Puttakkana Makkalu: ಸ್ನೇಹಾಳನ್ನು ಕರೆದುಕೊಂಡು ಹೋಗಲು ಬಂದ ಕಂಠಿ; ಮಗಳನ್ನು ಬೀಳ್ಕೊಡಲಾದೆ ಒದ್ದಾಡಿದ ತಾಯಿ
ಪುಟ್ಟಕ್ಕನ ಮಕ್ಕಳು ಧಾರಾವಾಹಿ ಅದ್ಭುತವಾಗಿ ಮೂಡಿ ಬರುತ್ತಿದೆ ಇದೀಗ ಸ್ನೇಹಾ ತನ್ನ ಬಳಿ ಬಹಳ ಭಾವುಕವಾಗಿ ಮಾತನಾಡುತ್ತಾ ನಿಲ್ಲುತ್ತಾಳೆ. ನನಗೆ ಚಿಕ್ಕ ವಯಸ್ಸಿನಿಂದಲೂ ಗಂಡನ ಮನೆಗೆ ಹೋಗಬೇಕು ಎಂದು ತಿಳಿದಿತ್ತು ಆದರೆ ಇಷ್ಟು ಬೇಗ ... ಇಷ್ಟವಿಲ್ಲದ ಮನೆಗೆ ಹೋಗುತ್ತಿದ್ದೇನೆ ಎಂಬುವದು ನನಗೆ ಗೊತ್ತಿರಲಿಲ್ಲ ಎಂದು ಬೇಸರದಿಂದ ಹೇಳಿಕೊಂಡು ಇದ್ದಾಳೆ.
ಆದರೆ ಇದೆಲ್ಲವನ್ನೂ ಕೇಳಿದ ಪುಟ್ಟಕ್ಕ ಸಮಾಧಾನ ಮಾಡುತ್ತಾಳೆ. ಹಾಗೆಲ್ಲ ನಾವು ಮಾತನಾಡಬಾರದು ಯಾಕೆಂದರೆ ನಾವು ಹುಟ್ಟಿದ ಮನೆ ಬಿಟ್ಟು ಗಂಡನ ಮನೆಗೆ ಹೋದಾಗ ಅಲ್ಲಿ ನಾವು ಮೂರನೇ ಯವರಾಗಿ ಎಂಟ್ರಿ ನೀಡುತ್ತೇವೆ ಕೂಡ. ಆದುದರಿಂದ ನಿಧಾನವಾಗಿ ಅವರ ಮನ ಗೆಲ್ಲಬೇಕು ಎಂದು ಬುದ್ಧಿವಾದ ಹೇಳುತ್ತ ಇರುತ್ತಾಳೆ

ಇನ್ನೂ ಸ್ನೇಹಾ ಸುಮಾ ಬಳಿ ಹೇಳುತ್ತಾಳೆ. ಇನ್ನೂ ಮೇಲೆ ನಿನಗೆ ಯಾರು ಬೈಯ್ಯುವರು ಇಲ್ಲ..ನಿನ್ನ ರೂಮ್ ನಲ್ಲಿ ಇನ್ನೂ ಒಬ್ಬಳೇ ಇರಬಹುದು. ಇನ್ನೂ ಮೇಲೆ ಐದು ಗಂಟೆಗೆ ಯಾರು ನಿನ್ನ ಎಬ್ಬಿಸುವುದು ಇಲ್ಲ ಎಂದಾಗ ಬಹಳ ಬೇಸರ ಆಗುತ್ತದೆ. ಅಕ್ಕ ನೀನು ಐದು ಗಂಟೆಗೆ ನನ್ನ ಎಬ್ಬಿಸುತ್ತ ಇದ್ದಿದ್ದರಿಂದ ನಾನು ಕಲಿಯಲು ಏಷ್ಟು ಹುಷಾರು ಇದ್ದಿದ್ದು ಎಂದೆಲ್ಲ ಬಹೇಳ ಬೇಸರ ಮಾಡಿಕೊಂಡು ಯಾಕೆ ಇಂತಹ ನಿರ್ಧಾರ ತೆಗೆದುಧಾರಾವಾ
ಈ ಮದುವೆಯನ್ನು ಯಾಕೆ ಒಪ್ಪಿಕೊಂಡೆ ಎಂದೆಲ್ಲ ಬಹಳ ಬೇಸರ ಮಾಡಿಕೊಂಡು ಇರುತ್ತಾರೆ. ಇದನ್ನು ನೋಡಿದ ಪುಟ್ಟಕ್ಕ ಮಾತ್ರ ನನ್ನ ಮಗಳು ಸರಿಯಾದ ನಿರ್ಧಾರವನ್ನು ತೆಗೆದುಕೊಂಡು ಇದ್ದಾಳೆ ಆಕೆ ಯಾವತ್ತೂ ತಪ್ಪು ನಿರ್ಧಾರ ತೆಗೆದುಕೊಳ್ಳುವುದು ಇಲ್ಲ ಎಂದು ಖುಷಿಯಿಂದ ಹೇಳಿಕೊಂಡು ಇರುತ್ತಾಳೆ. ಇನ್ನೂ ಕಂಠಿ ಮಾತ್ರ ತನ್ನ ಹೆಂಡತಿಯನ್ನು ಮನೆಗೆ ಕರೆದುಕೊಂಡು ಬರಬೇಕು ಎನ್ನುವ ಖುಷಿಯಲ್ಲಿ ಇದ್ದಾನೆ...
