Don't Miss!
- Sports CSK vs LSG IPL 2024: ರುತುರಾಜ್ ಭರ್ಜರಿ ಶತಕ, ದುಬೆ ಸ್ಫೋಟಕ ಬ್ಯಾಟಿಂಗ್; ಲಕ್ನೋಗೆ ಬೃಹತ್ ಗುರಿ ನೀಡಿದ ಚೆನ್ನೈ
- News Narendra Modi: ಕರ್ನಾಟಕಕ್ಕೆ ಏಪ್ರಿಲ್ 29, 29ಕ್ಕೆ ಪ್ರಧಾನಿ ಮೋದಿ ಆಗಮನ
- Lifestyle UPSCಯಲ್ಲಿ 2ನೇ ರ್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
Muddumanigalu Serial: ಜಾಹ್ನವಿಯೇ ತನ್ನ ತಾಯಿ ಎಂದು ದೃಷ್ಟಿಗೆ ತಿಳಿಯುತ್ತಾ?
ದುಷ್ಟರನ್ನು ಸಂಹಾರ ಮಾಡಲು ಎರಡನೇ ಜನ್ಮ ಎತ್ತಿದ್ದಾಳೆ ಮುದ್ದು ಲಕ್ಷ್ಮೀ. ದೃಷ್ಟಿ ತನ್ನ ತಾಯಿ ರೂಪದಲ್ಲಿ ಇರುವ ಲಕ್ಷ್ಮಿಯನ್ನು ಭೇಟಿ ಆಗಲು ತುದಿಗಾಲಿನಲ್ಲಿ ನಿಂತಿದ್ದಾರೆ. ಶಾರ್ವರಿ ಭೂಮಿ ಗಂಡನನ್ನು ಸಾಯಿಸಲು ಪ್ಲಾನ್ ಮಾಡುತ್ತಾ ಇದ್ದಾಳೆ. ಮುದ್ದು ಲಕ್ಷ್ಮಿಯ ಕುಡಿಗಳು ಬದುಕಬಾರದು, ಅವರ ಸಂಸಾರ ಛಿದ್ರಛಿದ್ರ ಆಗಬೇಕು ಎಂದುಕೊಂಡು ಭೂಮಿಯನ್ನು ತನ್ನ ಮನೆಯಲ್ಲಿ ಆಳಾಗಿ ಮಾಡಿದ್ದಾಳೆ. ದ್ರುವ ಜೀವಂತ ಇರುವುದು ಭೂಮಿ ಗಂಡನಿಗೆ ಮಾತ್ರ ತಿಳಿದಿದೆ.
ಈ ವಿಚಾರ ಬೇರೆ ಯಾರಿಗೂ ತಿಳಿದಿಲ್ಲ. ಈ ವಿಚಾರವನ್ನು ಬೇರೆಯವರಿಗೆ ತಿಳಿಸಬೇಕು ಎಂದರೆ ಭೂಮಿಗೆ ತಂದೆ ಬದುಕಿದ್ದಾರೆ ಎಂದು ಹೇಳಬೇಕು ಎಂದುಕೊಂಡಾಗ ಶಾರ್ವರಿ ಅಟ್ಟಹಾಸಕ್ಕೆ ನಳುಗಿದ್ದಾನೆ. ಇದೀಗ ಅವಳ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದಾನೆ. ಡಾಕ್ಟರ್ ಭೂಮಿ ಗಂಡ ಶ್ರವಣ್ ನನ್ನು ಉಳಿಸಲು ಹರಸಾಹಸ ಪಡುತ್ತಿದ್ದಾರೆ. ಇತ್ತ ಭೂಮಿ ಭಯದಿಂದ ಶಾರ್ವರಿ ಮನೆಯಲ್ಲಿ ಅಡುಗೆ ಕೆಲಸ ಮಾಡುತ್ತಾ ಇರುತ್ತಾಳೆ. ಆ ವೇಳೆ ಅಲ್ಲಿರುವ ಮತ್ತೊಬ್ಬ ಕೆಲಸದಾಕೆ ಶಾರ್ವರಿಗೆ ಬಯ್ಯುತ್ತಾ ಇರುತ್ತಾಳೆ.
