Don't Miss!
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ರೋಹಿತ್ ಬಳಗದ ಅಭ್ಯಾಸಕ್ಕೆ ಭಾನುವಾರ ರಜೆ ನೀಡಿದ ಕೋಚ್ ದ್ರಾವಿಡ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Puttakkana Makkalu: ರಾಜಿ ತಂತ್ರಕ್ಕೆ ಪ್ರತಿತಂತ್ರ ಹೂಡಿದ ಕಂಠಿ
ತಲೆಬಿಸಿಯಲ್ಲಿ ಮನೆಯ ಒಳಗೆ ಹೋಗಿದ್ದ ಮೇಷ್ಟ್ರ ತಾಯಿ ಮನೆಯಿಂದ ಹೊರಗೆ ಬಂದು ನನಗೂ ಈ ಮದುವೆಗೆ ಒಪ್ಪಿಗೆ ಇದೆ ಎಂದು ಹೇಳುತ್ತಾರೆ. ಇದನ್ನು ಕೇಳಿ ಮುರಳಿ ಮೇಷ್ಟ್ರ ಮನೆಯವರಿಗೆ ಬಹಳ ಖುಷಿ ಆಗುತ್ತದೆ. ಮನೆಗೆ ಬಂದ ಮೇಷ್ಟ್ರು ತಂದೆ ತಾಯಿಯನ್ನು ನೋಡಿ ಹಾಗೆಯೇ ಹೋಗುತ್ತಾರೆ. ಇದನ್ನು ನೋಡಿದ ಮೇಷ್ಟ್ರ ತಂದೆ "ಮುರಳಿ ನಿಂತುಕೋ" ಎಂದು ಹೇಳಿ ಪತ್ನಿ ಬಳಿ ಏನಂದೆ ನೀನು ಎಂದು ಕೇಳುತ್ತಾರೆ. ಆ ವೇಳೆ ಕೌಸಲ್ಯ ನನಗೂ ಈ ಮದುವೆ ಓಕೆ ಎಂದು ಹೇಳಿದಾಗ ಮುರಳಿಗೆ ಬಹಳ ಖುಷಿ ಆಗುತ್ತದೆ. ಇನ್ನೂ ಮೇಷ್ಟ್ರ ಮನೆಯಲ್ಲಿ ಮದುವೆ ಒಪ್ಪಿಗೆ ಕೊಟ್ಟಿದ್ದಾರೆ ಎಂದು ಎಲ್ಲರಿಗೂ ಖುಷಿ ಆಗುತ್ತದೆ.
ಸ್ನೇಹಾ ಅಮ್ಮನ ಬಳಿ ಹೇಳಿ ಬಹಳ ಖುಷಿ ಪಡುತ್ತಾಳೆ ಹಾಗೆಯೇ ಪುಟ್ಟಕ್ಕ ಮಾತ್ರ ಆಕಾಶದಲ್ಲಿ ತೇಲಾಡುತ್ತ ಇದ್ದಾಳೆ. ಇದಕ್ಕೆಲ್ಲ ಕಾರಣ ದೊರೆ ಎಂದು ಖುಷಿ ಪಡುತ್ತಾ ಇರುವಾಗ ಸುಮಾ ದೊರೆನಾ ಯಾರದು ಎಂದು ಪ್ರಶ್ನೆ ಮೇಲೆ ಪ್ರಶ್ನೆ ಕೇಳಿದಾಗ ಪುಟ್ಟಕ್ಕ ನಿನಗೆ ಯಾಕದು ಬಿಟ್ಟು ಬಿಡು ಎಂದು ಹೇಳುತ್ತಾಳೆ. ಇದನ್ನು ಕೇಳಿದ ಸುಮಾ ಸುಮ್ಮನೆ ಆಗುತ್ತಾಳೆ. ಬಳಿಕ ಸ್ನೇಹಾ ಚಿತ್ರಾ ಅವರು ಹೇಳಿದ್ದು ಅವರ ಮದುವೆಗೆ ಒಪ್ಪಿಗೆ ಸೂಚಿಸಿದ್ದಾರೆ ಎನ್ನುತ್ತಾಳೆ. ಆ ವೇಳೆ ಸಹನಾ ಮುಖ ಕೆಂಪೇರುತ್ತದೆ. ಬಹಳ ಖುಷಿ ಪಡುತ್ತಾಳೆ. ಇನ್ನು ತಂಗಿಯಂದಿರು ಕಾಲು ಎಳೆಯುವುದನ್ನು ನೋಡಿ ನಾಚಿಕೆಯಿಂದ ಮನೆಯ ಒಳಗೆ ಹೋಗುತ್ತಾಳೆ..
