Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅರಸನ ಕೋಟೆಯಲ್ಲಿ ದಸರಾ ಹಬ್ಬದ ಸಂಬ್ರಮ: ಅಖಿಲಾಂಡೇಶ್ವರಿ ಯೋಚನೆಯೇ ಬೇರೆ
ಅಖಿಲಾಂಡೇಶ್ವರಿ ಮನೆಯಲ್ಲಿ ದಸರಾ ಹಬ್ಬ ಜೋರಾಗಿ ನಡೆಯುತ್ತಿದೆ. ಗೊಂಬೆಗಳನ್ನು ಕೂರಿಸಿ ಪೂಜೆ ಮಾಡುವುದೇ ಒಂದು ಸಂಬ್ರಮ ಇದೀಗ ಅಖಿಲಾಂಡೇಶ್ವರಿ, ಪಾರು ಹಾಗೂ ಆದಿಯನ್ನು ಇನ್ನಷ್ಟು ಹತ್ತಿರ ಮಾಡಬೇಕು ಎಂಬುದಾಗಿ ಅಖಿಲ ಪಟ್ಟು ಹಿಡಿದಿದ್ದಾರೆ.
ಈ ವೇಳೆ ಪಾರು, ರಾಮ ಸೀತೆಯ ಗೊಂಬೆಯನ್ನು ಹಿಡಿದುಕೊಂಡು ಬರುತ್ತಾಳೆ. ಇದನ್ನು ನೋಡಿದ ಯಾಮಿನಿ ಇದೇನಮ್ಮ ಪಾರ್ವತಿ ಸೀತಾ-ರಾಮನ ಗೊಂಬೆ ತಂದಿದ್ದಿಯಾ ಎಂದು ಹೇಳುತ್ತಾಳೆ. ಇದಕ್ಕೆ ನಾಚಿಗೆ ಪಟ್ಟುಕೊಳ್ಳುತ್ತಿದ್ದ ಪಾರುವನ್ನೂ ನೋಡಿದ ಅಖಿಲಾಂಡೇಶ್ವರಿ ಯಾರು ನಿನ್ನ ರಾಮ ಕೊಟ್ಟಿದ್ದ ಎಂದು ಕೇಳುತ್ತಾರೆ ಈ ವೇಳೆ ಪಾರು ನಗುತ್ತಾ ಹೌದು ಎಂದು ತಲೆಯಾಡಿಸುತ್ತಾಳೆ.
ಆಗ ರಘು, 'ಮದುವೆಗೂ ಮುಂಚೆ ಪ್ರೇಮ ಬಂಧನದಲ್ಲಿ ಇರುವಾಗ ಕೊಟ್ಟಿದ್ದ' ಎಂದು ಹೇಳುತ್ತಾರೆ ಇದನ್ನು ಕೇಳಿ ಇನ್ನೂ ನಾಚಿದ ಪಾರು, ಆದಿ ಮುಖ ನೋಡುತ್ತಾಳೆ. ಮದುವೆಗೂ ಮುಂಚೆ ಇಷ್ಟೆಲ್ಲ ನಡೆದಿದೆಯೇ ಅದು ನನ್ನ ಕಣ್ಣು ತಪ್ಪಿಸಿ ಎಂದು ಯಾಮಿನಿ ಆಶ್ಚರ್ಯದಿಂದ ಹೇಳುತ್ತಾಳೆ. ಆಗ ಯಾಮಿನಿ ಕಾಲನ್ನು ಆಕೆಯ ಗಂಡ ಎಳೆಯುತ್ತಾರೆ ಇದಕ್ಕೆ ಎಲ್ಲರೂ ಸಂತಸದಿಂದ ನಗುತ್ತಾರೆ.
ರಾಮ ಸೀತೆಯನ್ನು ಒಟ್ಟಾಗಿ ಕೂರಿಸಿದ ಅಖಿಲ
ಈ ವೇಳೆ ರಘು ಕೂಡ ಪಾರು, ನಾನು ಇಡುತ್ತೇನೆ ಎಂದಾಗ ಬೇಡ ರಘು ಶಿವ ಸೀತಾ ರಾಮ ಯಾವತ್ತೂ ಒಟ್ಟಾಗಿಯೇ ಇರಬೇಕು ಎಂದು ಹೇಳಿ ಪಾರು ಬಳಿಯಿಂದ ಅಖಿಲ ಆ ಬೊಂಬೆಗಳನ್ನು ತೆಗೆದುಕೊಂಡು ಒಟ್ಟಾಗಿ ಇಡುತ್ತಾಳೆ. ಇದನ್ನು ನೋಡಿದ ಪಾರು ಆದಿ ಖುಷಿ ಪಡುತ್ತಾರೆ. ಬಳಿಕ ನವರಾತ್ರಿಯ ವೈಶಿಷ್ಟ್ಯದ ಬಗ್ಗೆ ಅದನ್ನು ಯಾಕಾಗಿ ಆಚರಣೆ ಮಾಡಲಾಗುತ್ತದೆ ಎಂಬುವುದನ್ನು ವಿವರವಾಗಿ ಹೇಳುತ್ತಾರೆ ಅಖಿಲಾಂಡೇಶ್ವರಿ.