ಭೂಮಿ ಶ್ರವಣ್ ಶಿವು ಸರಿ ಹೋಗುವವರೆಗೂ ನಾವು ಇಲ್ಲಿ ಅಡ್ಜಸ್ಟ್ ಮಾಡಿಕೊಂಡು ಹೋಗೋಣ ಎಂದಾಗ ಮತ್ತೊಬ್ಬಳು ಬೇರೆ ವಿಧಿ ಇಲ್ಲ, ನಾವು ಸ್ವಲ್ಪ ಸಮಯ ಹೀಗೆ ಇರಬೇಕಾಗುತ್ತದೆ ಎಂದು ಮಾತನಾಡಿಕೊಳ್ಳುವುದನ್ನು ಶಾರ್ವರಿ ಪಿಎ ಕೇಳಿಸಿಕೊಂಡು ಶಾರ್ವರಿ ಕಿವಿ ಊದುತ್ತ ಇರುತ್ತಾಳೆ. ಮೇಡಂ ಇವರೆಲ್ಲ ಗುಟ್ಟು ಗುಟ್ಟಾಗಿ ಏನೋ ನಡೆಸುತ್ತಾ ಇದ್ದಾರೆ, ಶ್ರವಣ್ ಬಗ್ಗೆ ಮಾತನಾಡುತ್ತಾ ಇರುತ್ತಾರೆ ಅವನ ಆಸೆ ಕನಸು ಹೀಗೆ ತುಂಬಾ ಮಾತನಾಡುತ್ತಾ ಇದ್ದರು ಎಂದೆಲ್ಲ ಹೇಳಿದಾಗ ಶಾರ್ವರಿ ಕೆರಳಿ ಕೆಂಡಮಂಡಲವಾಗ್ತಾಳೆ.
ಕೆರಳಿದ ಶಾರ್ವರಿ
ಬಳಿಕ ಪಿಎ ಬಳಿ ಶಾರ್ವರಿ ಅಲ್ಲಿ ಶ್ರವಣ್ ಗೆ ಸಂಬಂಧ ಪಟ್ಟಿದ್ದು ಏನೋ ಇರಬೇಕು, ಅವರು ಒಂದು ಹೆಜ್ಜೆ ಮುಂದೆ ಇಡಲು ಬಿಡಲ್ಲ, ಅವರ ಜೀವನ ಹೇಗೆ ಇರಬೇಕೋ ಹಾಗೆ ಇರಬೇಕು, ಅವರನ್ನು ಒಂದು ಇಂಚು ಬೆಳೆಯಲು ಬಿಡುವುದು ಇಲ್ಲ ಎಂದು ಹಲ್ಲು ಕಡಿಯುತ್ತಾ ಹೇಳುತ್ತಾಳೆ. ಆ ವೇಳೆ ಅಲ್ಲಿಗೆ ಭೂಮಿ ಬರುತ್ತಾಳೆ. ಭೂಮಿಯನ್ನು ನೋಡಿದ ಶಾರ್ವರಿಗೆ ಶಾಕ್ ಆಗುತ್ತದೆ. ಶಾರ್ವರಿಗೆ ಭೂಮಿ ಕಾಫಿ ಕೊಡುತ್ತಾಳೆ. ಇನ್ನು ಲಕ್ಷ್ಮಿ ತದ್ರೂಪ ಇರುವ ಹುಡುಗಿ ದೃಷ್ಟಿಯನ್ನು ಹುಡುಕಿಕೊಂಡು ಬರುತ್ತಾಳೆ.
