Don't Miss!
- News Lok Sabha Election 2024: ಈ 6 ಜಿಲ್ಲೆಗಳಲ್ಲಿ 0% ಮತದಾನ-ಎಲ್ಲಿ ಹಾಗೂ ಕಾರಣ ಏನು?
- Automobiles ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Lifestyle 5 ನಿಮಿಷದಲ್ಲಿ ಪಾತ್ರೆಯನ್ನು ಹೊಳೆಯುವಂತೆ ಮಾಡಿ..! ಸುಲಭದ ಟಿಪ್ಸ್ ಇಲ್ಲಿದೆ
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅರಸನ ಕೋಟೆ ಆಸ್ತಿ ಎರಡು ಭಾಗವಾಗುತ್ತಾ? ಅಮ್ಮನ ಬಳಿ ಆಸ್ತಿ ಕೇಳ್ತಾನಾ ಆದಿ?
ಪ್ರೀತಮ್ ಗಾಗಿ ಆದಿ ಅಮ್ಮನ ವಿರುದ್ದ ನಿಂತುಕೊಳ್ಳಲೆಬೇಕಾಗಿದೆ. ಈ ಬಗ್ಗೆ ಪಾರು ಬಳಿ ಕೂಡ ಹೇಳುತ್ತ ಇರುತ್ತಾನೆ. ಪಾರು ನಾವು ಎಷ್ಟೇ ಕಷ್ಟ ಬಂದರೂ ಆಸ್ತಿಯಲ್ಲಿ ಪಾಲು ಕೇಳಲ ಬೇಕು, ಇವತ್ತು ನಾನು ಪ್ರೀತಮ್ ಮೇಲೆ ಕೈ ಮಾಡಿದರೂ ನನ್ನ ಪರವಾಗಿ ನಿಂತು ಮಾತನಾಡಿದ, ಅಮ್ಮನ ವಿರುದ್ದ ಮಾತನಾಡಲೇ ಬೇಕು ಎಂದಾಗ ಪಾರು ಮಾತ್ರ ಇದು ಅಸಾಧ್ಯ ಎಂದು ಹೇಳುತ್ತಾಳೆ. ಆದಿ ಮನದಲ್ಲಿ ಒಂದೇ ವಿಚಾರ ಮೂಡುತ್ತ ಇರುತ್ತದೆ ನಾವು ಎಲ್ಲರ ಜೊತೆ ಕಠೋರವಾಗಿ ನಡೆದುಕೊಳ್ಳಬೇಕು ಇಲ್ಲವಾದರೆ ನಮ್ಮ ಮನೆಗೆ ಕೆಡುಕು ಆಗುವುದು ಸತ್ಯ ಎಂದು ಮನದಲ್ಲಿ ಯೋಚನೆ ಮಾಡುತ್ತಾ ಇರುತ್ತಾನೆ.
ಪ್ರೀತಮ್ ಆಸ್ತಿ ಕೇಳುವ ಹಾಗೆ ಯಾರು ಮಾಡುತ್ತಾ ಇದ್ದಾರೆ ಎಂದು ಯೋಚನೆ ಮಾಡುತ್ತಿರುವ ಆದೀಗೆ ಪ್ರೀತಮ್ ಬಾಯಿ ಬಿಡಿಸುವುದು ಬಹಳ ಕಷ್ಟ ಕರ ವಿಚಾರ ಆಗಿರುತ್ತದೆ. ಇನ್ನು ಆದಿ ಮಾತ್ರ ಪಾರು ಬಳಿ ನಾವು ಆಸ್ತಿಯಲ್ಲಿ ಭಾಗ ಕೇಳಲೇ ಬೇಕು ಇಲ್ಲ ಎಂದರೆ ಪ್ರೀತಮ್ ಜೀವನ ಹಾಳಾಗಿ ಹೋಗುತ್ತದೆ..
