Don't Miss!
- News Mysuru Zoo: ಬೇಸಿಗೆಯಲ್ಲೂ ಮೈಸೂರು ಮೃಗಾಲಯ ಕೂಲ್.. ಕೂಲ್! ಹೇಗೆ ಗೊತ್ತಾ?
- Technology vivo: ವಿವೋ Y200i ಸ್ಮಾರ್ಟ್ಫೋನ್ ಲಾಂಚ್! 12GB RAM.. 6000mAh ಬ್ಯಾಟರಿ
- Automobiles ಸಣ್ಣ ಕುಟುಂಬಗಳಿಗೆ ಬೆಸ್ಟ್ ಕಾರು... 5.36 ಲಕ್ಷ ರೂ. ಬೆಲೆ... 34 ಕಿ.ಮೀ ಮೈಲೇಜ್!
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
Muddu Manigalu: ತಂದೆಯ ಅಸ್ತಿತ್ವ ಉಳಿಸಲು ಹೊರಟ ಮುದ್ದುಮಣಿಗಳು
ಅಹಲ್ಯಾ ಸ್ವಭಾವದ ಬಗ್ಗೆ ಆಕೆಯ ಕೆಟ್ಟ ಗುಣಗಳ ಬಗ್ಗೆ ಮನೆ ಮಂದಿಗೆ ಎಲ್ಲರಿಗೂ ತಿಳಿಯಿತು. ಎನು ಮಾಡಬೇಕು ಎಂದು ತಿಳಿಯದೇ ಸುಮ್ಮನಾಗುವ ವೇಳೆ ಅಲ್ಲಿಗೆ ಪೊಲೀಸ್ ಬಂದಿದ್ದರು. ಅದನ್ನು ನೋಡಿದ ಶ್ರವಣ್ ಧಿಗ್ಬ್ರಾಂತಗೊಳ್ಳುತ್ತಾನೆ. ಇನ್ನು ಪೊಲೀಸರ ಬಳಿ ಇದ್ದ ಶಾರ್ವರಿ ಮಾತನಾಡಿದ ವಿಡಿಯೋವನ್ನು ಅಹಲ್ಯಾ ಗಂಡನಿಗೆ ತೋರಿಸುತ್ತಾರೆ. ಇದನ್ನು ನೋಡಿದ ಆಕೆಯ ಗಂಡನಿಗೆ ಅಹಲ್ಯಾ ಬಗ್ಗೆ ಬೇಸರ ಮೂಡುತ್ತದೆ.
ಬಳಿಕ ಯಾರು ಈ ವಿಡಿಯೋ ಮಾಡಿದ್ದು ಎಂಬ ಪ್ರಶ್ನೆ ಬಂದಾಗ ಅದು ಭೂಮಿ ಎಂದು ತಿಳಿಯುತ್ತದೆ. ಅಹಲ್ಯಾ ಕೋಪ ನೆತ್ತಿಗೇರಿತು. ಭೂಮಿ ಕಪಾಳಕ್ಕೆ ಬಾರಿಸಲು ಬಂದಾಗ ಸೃಷ್ಟಿ ಅಹಲ್ಯಾಳನ್ನು ತಡೆದು ಆಕೆಯ ಕೆನ್ನೆಗೆ ಹೊಡೆಯುತ್ತಾಳೆ. ಇದನ್ನೆಲ್ಲ ನೋಡಿದ ಶ್ರವಣ್ ಬೇಸರಗೊಳ್ಳುತ್ತಾನೆ. ಇನ್ನು ಅಹಲ್ಯಾ ಗಂಡ ಪೊಲೀಸರ ಬಳಿ ಅಹಲ್ಯಳನ್ನು ಎಳೆದುಕೊಂಡು ಹೋಗಲು ಹೇಳುತ್ತಾನೆ.
