twitter
    For Quick Alerts
    ALLOW NOTIFICATIONS  
    For Daily Alerts

    ಪ್ರೀತು ನಡವಳಿಕೆಯಿಂದ ಕಾಂಗಾಲಾದ ಅಖಿಲಾಂಡೇಶ್ವರಿ!

    By ಪೂರ್ವ
    |

    ಅಖಿಲಾಂಡೇಶ್ವರಿ ಮನೆ ಈಗ ಉದ್ವಿಗ್ನ ಪರಿಸ್ಥಿತಿಯಲ್ಲಿದೆ. ಪ್ರೀತು, ಟೆಂಡರ್ ಅನ್ನು ಬೇರೆಯವರು ತೆಗೆದುಕೊಳ್ಳುವ ಹಾಗೆ ಮಾಡಿದ್ದಾನೆ. ಇದೆಲ್ಲ ರಾಣಾ ಹಾಗೂ ಅರುಂಧತಿ ಕುತಂತ್ರ ದಿಂದ ನಡೆಯುತ್ತಿದೆ ಎಂಬ ಅರಿವು ಅಖಿಲಾಂಡೇಶ್ವರಿಗೆ ಇಲ್ಲ. ತನ್ನ ಮಗನಿಗೆ ಸಿಇಒ ಪಟ್ಟ ಕೊಟ್ಟ ನಂತರ ಅವನ ಮತ್ತೊಂದು ಮುಖ ಅವನದ್ದು ಕಾಣಿಸುತ್ತಿದೆ. ಪ್ರೀತು, ಹಣದ ಮೋಹಕ್ಕೆ ಬಲಿಯಾದನೆ ಎಂದು ಅಖಿಲಾಂಡೇಶ್ವರಿ ಯೋಚಿಸುತ್ತಿದ್ದಾಳೆ.

    ಬಳಿಕ ಪ್ರೀತುವನ್ನು ಕರೆದು ಕೇಳುತ್ತಾಳೆ, ಆ ವೇಳೆ ಪ್ರೀತು, ಲಾಭ ಇಲ್ಲದೆ ಯಾರಾದರೂ ಬ್ಯುಸಿನೆಸ್ ಮಾಡುತ್ತಾರಾ ಅಮ್ಮ ಎಂದು ಹೇಳುವ ಹಾಗೆ ರಾಣಾ ಮಾಡುತ್ತಾನೆ. ಇದನ್ನು ಕೇಳಿದ ಅಖಿಲಾಗೆ ತನ್ನ ಮಗ ಹೀಗೆ ಮಾತನಾಡುತ್ತಾ ಇರುವುದು ಇದು ಮೊದಲನೇ ಬಾರಿ. ಆತನ ವರ್ತನೆ ಕಂಡು ಅಲ್ಲಿ ನೆರೆದವರೆಲ್ಲ ಶಾಕ್ ಆಗುತ್ತಾರೆ. ಬಳಿಕ ಅಮ್ಮನ ಮುಂದೆ ತಲೆ ತಗ್ಗಿಸುತ್ತಾ ನಿಲ್ಲುತ್ತಿದ್ದ ಪ್ರೀತು ತಲೆ ಎತ್ತಿ ನೋಡುವುದನ್ನು ನೋಡಿದ ಆದಿಗೆ ಶಾಕ್ ಆಗುತ್ತದೆ. ಇದನ್ನು ನೋಡಿದ ಅಖಿಲಾಗೆ ಇನ್ನೂ ಕೋಪ ಉಕ್ಕಿ ಹರಿಯುತ್ತದೆ.

    ಪ್ರೀತು ವರ್ತನೆಯಿಂದ ಕಂಗೆಟ್ಟ ಅಖಿಲ: ಆದಿಗೆ ಶಾಕ್ಪ್ರೀತು ವರ್ತನೆಯಿಂದ ಕಂಗೆಟ್ಟ ಅಖಿಲ: ಆದಿಗೆ ಶಾಕ್

    ಅಖಿಲಾ, ಪ್ರೀತು ವಿರುದ್ಧ ಉರಿದು ಬೀಳುವ ವೇಳೆಗೆ ರಘು ಆಕೆಯನ್ನು ತಡೆದು ಕರೆದುಕೊಂಡು ಹೋಗುತ್ತಾನೆ. ಆಗ ಆದಿ ಪ್ರೀತುಗೆ ಬುದ್ದಿ ಹೇಳಲು ಹೋಗುತ್ತಾನೆ ಇದನ್ನು ಕಂಡ ಪ್ರೀತು ಅಲ್ಲಿಂದ ಹೊರಟು ಹೋಗುತ್ತಾನೆ ಅಣ್ಣನ ಮಾತನ್ನು ಕಿವಿಗೆ ಹಾಕಿ ಕೊಳ್ಳದೆ ಹೋಗಿದ್ದನ್ನು ನೋಡಿದ ಆದಿಗೆ ಪ್ರೀತು ವರ್ತನೆಯಿಂದ ನೋವಾಗುತ್ತದೆ.