ಅಮ್ಮ ನಾನು ಜಗಳ ಆಡಿದರೆ ಒಂದಾಗುತ್ತವೆ, ಆದರೆ ಪ್ರೀತಮ್ ಹೀಗೆ ಪದೇ ಪದೆ ಜಗಳ ಆಡಿದರೆ ಒಂದಾಗಲು ಅಮ್ಮ ಒಪ್ಪಲ್ಲ ಅದಕ್ಕಾಗಿ ನಾವು ಆಸ್ತಿಯಲ್ಲಿ ಭಾಗ ಕೇಳಲೇ ಬೇಕಾಗಿದೆ ಎಂದು ಬಹಳ ಬೇಸರದಲ್ಲಿ ಪಾರು ಬಳಿ ಹೇಳಿಕೊಳ್ಳುತ್ತಾ ಇರುತ್ತಾನೆ. ಇತ್ತ ಅಖಿಲ ಬಹಳ ಬೇಸರದಲ್ಲಿ ಇರುತ್ತಾಳೆ. ಅರಸನ ಕೋಟೆಯ ಭವಿಷ್ಯದ ದೃಷ್ಟಿಯಿಂದ ಯೋಚನೆ ಮಾಡುತ್ತಾಳೆ ಬಳಿಕ ಗಂಡ ರಘು ಬಳಿ ಏನು ಮಾಡಿದರೆ ಇದೆಲ್ಲ ಸರಿ ಹೋಗುತ್ತದೆ ಎಂದಾಗ ಅಲ್ಲಿಗೆ ದಾಮಿನಿ ಓಡಿ ಬರುತ್ತಾಳೆ.
ದಾಮಿನಿ ವಿರುದ್ದ ಕಿರುಚಿದ ಅಖಿಲ
ನನ್ನ ಬಳಿ ಇದಕ್ಕೆಲ್ಲಾ ಉಪಯೋಗವಿದೆ ಎಂದು ಓಡಿ ಬರುವ ದಾಮಿನಿ ಅಕ್ಕ ನಿಮ್ಮ ಸಮಸ್ಯೆಗೆ ನನ್ನ ಬಳಿ ಪರಿಹಾರ ಇದೆ, ಆಸ್ತಿಯನ್ನು ಒಬ್ಬರು ಮಕ್ಕಳಿಗೆ ಕೂಡ ಭಾಗ ಮಾಡಿಬಿಡಿ, ಹುಟ್ಟಿದಾಗ ಅಣ್ಣ ತಮ್ಮಂದಿರು, ಬೆಳಿತಾ ಬೆಳೆಯುತ್ತಾ ದಾಯಾದಿಗಳು ಅದಕ್ಕಾಗಿ ಹೇಳಿದೆ ಎನ್ನುತ್ತಾಳೆ. ಇದನ್ನು ಕೇಳಿದ ಅಖಿಲ ಕೋಪದಿಂದ ದಾಮಿನಿ ಕೆನ್ನೆಗೆ ಹೊಡೆಯಲು ಬರುತ್ತಾಳೆ.
ಅಖಿಲ ಮಾತಿಗೆ ನಡುಗಿದ ದಾಮಿನಿ
ಇಷ್ಟೇನಾ ಇಷ್ಟೇನಾ ನೀನು ಆದಿ ಪ್ರೀತಮ್ ಬಗ್ಗೆ ತಿಳಿದುಕೊಂಡು ಇರುವುದು, ಆಸ್ತಿ ಭಾಗ ಮಾಡಿರುವ ವಿಚಾರವನ್ನು ಅವರಿಬ್ಬರೂ ಕನಸು ಮನಸಿನಲ್ಲೂ ಯೋಚನೆ ಮಾಡಿರಲು ಸಾಧ್ಯ ಇಲ್ಲ, ನನ್ನ ಮಕ್ಕಳು ಏನು ಎಂಬುವುದು ನನಗೆ ಗೊತ್ತು. ಇನ್ನೊಂದು ಬಾರಿ ಅವರಿಬ್ಬರ ಬಗ್ಗೆ ಮಾತನಾಡಿದರೆ ಮನೆಯಿಂದ ಆಚೆ ಹಾಕಬೇಕಾಗುತ್ತದೆ ಎಂದು ಕೋಪದಿಂದ ಹೇಳುತ್ತಾಳೆ. ಅರಸನ ಕೋಟೆಯಲ್ಲಿ ಯಾರು ಭಾಗ ಕೇಳಿಲ್ಲ ಕೇಳೋದು ಇಲ್ಲ ಎಂದು ಅಖಿಲ ಹೇಳಿದಾಗ ದಾಮಿನಿ ಅಲ್ಲಿಂದ ಹೋಗುತ್ತಾಳೆ. ಇನ್ನು ಪಾರು ಎಲ್ಲರಿಗೂ ಕಾಫಿ ಕೊಡುತ್ತಾ ಇರುವ ವೇಳೆ ಅಲ್ಲಿಗೆ ಜನನಿ ಬರುತ್ತಾಳೆ .
