Don't Miss!
- News KRS ಸುತ್ತಲಿನ ಪ್ರದೇಶದಲ್ಲಿ ಗಣಿಗಾರಿಕೆ: ಖಡಕ್ ಎಚ್ಚರಿಕೆ ನೀಡಿದ ಹೈಕೋರ್ಟ್
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮತ್ತೆ ಒಂದಾದ ಪೂರ್ವ-ಜನನಿ, ಅಖಿಲಾ ಬಲೆಗೆ ಬಿದ್ದಳಾ ಮೋನಿಕಾ?
ಪ್ರೀತಮ್ ಬಹು ದೊಡ್ಡ ಗಂಡಾಂತರಕ್ಕೆ ಸಿಲುಕಿದ್ದಾನೆ ಎಂದು ತಿಳಿದು ಗಂಡನನ್ನು ಹೇಗಾದರೂ ರಕ್ಷಣೆ ಮಾಡಬೇಕು ಎಂದು ಪಣ ತೊಡುತ್ತಾಳೆ ಜನನಿ. ಇನ್ನು ಪಾರು ಬಳಿ ಜನನಿ ಮಾತನಾಡುತ್ತಾ ಇರುತ್ತಾಳೆ ತಾಳಿ ತೆಗೆದಿಟ್ಟ ಘಟನೆ ಅತ್ತೆ ಗಮನಕ್ಕೆ ಬಂದಿಲ್ಲ. ಎಲ್ಲಾದರೂ ತಾಳಿ ಕಟ್ಟುವ ವೇಳೆ ಹೇಳುತ್ತಿದ್ದರೆ ನಾನೇನು ಮಾಡಬೇಕು. ಪಾರ್ವತಿ ಅವರೇ ನೀವು ಇದ್ದ ಕಾರಣ ನಾನು ಇದನ್ನೆಲ್ಲ ಸಂಭಾಳಿಸಲು ಸಾಧ್ಯ ಆಯಿತು. ಇಲ್ಲವಾದರೆ ಬಹಳ ಕಷ್ಟ ಆಗುತ್ತಿತ್ತು ಎಂದು ಹೇಳುತ್ತಾಳೆ. ಅತ್ತೆ ನೇರವಾಗಿ ಬಂದು ನನ್ನ ಬಳಿ ಕೇಳುತ್ತಿದ್ದರೆ ಏನೆಲ್ಲ ಆಗುತ್ತಿತ್ತು. ಅತ್ತೆಗೆ ನಿಜ ಗೊತ್ತಾದರೆ ಹೇಗೆ ಪರಿಸ್ಥಿತಿ ಬಿಗಡಾಯಿಸುತ್ತಿತ್ತು ಎನ್ನುತ್ತಾಳೆ.
ನಿಮ್ಮ ಅಪ್ಪನ ವಿರುದ್ದವಾಗಿ ಕಟ್ಟಿದ ತಾಳಿ ಅದು ಆ ತಾಳಿಯನ್ನು ತೆಗೆಯಲು ನಿಮಗೆ ಏನು ರೈಟ್ ಇದೆ ಎಂದು ಅತ್ತೆ ಕೇಳಿದ್ದಿದ್ದರೆ ಎಂದೆಲ್ಲ ಜನನಿ ಪ್ರಶ್ನೆ ಮೇಲೆ ಪ್ರಶ್ನೆ ಹಾಕಿ ಪಾರು ಬಳಿ ಕೇಳುತ್ತಾಳೆ. ಇದನ್ನೆಲ್ಲ ಕೇಳಿದ ಪಾರು ನಡೆದದ್ದನ್ನು ನೆನೆದು ಏಕೆ ಬೇಸರ ಪಟ್ಟುಕೊಳ್ಳುತ್ತಾ ಇದ್ದೀರಾ ಹಾಗೇನೂ ಆಗಲಿಲ್ಲ ಅಲ್ವಾ ಧೈರ್ಯವಾಗಿ ಇರಿ. ಹಾಗೇನೂ ಆಗೋದಿಲ್ಲ. ಕೋಪ ಮನುಷ್ಯನನ್ನು ಮಂಗನನ್ನಾಗಿ ಮಾಡುತ್ತೆ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಜನನಿ ನಿಜ ಕೋಪದ ಕೈಗೆ ಬುದ್ದಿ ಕೊಟ್ಟು ನಾನು ಬಹು ದೊಡ್ಡ ತಪ್ಪು ಮಾಡಿದೆ. ಇನ್ನು ಮೇಲೆ ನನ್ನ ಬುದ್ದಿ ಯಾವತ್ತಾದರೂ ಕೆಟ್ಟರೆ ನೀವೇ ಅದನ್ನು ಸರಿಮಾಡಬೇಕು ಯಾಕೆ ಎಂದರೆ ನೀವು ನಮಗೆ ಅಕ್ಕನ ಸಮ ಎಂದು ಹೇಳುತ್ತಾಳೆ ಇದನ್ನು ಕೇಳಿದ ಪಾರ್ವತಿಗೂ ಖುಷಿ ಆಗುತ್ತದೆ.