ಮೇಷ್ಟ್ರ ಮನೆಯಲ್ಲಿ ಮದುವೆಗೆ ಒಪ್ಪಿಗೆ ಸಿಕ್ಕಿತು ಅನ್ನುವ ವೇಳೆ ರಾಜೇಶ್ವರಿಗೆ ಬಹಳ ಕೋಪ ಬರುತ್ತದೆ . ಮೇಷ್ಟ್ರ ತಂದೆ ತಾಯಿ ಬಳಿ ಅಷ್ಟೆಲ್ಲ ಹೇಳಿದರು ಅದೆಲ್ಲವನ್ನೂ ಕ್ಯಾರೇ ಎನ್ನದೆ ಮದುವೆಗೆ ಒಪ್ಪಿಗೆ ನೀಡಿದ್ದಾರೆ ಅಲ್ವಾ ಎಂದು ಜೋರಾಗಿ ಹೇಳಿದಾಗ ಗೋಪಾಲನಿಗೆ ಖುಷಿ ಆದರೆ ಕಾಳೀ ಮಾತ್ರ ಸಹನಾ ನನ್ನ ಪ್ರೀತಿ ಮಾಡುತ್ತಾ ಇದ್ದಾಳೆ ಅದು ಹೇಗೆ ಮೇಷ್ಟ್ರನ್ನು ಮದುವೆ ಮಾಡಿಕೊಳ್ಳುತ್ತಾಳೆ ನೋಡಬೇಕು ಎಂದು ಯೋಚನೆ ಮಾಡುತ್ತಾ ಇರುತ್ತಾರೆ. ಬಳಿಕ ಮೇಷ್ಟ್ರ ಮನೆಗೆ ಹೋಗಿ ಬರೋಣ ಕಾಳೀ ಎಂದು ರಾಜೇಶ್ವರಿ ಹೇಳುತ್ತಾಳೆ. ಇನ್ನು ಮೇಷ್ಟ್ರ ಮನೆಗೆ ಹೋದ ರಾಜೇಶ್ವರಿ ಮೇಷ್ಟ್ರ ತಂದೆ ತಾಯಿ ತಲೆ ಕೆಡಿಸಲು ನೋಡುತ್ತಾಳೆ.

ಮೇಷ್ಟ್ರ ಮನೆಗೆ ಆಗಮಿಸಿದ ರಾಜಿ
ಈ ವಿಚಾರವನ್ನು ಪುರುಷೋತ್ತಮ ಸುಮನಾ ಬಳಿ ಹೇಳಿದಾಗ ಸ್ನೇಹಗೆ ಈ ವಿಚಾರ ತಿಳಿಯುತ್ತಾ ಇದ್ದ ಹಾಗೆ ಕಂಠಿಗೆ ಕರೆ ಮಾಡುತ್ತಾಳೆ. ರಾಜೇಶ್ವರಿ ಕುತಂತ್ರವನ್ನು ಕಂಠಿ ಬಳಿ ಹೇಳಿದಾಗ ಎನು ಮಾಡಬೇಕು ಎಂದು ಯೋಚನೆ ಮಾಡಿದ ಕಂಠಿಗೆ ಇದು ತನ್ನ ಅವ್ವನಿಂದ ಮಾತ್ರ ಸಾಧ್ಯ ಎಂದುಕೊಂಡು ಅಮ್ಮನನ್ನು ಕರೆದುಕೊಂಡು ಮುರಳಿ ಮೇಷ್ಟ್ರ ಮನೆಗೆ ಹೋಗುತ್ತಾನೆ. ಇನ್ನು ಮೇಷ್ಟ್ರ ಮನೆಯಲ್ಲಿ ರಾಜೇಶ್ವರಿ ಪುಟ್ಟಕ್ಕ ಗಂಡ ಬಿಟ್ಟವಳು, ಪುಟ್ಟಕ್ಕನ ಮಗಳು ಕೂಡ ಮದುವೆ ಆದ ಬಳಿಕ ನಿಮ್ಮ ಮಗನನ್ನು ಬಿಡುವುದಿಲ್ಲ ಎಂಬುವುದಕ್ಕೆ ಎನು ಗ್ಯಾರಂಟಿ, ಯಾಕಾಗಿ ಮದುವೆ ಆಗುತ್ತಾ ಇದ್ದಾರೆ, ಇದರಿಂದ ನಿಮ್ಮ ಮಗನ ಜೀವನ ಹಾಳು ಆಗುತ್ತದೆ ಎಂದು ಹೇಳಿದಾಗ ಮೇಷ್ಟ್ರ ಮನೆ ಮುಂದೆ ಬಂಗಾರಮ್ಮ ಬರುತ್ತಾರೆ.

