Puttakkana Makkalu: ಬಂಗಾರಮ್ಮನ ಎದುರು ರಾಜೀ ಮುಖವಾಡ ಬಯಲು!

By ಪೂರ್ವ

ಪುಟ್ಟಕ್ಕ ನ ಮಕ್ಕಳು ಧಾರವಾಹಿ ಬಹಳ ಅದ್ಭುತವಾಗಿ ಮೂಡಿ ಬರುತ್ತಾ ಇದ್ದು ನೋಡುಗರ ಮನ ಸೆಳೆಯುವ ಹಾಗೆ ಮಾಡುತ್ತಿದೆ. ಇದೀಗ ಬಂಗಾರ ಮ್ಮ ಬಹಳ ಕೋಪ ಮಾಡಿಕೊಂಡು ಸಹನಾಗೆ ವರದಕ್ಷಿಣೆ ಕೊಟ್ಟು ಮದುವೆ ಮಾಡಿರುವ ವಿಚಾರವನ್ನು ಎಲ್ಲರ ಮುಂದೆ ಬಯಲು ಮಾಡುತ್ತಾರೆ.. ಆಗ ಸ್ನೇಹಾ ಗೆ ಬಹಳ ಶಾಕ್ ಆಗುತ್ತದೆ ಆದರೆ ಆಕೆಗೆ ಬಂಗಾರ ಮ್ಮ ನ ಬಳಿ ಎನು ಮಾತನಾಡದೆ ಮೆತ್ತಗೆ ಅಲ್ಲಿಂದ ಹೋಗುತ್ತಾರೆ.

ಇನ್ನೂ ಸ್ನೇಹಾ ಗೆ ತನ್ನ ತಾಯಿ ನನ್ನಿಂದ ವಿಷಯ ಮುಚ್ಚಿತ್ತಿದ್ದಾಳೆ ಅಲ್ವಾ ಎಂದು ಬಹಳ ಸಿಟ್ಟು ಹಾಗೂ ಕೋಪ ಮಾಡಿಕೊಂಡು ಮನೆಗೆ ಹೋಗುತ್ತಾಳೆ... ಜೋರಾಗಿ ಅಮ್ಮನನ್ನು ಕರೆಯುತ್ತಾಳೆ ಸ್ನೇಹಾ ಅವ್ವ.. ಅವ್ವ ಎಂದು ಕರೆಯುತ್ತಾಳೆ.. ಸ್ನೇಹಾ ಕರೆದ ಧ್ವನಿಗೆ ಪುಟ್ಟಕ್ಕ ಸಣ್ಣ ಗೆ ನಡುಗಿದರು..ಏನಮ್ಮ ಏನಾಯಿತು ಎಂದೆಲ್ಲ ಸಮಾಧಾನದಿಂದ ಪ್ರಶ್ನೆ ಮಾಡುತ್ತಾರೆ..

Kannada serial Puttakkana Makkalu written update on 18th August

ಆಗ ಸ್ನೇಹಾ ಹೇಳುತ್ತಾಳೆ ಬಂಗಾರ ಮ್ಮ ನ ಕೈ ಯಿಂದ ಹಣ ತೆಗೆದುಕೊಂಡು ಯಾಕೆ ಅಕ್ಕನ ಮದುವೆ ಮಾಡಿದೆ ಅದರ ಅನಿವಾರ್ಯತೆ ಏನಿದೆ ಎಂದೆಲ್ಲ ಪ್ರಶ್ನೆ ಮಾಡುತ್ತಾ ಇರುತ್ತಾರೆ... ಇದನ್ನು ಕೇಳಿದ ಪುಟ್ಟಕ್ಕ ಗೆ ಎನು ಹೇಳಬೇಕು ಎಂದು ತೋಚದೇ ಅಂದು ನಡೆದ ವಿಚಾರವನ್ನು ಪುಟ್ಟಕ್ಕ ಸ್ನೇಹಾ ಬಳಿ ಹೇಳುತ್ತಾರೆ.

ಇದನ್ನು ಕೇಳಿದ ಸ್ನೇಹಾ ಮಾತ್ರ ತನ್ನ ತಾಯಿಗೆ ಹೇಳುತ್ತಾಳೆ ಈ ಬಗ್ಗೆ ಬಾವನ ಬಳಿ ಹೇಳದೆ ಇರುವುದು ನಿಮ್ಮ ತಪ್ಪು ಅಮ್ಮ ಅವರಿಗೆ ಅವರ ತಂದೆ ತಾಯಿ ಎನು ಎಂಬುವುದು ಅರ್ಥ ಆಗಲು ಎಂದೆಲ್ಲ ಜೋರಾಗಿ ಹೇಳುತ್ತಾಳೆ.. ಇದನ್ನು ಕೇಳಿದ ಪುಟ್ಟಕ್ಕ ಮಾತ್ರ ಹೇಳಬೇಡ ಅಮ್ಮ .. ಅಂದು ನಡೆದ ವಿಚಾರ ಇದನ್ನು ಬಿಟ್ಟು ಬಿಡು .. ಇನ್ನೂ ಅದರ ಈ ತಿಂಗಳ ಬಡ್ಡಿಯನ್ನು ರಾಜೇಶ್ವರಿ ವಸೂಲಿ ಮಾಡಿಕೊಂಡು ಹೋಗಿದ್ದಾರೆ . ಎಂದೆಲ್ಲ ಹೇಳುತ್ತಾರೆ ಇದನ್ನು ಕೇಳಿದ ಸ್ನೇಹಾ ಇನ್ನೂ ಕೋಪ ಬರುತ್ತದೆ.