ದೃಷ್ಟಿಯನ್ನು ನೋಡಿದ ಜಾಹ್ನವಿ
ಇನ್ನು ದೃಷ್ಟಿಯನ್ನು ನೋಡಿದ ಆಕೆ ಮನದಲ್ಲಿ ಇವಳಿಗೆ ಯಾಕೆ ನನ್ನ ಭೇಟಿ ಆಗುವ ಹಂಬಲ ಎಂದುಕೊಂಡು ಆಕೆಯ ಹತ್ತಿರ ಬರುತ್ತಾಳೆ. ದೃಷ್ಟಿ ಹತ್ತಿರ ಬರಬೇಕಾದರೆ ಲಕ್ಷ್ಮಿ ತದ್ರೂಪ ಹೊಂದಿದ ಹುಡುಗಿ ಕಾಲು ನೋವು ಆಗಿ ಅಲ್ಲಿಯೇ ಕುಳಿತು ಬಿಡುತ್ತಾಳೆ. ದೃಷ್ಟಿ ಆಕೆ ಎಷ್ಟು ಹೊತ್ತಿಗೆ ಬರುತ್ತಾಳೋ ಎಂದು ಕಾದು ಕುಳಿತಿದ್ದಳು. ಇನ್ನು ಭೂಮಿ ಶಾರ್ವರಿಗೆ ಕಾಫಿ ಕೊಟ್ಟು ಬಂದ ಬಳಿಕ ಭೂಮಿ ಶಾರ್ವರಿ ಹೇಳಿದ ಮಾತು ಕೇಳಿ ಶಾರ್ವರಿ ಸರಿ ಇಲ್ಲ, ಅವಳು ಮೃಗದ ಹಾಗೆ ಮಾಡುತ್ತಾ ಇದ್ದಾಳೆ ಎನ್ನುತ್ತಾಳೆ.
ಮಗಳು ಕಾಣದ್ದನ್ನು ಕಂಡು ತಡಕಾಡಿದ ಜಾಹ್ನವಿ ತಂದೆ
ಮುಂದೆ ಏನು ಆಗುತ್ತದೆ ಎಂದು ನನಗೆ ಬಹಳ ಭಯ ಇದೆ ಎಂದು ಭೂಮಿ ತನ್ನ ಜೊತೆ ಇದ್ದ ಆಕೆಯ ಅತ್ತೆಯ ಬಳಿ ಹೇಳುತ್ತಾಳೆ. ಇದನ್ನು ಕೇಳಿದ ಆಕೆಗೆ ಕೂಡ ಶಾಕ್ ಆಗುತ್ತದೆ. ಆಕೆ ಭೂಮಿ ಬಳಿ ಹಾಗಾದರೆ ಏನೋ ಗಂಡಾಂತರ ಇದೆ ಎಂದಾಗ ಭೂಮಿ ಆಕೆ ನಮ್ಮ ವಂಶವನ್ನು ನಿರ್ವಂಶ ಮಾಡಲು ಹೊರಟಿದ್ದಾಳೆ ಎಂದಾಗ ಆಕೆಯ ಜೊತೆ ಇದ್ದಾಕೆಗೆ ಕೋಪ ಬಂದು ಶಾರ್ವರಿ ಬಳಿ ಮಾತನಾಡಲು ಹೊರಟಾಗ ಅವರಿಗೆ ರೂಮ್ ಗೆ ತೆರಳಿರುವುದು ತಿಳಿದು ಅಲ್ಲಿಗೆ ಹೋಗುತ್ತಾರೆ. ಇನ್ನು ಪರಮೇಶಿ ಮನೆಯಲ್ಲಿದ್ದ ಜಾಹ್ನವಿ ತಂದೆ ಮಲಗಿರುವವರು ಎದ್ದು ಬೆಡ್ ಅಲ್ಲಿ ಕುಳಿತುಕೊಳ್ಳುತ್ತಾರೆ. ಆ ವೇಳೆ ಪರಮೇಶಿ ಪರಿಗೆ ಕಾಫಿ ತರಲು ಹೇಳುತ್ತಾರೆ. ಜಾಹ್ನವಿ ಮನೆಯಲ್ಲಿ ಕಾಣದ್ದನ್ನು ಕಂಡು ಆಕೆಯ ತಂದೆ ಚಡಪಡಿಸುತ್ತಾರೆ. ಇನ್ನು ದೃಷ್ಟಿ ಬಳಿ ಜಾಹ್ನವಿ ಬರುತ್ತಾಳೆ. ಜಾಹ್ನವಿ ಬಿಸಿಲಿನ ಧಗೆಗೆ ಮುಖವನ್ನು ಮುಚ್ಚಿರುತ್ತಾಳೆ. ಮುಂದೇನು ಕಾದು ನೋಡಬೇಕಿದೆ.