Neenadhe Na: ಸುಪ್ರೀತ್ ಕುತಂತ್ರಕ್ಕೆ ಬಲಿಯಾಗ್ತಾನಾ ವಿಕ್ರಮ್ ?
ವೇದಾಳಿಗೆ ವಿಕ್ರಂ ಕಂಡರೆ ಅಗಾದವಾದ ಪ್ರೀತಿ. ವಿಕ್ರಂಗೆ ತನ್ನ ನೆಚ್ಚಿನ ಬೇತಾಳನನ್ನು ಕಂಡರೆ ಅಪಾರವಾದ ನಂಬಿಕೆ, ಪ್ರೀತಿ ವಿಶ್ವಾಸ. ಅದನ್ನೆಲ್ಲಾ ತೋರಿಸಿಕೊಳ್ಳುವ ಪರಿಸ್ಥಿತಿಯಲ್ಲಿ ವಿಕ್ರಂ ಇಲ್ಲ. ವೇದಾಗೆ ಸಾಕಷ್ಟು ಅವಮಾನ ಮಾಡಿ. ಆಕೆಯ ಬಲ ಹೀನತೆಯನ್ನೇ ಬಂಡವಾಳ ಮಾಡಿಕೊಂಡು ವೇದಾನನ್ನು ಮನೆಯಿಂದ ಹೊರಗೆ ಕಳುಹಿಸಿರುತ್ತಾನೆ. ಆದರೆ ಇದನ್ನೆಲ್ಲ ವೇದಾ ಬಳಿ ಹೇಳುತ್ತಾನೆ .
ವಿಕ್ರಂ ಏನು ಮಾಡಲು ಸಾಧ್ಯ ಆಗುತ್ತಿಲ್ಲ . ವೇದಾಳನ್ನು ಅತಿಯಾಗಿ ಪ್ರೀತಮ್ ಪ್ರೀತಿ ಮಾಡುತ್ತಾ ಇರುತ್ತಾನೆ. ಈಗಲಾದರೂ ವಿಕ್ರಂ ಅವಳನ್ನು ಬಿಟ್ಟು ಹೋದ ಎಂದು ಖುಷಿಯಲ್ಲಿ ಇರುತ್ತಾನೆ.

ಪ್ರೀತಮ್ ಹಾಗೂ ವೇದಾ ಒಟ್ಟಿಗೆ ಇರುವಾಗಲೇ ವಿಕ್ರಂ ಸಿಕ್ಕಿರುವುದು ಪ್ರೀತಮ್ ಅತಿಯಾದ ಕೋಪಕ್ಕೆ ಕಾರಣ ಆಗಿರುತ್ತದೆ. ಈ ವಿಕ್ರಂಗೆ ಹೇಗಾದರೂ ಮಾಡಿ ಪಾಠ ಕೇಲಿಸಲೇಬೇಕು, ಆತ ಮತ್ತೊಮ್ಮೆ ವೇದಾಳತ್ತ ತಿರುಗಿ ನೋಡಬಾರದು ಎಂದು ಯೋಚನೆ ಮಾಡುತ್ತಾ ಇರುತ್ತಾನೆ.
ಹುಡುಗಿಯ ಚೈನ್ ಕದ್ದ ಪ್ರೀತಮ್
ಒಬ್ಬಳ ಕೊರಳಲ್ಲಿ ಇದ್ದ ಚೈನ್ ಅನ್ನು ಮೆತ್ತಗೆ ಕದ್ದು ವಿಕ್ರಂ ಪಾಕೆಟ್ ಒಳಗೆ ಹಾಕುತ್ತಾನೆ. ಆ ಹುಡುಗಿ ಕುತ್ತಿಗೆಯಲ್ಲಿ ಇದ್ದ ಸರ ಕಾಣದೆ ಜೋರಾಗಿ ಹೇಳುತ್ತಾಳೆ. ನನ್ನ ಕುತ್ತಿಗೆಯಲ್ಲಿ ಇದ್ದ ಚೈನ್ ಕಾಣಿಸುತ್ತಿಲ್ಲ ಎನ್ನುತ್ತಾಳೆ. ಇದನ್ನು ಕೇಳಿಸಿಕೊಂಡವರು ಎಲ್ಲರನ್ನೂ ಚೆಕ್ ಮಾಡುತ್ತಾರೆ. ಪ್ರೀತಮ್ ಮಾತ್ರ ಮನದಲ್ಲಿ ಬಹಳ ಖುಷಿ ಪಟ್ಟುಕೊಳ್ಳುತ್ತಾನೆ.
ವೇದಾಳಿಂದ ವಿಕ್ರಂ ದೂರ ಮಾಡಲು ಸಂಚು
ವಿಕ್ರಂ ಸಿಕ್ಕಿ ಹಾಕಿಕೊಂಡರೆ ಖಂಡಿತವಾಗಿಯೂ ಮತ್ತೆ ಆಕೆಯ ಮುಖವನ್ನು ನೋಡಲು ಆತನಿಗೆ ಧೈರ್ಯ ಬರುವುದು ಇಲ್ಲ ಎಂದು ಯೋಚನೆ ಮಾಡುತ್ತಾ ಇರುತ್ತಾನೆ. ಇನ್ನು ವೇದಾ ಹಾಗೂ ವಿಕ್ರಂ ಮಾತನಾಡುತ್ತಾ ಇರುತ್ತಾರೆ. ವಿಕ್ರಂ ಬಗ್ಗೆ ಮನದಲ್ಲಿ ವೇದಾ ಯೋಚನೆ ಮಾಡುತ್ತಾ ಇರುತ್ತಾಳೆ.

ವಿಕ್ರಂ ಬದಲಾವಣೆಯಿಂದ ವೇದಾಗೆ ಸಂತಸ
ಈಗ ವಿಕ್ರಂ ಮೊದಲಿನ ಹಾಗೆ ಇಲ್ಲ. ಆತ ಬಹಳ ಬದಲಾಗಿ ಬಿಟ್ಟಿದ್ದಾನೆ. ಮೊದಲು ಬಹಳ ಖಡಕ್ ಆಗಿ ಇರುತ್ತಿದ್ದ. ಆದರೆ ಇದೀಗ ಬಹಳ ಸಾಧು ಸ್ವಭಾವದವನಾಗಿದ್ದಾನೆ ಎಂದು ಮನದಲ್ಲಿಯೇ ಬಹಳ ಖುಷಿ ಪಡುತ್ತಾ ಇರುತ್ತಾರೆ. ಇನ್ನು ಚೈನ್ ಕಳ್ಳತನ ಆಗಿದೆ ಎಂದು ತಿಳಿದ ಬಳಿಕ ವೇದಾಗೆ ಶಾಕ್ ಆಗುತ್ತದೆ. ಇಲ್ಲಿ ಯಾರಪ್ಪ ಚೈನ್ ಕದಿಯುತ್ತಾರೆ? ಎಂದುಕೊಂಡ ವೇದಾಗೆ ಬಹಳ ದೊಡ್ಡ ಶಾಕ್ ಕಾದಿದೆ ಎಂದು ಹೇಳಿದರೆ ತಪ್ಪಾಗದು.


Click it and Unblock the Notifications