ಮಾತು ಮುಂದುವರಿಸಿದ ಜನನಿ, ನೀವು ಇನ್ನೂ ಮೇಲೆ ನನ್ನನ್ನು ಜನನಿ ಅಂತ ಕರೆಯಿರಿ. ನಾನು ನಿಮ್ಮನ್ನು ಅಕ್ಕ ಎಂದೇ ಕರೆಯುತ್ತೇನೆ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಪಾರು ಬಹಳ ಖುಷಿ ಪಡುತ್ತಾಳೆ. ಇನ್ನು ರೂಮಿಗೆ ಹೋದ ಜನನಿಯನ್ನು ಪಾರು ಜನನಿಯವರೆ ಎಂದು ಕರೆಯುತ್ತಾಳೆ. ಜನನಿ ಎಷ್ಟು ಬಾರಿ ನನ್ನನ್ನು ಜನನಿ ಎಂದು ಕರೆಯಿರಿ ನಿಮ್ಮ ತಂಗಿ ಎಂದು ಭಾವಿಸಿ ಮಾತನಾಡಿಸಿ ಎಂದು ಹೇಳಿದರು ಪಾರ್ವತಿ ಮಾತ್ರ ಜನನಿ ಕೈಯಿಂದ ಬೈಗುಳ ತಿನ್ನುವುದೇ ಆಯಿತು.
ಮೋನಿಕಾ ವಿಚಾರವಾಗಿ ಜನನಿ ಬಳಿ ಕ್ಷಮೆ ಕೇಳಿದ ಪಾರು
ಇನ್ನು ಮೋನಿಕಾ ವಿಚಾರವಾಗಿ ಜನನಿ ಬಳಿ ಬಂದು ಮಾತನಾಡಿದ ಪಾರು ಜನನಿ ನನ್ನ ಮೇಲೆ ನಿನಗೆ ಅನುಮಾನ ಬರಲೇ ಇಲ್ವಾ ಎಂದೆಲ್ಲ ಕೇಳುತ್ತಾಳೆ. ಮೋನಿಕಾ ನಿಮ್ಮ ರೂಮಿನಲ್ಲಿ ಲಗೇಜ್ ಇಟ್ಟಿರುವುದನ್ನು ಕಂಡು ನಿಮಗೆ ಏನೂ ಅನ್ನಿಸಲೇ ಇಲ್ವಾ ಎಂದು ಕೇಳುತ್ತಾಳೆ. ಇದನ್ನು ಕೇಳಿದ ಜನನಿ ಮಾತ್ರ ಅನುಮಾನ ಪಡುವ ಮನುಷ್ಯರು ನಮ್ಮ ಮನೆಯಲ್ಲಿ ಇಲ್ಲದ ಕಾರಣ ನಾನು ಅನುಮಾನ ಪಡಲಿಲ್ಲ. ಅದರ ಬಗ್ಗೆ ಹೆಚ್ಚಾಗಿ ಯೋಚನೆ ಮಾಡಲಿಲ್ಲ ಎಂದು ಹೇಳುತ್ತಾಳೆ ಇದನ್ನು ಕೇಳಿದ ಪಾರುಗೆ ಜನನಿ ಮೇಲೆ ಅಭಿಮಾನ ಇನ್ನೂ ಹೆಚ್ಚಾಗುತ್ತದೆ.
