Lakshmi Nivasa ; ಊಟ ಕೊಡದೇ ಸತಾಯಿಸುತ್ತಿದ್ದಾರೆ ಅಣ್ಣ-ತಮ್ಮ, ಟಕ್ಕರ್ ಕೊಡ್ತಾನಾ ವೆಂಕಿ..?
ವೆಂಕಿಗೆ ತಮ್ಮಂದಿರ ನಡೆಯ ಬಗ್ಗೆ ಬಹಳಷ್ಟು ಕೋಪ ಬರುತ್ತದೆ. ಅಣ್ಣತಮ್ಮಂದಿರು ಬರುತ್ತಾ ದಾಯಾದಿಗಳು ಎನ್ನುವ ಮಾತನ್ನ ಹರೀಶ ಹಾಗೂ ಸಂತೋಷ ಹೌದು ಎನ್ನುವ ಹಾಗೆ ಮಾಡುತ್ತಿದ್ದಾರೆ. ಲಕ್ಷ್ಮಿ ಹಾಗೂ ಶ್ರೀನಿವಾಸ್ ಗೆ ಮನೆಯಲ್ಲಿ ಒಂದು ಕ್ಷಣವೂ ಇರಲಾಗುವುದಿಲ್ಲ ಮನೆ ಇಬ್ಬಾಗವಾಗಿದೆ. ಲಕ್ಷ್ಮೀ ಶ್ರೀನಿವಾಸ ಮನಸ್ಸು ಒಡೆದು ಹೋಗಿದೆ, ಮನೆಯೇ ಈ ಭಾಗವಾದ ಮೇಲೆ ನಾವು ಇಲ್ಲಿ ಇರುವುದು ಎಷ್ಟು ಉತ್ತಮ ಎಂದು ಲಕ್ಷ್ಮಿ ಹಾಗೂ ಶ್ರೀನಿವಾಸ್ಗೆ ಅನ್ನಿಸುತ್ತೆ. ಅದಕ್ಕಾಗಿ ಅವರಿಬ್ಬರು ತೀರ್ಥಯಾತ್ರೆಗೆ ಹೊರಡುತ್ತಾರೆ ಇದೆಲ್ಲವನ್ನೂ ನೋಡಿದ ನಂತರ ಬಹಳ ಬೇಸರವಾಗುತ್ತದೆ.
ಅವರಿಬ್ಬರು ತೀರ್ಥಯಾತ್ರೆಗೆ ಹೋಗುತ್ತಿದ್ದರು ಮಕ್ಕಳು ಅವರನ್ನ ತಡೆಯದೆ ತೀರ್ಥಯಾತ್ರೆಗೆ ಹೋಗಲಿ ಎಂದು ಹಾಗೆ ಮಾತನಾಡುತ್ತಾರೆ ಇನ್ನು ವೀಣಾ ಇದೆಲ್ಲವನ್ನ ವೆಂಕಿ ಬಳಿ ಹೇಳುತ್ತಾಳೆ.. ಬೆಂಕಿಗೆ ತನ್ನ ತಂದೆ ತಾಯಿ ಎಂದರೆ ಬಹಳಷ್ಟು ಪ್ರೀತಿ ಹೊಟ್ಟೆಯಲ್ಲಿ ಹುಟ್ಟದಿದ್ದರೂ ಸಾಕಿ ಸಲಹೆ ಬಹಳ ದೊಡ್ಡವರನ್ನಾಗಿ ಮಾಡಿದ ಪುಣ್ಯಾತ್ಮರು ಎಂದೆ ವೆಂಕಿ ಅಂದುಕೊಂಡಿದ್ದಾನೆ ಇದೀಗ ಲಕ್ಷ್ಮಿ ಹಾಗೂ ಶ್ರೀನಿವಾಸ್ ಕೀರ್ತಿಯಾತ್ರೆಗೆ ಹೋಗಿರುವುದು ವೆಂಕಿಗೆ ವೀಣಾ ಹೇಳುತ್ತಾಳೆ. ಹಾಗೆಯೇ ಮನೆ ಕೂಡ ಇಬ್ಬಾಗ ಆಗಿರುವುದನ್ನ ತಿಳಿಸುತ್ತಾಳೆ ಬೆಂಕಿ ಮನೆಗೆ ಬರುತ್ತಿರುವುದನ್ನು ನೋಡಿ ಸಂತೋಷ ಹಾಗೂ ಹರೀಶ ಬಹಳ ಕೋಪದಿಂದ ಮಾತನಾಡಿಸುತ್ತಾರೆ