ರಾಣ ಮನೆಗೆ ಹೊರಟ ಪ್ರೀತು!
ಇನ್ನು ಮನೆಯಿಂದ ಮೆತ್ತಗೆ ಹೊರಟ ಪ್ರೀತುವನ್ನೂ ಈ ವೇಳೆ ಯಾರು ಗಮನಿಸುವುದೇ ಇಲ್ಲ. ತನ್ನನ್ನು ತನ್ನ ಮನೆಯಿಂದ ದೂರ ಮಾಡುತ್ತಿದ್ದಾರೆ ಎನ್ನುವ ಕೋಪ ಒಂದು ಕಡೆಯಾದರೆ ಇನ್ನೊಂದು ಕಡೆ ತನ್ನನ್ನು ಇಷ್ಟು ಆಟ ಆಡಿಸಿ ರಾಣಾ ಹಾಗೂ ಅರುಂಧತಿ ತಮಗೆ ಬೇಕಾದ ಹಾಗೆ ಬಳಸಿಕೊಂಡರಲ್ಲ ಎನ್ನುವ ಕೋಪ ಬೇರೆ. ಇದಕ್ಕಾಗಿ ಮೆತ್ತಗೆ ಅರುಂಧತಿ ಮನೆಗೆ ಕನ್ನ ಹಾಕಿದ್ದಾನೆ ಪ್ರೀತು. ಅರುಂಧತಿ ಹಾಗೂ ರಾಣಾ ಗಟ್ಟಿಯಾಗಿ ಮಲಗಿ ಇದ್ದರೂ. ಮನೆಯ ಮಹಡಿ ಮೇಲಿಂದ ಹತ್ತಿದ ಪ್ರೀತು ಮೆತ್ತಗೆ ಡೋರ್ ತೆಗೆದು ಒಳಗೆ ಹೋಗುತ್ತಾನೆ.
ಪೆನ್ ಡ್ರೈವ್ ಹಿಡಿದು ಖುಷಿಯಿಂದ ಆಗಮಿಸಿದ ಪ್ರೀತು
ಬಳಿಕ ರಾಣಾ ಹಾಗೂ ಅರುಂಧತಿ ಮಲಗಿರುವ ಕೋಣೆಗೆ ಹೋಗಿ ವಿಡಿಯೋ ಮಾಡಿದ್ದ ಕ್ಯಾಮಾರವನ್ನೂ ಚೆಕ್ ಮಾಡುತ್ತಾನೆ. ಬಳಿಕ ರಾಣಾ ತಲೆ ದಿಂಬಿನ ಒಳಗೆ ಕೈ ಹಾಕುತ್ತಾನೆ. ಅಲ್ಲಿ ಕೀ ತೆಗೆದುಕೊಂಡು ಎಲ್ಲಾ ರೂಮ್ಗಳನ್ನ ಸರ್ಚ್ ಮಾಡುತ್ತಾನೆ. ಬಳಿಕ ಪ್ರೀತುಗೆ ಪೆನ್ ಡ್ರೈ ಸಿಗುತ್ತದೆ. ಬಳಿಕ ಅಲ್ಲಿಂದ ತೆರಳಿದ ಪ್ರೀತು ಮನೆಗೆ ಬರುತ್ತಾನೆ. ಪಾರು ಮನೆಯಲ್ಲಿ ಗೊಂಬೆಗಳನ್ನು ಕೂರಿಸುತ್ತಾ ಇರುತ್ತಾಳೆ. ಅಲ್ಲಿಗೆ ಬಂದ ರಘು ಪ್ರೀತು ನೋಡಿದಿಯೇನಮ್ಮ ಪಾರು ಎಂದು ಕೇಳುತ್ತಾನೆ ಅದಕ್ಕೆ ಪಾರು ರೂಮಲ್ಲಿ ಇದ್ದಾರೆ ಮಾವ ಎಂದು ಹೇಳುತ್ತಾರೆ. ಬಳಿಕ ಪ್ರೀತು ಬಳಿ ಮಾತನಾಡಲು ರಘು ಅಲ್ಲಿಂದ ತೆರಳುತ್ತಾನೆ. ಪ್ರೀತು ರೂಮ್ ನಲ್ಲಿ ಲ್ಯಾಪ್ ಟಾಪ್ ಓಪನ್ ಮಾಡಿ ಪೆನ್ ಡ್ರೈವ್ ಹಾಕಿ ವಿಡಿಯೋ ಡಿಲಿಟ್ ಮಾಡಬೇಕು ಎನ್ನುವಷ್ಟರಲ್ಲಿ ಪ್ರೀತು ತಂದೆ ಬರುತ್ತಾರೆ. ಮುಂದೇನು ಎಂಬುವುದನ್ನು ಕಾದು ನೋಡಬೇಕಿದೆ.