ಇದನ್ನು ನೋಡಿದ ಅಹಲ್ಯಾಗೆ ಗಂಡ ನನ್ನನ್ನು ಪೊಲೀಸರಿಗೆ ಒಪ್ಪಿಸಿಬಿಟ್ಟನಲ್ಲ ಎಂದು ಶಾಕ್ ಆಗುತ್ತದೆ. ಬಳಿಕ ಪೊಲೀಸರು ಅಹಲ್ಯಾಗೆ ಕೋಳ ತೊಡಿಸಿ ಕರೆದುಕೊಂಡು ಹೋಗುತ್ತಾರೆ. ಶ್ರವಣ್ ಹಾಗೂ ಶಿವು ತಂದೆಗೆ ಮಕ್ಕಳಿಬ್ಬರನ್ನೂ ನೋಡಿ ಬಹಳ ದುಃಖ ಆಗುತ್ತದೆ. ಯಾಕೆ ಹೀಗೆಲ್ಲ ಆಯಿತು ಎಂದು ಬಹಳ ಬೇಸರ ಮಾಡಿಕೊಳ್ಳುತ್ತಾ ಇರುತ್ತಾರೆ. ಬಳಿಕ ಇಬ್ಬರನ್ನೂ ತಬ್ಬಿಕೊಂಡು ಜೋರಾಗಿ ಅಳುತ್ತಾರೆ. ಇತ್ತ ಶ್ರವಣ್ ಮನೆಗೆ ಬರುತ್ತಾನೆ. ಬಂದು ಸೋಫಾದ ಮೇಲೆ ಕುಳಿತು ಆಗಿದ್ದನ್ನೆಲ್ಲ ಯೋಚನೆ ಮಾಡುತ್ತಿರುತ್ತಾನೆ. ಬಳಿಕ ಅಲ್ಲಿಗೆ ಬಂದ ಭೂಮಿ ಶ್ರವಣ್ಗೆ ನಿಜ ಹೇಳುತ್ತಾಳೆ.
ಶ್ರವಣ್ಗೆ ನಿಜ ಹೇಳಿದ ಭೂಮಿ
ಈ ಮನೆಯಲ್ಲಿ ಆಗುತ್ತಿದ್ದ ಒಂದೊಂದು ಸಮಸ್ಯೆಗೆ ಅತ್ತೆ ಕಾರಣವಾಗಿದ್ದರಿಂದ ಈ ಮನೆ ಒಳ್ಳೆಯದಕ್ಕೆ ನಾನು ಇದನ್ನು ಮಾಡಲೇಬೇಕಿತ್ತು ಎಂದು ಹೇಳುತ್ತಾಳೆ. ಇದನ್ನೆಲ್ಲಾ ಕೇಳಿದ ಶ್ರವಣ್ ಬಹಳ ನೊಂದುಕೊಳ್ಳುತ್ತಾನೆ. ನನ್ನ ಅಮ್ಮನನ್ನು ಎಷ್ಟೆಲ್ಲ ನಂಬಿದ್ದೆ ಆದರೆ ನನ್ನ ತಾಯಿ ಹೀಗೆಲ್ಲ ಮಾಡುತ್ತಾರೆ ಎಂದು ಅಂದುಕೊಂಡಿರಲಿಲ್ಲ ಎಂದು ಅಳುತ್ತಾನೆ. ಭೂಮಿ ಶ್ರವಣ್ನನ್ನು ಸಮಾಧನಿಸುತ್ತ ಇರುತ್ತಾಳೆ ದಯಮಾಡಿ ಅಳಬೇಡ ನಾನು ನಿಮಗೆ ಅಮ್ಮನ ಕೊರತೆ ಬಾರದ ಹಾಗೆ ನೋಡಿಕೊಳ್ಳುತ್ತಾ ಇರುತ್ತೇನೆ ಎಂದು ಹೇಳುತ್ತಾಳೆ.
ಭೂಮಿ ಮಾವನ ಕೋಪ ಮಿತಿ ಮೀರಿದೆ
ಬೆಳಗ್ಗೆ ಭೂಮಿ ಎದ್ದು ಮನೆ ಎಲ್ಲಾ ಸ್ವಚ್ಚ ಮಾಡುತ್ತಾ ಇರುವಾಗ ಅಹಲ್ಯಾ ಫೋಟೋಗೆ ಹಾರ ಹಾಕಿ ಇಡಲಾಗಿದ್ದನ್ನು ಕಂಡು ಶಾಕ್ ಆಗುತ್ತಾಳೆ. ಮಾವನೇ ಇದೆಲ್ಲ ಮಾಡಿದ್ದು ಎಂದು ತಿಳಿಯುತ್ತದೆ. ಶ್ರವಣ್ ಭೂಮಿಯನ್ನು ಕರೆದುಕೊಂಡು ಬರುವ ವೇಳೆ ಅಹಲ್ಯಾ ಫೋಟೋವನ್ನು ಬಚ್ಚಿಡುತಾಳೆ. ಶ್ರವಣ್ ಹೋದ ಬಳಿಕ ಆ ಫೋಟೊವನ್ನು ಹೊರಗೆ ತೆಗೆಯುತ್ತಾಳೆ. ಈ ವೇಳೆ ಭೂಮಿ ಮಾವ ಒಬ್ಬಳಿಗೆ ಶಿಕ್ಷೆ ಕೊಡಿಸಿ ದೊಡ್ಡವಳಾದ ನೀನು ಈ ಹೋರಾಟವನ್ನು ಇಲ್ಲಿಗೆ ನಿಲ್ಲಿಸಬೇಡ, ನಿಮ್ಮ ಆಸ್ಪತ್ರೆಯನ್ನು ಕಿತ್ತುಕೊಂಡ ಹೆಂಗಸು ಯಾರು ಅದನ್ನು ತಿಳಿದುಕೋ ಅವಳಿಗೆ ಕೂಡ ಅಹಲ್ಯಾಗೆ ಆದ ಶಿಕ್ಷೆ ಆಗಬೇಕು, ಆದರೆ ಈ ಹೋರಾಟದಲ್ಲಿ ನೀನು ಮುದ್ದುಮಣಿಯಾದರೆ ಸಾಲದು ವಜ್ರದ ಗಣಿ ಆಗಬೇಕು ಎಂದು ಹೇಳುತ್ತಾರೆ.