ವೆಂಕಿ ಬಳಿ ಸಂತೋಷ್ ಎಲ್ಲೇ ಮೀರಿ ಮಾತನಾಡುತ್ತಾರೆ ಆದರೂ ವೆಂಕಿ ಅವನನ್ನು ತಡೆದುಕೊಳ್ಳುತ್ತಾನೆ. ಆದರೆ ಹರೀಶ್ ಹಾಗೂ ಸಿಂಚನ ಮಾತನಾಡುತ್ತಿರುವುದು ನೋಡಿ ವೆಂಕಿಗೆ ಕೋಪ ಬರುತ್ತದೆ. ವೆಂಕಿ ಹರುಷನ ಮೇಲೆ ಕೈ ಎತ್ತುತ್ತಾನೆ ಆತನ ಕೆನ್ನೆಗೆ ಹೊಡೆಯುತ್ತಾನೆ ಇದರಿಂದ ಕೋಪಗೊಂಡ ಸಿಂಚನ ವೆಂಕಿಯನ್ನು ಬಾಯಿಗೆ ಬಂದ ಹಾಗೆ ಮಾತನಾಡುತ್ತಾಳೆ. ಆದರೆ ವೆಂಕಿ ಮಾತ್ರ ಸಿಂಚನ ಮಾತಿಗೆ ಎದುರೇಟು ಕೊಡುತ್ತಾನೆ. ವೆಂಕಿಯ ಮಾತಿಗೆ ಸಿಂಚನಾಗೆ ಉತ್ತರ ಕೊಡಲು ಕೂಡ ಕಷ್ಟವಾಗುತ್ತದೆ. ಆದರೂ ವಿಜ್ಞಾನ ಬಹಳಷ್ಟು ಸೈಡ್ ಮಾಡಲು ಸಂತೋಷ್ ನೋಡುತ್ತಾನೆ. ನನ್ನ ಸ್ವಲ್ಪ ಟಚ್ ಮಾಡು . ಆಮೇಲೆ ಇದೆ ನಿನಗೆ ಮಾರಿ ಹಬ್ಬ ಎಂದು ಹೇಳಿದಾಗ ವೆಂಕಿಗೆ ಬಹಳ ಕೋಪ ಬರುತ್ತದೆ ಆತ ಸಂತೋಷ್ ಹತ್ತಿರ ಹೋಗುತ್ತಾನೆ ಆಗ ಭಯಗೊಂಡ ವೀಣಾ ಈಗ ನೀನು ಅವರ ಮೇಲೆ ಕೈ ಎತ್ತುವುದು ಸರಿಯಲ್ಲ ತಂದೆ ತಾಯಿ ಚೆನ್ನಾಗಿ ನೋಡಿಕೊಳ್ಳದ ಇವರಿಗೆ ಸಣ್ಣ ವಯಸ್ಸಿನಲ್ಲಿ ಬುದ್ಧಿಯನ್ನು ಹೇಳಬೇಕಾಗಿತ್ತು ಆದರೆ ಇದೀಗ ನಾವು ಹೇಳುವ ಬುದ್ಧಿ ಮಾತನ್ನ ಕೇಳಿಸಿಕೊಳ್ಳುವ ವ್ಯವಧಾನ ಕೂಡ ಇವರಲ್ಲಿ ಇಲ್ಲ ಎಂದು ಬೇಸರ ಪಡುತ್ತಾಳೆ.
