Puttakkana Makkalu: ರಾಜಿಯನ್ನು ತರಾಟೆಗೆ ತೆಗೆದುಕೊಂಡ ಪುಟ್ಟಕ್ಕ; ಬಂಗಾರಮ್ಮ ಕೋಪ ನೋಡಿ ರಾಜೇಶ್ವರಿ ಶಾಕ್
ಪುಟ್ಟಕ್ಕನ ಮಕ್ಕಳು ಧಾರವಾಹಿ ಬಹಳ ಅದ್ಭುತವಾಗಿ ಮೂಡಿ ಬರುತ್ತಿದೆ. ಇದೀಗ ಕಂಠಿ ತನ್ನ ತಾಯಿ ಮಾಡಿದ ಸಾಲವನ್ನು ಹಿಂದಿರುಗಿಸುತ್ತೇನೆ ಎಂದು ಕಂಠಿ ತನ್ನ ತಾಯಿ ಬಳಿ ಹೇಳಿದಾಗ ಸ್ನೇಹಾ ಗೆ ಕೊಂಚ ಸಮಾಧಾನ ಆಗುತ್ತದೆ.. ಆದರೆ ಆಕೆಗೆ ಕಂಠಿ ಬಂಗಾರ ಮ್ಮ ನ ಕೈ ಯಿಂದ ಹಣ ತೆಗೆದುಕೊಳ್ಳುವುದು ಮಾತ್ರ ಸ್ವಲ್ಪವೂ ಇಷ್ಟ ಇಲ್ಲ.. ಆದರೂ ಎನು ಮಾತನಾಡದೆ ತನ್ನ ರೂಮ್ ನಟ್ಟ ನಡೆಯುತ್ತಾಳೆ.
ಆಗ ಕಂಠಿ ರೂಮ್ ಗೆ ಬರುತ್ತಾನೆ.. ಕಂಠಿ ಬರುವುದನ್ನೇ ನೋಡಿದ ಸ್ನೇಹಾ ಮೆತ್ತಗೆ ಹೇಳುತ್ತಾಳೆ ನೀವು ನನಗೆ ಸಹಾಯ ಮಾಡುತ್ತೀರಿ ಎಂದು ತಿಳಿದು ಬಹಳ ಖುಷಿ ಆಯಿತು ಕೂಡ..ಹಾಗೆಯೇ ನೀವು ಬೇರೆ ಕೆಲಸ ಮಾಡುತ್ತಿರಿ ಎಂದಾಗ ಕೂಡ ಬಹಳ ಖುಷಿ ಆಯಿತು.. ನೀವು ಯಾಕೆ ಬ್ಯಾಂಕ್ ನಿಂದಾ ಹಣ ತೆಗೆದುಕೊಂಡು ವ್ಯವಸಾಯ ಮಾಡಬಾರದು..

ವ್ಯವಸಾಯ ಮಾಡಿದ ಹಣದಲ್ಲಿ ಮತ್ತೆ ಬ್ಯಾಂಕ್ ಹಣ ತಿರಿಸಬಹುದು ಅಲ್ವಾ ಎಂದೆಲ್ಲ ಹೇಳುತ್ತಾರೆ. ಆ ಮಾತು ಕೇಳಿದ ಕಂಠಿ ಗೆ ಮಾತ್ರ ನಡುಕ ಶುರು ಆಗುತ್ತದೆ. ತಾನು ಎನು ಓದಿಲ್ಲ ಎಂದು ತಿಳಿದರೆ ಮಾತ್ರ ಸ್ನೇಹಾ ನನ್ನ ಕೊಂದೆ ಬಿಡುತ್ತಾಳೆ ಎಂದು ಯೋಚನೆ ಮಾಡುತ್ತಾ ಇರುತ್ತಾನೆ.
ಪುಟ್ಟಕ್ಕ ಈ ಮೊದಲೇ ಓದು ಬರಹ ಗೊತ್ತಿಲ್ಲದ ಹುಡುಗನನ್ನು ನಾನು ಮದುವೆ ಆದೆ ಎಂದು ತಿಳಿದರೆ ಸ್ನೇಹಾ ಗೆ ಇನ್ನೂ ಕೋಪ ಬರುವ ಸಾಧ್ಯತೆ ಇದೆ. ಅದಕ್ಕೆ ನೀನು ಎಂದು ಕೆಲಸವನ್ನು ಹುಡುಕಿಕೊಂಡು ಬಿಡು ಆ ಬಳಿಕ ಸ್ನೇಹಾ ಬಳಿ ಈ ಬಗ್ಗೆ ಮಾತನಾಡು ಎಂದು ಹೇಳಿದ್ದರು.
