ಕಂಠಿ ಅವಸ್ಥೆ ನೋಡಲಾಗದೇ ಕಂಗಾಲಾದ ಬಂಗಾರಮ್ಮ; ಪುಟ್ಟಕ್ಕನ ಮಾತು ಕೇಳಿ ಸ್ನೇಹಾನಾ ಸೊಸೆ ಎಂದು ಒಪ್ಪಿಕೊಳ್ಳುತ್ತಾಳಾ?
ಪುಟ್ಟಕ್ಕನ ಮಕ್ಕಳು ಧಾರಾವಾಹಿ ಅದ್ಭುತವಾಗಿ ಮೂಡಿ ಬರುತ್ತಿದೆ. ಇದೀಗ ರಾಜೀ ಪ್ಲಾನ್ ವರ್ಕ್ ಆಗಿದೆ. ಕಂಠಿಗೆ ಬುದ್ದಿ ಕಲಿಸಲು ಸ್ನೇಹಾಳನ್ನು ಛೂ ಬಿಟ್ಟಿದ್ದಾಳೆ. ತಾಂಡವ್ ಮಾತು ಕೇಳಿದ ಸ್ನೇಹಾ ಕಂಪ್ಲೇಂಟ್ ಕೊಡುತ್ತಾಳೆ. ಇನ್ನು ಬಂಗಾರಮ್ಮ ಮಾತ್ರ ಸ್ನೇಹಾ ಮೇಲೆ ಬಹಳ ಕೋಪ ಮಾಡಿಕೊಂಡಿದ್ದಾಳೆ.
ಸ್ನೇಹಾ ಮಾತ್ರ ಅದ್ಯಾವುದನ್ನೂ ಪರಿಗಣನೆಗೆ ತೆಗೆದುಕೊಳ್ಳದೇ ಯೋಚನೆ ಮಾಡದೆ ಕಂಠಿ ಯಾನ್ನು ಪೊಲೀಸ್ ಗೆ ಹ್ಯಾಂಡ್ ಓವರ್ ಮಾಡುತ್ತಾಳೆ ಕಂಠಿ ಕೈ ಗೆ ಕೊಳ ಹಾಕಿ ಸ್ಟೇಶನ್ ಗೆ ಕರೆದುಕೊಂಡು ಹೋಗುತ್ತಾರೆ ಪೊಲೀಸರು ಹೋದ ಬಳಿಕ ಸ್ನೇಹಾ ಗೆ ಬಂಗಾರಮ್ಮ ಬೆದರಿಕೆಯನ್ನು ಹಾಕುತ್ತಾರೆ. ಆದರೆ ಅದ್ಯಾವುದನ್ನೂ ಘನನೆಗೆ ತೆಗೆದುಕೊಳ್ಳದ ಆಕೆ.

ಸವಾಲಿಗೆ ಪ್ರತಿ ಸವಾಲು ಹಾಕಿ ಅಲ್ಲಿಂದ ಹೋಗುತ್ತಾಳೆ. ಇನ್ನೂ ಕಂಠಿ ತಾಂಡವನ ಕೈ ಗೆ ಸಿಕ್ಕಿದ್ದಾನೆ. ಆತ ಮಾತ್ರ ಕಂಠಿಯನ್ನು ದರ ದರನೆ ಎಳೆದುಕೊಂಡು ಬಂದು ಜೈಲ್ ನೊಳಗೆ ಹಾಕುತ್ತಾನೆ ಇದನ್ನು ನೋಡಿದ ಕಂಠಿ ಗೆ ಎನು ಅನ್ನಿಸುವುದೇ ಇಲ್ಲ. ಯಾಕೆಂದರೆ ನಾನು ಮಾಡಿದ ದ್ರೋಹಕ್ಕೆ ಸ್ನೇಹಾ ಶಿಕ್ಷೆ ನೀಡುತ್ತಿದ್ದಾಳೆ ಎಂದು ಅಂದುಕೊಂಡು ಬಿಟ್ಟಿದ್ದಾನೆ ಕಂಠಿ.
ಆದರೆ ತಾಂಡವ ನ ಮಾತಿಗೆ ಎನು ಬೇಸರ ಮಾಡಿಕೊಳ್ಳುವುದೇ ಇಲ್ಲ . ಇನ್ನೂ ಕಂಠಿ ತಾಂಡವನ ಮಾತಿಗೆ ಒಂದು ಮಾತು ಮಾತನಾಡದೆ ಸುಮ್ಮನೆ ಇರುತ್ತಾನೆ. ಇನ್ನೂ ಕಂಠಿಗೆ ಎಷ್ಟೇ ಹೊಡೆದರು ತಾಕೂವುದು ಇಲ್ಲ. ಬಳಿಕ ಅಂಗಿ ಬಿಚ್ಚಿ ಹೊಡೆದರು ಒಂದೇ ಒಂದು ಮಾತು ಆಡದೆ ಸುಮ್ಮನೆ ಇರುತ್ತಾನೆ ಕಂಠಿ.