ಮೇಷ್ಟ್ರ ಮನೆಗೆ ಆಗಮಿಸಿದ ಬಂಗಾರಮ್ಮ
ಕಂಠಿ ತಾಯಿಯನ್ನು ಮಾತ್ರ ಕಳುಹಿಸಿ ಕಾರಿನ ಬಳಿ ನಿಂತು ಇರುತ್ತಾನೆ. ರಾಜೇಶ್ವರಿ ಆಡಿದ ಮಾತನ್ನು ಕೇಳಿಸಿಕೊಂಡ ಬಂಗಾರಮ್ಮ ಜೋರಾಗಿ ಹೇಳುತ್ತಾಳೆ ನೀವು ಏನು ಹೆದರಿಕೊಳ್ಳಬೇಡಿ ಆ ತರ ಎನು ಆಗುವುದಿಲ್ಲ. ಇದಕ್ಕೆ ನಾನು ಗ್ಯಾರಂಟಿ ಕೊಡುತ್ತೇನೆ. ಪುಟ್ಟಕ್ಕನ ಹಾಗೆ ಭೀಗತಿ ಸಿಗಳು ನೀವು ಪುಣ್ಯ ಮಾಡಿದಿರಿ. ಮದುವೆಗೆ ಒಪ್ಪಿಗೆ ನೀಡಿದ್ದರಿಂದ ನಮಗೆ ಖುಷಿ ಆಗಿದೆ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಮೇಷ್ಟ್ರ ತಂದೆ ತಾಯಿ ಸುಮ್ಮನೆ ಇರುತ್ತಾರೆ ಹಾಗೂ ರಾಜಿ ಅಲ್ಲಿಂದ ಹೋಗುತ್ತಾಳೆ..

ಪುಟ್ಟಕ್ಕನ ಮನೆಗೆ ಆಗಮಿಸಲಿರುವ ಗಂಡಿನ ಕಡೆಯವರು
ಇನ್ನು ಪುಟ್ಟಕ್ಕನ ಮನೆಗೆ ಮದುವೆ ಮಾತು ಕತೆಗೆ ಮೇಷ್ಟ್ರ ಮನೆಯವರು ಬರುತ್ತಾರೆ.. ಅದನ್ನು ನೋಡಿ ಬಹಳ ಖುಷಿ ಪಡುತ್ತಾಳೆ ಪುಟ್ಟಕ್ಕ. ಕೌಸಲ್ಯ ಈ ಸಲ ಹೋದ ಬಾರಿ ಮನೆಗೆ ಬಂದಾಗಿನಿಂದ ಈ ಬಾರಿ ಮನೆ ನೀಟಾಗಿ ಇದೆ ಎಂದಾಗ ಸ್ನೇಹಾ ಹೋದ ಬಾರಿ ಕೂಡಾ ಹೀಗೆಯೇ ಇತ್ತು ನೀವು ಸರಿಯಾಗಿ ನೋಡಿಲ್ಲ ಎಂದು ಕಾಣಿಸುತ್ತದೆ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಮೇಷ್ಟ್ರ ತಾಯಿಗೆ ಅವಕ್ಕಾಗುತ್ತಾರೆ.

ಸ್ನೇಹಾ ಮಾತಿಗೆ ಅವಕ್ಕಾದ ಕೌಸಲ್ಯ
ಇದನ್ನು ಕೇಳಿದ ಪುಟ್ಟಕ್ಕ ಸ್ನೇಹಾಳನ್ನು ಒಳಗೆ ಕಳುಹಿಸಲು ಎಲ್ಲಾ ಕೆಲಸ ಹೇಳುತ್ತಾಳೆ. ಆದರೆ ಸ್ನೇಹಾ ಮಾತ್ರ ಅಲ್ಲಾಡದೆ ಅಲ್ಲೇ ನಿಂತಿರುತ್ತಾಳೆ. ಈ ವೇಳೆ ಕಂಠಿ ಮಾತ್ರ ಸ್ನೇಹಾ ಮುಖ ನೋಡಿಕೊಂಡು ಇರುತ್ತಾನೆ ಸ್ನೇಹಾ ಕೂಡ ಹಾಗೆ ನೋಡುತ್ತಾ ಇರುವಾಗ ಸುಮಾಗೆ ಡೌಟ್ ಬರುತ್ತದೆ.. ಏನೋ ಎಡವಟ್ಟಾಗುವ ಎಲ್ಲಾ ಲಕ್ಷಣ ಕಾಣುತ್ತಿದೆ ಎಂದು ಹೇಳುತ್ತಾಳೆ. ಇನ್ನು ಸಹನಾಳನ್ನು ನೋಡಿದ ಮೇಷ್ಟ್ರು ಕಳೆದು ಹೋಗಿದ್ದಾರೆ ಮುಂದೇನು ಕಾದು ನೋಡಬೇಕಿದೆ.