ತಂದೆಯ ಅಸ್ತಿತ್ವ ಉಳಿಸಲು ಹೊರಟ ಭೂಮಿ ಹಾಗೂ ಸೃಷ್ಟಿ
ಅಷ್ಟೇ ಅಲ್ಲದೇ ನಿಮ್ಮ ಅಪ್ಪ ಅಮ್ಮನ ಅಸ್ತಿತ್ವ ಉಳಿಸಿಕೊಳ್ಳಿ ಎಂದು ಹೇಳುತ್ತಾರೆ. ಈ ಮಾತು ಭೂಮಿಗೆ ಕೂಡ ಸರಿ ಎನಿಸುತ್ತದೆ. ತನ್ನ ತಂದೆ ಕಟ್ಟಿಸಿದ ಆಸ್ಪತ್ರೆ ಇದೀಗ ನಮ್ಮ ಪಾಲಿಗೆ ಇಲ್ಲ ಎಂದರೆ ಅರ್ಥವೇನು, ನನಗೆ ನಮ್ಮ ಅಮ್ಮ ಅಪ್ಪ ಇದ್ದ ಆಸ್ಪತ್ರೆಯನ್ನು ಉಳಿಸಿಕೊಳ್ಳಲು ಆಗುತ್ತಿಲ್ಲ, ಹೇಗೆ ಅಪ್ಪ ಅಮ್ಮನ ಋಣ ತೀರಿಸುವುದು ಎಂದು ಯೋಚನೆ ಮಾಡುತ್ತಾ ಇರುತ್ತಾಳೆ. ಭೂಮಿ ಅಕ್ಕ ಸೃಷ್ಟಿಗೆ ಕರೆ ಮಾಡುತ್ತಾಳೆ.
ಅಕ್ಕನ ಬಳಿ ಮನದ ದುಗುಡ ಹೇಳಿದ ಭೂಮಿ
ಮನೆಯಲ್ಲಿ ಎಲ್ಲರೂ ಹೇಗಿದ್ದಾರೆ ಎಂಬ ಪ್ರಶ್ನೆ ಎದುರಾದಾಗ ಭೂಮಿ ಮಾವ ಬಹಳ ನೊಂದುಕೊಂಡಿದ್ದಾರೆ, ಹಾಗೆಯೇ ಕೋಪ ಕೂಡ ಮಾಡಿಕೊಂಡಿದ್ದಾರೆ. ಅತ್ತೆಯ ಫೋಟೋಗೆ ಹಾರ ಹಾಕಿದರು. ಅಕ್ಕ ಆ ಹಾಸ್ಪಿಟಲ್ ಕೈ ತಪ್ಪಿ ಹೋಗುವುದಕ್ಕೆ ಆ ಅಹಲ್ಯಾ ಎಷ್ಟು ಕಾರಣನೋ ಆ ಹೆಂಗಸು ಅಷ್ಟೇ ಕಾರಣ ಅದನ್ನು ಬಿಡಬೇಡಿ ಎಂದು ಹೇಳುತ್ತಾ ಇರುತ್ತಾಳೆ. ಇನ್ನು ಸೃಷ್ಟಿ ಹಾಗೂ ಭೂಮಿಗೆ ಆ ಹೆಂಗಸು ಯಾರು ಎಂದು ತಿಳಿಯುತ್ತಾ ಕಾದು ನೋಡಬೇಕಿದೆ