ಪ್ರೀತಮ್ ವಿಚಾರ ತಿಳಿಸುವಂತೆ ಬೇಡಿದ ಜನನಿ
ಬಳಿಕ ಜನನಿ, ಪ್ರೀತಮ್ ವಿಚಾರ ಏನಾದರು ತಿಳಿದರೆ ನನಗೆ ತಿಳಿಸಿ ನನ್ನ ಕೈಯಿಂದ ಆದ ಮಟ್ಟಿಗೆ ನಾನು ಸಹಾಯ ಮಾಡುತ್ತೇನೆ ಎಂದು ಹೇಳುತ್ತಾಳೆ. ಇನ್ನು ಧಾಮಿನಿಗೆ ಮೋನಿಕಾ ಕಂಡರೆ ಏನೋ ಅನುಮಾನ ಪಾರು ಹಾಗೂ ಮೋನಿಕಾ ಸೇರಿಕೊಂಡು ಏನಾದರು ಮಸಲತ್ತು ನಡೆಸುತ್ತಿದ್ದಾರೆ ಅನ್ನುವ ಅನುಮಾನ ಹೆಚ್ಚಾಗಿ ಕಾಡುತ್ತಿದೆ. ಈ ವೇಳೆ ದಾಮಿನಿ ಬಳಿ ಬಂದ ಮೋನಿಕಾ ಮೊಬೈಲ್ ಫೋನ್ ಕೇಳುತ್ತಾಳೆ. ತಾಯಿಗೆ ಕರೆ ಮಾಡಬೇಕಿದೆ ಎಂದೆಲ್ಲ ಕೇಳಿದಾಗ ಮೊಬೈಲ್ ಕೊಡುತ್ತಾಳೆ ಆದರೆ ಆಕೆ ಕಾಲ್ ಮಾಡುವವರೆಗೆ ಕಾದು ಕುಳಿತು ಫೋನ್ ತೆಗೆದುಕೊಳ್ಳುತ್ತಾಳೆ.
ಧಾಮಿನಿ ಕೈಗೆ ಸಿಕ್ಕಿ ಬಿದ್ದ ಮೋನಿಕಾ
ಇನ್ನು ಧಾಮಿನಿ ಕರೆ ಬಂತೆಂದು ಸ್ವೀಕರಿಸಲು ಕರೆ ಕಟ್ ಆಗುತ್ತದೆ. ಕರೆ ಕಟ್ ಆಗಿ ಹೋಯಿತಲ್ಲ ಎಂದು ಪುನಃ ಕರೆ ಮಾಡಿದಾಗ ಅರುಂಧತಿ ತಡೆಯುತ್ತಾರೆ. ಮೋನಿಕಾ ಕರೆ ಮಾಡಿ ಇದ್ದರೆ ವಾಪಸ್ ಆಕೆ ಮಾಡಿಯೇ ಮಾಡುತ್ತಾಳೆ ಎಂದು ಹೇಳುತ್ತಾಳೆ. ಇನ್ನು ದಾಮಿನಿ ಮಾತ್ರ ಈ ನಂಬರ್ಗೆ ಕರೆ ಮಾಡಿದ್ದನ್ನು ಅಕ್ಕನ ಬಳಿ ಹೇಳುತ್ತೇನೆ ಎಂದು ಓಡಿ ಹೋಗುತ್ತಾಳೆ. ದಾಮಿನಿಯನ್ನೂ ಹಿಂಬಾಲಿಸಿದ ಮೋನಿಕಾಗೆ ಪ್ರೀತಮ್ ಸಿಗುತ್ತಾನೆ. ಆಕೆ ಆತನ ಬಳಿ.ಎಲ್ಲಾ ವಿಚಾರ ಹೇಳುತ್ತಾಳೆ ಇದನ್ನು ಕೇಳಿ ಪ್ರೀತಮ್ಗೆ ಶಾಕ್ ಆಗುತ್ತದೆ. ಇನ್ನು ಎಲ್ಲರ ಮುಂದೆ ಅಖಿಲಾ, ಮೋನಿಕಾ ಯಾರು ಎಂಬ ಪ್ರಶ್ನೆಯನ್ನು ಪಾರು ಮುಂದೆ ಇಟ್ಟಿದ್ದಾಳೆ. ಮುಂದೇನು ಕಾದು ನೋಡಬೇಕಿದೆ.