Don't Miss!
- Automobiles Bullet Train: ಭಾರತದಲ್ಲಿ ಮೊದಲ ಬಾರಿಗೆ ನವೀನ ರೀತಿಯ ಹಳಿ ಬಳಕೆ.. 320 ಕಿ.ಮೀ ವೇಗದಲ್ಲಿ ಓಡುತ್ತೆ ರೈಲು!
- Lifestyle ಬಾಯಲ್ಲಿ ನೀರು ತರಿಸುವ ಮಾವಿನ ಕಾಯಿ ಚಟ್ನಿ..! 5 ನಿಮಿಷದಲ್ಲಿ ರೆಡಿ..!
- Technology Motorola: ಮೊಟೊರೊಲಾ ಎಡ್ಜ್ 50 ಅಲ್ಟ್ರಾ ಸ್ಮಾರ್ಟ್ಫೋನ್ ಫೀಚರ್ಸ್ ಲೀಕ್! ವಿಶೇಷತೆ ಏನು?
- News RBI: ಬ್ಯಾಂಕ್ ಕೆಲಸ ಮುಗಿದಿಲ್ವಾ? ಭಯ ಬೇಡ ಮಾರ್ಚ್ 30, 31ಕ್ಕೂ ಓಪನ್ ಇರುತ್ತೆ ಆರ್ಬಿಐ ಕಚೇರಿಗಳು!
- Finance ಮೊದಲ ಬಾರಿಗೆ ಅಂಬಾನಿ ಅದಾನಿ ಸೇರಿ ವ್ಯಾಪಾರ ಒಪ್ಪಂದ, ಇಲ್ಲಿದೆ ಒಪ್ಪಂದ ವಿವರ
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಮಗಳು ಜಾನಕಿ'ಯನ್ನು ಭೇಟಿ ಮಾಡಿ, ಪ್ರಶ್ನೆ ಕೇಳಿ
'ಮಗಳು ಜಾನಕಿ' ಧಾರಾವಾಹಿ ಸದ್ಯ ಯಶಸ್ವಿಯಾಗಿ ಮುನ್ನುಗುತ್ತಿದೆ. ಅದೇನೇ ಕೆಲಸ ಇದ್ದರೂ ವೀಕ್ಷಕರು ಪ್ರತಿ ದಿನ ತಪ್ಪದೇ ಈ ಧಾರಾವಾಹಿಯನ್ನು ನೋಡುತ್ತಿದ್ದಾರೆ.
ಧಾರಾವಾಹಿ ನೋಡುವ ಅನೇಕರಿಗೆ ಅನೇಕ ಪ್ರಶ್ನೆಗಳು ಹುಟ್ಟಬಹುದು. ಕೆಲವರು ಅದನ್ನು ತಮ್ಮ ಸ್ನೇಹಿತರ ಹಾಗೂ ಮನೆಯವರ ಜೊತೆಗೆ ಚರ್ಚೆ ಮಾಡುವುದೂ ಉಂಟು. ಆದರೆ, ಈಗ ನಿಮ್ಮ ಅಂತಹ ಪ್ರಶ್ನೆಗಳನ್ನು ನೇರವಾಗಿ ಧಾರಾವಾಹಿ ತಂಡಕ್ಕೆ ಕೇಳಬಹುದಾಗಿದೆ.
'ಮಗಳು ಜಾನಕಿ' ಧಾರಾವಾಹಿಯ ನಿರಂಜನ್ ಯಾರು? ಅವರ ಹಿನ್ನೆಲೆ ಏನು?
ಟಿ ಎನ್ ಸೀತಾರಂ ತಮ್ಮ ಧಾರಾವಾಹಿಗಳ ಬಗ್ಗೆ ಸಂವಾದ ಕಾರ್ಯಕ್ರಮ ಮಾಡುತಿರುತ್ತಾರೆ. ಅದೇ ರೀತಿ ಈಗ 'ಮಗಳು ಜಾನಕಿ' ಧಾರಾವಾಹಿಯ ಸಂವಾದ ಕಾರ್ಯಕ್ರಮಕ್ಕೆ ಸಿದ್ಧತೆ ಶುರುವಾಗಿದೆ. ವಿಶೇಷ ಅಂದರೆ, ಈ ಧಾರಾವಾಹಿಯ ಮೊದಲ ಸಂವಾದ ಕಾರ್ಯಕ್ರಮ ಇದಾಗಿದೆ. ಮುಂದೆ ಓದಿ...
