Paaru: ಜನನಿಗೆ ಧೈರ್ಯ ಹೇಳಿದ ಅಖಿಲ; ಅಮ್ಮನ ಮಾತಿಗೆ ಪ್ರತಿಕ್ರಿಯಿಸದೇ ಹೊರಟ ಆದಿ

By Poorva

ಪಾರು ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರ ಮನ ಸೆಳೆಯುವ ಹಾಗೆ ಮಾಡುತ್ತಿದೆ. ಇದೀಗ ಪಾರು ಕೆಲಸಕ್ಕೆ ಹೋಗಲು ಆದಿ ಪರ್ಮಿಷನ್ ಸಿಕ್ಕ ಹಾಗಿದೆ. ಆದಿ ಪಾರು ಬಳಿ ಅದೆಷ್ಟೋ ಬಾರಿ ಕೆಲಸಕ್ಕೆ ಹೋಗುವುದು ಬೇಡ ಎಂದು ಗೋಗರೆದರೂ ಪಾರು ಮಾತ್ರ ತನ್ನ ನಿರ್ಧಾರದಿಂದ ಹಿಂದೆ ಸರಿದಿಲ್ಲ.

ಇನ್ನು ಪಾರು ನಿರ್ಧಾರಕ್ಕೆ ಆದಿ ಒಪ್ಪಿಗೆ ಕೊಡುತ್ತಾನೆ. ಆ ಮಟ್ಟಿಗೆ ಪಾರು ಆದಿ ಮನವೊಲಿಕೆ ಮಾಡುತ್ತಾಳೆ. ಆದಿಗೆ ನಿಜ ತಿಳಿಯಿತು ಆದರೆ ಪಾರು ನಿರ್ಧಾರದಿಂದ ಅರಸನ ಕೋಟೆಯ ಘನತೆಗೆ ಕುತ್ತು ಬರುವುದು ಖಂಡಿತ. ಯಾಕೆಂದರೆ ಪಾರು ಕೆಲಸಕ್ಕೆ ಹೋಗುತ್ತಾ ಇರುವುದು ಅಖಿಲಗೆ ಇನ್ನೂ ತಿಳಿದಿಲ್ಲ. ಅಖಿಲಾಂಡೇಶ್ವರಿ, ರಘು ಹಾಗೂ ಜನನಿ ಪಾರು ದಾರಿಯನ್ನು ಕಾಯುತ್ತಾ ಇದ್ದರು. ಅಖಿಲ ಮೆತ್ತಗೆ ಪಾರು ಬಳಿ ಏನಮ್ಮ ಪಾರು ಚೆನ್ನಾಗಿ ಇದ್ಯಾ, ಆರೋಗ್ಯ ಚೆನ್ನಾಗಿ ಇದೆಯಾ ಎಂದೆಲ್ಲ ಕೇಳುತ್ತಾಳೆ. ಆ ಬಳಿಕ ಏನಮ್ಮ ನೀನು ಬೆಳಗ್ಗೆ ದೇವಸ್ಥಾನಕ್ಕೆ ಹೋದರೆ ಎರಡು ಗಂಟೆ ತನಕ ಅಲ್ಲೇ ಇರುತ್ತೀಯ ಅಂತ ಸಾವಿತ್ರಿ ಹೇಳುತ್ತ ಇದ್ದರು ಎಂದು ಸಹ ಕೇಳುತ್ತಾಳೆ.

