Puttakkana Makkalu: ಕಂಠಿಗೆ ಸವಾಲು ಹಾಕಿದ ಸುಮಾ; ಕಂಠಿಗೆ ಭಾಗೀರಥಿ ಒಲಿಯುತ್ತಾಳಾ?
ಪುಟ್ಟಕ್ಕನ ಮಕ್ಕಳು ಧಾರವಾಹಿ ಅದ್ಭುತವಾಗಿ ಮೂಡಿಬಂದಿದೆ .. ಇದೀಗ ದೇವಾಲಯದತ್ತ ಪುಟ್ಟಕ್ಕನ ಕುಟುಂಬ ಆಗಮಿಸುತ್ತಿದೆ.. ದೇವರ ದರ್ಶನ ಮಾಡಲು ಹಾಗೆಯೇ ಮಕ್ಕಳ ಸಲುವಾಗಿ ಪುಟ್ಟಕ್ಕ ಹರಕೆ ಕಟ್ಟಿಕೊಂಡು ಇರುತ್ತಾಳೆ.. ಈ ವೇಳೆ ದೇವಾಲಯದ ಅರ್ಚಕರು ಸ್ನೇಹಾ ಹಾಗೂ ಕಂಠಿ ಜೋಡಿ ಬಗ್ಗೆ ಕೇಳುತ್ತಾ ಇರುತ್ತಾರೆ ಆಗ ಕಂಠಿ ಅಲ್ಲಿಗೆ ಬರುತ್ತಾನೆ.. ಕಂಠಿ ಬರುತ್ತಾ ಇರುವುದನ್ನು ನೋಡಿದ ಸ್ನೇಹಾ ಮುನಿಸು ಹೆಚ್ಚಾಗುತ್ತದೆ..
ಆದರೆ ಪುಟ್ಟಕ್ಕ ಮಾತ್ರ ಕಂಠಿಯನ್ನು ಯಾವತ್ತೂ ದೂರ ಮಾಡಿದವಳು ಅಲ್ಲ.. ತನ್ನ ಅಳಿಯ ಬಹಳ ಒಳ್ಳೆಯವನು ಆದರೆ ಮಗಳನ್ನು ಒಲಿಸಿಕೊಳ್ಳಲು ಸುಳ್ಳುಗಳನ್ನು ಹೇಳಿದ್ದಾನೆ ಅಷ್ಟೇ ಎಂದು ಅಂದುಕೊಂಡು ಕಂಠಿ ಬಗ್ಗೆ ಒಳ್ಳೆಯ ಅಭಿಪ್ರಾಯ ಇರುತ್ತದೆ.. ಅದಕ್ಕೆ ಯಾರೇ ಏನೇ ಅಂದರೂ ಪುಟ್ಟಕ್ಕ ಮಾತ್ರ ಕಂಠಿ ಯನ್ನ ಬಿಟ್ಟುಕೊಡುವುದಿಲ್ಲ.. ಇನ್ನೂ ಕಂಠಿ ನೇರವಾಗಿ ಬಂದು ಪುಟ್ಟಕ್ಕನ ಬಳಿ ಮಾತನಾಡುತ್ತಾರೆ.. ಹಾಗೆಯೇ ಮುರಳಿ ಬಳಿ ಮಾತನಾಡಿಸಲು ಪ್ರಯತ್ನ ಮಾಡುತ್ತಾರೆ ಆದರೆ ಮುರಳಿ ಮಾತ್ರ ತಾರ ಮಾತಿಗೆ ಕೂಡ ಉತ್ತರ ಕೊಡಲು ರೆಡಿ ಇರುವುದು ಇಲ್ಲ..

ಯಾರ ಮಾತನ್ನೂ ಕೇಳುವುದು ಕೂಡ ಇಲ್ಲ.. ಇದೆಲ್ಲವನ್ನೂ ನೋಡಿದ ಪುಟ್ಟಕ್ಕ ಮಾತ್ರ ಎಲ್ಲರ ಗಮನವನ್ನು ಬೇರೆಡೆಗೆ ತೆಗೆದುಕೊಂಡು ಹೋಗಲು ಪ್ರಯತ್ನ ಪಡುತ್ತಾಳೆ.. ಇನ್ನೂ ಕಂಠಿ ಮಾತ್ರ ಎನು ಮಾತನಾಡದೆ ಸುಮ್ಮನೆ ಇರುತ್ತಾರೆ..ಪೂಜೆ ಎಲ್ಲಾ ಮುಗಿದ ಬಳಿಕ ಸ್ನೇಹಾನಾ ಹಣೆಗೆ ಕುಂಕುಮ ವಾನ್ನೂ ಇಡುತ್ತಾನೆ ಕಂಠಿ ಆಗಲಾದರೂ ಸ್ನೇಹಾ ಕಂಠಿ ಮುಖ ನೋಡುತ್ತಾರ ಎಂದು ಅಭಿಮಾನಿಗಳು ಕಾಯುತ್ತಾ ಇದ್ದರೂ ಆದರೆ ಅಲ್ಲಿ ಆಗಿದ್ದೆ ಬೇರೆ...ಕಂಠಿ ಮಾತ್ರ ಎನು ಮಾತನಾಡದೆ ಸುಮ್ಮನೆ ಆಗುತ್ತಾರೆ..