    ಪ್ರೀತು ಮಾತಿಗೆ ಸಿಟ್ಟಾದ ಆದಿ

    ಪ್ರೀತು ಮಾತಿಗೆ ಸಿಟ್ಟಾದ ಆದಿ

    ಬಳಿಕ ಅಖಿಲಾಂಡೇಶ್ವರಿ ರಘು ಮಾತನಾಡುತ್ತಾ ಇರುತ್ತಾರೆ. ರಘು, ನಾನು ತಪ್ಪು ಮಾಡಿದೆ ಆದಿ ಮೇಲೆ ಸಿಟ್ಟುಗೊಂಡ ನಾನು ಪ್ರೀತುವನ್ನು ಸಿಇಒ ಸ್ಥಾನದಲ್ಲಿ ಕೂರಿಸಿದೆ ಆದರೆ ಇದೀಗ ನಾನು ತಪ್ಪು ಮಾಡಿ ಬಿಟ್ಟೆ ಎಂದು ಭಾಸವಾಗುತ್ತದೆ. ಪ್ರೀತು ಇನ್ನೂ ಚಿಕ್ಕವನು ಇನ್ನೂ ಬ್ಯುಸಿನೆಸ್‌ನಲ್ಲಿ ಹೆಚ್ಚು ಹೆಚ್ಚು ಹಣ ಗಳಿಸಲು ಹಂಬಲ ಆದರೆ ಅದು ಅತಿರೇಕ ಆಗುತ್ತಿದೆ. ಎಲ್ಲಾ ಕಲಿತುಕೊಳ್ಳಬೇಕು ಆತನನ್ನು ಸಿ.ಇ.ಒ ಸ್ಥಾನದಿಂದ ಇಳಿಸಬೇಕು ಆದಿಯನ್ನೂ ಕೂರಿಸಬೇಕು ಎಂದು ರಘು ಬಳಿ ಹೇಳಿದಾಗ ರಘು ಕೂಡಾ ಅದಕ್ಕೆ ಒಪ್ಪಿಗೆಯನ್ನು ನೀಡುತ್ತಾನೆ. ಇತ್ತ ಆದಿ ತಮ್ಮನಿಗೆ ಬುದ್ದಿ ಮಾತುಗಳನ್ನು ಹೇಳಲು ಬರುತ್ತಾನೆ.

    ಪಾರುಗೆ ಗದರಿದ ಅಖಿಲಾಂಡೇಶ್ವರಿ! ಅಮ್ಮನ ಮೇಲೆ ಮುನಿಸಿಕೊಂಡ ಆದಿಪಾರುಗೆ ಗದರಿದ ಅಖಿಲಾಂಡೇಶ್ವರಿ! ಅಮ್ಮನ ಮೇಲೆ ಮುನಿಸಿಕೊಂಡ ಆದಿ

    ತಮ್ಮನಿಗೆ ಬುದ್ದಿ ಮಾತು ಹೇಳಿದ ಆದಿ

    ತಮ್ಮನಿಗೆ ಬುದ್ದಿ ಮಾತು ಹೇಳಿದ ಆದಿ

    ಅಮ್ಮನ ಎದುರಲ್ಲಿ ನಿಂತು ಮಾತನಾಡುವುದು ಸರಿಯಲ್ಲ ಅಮ್ಮನ ಕನಸನ್ನೇ ಭಗ್ನ ಮಾಡಿ ಬಿಟ್ಟೆ. ಯಾಕೆ ಹೀಗೆ ಮಾಡಿದೆ ಏನಾಗಿದೆ ನಿನಗೆ ಎಂದಾಗ ಜನನಿ ಕೂಡ ಪ್ರೀತುವನ್ನು ಬೈಯುತ್ತಾಳೆ. ಅತ್ತೆಯ ಬಳಿ ಆ ರೀತಿ ಮಾತನಾಡುವುದು ಏಷ್ಟು ಸರಿ ಎಂದೆಲ್ಲ ಕೇಳಿದಾಗ ರಾಣಾ, ಪ್ರೀತುಗೆ ಕರೆ ಮಾಡುತ್ತಾನೆ ಆದಿಗೆ ಬೈಯುವಂತೆ ಸೂಚನೆ ನೀಡುತ್ತಾನೆ. ಅದಕ್ಕೆ ಆದಿಗೆ ಬಾಯಿಗೆ ಬಂದ ಹಾಗೆ ಮಾತನಾಡುತ್ತಾನೆ ಪ್ರೀತು.