ಇನ್ನೂ ಪುಟ್ಟಕ್ಕ ಮಾತ್ರ ಜ್ಯೋತಿಷಿಯನ್ನು ಕರೆದುಕೊಂಡು ಬಂದು ಮಕ್ಕಳ ಭವಿಷ್ಯದ ಬಗ್ಗೆ ಪ್ರಶ್ನೆ ಮಾಡುತ್ತಾ ಇರುವಾಗ ಜ್ಯೋತಿಷ್ಯರು ಹೇಳುತ್ತಾರೆ . ನಿಮ್ಮ ಮಗಳಿಗೆ ಮದುವೆ ಆದ ಕ್ಷಣ ಬಹಳ ಉತ್ತಮವಾದ ದಿನದಲ್ಲಿ ಘಂಟೆಯಲ್ಲಿ ಮಾಂಗಲ್ಯ ಧಾರಣೆ ಆಗಿದೆ .. ಆದರೆ ಸ್ನೇಹಾ ಮಾತ್ರ ಸ್ವಲ್ಪ ದೊಡ್ಡ ಸಮಸ್ಯೆಯಲ್ಲಿ ಸಿಳುಕಿಕೊಳ್ಳಬಹುದು.. ಅದರಿಂದ ಹೇಗಾದರೂ ಪಾರು ಕೂಡ ಆಗುತ್ತಾಳೆ ಎಂದೆಲ್ಲ ಹೇಳುತ್ತಾರೆ
ಸುಮಾ ಮಾತ್ರ ಅದೆಲ್ಲವನ್ನೂ ನಂಬದೆ ಬಾಯಿಗೆ ಬಂದ ಹಾಗೆ ಮಾತನಾಡುತ್ತಾ ಇರುವಾಗ ಪುಟ್ಟಕ್ಕ ಸುಮಾ ಬಾಯಿ ಮುಚ್ಚಿಸುತ್ತರೆ. ಸುಮಾ ಬಳಿ ಹೇಳುತ್ತಾರೆ ಇನ್ಯಾವತ್ತೂ ಈ ರೀತಿ ಮಾತನಾಡಬೇಡ .. ಅದು ಸರಿ ಕೂಡ ಇರುವುದು ಇಲ್ಲ ಎಂದು ಹೇಳುತ್ತಾರೆ ಇನ್ನೂ ಕಂಠಿ ರಾಧಾ ಕಂಡೀಷನ್ ಹೇಗಿದೆ ಎಂಬುವುದನ್ನು ನೋಡಲು ಬಂದಾಗ ರಾಧ ತಾಯಿ ಬಳಿ ಬಂಗಾರ ಮ್ಮ ಮಾತನಾಡುತ್ತಾ ಇರುತ್ತಾರೆ. ಯಾವತ್ತೂ ಇದ್ದರೂ ರಾಧ ನಮ್ಮ ಮನೆಯ ಸೊಸೆಯಗಿ ಬರುವವಳೇ ಅದರಲ್ಲಿ ಯಾವುದೇ ಮಾತು ಇಲ್ಲ..
ಆಕೆ ನಮ್ಮ ಜೊತೆ ಇರುತ್ತಾಳೆ ಎಂದೆಲ್ಲ ಹೇಳುವಾಗ ಕಂಠಿ ಯನ್ನು ನೋಡಿದ ಆಕೆಯ ರಾಧ ತಾಯಿ ಬಳಿ ಕಂಠಿ ಮೆತ್ತಗೆ ಕೇಳುತ್ತಾನೆ ಹೇಗಿದ್ದಾಳೆ ರಾಧ ಎಂದು .. ಆಗ ನಡೆದ ವಿಚಾರವನ್ನು ಹೇಳಿದಾಗ ಕಂಠಿ ಹೇಳುತ್ತಾನೆ ನನ್ನನ್ನು ಕ್ಷಮಿಸಿ ಬಿಡಿ ನಾನು ಯಾವತ್ತೂ ಹಾಗೆ ಮಾಡಬಾರದಿತ್ತು.. ತಪ್ಪಾಯಿತು ಎಂದು ಹೇಳುತ್ತಾನೆ ಇದೆಲ್ಲವನ್ನೂ ಕೇಳಿದ ರಾಧಾ ತಾಯಿ ಮಾತ್ರ ಕುಸಿದು ಬಿಡುತ್ತಾರೆ. ಮಗಳಿಗೆ ಎನು ಉತ್ತರ ಹೇಳಲಿ ಎಂದು ದುಃಖ ತಡೆಯದೆ ಅಳುತ್ತಾರೆ.


Click it and Unblock the Notifications











