Puttakkana Makkalu ;ಸಹನಾಳನ್ನು ಗುರುತಿಸದ ಸಿಂಗಾರಮ್ಮ, ಸ್ನೇಹಾ ಬಳಿ ನಿಜ ಹೇಳುತ್ತಾಳ ಸಹನಾ ?
ಸಹನಾ ಸಮ್ಮುಖದಲ್ಲಿಯೇ ಮುರಳಿಯ ಮದುವೆ ನಡೆದು ಹೋಯಿತು. ಸಹನಾ ಮುರಳಿಯನ್ನ ತ್ಯಜಿಸುವ ಬಗ್ಗೆ ದೃಢ ನಿರ್ಧಾರವನ್ನು ತೆಗೆದುಕೊಂಡಿದ್ದಳು. ಪ್ರೀತಿ ಎನ್ನುವುದೇ ನಂಬಿಕೆಯ ಮೇಲೆ ಆ ನಂಬಿಕೆಯೇ ಇಲ್ಲದೆ ಹೋದರೆ ಪ್ರೀತಿಯಿದ್ದು ಏನು ಪ್ರಯೋಜನ ಎನ್ನುವುದು ಆಕೆಯ ವಾದ. ತಾನು ಮುರಳಿಯವರಿಗೆ ಹೆಂಡತಿಯಾಗಿ ಇದ್ದೆ. ಆದರೆ ಅವರ ನಂಬಿಕೆ ಗಳಿಸಲು ನನ್ನಿಂದ ಸಾಧ್ಯವಾಗಲಿಲ್ಲ. ಅವರು ನನ್ನನ್ನು ನಂಬುವುದಕ್ಕಿಂತ ನನ್ನ ಮಾತನ್ನು ಕೇಳುವುದಕ್ಕಿಂತ ಅವರು ಬೇರೆಯವರ ಮಾತಿಗೆ ಹೆಚ್ಚು ಬೆಲೆಯನ್ನು ಕೊಡುತ್ತಿದ್ದರು. ಅದೆಷ್ಟು ಬಾರಿ ನಾನು ಮಾಡುತ್ತಿರುವುದು ಸರಿಯಾದ ಕೆಲಸವಲ್ಲ ನಾವು ಮಾಡುತ್ತಿರುವ ಕೆಲಸ ತಪ್ಪು ಎಂದು ಹೇಳಿದರು.
ಆದರೆ ಅದನ್ನು ಒಪ್ಪಿಕೊಳ್ಳುವ ಮನಸ್ಥಿತಿಯಲ್ಲಿ ಮುರಳಿಯವರು ಇರಲಿಲ್ಲ. ಆದ್ದರಿಂದಾಗಿ ನಮ್ಮ ಬದುಕಿನ ಬಂಡಿ ಹಾದಿ ತಪ್ಪಿದೆ. ಇದೀಗ ನಾನು ಒಬ್ಬಂಟಿಯಾಗಿ ಜೀವನ ಮಾಡಲು ಕಲಿತಿದ್ದೇನೆ. ಆದರೆ ಮುರಳಿಯವರು ನನ್ನ ನೆನಪಿನಲ್ಲಿ ಇರುವುದು ನನಗೆ ಸರಿ ಕಾಣಿಸುತ್ತಿಲ್ಲ. ಅವರಿಗೂ ಉತ್ತಮವಾದ ಬಾಳ ಸಂಗಾತಿ ಸಿಗಲಿ ಹಾಗೆಯೇ ಬಹಳ ಉತ್ತಮ ಕೆಲಸಗಳನ್ನು ಮಾಡಿಕೊಂಡಿರಲಿ ಎಂದು ಸಹನ ಆಲೋಚನೆ ಮಾಡುತ್ತಾಳೆ.