    ಅಣ್ಣನಿಗೆ ಎದುರಾಡಿದ ತಮ್ಮ

    ಅಣ್ಣನಿಗೆ ಎದುರಾಡಿದ ತಮ್ಮ

    ಅಣ್ಣಾ ನಿನ್ನನ್ನು ಅಮ್ಮ ಯಾಕೆ ಸಿಇಒ ಸ್ಥಾನದಿಂದ ಇಳಿಸಿದರು ಗೊತ್ತಾ ನಿನಗೆ ಜವಭ್ದಾರಿ ಇಲ್ಲ. ಕಂಪೆನಿಯ ಯಾವುದೇ ವಿಚಾರದಲ್ಲಿ ನೀನು ಅಷ್ಟಾಗಿ ತಲೆ ಕೆಡಿಸಿಕೊಂಡಿಲ್ಲ ಅದಕ್ಕಾಗಿ ನನ್ನನ್ನು ಆ ಸ್ಥಾನದಲ್ಲಿ ಕೂರಿಸಿದ್ದಾರೆ. ಇದು ನಿನಗೂ ಗೊತ್ತಿರುವ ವಿಚಾರ ನನಗೆ ನಿನ್ನ ಮಾತುಗಳು ಬೇಕಾಗಿಲ್ಲ. ನನ್ನ ಜೀವನವನ್ನು ನಾನು ನೋಡಿಕೊಳ್ಳುತ್ತೇನೆ ಎಂದು ಹೇಳಿ ಅಲ್ಲಿಂದ ಹೋಗುತ್ತಾನೆ. ಇದನ್ನು ಕೇಳಿ ಆದಿ ಶಾಕ್ ಆಗುತ್ತಾನೆ. ನನ್ನ ತಮ್ಮ ಈ ರೀತಿ ಎಂದೂ ನನ್ನ ಬಳಿ ಮಾತನಾಡಿಲ್ಲ. ಈಗ ನನ್ನ ಬಳಿ ಬಹಳ ಜೋರಿನಿಂದ ಮಾತನಾಡುತ್ತಿದ್ದಾನೆ ಎಂದು ಮನದಲ್ಲಿ ಯೋಚನೆ ಮಾಡುತ್ತಾನೆ.

    ಪ್ರೀತುವನ್ನು ಸಿ.ಇ.ಒ ಸ್ಥಾನದಿಂದ ಕೆಳಗಿಳಿಸಿದ ಅಖಿಲ

    ಪ್ರೀತುವನ್ನು ಸಿ.ಇ.ಒ ಸ್ಥಾನದಿಂದ ಕೆಳಗಿಳಿಸಿದ ಅಖಿಲ

    ಬಳಿಕ ಪ್ರೀತು ತನ್ನ ತಪ್ಪಿನಿಂದ ಈ ರೀತಿ ಅಯಿತಲ್ವಾ ಆ ಟೆಂಡರ್ ಅನ್ನು ಹೇಗಾದರು ಮಾಡಿ ತಮ್ಮತ್ತ ತಿರುಗಿಸಿಕೊಳ್ಳ ಬೇಕು ಎಂದು ಹೇಳಿ ಕರೆ ಮಾಡಿ ಹೇಳುತ್ತಾನೆ ಅದೆಷ್ಟೇ ಕಷ್ಟ ಆದರೂ ನನಗೆ ಆ ಟೆಂಡರ್ ಬೇಕು ಎಂದು ಹೇಳುತ್ತಾನೆ. ಆಗ ಅಲ್ಲಿಗೆ ಬಂದ ಅಖಿಲ ಬೇಡ ಎಂದು ಜೋರಾಗಿ ಹೇಳುತ್ತಾಳೆ. ಬಳಿಕ ಅಖಿಲಾಂಡೇಶ್ವರಿ ಆದಿಯ ಬಳಿ ಮಾತನಾಡಲು ಹೋಗುತ್ತಾರೆ ಆದಿ ನಿನ್ನನ್ನು ಸಿ.ಇ.ಒ ಸ್ಥಾನದಲ್ಲಿ ವಾಪಸ್ ಕೂರಿಸಲು ನಿರ್ಧರಿಸಿದ್ದೇವೆ ಎಂದು ಹೇಳಿದಾಗ ಆದಿ ಅದಕ್ಕೆ ಒಪ್ಪದೇ ನೀವು ಇದೆಲ್ಲ ಯಾಕೆ ಮಾಡುತ್ತಿದ್ದೀರಿ ಎಂದರೆ ನನ್ನ ಪಾರುವನ್ನು ದೂರ ಮಾಡಲು ಅಲ್ವಾ ಎಂದು ಹೇಳಿದಾಗ ಅಖಿಲಾಗೆ ಶಾಕ್ ಆಗುತ್ತದೆ.

    English summary
    Kannada serial Paaru written updated on 21th September. Know more about the episode.
    Thursday, September 22, 2022, 21:06
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X