್ಲಾ ಪ್ಲ್ಯಾನ್ ಅನ್ನು ಕಾವೇರಿ ಹೆಸರಿನಲ್ಲಿಯೇ ಸಿದ್ದ ಮಾಡಿ ಕೂತಿದ್ದಳು. ಮೊದಲೇ‌ ಕುದಿಯುತ್ತಿರುವ ಕೀರ್ತಿಗೆ ಈಗ ಕಾವೇರಿಯ ಹಳೆಯ ಪ್ಲ್ಯಾನ್ ಗಳ ಕಣ್ಣ ಮುಂದೆ ಬಂದಿದೆ. ಕೋಪ ನೆತ್ತಿಗೇರಿದೆ.

More from Filmibeat

English summary
Lakshmi Baramma Serial July 21th episode Update
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X