ಇನ್ನೂ ಭಾಗೀರಥಿಯ ಬಳಿ ಬರುತ್ತಾರೆ.. ಅದೊಂದು ಪವಿತ್ರವಾದ ಜಲ .. ಅಲ್ಲಿಗೆ ಅನೇಕ ಜನರು ಬರುತ್ತಾರೆ ಏನೇ ತಪ್ಪು ಮಾಡಿದರೂ ಇದರಲ್ಲಿ ಉದ್ಭವಿಸಿದ ತೀರ್ಥವನ್ನು ನಾವು ಕುಡಿದರೆ ಪವಿತ್ರವಾಗಿ ಬಿಡುತ್ತಾರೆ ಎನ್ನುವ ನಂಬಿಕೆ . ಭಾಗೀರಥಿ ಮೋಸ ಮಾಡುವವರಿಗೆ ಎಲ್ಲಾ ಕೈ ಗೆ ಎಟಕುವುದು ಇಲ್ಲ..ಆಕೆ ಸತ್ಯ ಧರ್ಮದ ದಾರಿಯಲ್ಲಿ ನಡೆದವರಿಗೆ ಮಾತ್ರ ತೀರ್ಥ ಕೊಡುತ್ತದೆ . ಮೊದಲಿಗೆ ಪುಟ್ಟಕ್ಕ ಮೆತ್ತಗೆ ಭಾಗೀರಥಿ ಬಳಿ ಬಂದು ಕೈ ತುಂಬಾ ತೀರ್ಥ ತೆಗೆದುಕೊಂಡು ಬರುತ್ತಾರೆ.. ಹಾಗೆಯೇ ಸುಮಾ ಸ್ನೇಹಾ ಸಹನಾ ಕೂಡ ತೀರ್ಥ ತೆಗೆದುಕೊಂಡು ಬರುತ್ತಾರೆ.
ಇನ್ನೂ ಸುಮಾ ಬೇಕು ಬೇಕು ಎಂದು ಕಂಠಿ ಗೆ ಹೇಳುತ್ತಾಳೆ.. ನಿಮ್ಮನ್ನು ಶ್ರೀ ಎನ್ನಬೇಕೋ...ದೊರೆ ಎನ್ನಬೇಕೋ ಒಂದು ತಿಳಿಯುತ್ತಿಲ್ಲ.. ಅಷ್ಟೊಂದು ಹೆಸರಿದೆ..ನಿಮಗೆ ಧೈರ್ಯ ಇದ್ದಾರೆ ಭಾಗೀರಥಿ ಗೆ ಹೋಗಿ ತೀರ್ಥ ತನ್ನಿ ಎಂದು ಹೇಳಿದಾಗ ಪುಟ್ಟಕ್ಕ ಕೋಪದಿಂದ ಸುಮಾ ಮುಖ ನೋಡುತ್ತಾರೆ. ಇನ್ನೂ ಪುಟ್ಟಕ ಕಂಠಿ ಪರವಾಗಿ ಮಾತನಾಡುತ್ತಾರೆ..ಕಂಠಿ ಏನೇ ಮಾಡಿದ್ದರು ಅವರ ಪ್ರೀತಿ ಮಾತ್ರ ಪರಿ ಶುದ್ಧವಾದೂದು... ಹೋಗಪ್ಪ ತೀರ್ಥ ತೆಗೆದುಕೊಂಡು ಬಾ ಎಂದು ಹೇಳುತ್ತಾ ಇರುತ್ತಾರೆ
ಇದನ್ನು ನೋಡಿದ ಕಂಠಿ ಬಾಗಿರಥಿಗೆ ಕೈ ಹಾಕಿ ನೋಡುತ್ತಾನೆ..ಆದರೆ ಕಂಠಿ ಗೆ ಮಾತ್ರ ಪವಿತ್ರವಾದ ತೀರ್ಥ ಒಲಿಯುತ್ತ, ಇಲ್ವಾ ಎಂಬುವುದನ್ನು ಕಾದು ನೋಡಬೇಕಿದೆ


Click it and Unblock the Notifications