ಜನನಿಗೆ ಕಾಫಿ ಕೊಡದ ಪಾರು
ಪಾರು ಜನನಿಗೆ ಕಾಫಿ ಕೊಡಬೇಕು ಅನ್ನುವಷ್ಟರಲ್ಲಿ ಅಲ್ಲಿಗೆ ಆದಿ ಬರುತ್ತಾನೆ.. ಆದಿ ಜನನಿಗೆ ಕಾಫಿ ಕೊಡದಂತೆ ಸನ್ನೆ ಮಾಡುತ್ತಾನೆ. ಇದನ್ನು ನೋಡಿದ ಜನನಿ ಸೀದಾ ಹೋಗುತ್ತಾಳೆ ಬಳಿಕ ಜನನಿ ಹಿಂದೆ ತಿರುಗಿ ನೋಡಿದಾಗ ಆದಿ ನಿಂತಿರುತ್ತಾನೆ. ಇನ್ನು ಕಾಫಿ ಹಿಡಿದುಕೊಂಡು ಆದಿ ರೂಮಿಗೆ ಬರುವ ಪಾರು ಆದಿ ಬಳಿ ಯಾಕೆ ಯಜಮಾನರೆ ಜನನಿ ಅವರಿಗೆ ಕಾಫಿ ಕೊಡಬೇಡ ಅಂದಿರಿ ಎಂದಾಗ ಜನನಿ ಬರುತ್ತಾಳೆ. ಇದನ್ನು ಕಂಡ ಆದಿ ಜನನಿಗೆ ಕಾಫಿ ಕೊಡದೇ ಒಳ್ಳೆ ಕೆಲಸ ಮಾಡಿದೆ ಪಾರು. ಎಲ್ಲರಿಗೂ ಕಾಫಿ ಮಾಡಿ ಕೊಡಲು ನೀನೇನು ಈ ಮನೆ ಕೆಲಸದವಳ, ನೀನು ನನ್ನ ಹೆಂಡತಿ ಮೇಲಾಗಿ ಅರಸನ ಕೋಟೆಯ ಸೊಸೆ, ನೀನು ಈ ಮನೆಯ ಹಿರಿ ಸೊಸೆ. ನಿನಗೆ ಈ ಮನೆಯಲ್ಲಿ ಜನನಿಗಿಂತ ಹೆಚ್ಚು ಅಧಿಕಾರ ಇದೆ, ನೀನು ಈ ತರ ಮಾಡುತ್ತಾ ಇರುವುದು ನನಗೆ ಸರಿ ಕಾಣುತ್ತಾ ಇಲ್ಲ ಎಂದೆಲ್ಲ ಹೇಳುತ್ತಾನೆ. ಇದನ್ನು ಕೇಳಿದ ಜನನಿ ಅಳುತ್ತಾ ಹೋಗುತ್ತಾಳೆ. ಬಳಿಕ ಜನನಿ ಪ್ರೀತಮ್ ಗೆ ಕಾಫಿ ಕೊಡಲು ಹೋಗುತ್ತಾಳೆ. ಆ ವೇಳೆ ಜನನಿ ಕಣ್ಣೀರು ನೋಡಿದ ಪ್ರೀತಮ್ ಏನಾಯಿತು ಜನನಿ ಯಾಕೆ ಕೋಪ ಮಾಡಿಕೊಂಡು ಇದ್ದೀಯಾ ಏನಾಯಿತು ಎಂದೆಲ್ಲ ಹೇಳಿದಾಗ ಆದಿ ಹೇಳಿರುವುದನ್ನೆಲ್ಲ ಜನನಿ ಪ್ರೀತಮ್ ಬಳಿ ಹೇಳುತ್ತಾಳೆ. ಪ್ರೀತಮ್ ಕೋಪಿಸಿಕೊಳ್ಳದೆ ಜನನಿಗೆ ಸಮಾಧಾನ ಮಾಡುತ್ತಾನೆ. ಆದರೆ ಆದಿಗೆ ಇದೆಲ್ಲವನ್ನೂ ಜನನಿಗೆ ಹೇಳಲು ಬಹಳ ಬೇಸರ ಆಗುತ್ತದೆ ಆದರೆ ಪ್ರೀತಮ್ ಗೆ ಒಳಿತು ಆಗುತ್ತದೆ ಎಂದು ಹೇಳಿ ಈ ರೀತಿಯ ಗಟ್ಟಿ ನಿರ್ಧಾರವನ್ನು ತೆಗೆದುಕೊಳ್ಳುತ್ತಾನೆ.