ಹಾಗೆಯೇ ವಿನುತಾ ಸಹನಾಳನ್ನು ನೋಡಿದರೂ ಕೂಡ ಆಕೆಯ ಬಳಿ ಅದೆಷ್ಟೇ ರಿಕ್ವೆಸ್ಟ್ ಮಾಡಿದರು ಕೂಡ ಸಹನಾ ಮಾತ್ರ ಯಾವುದೇ ಕಾರಣಕ್ಕೂ ಈ ಮದುವೆ ನಡೆದೇ ಇರಬಾರದು. ಈ ಮದುವೆ ನಡೆಯಬೇಕು ಇದುವೇ ನನ್ನ ಆಸೆಯೆಂದು ವಿನುತ ಬಳಿ ಹೇಳಿ ಆಕೆಯನ್ನ ಸಮಾಧಾನಪಡಿಸಿ ಮುರಳಿ ಜೊತೆ ಮದುವೆಗೆ ಒಪ್ಪಿಸುತ್ತಾಳೆ ಸಹನಾ ಇನ್ನು ಮುರಳಿ ಒಲ್ಲದ ಮನಸ್ಸಿನಿಂದಲೇ ವಿನುತಾ ಕೊರಳಿಗೆ ತಾಳಿಯನ್ನು ಕಟ್ಟುತ್ತಾನೆ . ಇದನ್ನು ನೋಡಿದ ಸಹನಾಗೆ ಬೇಸರವಾದರೂ ಕೂಡ ಮುರಳಿಯವರು ನನ್ನಿಂದಾಗಿ ಅವರ ಜೀವನ ಹಾಳು ಮಾಡಿಕೊಳ್ಳಬಾರದು ಅವರು ಚೆನ್ನಾಗಿರಲಿ ಎಂದು ಮನದಲ್ಲಿ ಹಾರೈಸುತ್ತಾಳೆ. ಇನ್ನು ಪುಟ್ಟಕ್ಕ ಹಾಗೂ ಆಕೆಯ ಕುಟುಂಬಕ್ಕೆ ಬಹಳ ಸಂತೋಷ ಮನೆ ಮಾಡುತ್ತದೆ
ಪುಟ್ಟಕ್ಕನ ಮನದಲ್ಲಿ ಮನೆಮಾಡಿದ ಸಂತಸ
ಯಾಕೆಂದರೆ ಸುಮ್ಮನೆ ಮುರಳಿಯವರು ಅವರ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದರು ಆದರೆ ಇದೀಗ ವಿನುತಾಳನ್ನ ಮದುವೆಯಾಗಿ ಖುಷಿಯಾಗಿರಲಿ ಎಂದು ಪುಟ್ಟಕ್ಕ ಹಾರೈಸಿದ್ದಾಳೆ. ಇನ್ನು ಮದುವೆಯೆಲ್ಲ ಮುಗಿದಾಯ್ತು, ಬಳಿಕ ಸಹನ ಪಾತ್ರೆಗಳನ್ನ ತೊಳೆಯಲು ಹೋಗುತ್ತಾಳೆ. ಆಗ ಅಲ್ಲಿಗೆ ಸಿಂಗಾರಮ್ಮ ಹಾಗೂ ಸಿಂಗಾರಮ್ಮನ ಮಗ ಬರುತ್ತಾರೆ ಅವರಿಬ್ಬರೂ ಕೂಡ ಬಂಗಾರಮ್ಮನ ಆಸ್ತಿಯ ಮೇಲೆ ಕಣ್ಣು ಇಟ್ಟಿರುವುದು ಸಹ ನನಗೆ ತಿಳಿಯುತ್ತದೆ

ಸಹನಾ ಗೆ ತಿಳಿಯಿತು ನಿಜಾಂಶ