ದಾವಣಗೆರೆಯಲ್ಲಿ 'ಮಗಳು ಜಾನಕಿ'
'ಮಗಳು ಜಾನಕಿ' ಧಾರಾವಾಹಿಯ ಸಂವಾದ ಕಾರ್ಯಕ್ರಮವನ್ನು ದಾವಣಗೆರೆಯಲ್ಲಿ ಹಮ್ಮಿಕೊಳ್ಳಲಾಗಿದೆ. ವಿಶೇಷ ಅಂದರೆ, ಈ ಧಾರಾವಾಹಿಯ ಮೊದಲ ಸಂವಾದ ಕಾರ್ಯಕ್ರಮ ಇದಾಗಿದೆ. ಜುಲೈ 2 ರಿಂದ ಧಾರಾವಾಹಿ ಪ್ರಾರಂಭ ಆಗಿದ್ದು, ಈಗ ಮೂರು ತಿಂಗಳ ನಂತರ ಸಂವಾದ ಕಾರ್ಯಕ್ರಮ ನಡೆಯುತ್ತಿದೆ.
ದಾವಣಗೆರೆಯೇ ಯಾಕೆ?
ಈ ಧಾರಾವಾಹಿಯ ಮೊದಲ ಸಂವಾದ ಕಾರ್ಯಕ್ರಮ ದಾವಣಗೆರೆಯಲ್ಲಿಯೇ ಯಾಕೆ ಎನ್ನುವ ಪ್ರಶ್ನೆ ನಿಮಗೆ ಇದ್ದರೆ ಅದಕ್ಕೂ ಉತ್ತರವಿದೆ. ಸೀತಾರಂ ಅವರು ಈ ಕ್ಷೇತ್ರಕ್ಕೆ ಬರಲು ದಾವಣಗೆರೆ ಹಾಗೂ ಅಲ್ಲಿನ ಸ್ನೇಹಿತರು ಬಹು ಮುಖ್ಯ ಪಾತ್ರವಹಿಸಿದ್ದಾರಂತೆ. ಅದೇ ಕಾರಣಕ್ಕೆ ಈ ಧಾರಾವಾಹಿಯ ಮೊದಲ ಸಂವಾದವನ್ನು ಅಲ್ಲಿಂದ ಶುರು ಮಾಡಿದ್ದಾರೆ.
ಯಾರೀ 'ಮಗಳು ಜಾನಕಿ': ಧಾರಾವಾಹಿಗೆ ಗಾನವಿ ಆಯ್ಕೆ ಆಗಿದ್ದು ಹೇಗೆ.?
ಯಾವ ದಿನ ?
ನವೆಂಬರ್ 18 ರಂದು ಬೆಳಗ್ಗೆ 10 ಗಂಟೆಗೆ, ಬಾಪೂಜಿ ಸಭಾಂಗಣದಲ್ಲಿ ಸಂವಾದ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಬರಲು ಆಸಕ್ತಿ ಇರುವವರು ಪಾಸುಗಳನ್ನು ಕಲೆಕ್ಷನ್ಸ್ ಎಂ.ಜಿ.ಎಂ ಸ್ಕ್ವೇರ್, ಎಂ.ಸಿ.ಸಿ 'ಬಿ' ಬ್ಲಾಕ್ ದಾವಣಗೆರೆ ಯಲ್ಲಿ ಪಡೆಯಬಹುದಾಗಿದೆ.
ಇಡೀ ತಂಡ ಭಾಗಿ
ವೀಕ್ಷಕರ ಪ್ರಶ್ನೆ ಹಾಗೂ ಅವರ ಅಭಿಪ್ರಾಯ ತಿಳಿದುಕೊಳ್ಳಲು ಸೀತಾರಂ ಮತ್ತು ತಂಡ ಕಾಯುತ್ತಿದೆ. ಈ ಕಾರ್ಯಕ್ರಮದಲ್ಲಿ ಧಾರಾವಾಹಿಯ ಕಲಾವಿದರಾದ ಗಾನವಿ, ರಾಕೇಶ್ ಮೈಯ್ಯ ಹಾಗೂ ತಾಂತ್ರಿಕ ವರ್ಗ ಭಾಗಿಯಾಗಲಿದ್ದಾರೆ.