ಇನ್ನೂ ಇದನ್ನು ಒಬ್ಬ ಪೊಲೀಸ್ ಗೆ ನೋಡಲು ಆಗದೆ ಕಂಠಿ ತಾಯಿಗೆ ಕರೆ ಮಾಡಿ ಇಲ್ಲಿ ನಡೆಯುತ್ತಿರುವ ವಿಚಾರವನ್ನು ಹೇಳುತ್ತಾರೆ. ಇನ್ನೂ ಪುಟ್ಟಕ್ಕ ಊರ ಗೌಡರ ಬಳಿ ಪಂಚಾಯಿತಿ ಕರೆಸುವ ಬಗ್ಗೆ ಮಾತನಾಡುತ್ತಾ ಇರುತ್ತಾಳೆ ಆಗ ಮೇಷ್ಟ್ರು ಹೇಳುತ್ತಾರೆ ಸ್ನೇಹಾ ನ ಒಂದು ಮಾತು ಕೇಳಿ ಎಂದಾಗ ಪುಟ್ಟಕ್ಕ ಸ್ನೇಹಾ ಕರೆ ಮಾಡಿದಾಗ ಆಕೆ ಮನೆಯ ಪಕ್ಕ ಇರುತ್ತಾಳೆ ಬಳಿಕ ತಾಯಿಯ ಬಳಿ ಬಂದೆ ಅಮ್ಮ ಮನೆಗೆ ಎಂದು ಹೇಳುತ್ತಾಳೆ.
ಇನ್ನೂ ಸ್ನೇಹಾ ಬಳಿ ಪುಟ್ಟಕ್ಕ ಎಲ್ಲಿಗೆ ಹೋಗಿದ್ದೆ ಎಂದು ಕೇಳುತ್ತಾರೆ. ಆ ಬಳಿಕ ಪುಟ್ಟಕ್ಕ ಮದುವೆ ವಿಚಾರವಾಗಿ ಮಾತನಾಡಿದಾಗ ಯಾರನ್ನು ಪಂಚಾಯಿತಿ ಕರೆಸುವ ಅಗತ್ಯ ಇಲ್ಲ ಪಂಚಾಯಿತಿ ಗೆ ಬರುವವರು ಪೊಲೀಸ್ ಸ್ಟೇಶನ್ ನಲ್ಲಿ ಇದ್ದಾರೆ ಎಂದು ಹೇಳಿದಾಗ ಎಲ್ಲರಿಗೂ ಶಾಕ್ ಆಗುತ್ತದೆ . ಇನ್ನೂ ಪುಟ್ಟಕ್ಕ ಗೆ ಮಾತ್ರ ಅಳು ಬರುತ್ತದೆ. ತಾನು ತನ್ನ ಮಗಳ ಜೀವನ ಸರಿ ಹೋಗಲಿ ಎಂದು ಪೇಚಾಡಿದರೆ ಆಕೆ ಮಾತ್ರ ನನಗೂ ನಿನಗೂ ಸಂಬಂಧನೆ ಇಲ್ಲದ ಹಾಗೆ ಮಾತನಾಡಿ ಹೋಗುತ್ತಿದ್ದಾಳೆ ಎಂದು ನೊಂದುಕೊಂಡು ಇರುತ್ತಾಳೆ. ಇದನ್ನೆಲ್ಲ ನೋಡಿದ ಊರ ಗೌಡರು ಹೇಳುತ್ತಾರೆ.
ನಿಮ್ಮ ಮಗಳು ಬಂಗಾರಮ್ಮನ ಎದುರು ಹಾಕಿಕೊಂಡು ಇದ್ದಾಳೆ ಇದು ಸರಿಯಲ್ಲ ಕೂಡ . ಈ ವೇಳೆ ನಾವು ಪಂಚಾಯಿತಿ ಕರೆದರೆ ನಾವು ಕೂಡ ಅವರ ಕೋಪಕ್ಕೆ ತುತ್ತಾಗಬೇಕಾಗುತ್ತೆ ಎಂದು ಹೇಳುತ್ತಾರೆ. ಅಲ್ಲಿಂದ ಎಲ್ಲರೂ ಹೋದ ಬಳಿಕ ಪುಟ್ಟಕ್ಕ ಅಳುತ್ತಾರೆ. ಸ್ಟೇಶನ್ ಗೆ ಹೋಗಿ ಕಂಠಿ ಅವಸ್ಥೆಯನ್ನ ಕಣ್ಣಾರೆ ಕಂಡ ಈಕೆ ಗೆ ಸ್ನೇಹಾ ಬಳಿ ಬಹಳ ಕೋಪ ಬರುತ್ತದೆ. ಸ್ನೇಹಾ ಬಂದರೆ ಮಾತ್ರ ಕಂಠಿಯನ್ನು ಬಿಡುವುದು ಎಂದು ಪೊಲೀಸರು ಹೇಳುತ್ತಾರೆ. ಆ ಕೂಡಲೇ ಬಂಗಾರಮ್ಮ ಪುಟ್ಟಕ್ಕನ ಮನೆಗೆ ಹೋಗುತ್ತಾರೆ.


Click it and Unblock the Notifications