ಹಾಗೆಯೇ ಈಕೆ ಬಂಗಾರಮ್ಮ ಅಲ್ಲ. ಈಕೇ ಸಿಂಗಾರಮ್ಮ ಎನ್ನುವುದು ಕೂಡ ಸಹನಾಗಿ ತಿಳಿಯುತ್ತದೆ. ಹಾಗೆಯೇ ಸಿಂಗಾರಮ್ಮ ತನ್ನ ಮಗನ ಜೊತೆ ಹೇಗಾದರೂ ಮಾಡಿ ಬಂಗಾರಮ್ಮ ಹಾಗೂ ಆಕೆಯ ಸಂಸಾರವನ್ನು ನಾಶ ಮಾಡಿಬಿಡಬೇಕು. ಇಲ್ಲವಾದರೆ ಯಾರಿಗೂ ಕೂಡ ಉಳಿಗಾಲವಿಲ್ಲ ಎಂದು ಹೇಳುತ್ತಿರುತ್ತಾಳೆ. ಇದನ್ನು ಕೇಳಿದ ಸಹನ ಕೈಯಲ್ಲಿದ್ದ ಪಾತ್ರೆ ಆಮೇಲೆ ಕೆಳಗೆ ಬೀಳುತ್ತದೆ ಆ ಕೂಡಲೇ ಸಿಂಗಾರಮ್ಮ ಯಾರದು ಎಂದು ಓಡೋಡಿ ಬಂದು ನೋಡಿದಾಗ ಅಲ್ಲಿ ಸಹನ ಇರುತ್ತಾಳೆ ಸಹನಾಳನ್ನ ನೋಡಿದ ಸಿಂಗಾರಮ್ಮ,, ಓ ಕೆಲಸದವಳ ನಾನು ಬೇರೆಯವರು ಯಾರಾದರೂ ಕೇಳಿಸಿಕೊಂಡರಾ ಎಂದು ಅಂದುಕೊಂಡೆ ಎಂದಾಗ ಸಹನಗೆ ಕೊಂಚ ರಿಲೀಫ್ ಆಗುತ್ತದೆ.
ಕಾಳಿ ಬಳಿ ಮನದ ದುಗುಡ ಹಂಚಿಕೊಂಡ ಸಹನಾ
ಇನ್ನು ಸಹನಾ ವಿಷಯ ತಿಳಿದು ಕಾಳಿಯ ಬಳಿಗೆ ಬರುತ್ತಾಳೆ. ಸಹನ ಆತಂಕವನ್ನು ನೋಡಿದ ಕಾಳಿ ಇದೇನು ಸಹನಾ ಇಷ್ಟು ತರಾ ತುರಿಯಲ್ಲಿ ಬರುತ್ತಿದ್ದಿಯಾ ಯಾಕೆ ಏನಾಯಿತು ಎಂದು ಹೇಳುತ್ತಾಳೆ ಇದನ್ನು ಕೇಳಿದ ಸಹನಾ ಕಾಳಿಯ ಬಳಿ ಎಲ್ಲ ವಿಚಾರವನ್ನು ಹೇಳುತ್ತಾಳೆ ಹಾಗೆಯೇ ಬಂಗಾರಮ್ಮನವರ ಮನೆಯಲ್ಲಿ ಸಿಂಗಾರಮ್ಮನವರು ಇರುವುದು ಹಾಗಾದರೆ ಬಂಗಾರಮ್ಮನವರು ಎಲ್ಲಿದ್ದಾರೆ ಎಂದು ಸಹನ ಹೇಳುತ್ತಾಳೆ. ಇದನ್ನು ಕೇಳಿದ ಕಾಳಿ ಗೆ ಆಶ್ಚರ್ಯ ಆಗುತ್ತದೆ. ಇನ್ನು ಸಹ ಈ ವಿಚಾರವನ್ನು ಸ್ನೇಹ ಬಳಿ ಹೇಳಲೇಬೇಕು ಇಲ್ಲವಾದರೆ ಆಕೆಗೆ ಯಾವತ್ತಾದರೂ ಒಂದು ದಿವಸ ತೊಂದರೆ ಆಗುವುದಂತೂ ಖಂಡಿತ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಕಾಳಿ ಹೇಳುತ್ತಾನೆ ನೀನು ಈ ವಿಚಾರವನ್ನು ಸ್ನೇಹ ಬಳಿ ಹೇಳಿದರೆ ನೀನು ಬದುಕಿರುವ ವಿಚಾರ ಅವರಿಗೆ ತಿಳಿಯುತ್ತದೆ ಎಂದು ಹೇಳುತ್ತಾನೆ ಇದನ್ನು ಕೇಳಿದ ಸಹನಾ ಗೆ ಏನು ಮಾಡಬೇಕೆಂದು ತಿಳಿಯದೆ ದೀಪು ತೋಚದಾಗುತ್ತದೆ.


Click it and Unblock the Notifications