ಹರಿ, ಸಂತೂ ಗೆ ವಾರ್ನಿಂಗ್ ಮಾಡಿದ ವೆಂಕಿ
ವೆಂಕಿ ಹರೀಶ್ ಹಾಗೂ ಸಂತೋಷ್ಗೆ ವಾರ್ನಿಂಗ್ ಮಾಡಿದ್ದಾನೆ ಎಲ್ಲಾದರೂ ನಿಮ್ಮ ಗಲಾಟೆಯಿಂದ ತಂದೆ ತಾಯಿಗೆ ಏನಾದರೂ ಹೆಚ್ಚು ಕಮ್ಮಿ ಆದರೆ ಖಂಡಿತವಾಗಿಯೂ ನಾನು ಯಾರನ್ನು ಕೂಡ ಸುಮ್ಮನೆ ಬಿಡುವುದಿಲ್ಲ . ಇತ್ತ ಅಪ್ಪ ಅಮ್ಮ ಇಲ್ಲ ಮನೆ ಬಿಕೋ ಎನ್ನುತ್ತಿದೆ. ವೆಂಕಿ ಒಂದು ದಿನ ತಂದೆ ತಾಯಿ ಮನೆಯಲ್ಲಿ ಉಳಿದುಕೊಳ್ಳೋಣ ಎಂದುಕೊಂಡು ಇರುತ್ತಾನೆ. ಆದರೆ ಅದಕ್ಕೆ ಕೂಡ ಅಡ್ಡಿಗಳು ಎದುರಾಗುತ್ತದೆ. ವೆಂಕಿ ಆ ದಿನ ತಂದೆ ತಾಯಿ ಇದ್ದ ಮನೆಯಲ್ಲಿರುತ್ತಾನೆ. ವೆಂಕಿ ಗೆ ರಾತ್ರಿ ವೇಳೆ ಬಹಳ ಹಸಿವಾಗುತ್ತದೆ.
ವೆಂಕಿ ಹೆಂಡತಿಗೆ ಅವಮಾನ ಮಾಡಿದ ಸಂತೋಷ್
ವೆಂಕಿಯ ಹೆಂಡತಿ ಮೊದಲಿಗೆ ಸಿಂಚನ ಬಳಿಗೆ ಹೋಗುತ್ತಾಳೆ ಅಕ್ಕ ವೆಂಕಿ ಗೆ ಬಹಳ ಹಸಿವು ಆಗುತ್ತಿದೆ ಊಟ ಕೊಡುತ್ತೀರಾ ಎಂದು ಕೇಳುತ್ತಾಳೆ ಇದನ್ನು ಕೇಳಿದ ಸಿಂಚನಗೆ ಬಹಳ ಸಿಟ್ಟು ಬರುತ್ತದೆ. ನಾವೇ ಕಷ್ಟಪಟ್ಟು ಅಡಿಗೆ ಮಾಡೋದು. ನೀವು ನಮ್ಮ ಜೊತೆ ಕೇಳುತ್ತಿದ್ದೀರಾ? ಹೋಗಿ ಇಲ್ಲಿಂದ ನಮ್ಮ ಮನೆಯಲ್ಲಿ ಊಟ ಇಲ್ಲ ಎಂದು ಹೇಳುತ್ತಾಳೆ. ಇತ್ತ ವೀಣಾ ಇರುವುದಿಲ್ಲ ಆದರೂ ಅಲ್ಲಿದ್ದ ಅನ್ನವನ್ನು ವೆಂಕಿ ಹೆಂಡತಿ ಹಾಕಿಕೊಳ್ಳುವಾಗ ಅಲ್ಲಿಗೆ ಸಂತೋಷ ಬರುತ್ತಾನೆ ಆತ ಕೂಡ ಆಕೆಗೆ ಬಾಯಿಗೆ ಬಂದ ಹಾಗೆ ಬಯ್ಯುತ್ತಾನೆ ಇದೆಲ್ಲವನ್ನು ನೋಡಿದ ವೆಂಕಿ ಗೆ ಬೇಸರ ಕೂಡ ಆಗುತ್ತದೆ ಹಾಗೆಯೇ ಕೋಪ ಕೂಡ ಬರುತ್ತದೆ.


Click it and Unblock the Notifications