Kannada serial Paaru written update on 19th June

ಇದನ್ನು ಕೇಳಿದ ಪಾರುಗೆ ಅತ್ತೆಯ ಬಳಿ ಏನು ಹೇಳಬೇಕು ಎಂದು ತಿಳಿಯದಾಗಿ ಹೋಗುತ್ತದೆ. ಹೇಗೆ ನಿಜ ಹೇಳುವುದು, ನಿಜ ಹೇಳಿದರೆ ಅತ್ತೆ ನನ್ನ ಮೇಲೆ ಎಷ್ಟೆಲ್ಲ ಬೇಸರ ಮಾಡಿಕೊಳ್ಳಬಹುದು ಎಂದೆಲ್ಲ ಯೋಚನೆ ಮಾಡುತ್ತಾ ಇರುತ್ತಾಳೆ. ಇನ್ನು ಅಖಿಲ ಆದಿ ಬಳಿ ನೀವು ಅರಸನ ಕೋಟೆಗೆ ಯಾವತ್ತಾದರೂ ಬಂದೆ ಬರುತ್ತೀರಿ ಅಲ್ವಾ ಎಂದು ಕೇಳುತ್ತಾಳೆ. ಇದನ್ನು ನೋಡಿದ ಆದಿ ತನ್ನ ತಾಯಿಯ ಬಳಿಯೂ ಮಾತನಾಡದೆ ಪಾರು ಹೋಗೋಣ ಎಂದು ಹೇಳಿದಾಗ ಪಾರು ಆಟೋ ಹತ್ತುತ್ತಾಳೆ. ಬಳಿಕ ಅಲ್ಲಿಂದ ಹೋಗುತ್ತಾರೆ. ಇದನ್ನು ನೋಡಿ ಅಖಿಲ ಮಗನ ಉತ್ತರ ಸಿಗದೆ ಸುಮ್ಮನೆ ಆಟೋ ಹೋದ ಕಡೆ ನೋಡುತ್ತಾ ನಿಲ್ಲುತ್ತಾಳೆ. ಮನೆಗೆ ಬಂದ ಅಖಿಲ ಜನನಿ ಮನದಲ್ಲಿ ಇರುವ ಭಯವನ್ನು ಹೋಗಲಾಡಿಸಬೇಕು ಎಂದು ನಿರ್ಧಾರ ಮಾಡುತ್ತಾ ಇರುತ್ತಾಳೆ.

ಬಳಿಕ ಎಲ್ಲರನ್ನೂ ಕರೆದು ಜಯ ಅಕ್ಕನ ಮಗು ಹೋಯಿತೆಂದು ಯಾವತ್ತೂ ಕುಕ್ಕಾಗಬಾರದು ಏನು ಆಗುವುದಿಲ್ಲ. ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳಬೇಡ ಎಂದು ಬುದ್ಧಿವಾದ ಹೇಳುತ್ತ ಇರುತ್ತಾರೆ. ಗರ್ಭಿಣಿ ಯಾರ ಆರೋಗ್ಯ ಚೆನ್ನಾಗಿ ಇರಬೇಕು ಯಾರು ಸಿಸೇರಿಯನ್ ಆಗಿ ಮಗು ಹುಟ್ಟ ಬಾರದು, ನಾರ್ಮಲ್ ಡೆಲಿವರಿಯಲ್ಲಿ ಮಕ್ಕಳು ಆರೋಗ್ಯವಾಗಿ ಹುಟ್ಟಬೇಕು ಅದಕ್ಕಾಗಿ ಅಖಿಲ ಹೊಸ ಪ್ರಾಡಕ್ಟ್ ಅನ್ನು ಲಾಂಚ್ ಮಾಡುವುದಕ್ಕಾಗಿ ಪ್ರೀತಮ್ ನನ್ನು ಕರೆದು ಮಾತನಾಡುತ್ತಾ ಇರುತ್ತಾಳೆ. ಇಂತಹ ಪ್ರಯತ್ನಕ್ಕೆ ಅರಸನ ಕೋಟೆಯ ಒಡತಿ ಕೈ ಹಾಕಿದ್ದಾರೆ. ಆ ಪ್ರಾಡಕ್ಟ್ ಲಾಂಚ್ ಮಾಡುವ ಹೊಣೆಯನ್ನು ಪ್ರೀತಮ್ ಗೆ ವಹಿಸುತ್ತಾಳೆ. ಇದರಿಂದ ಪ್ರೀತಮ್ ಬಹಳ ಖುಷಿಯಿಂದ ಒಪ್ಪಿಕೊಳ್ಳುತ್ತಾನೆ.

ಇದರಿಂದ ಅಖಿಲಗೆ ಬಹಳ ಖುಷಿ ಆಗುತ್ತದೆ. ನಾರ್ಮಲ್ ಡೆಲಿವರಿ ಆಗಿ ಗರ್ಭಿಣಿಯರು ಮಗು ಹುಷಾರಾಗಿ ಇರಲಿ ಎಂಬುವುದು ಅಖಿಲ ಗುರಿ. ಇದರಿಂದ ಜನನಿ ಮನದಲ್ಲಿ ಇರುವ ಆತಂಕ ಕೂಡ ಕಡಿಮೆ ಮಾಡುವಲ್ಲಿ ಹೆಚ್ಚಿನ ಗಮನ ವಹಿಸುತ್ತಾಳೆ.

More from Filmibeat

English summary
Kannada serial paaruwritten updated on 14th june
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X