ಆದರೆ ಇದೀಗ ಬ್ಯಾಂಕ್ ನಲ್ಲಿ ಸಾಲ ಕೇಳಲು ಸ್ನೇಹಾ ಶಿಕ್ಷಣದ ಸರ್ಟಿಫಿಕೇಟ್ ಅನ್ನು ಕೊಡಲು ಹೇಳುತ್ತಾಳೆ.. ಇದನ್ನು ಕೇಳಿದ ಕಂಠಿ ಗೆ ಮಾತ್ರ ಎನು ಹೇಳಬೇಕು ಎಂದು ತಿಳಿಯದ ಹಾಗೆ ಆಗುತ್ತದೆ.. ಸ್ವಲ್ಪ ಕೆಲಸ ಇದೆ ಎಂದು ನುಣುಚಿಕೊಳ್ಳುತ್ತಾ ಇರುತ್ತಾರೆ.. ಇದನ್ನು ನೋಡಿದ ಸ್ನೇಹಾ ಹೇಳುತ್ತಾಳೆ ನಾನು ಹೋಗುತ್ತೇನೆ ಬ್ಯಾಂಗ್ ಗೆ ಎಲ್ಲಾ ಡಾಕ್ಯುಮೆಂಟ್ ಅನ್ನು ಹಿಡಿದುಕೊಂಡು ನಿಮ್ಮ ಕೆಲಸ ಆದ ಬಳಿಕ ಬ್ಯಾಂಕ್ ಬಳಿ ಬನ್ನಿ ಎಂದು ಹೇಳುತ್ತಾಳೆ..
ಇದನ್ನು ಕೇಳಿದ ಕಂಠಿ ಆಯಿತು ಎನ್ನುತ್ತಾನೆ..ಸ್ನೇಹಾ ಅಲ್ಲಿಂದ ಹೊರಗಡೆ ಹೋಗುತ್ತಾಳೆ. ಆದರೆ ಕಂಠಿ ಗೆ ಮಾತ್ರ ಎನು ಮಾಡುವುದು ಎಂದು ತಿಳಿಯದೇ ಕಂಗಾಲಾಗಿ ಹೋಗಿರುತ್ತಾನೆ.. ಹೇಗಪ್ಪಾ ನಾನು ಇದನ್ನೆಲ್ಲ ಸಹಿಸಿಕೊಂಡು ಇರಲಿ ಎಂದೆಲ್ಲ ಮನದಲ್ಲಿ ಅಂದುಕೊಂಡು ಇರುತ್ತಾನೆ. ಇನ್ನೂ ಬಂಗಾರ ಮ್ಮ ರಾಜೇಶ್ವರಿಯನ್ನ ಮನೆಗೆ ಕರೆಯುತ್ತಾರೆ. ರಾಜೇಶ್ವರಿ ಬಂಗಾರ ಮ್ಮ ನ ಮನೆಗೆ ಬರುವುದಕ್ಕೂ ಸ್ನೇಹಾ ಮಹಡಿ ಮೆಟ್ಟಿಲು ಹಿಡಿದು ಇಳಿದುಕೊಂಡು ಬರುವುದಕ್ಕೂ ಸರಿಯಾಗುತ್ತದೆ.
ಇನ್ನೂ ರಾಜೇಶ್ವರಿ ಯನ್ನ ನೋಡಿದ ಬಂಗಾರ ಮ್ಮ ಒಳಗೆ ಬಂದು ಕುಳಿತುಕೊಳ್ಳಲು ಹೇಳುತ್ತಾರೆ.. ಇನ್ನೂ ಸ್ವಲ್ಪ ಕುಶಲೋಪರಿ ವಿಚಾರ ಮಾಡಿದ ಬಂಗಾರ ಮ್ಮ ರಾಜೀ ಬಳಿ ನೇರವಾಗಿ ಪುಟ್ಟಕ್ಕನ ಬಳಿ ಬಡ್ಡಿ ವಸೂಲಿ ಮಾಡಲು ನಾನೇನಾದರೂ ಹೇಳಿದೆನ ಎಂದೆಲ್ಲ ಪ್ರಸ್ನೆಮಾಡಿದಾಗ ರಾಜಿ ಗೆ ಕೊಂಚ ಭಯ ಆಗುತ್ತದೆ.. ರಾಜಿ ಮಾತ್ರ ಎನು ಮಾತನಾಡದೆ ಸುಮ್ಮನೆ ಇರುತ್ತಾಳೆ.. ಬಡ್ಡಿ ವಸೂಲಿ ಮಾಡಿದರೆ ಮೈ ಚಳಿ ಬಿದಿಸುತ್ತೇನೆ ಎಂದೆಲ್ಲ ತಾಕೀತು ಮಾಡಿ ಕಳುಹಿಸುತ್ತಾಳೆ ಬಂಗಾರ ಮ್ಮ.. ಆದರೆ ಸ್ನೇಹಾ ಮಾತ್ರ ಅದೆಲ್ಲವನ್ನೂ ನೋದಿ ಸುಮ್ಮನೆ ಆಗುತ್ತಾಳೆ.


Click it and Unblock the Notifications