ಇನ್ನೂ ಬಂಗಾರ ಮ್ಮ ತನ್ನ ಗಂಡ ಮಾದೆ ಗೌಡರ ಬಳಿ ಹೇಳುತ್ತ ಇರುತ್ತಾರೆ ನಾನು ಅವಸರದಿಂದ ಈ ನಿರ್ಧಾರದಿಂದ ಹೀಗೆ ಮಾಡಿ ಬಿಟ್ಟೆ .. ಆಕೆ ಮಾತನಾಡಿದ ವಿಚಾರವನ್ನು ನೋಡಿ ಇನ್ನೂ ಕೋಪ ಮೀರಿ ಹೋಯಿತು ಆದ ಕಾರಣ ನಾನು ಹೀಗೆಲ್ಲ ಮಾತನಾಡಬೇಕಾಯಿತು ಎಂದು ಬಹಳ ಬೇಸರ ಮಾಡಿಕೊಂಡು ಇರುತ್ತಾರೆ..

ಇದೆಲ್ಲವಾನ್ನು ಕೇಳಿದ ಮಾದೇ ಗೌಡರು ತನ್ನ ಹೆಂಡತಿಯನ್ನು ಸಮಾಧಾನ ಮಾಡುತ್ತಾ ಇರುತ್ತಾರೆ. ಇನ್ನೂ ಪುಟ್ಟಕ್ಕ ಸಹನಾ ಬಳೆ ಕೊಡಲು ಹೋಗಿದ್ದು ಗೋಪಾಲನ ಕೈಯಿಂದ ದುಡ್ಡು ತೆಗೆದುಕೊಂಡು ರಾಜೀಗೆ ಕೊಟ್ಟಿದ್ದು ಇದನ್ನೆಲ್ಲ ಇಂಚಿಂಚಾಗಿ ಹೇಳುತ್ತಾಳೆ. ಇದನ್ನೆಲ್ಲ ಕೇಳಿದ ಸ್ನೇಹಾಗೆ ಮಾತ್ರ ಬಹಳ ಸಿಟ್ಟು ಬರುತ್ತದೆ. ಇನ್ನೂ ಕಂಠಿ ಮಾತ್ರ ಸ್ನೇಹಾ ಬಗ್ಗೆ ಬಹಳ ಬೇಸರ ಮಾಡಿಕೊಂಡು ಇರುತ್ತಾರೆ..

ಪಾಪ ಸ್ನೇಹಾ ಎಂಥ ಪರಿಸ್ಥಿತಿ ಗೆ ಸಿಕ್ಕಿ ಹಾಕಿಕೊಂಡು ಬಿಟ್ಟರು ಎಂದು ಬಹಳ ಬೇಸರ ಮಾಡಿಕೊಂಡು ಇರುತ್ತಾರೆ. ಇನ್ನೂ ತಾಯಿ ಮನೆಯಿಂದ ವಾಪಸ್ ಗಂಡನ ಮನೆಗೆ ಬಂದ ಸ್ನೇಹಾ ಮೆತ್ತಗೆ ಹೇಳುತ್ತಾಳೆ ಬಡ್ಡಿ ದುಡ್ಡನ್ನು .. ಅಮ್ಮ ಮಾಡಿದ ಸಾಲವನ್ನು ನಾನೇ ತೀರಿಸುತ್ತೇನೆ ಎಂದು ಹೇಳಿದಾಗ ಬಂಗಾರ ಮ್ಮ ಗೆ ಕೋಪ ಬಂದು ಪುಟ್ಟಕ್ಕ ಗೆ ಕರೆಮಾಡಿ ಹೇಳುತ್ತಾರೆ.. ಪುಟ್ಟಕ್ಕ ನಿನ್ನ ಮಗಳ ಮಾತು ಮೀರಿ ಮೀರುತ್ತಿದೆ... ಸರಿ ಪುಟ್ಟಕ್ಕ ನಿನಗೆ ನಾನು ಬಡ್ಡಿ ರಹಿತ ದುಡ್ಡು ಕೊಟ್ಟಿರುವುದು ಬೇರೆ ಯಾರಿಗೂ ಹಾಗೆ ಹಣ ಕೊಟ್ಟಿಲ್ಲ ಎಂದು ಹೇಳುತ್ತಾಳೆ ಇದನ್ನು ಕೇಳಿದ ಸ್ನೇಹಾ ರಾಜೇಶ್ವರಿ ಬಡ್ಡಿ ವಸೂಲಿ ಮಾಡಿರುವ ವಿಚಾರವನ್ನು ಪ್ರಸ್ತಾಪ ಮಾಡುತ್ತಾಳೆ.

More from Filmibeat

English summary
Kannada serial puttakkana makkalu written updated on 18th August.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X