Puttakkana Makkalu: ಕಂಠಿಯಿಂದ ದೂರ ಆಗಲು ಭುವನ್ ಬಳಿ ಸಹಾಯ ಕೇಳ್ತಾಳಾ ಸ್ನೇಹಾ?
ಪುಟ್ಟಕ್ಕ ಹಾಗೂ ಸ್ನೇಹಾ ಮುನಿಸಿಕೊಂಡಿರುವ ವಿಚಾರ ನಂಜಮ್ಮನ ವರೆಗೆ ತಲುಪಿದೆ. ಪುಟ್ಟಕ್ಕ, ಸ್ನೇಹಾ ಬಳಿ ಕಂಠಿನ ಹೇಗಾದರೂ ಮರೆಯಬೇಕು ಎಂದು ಹೇಳಿದ್ದೆ ಸ್ನೇಹಾ ಗೆ ವೇದ ವಾಕ್ಯದ ಹಾಗೆ ಆಗಿದೆ. ಯಾಕೆಂದರೆ ತನ್ನ ತಾಯಿನೇ ಎಲ್ಲ ಎಂದು ನಂಬಿರುವವಳು ಸ್ನೇಹಾ. ಇದೀಗ ಕಂಠಿ, ಪುಟ್ಟಕ್ಕನ ಮನೆಗೆ ಸ್ನೇಹಾಳನ್ನು ಹೆಣ್ಣು ಕೇಳಲು ಬರುತ್ತಿದ್ದಾನೆ.
ಸ್ನೇಹಾ ಇದೇ ವೇಳೆ ನಂಜಮ್ಮ ಜೊತೆ ಮಾತನಾಡುತ್ತಾ ಇರುತ್ತಾಳೆ. ಆ ವೇಳೆ ಕಂಠಿ ಬಂದಿರುವುದನ್ನು ನೋಡಿದ ನಂಜಮ್ಮ ಹೊರಡಲು ಅನುವಾಗುತ್ತಾರೆ. ಕಂಠಿ, ನಂಜಮ್ಮ ಹೋದ ಬಳಿಕ ಸ್ನೇಹಾ ಬಳಿ ಪುಟ್ಟಕ್ಕನ ಬಗ್ಗೆ ಕೇಳುತ್ತಾರೆ. ಮೆಸ್ನಲ್ಲಿ ಅಡುಗೆ ಮಾಡುತ್ತಿರುವ ವಿಚಾರ ತಿಳಿದು ಸುಮ್ಮನೆ ಆಗುತ್ತಾನೆ.

ಆ ಬಳಿಕ ತನ್ನ ಹುಡುಗಿ ಜೊತೆ ಮಾತನಾಡಲು ತೊಡಗಿದ ವೇಳೆ ಸ್ನೇಹಾ ಸರಿಯಾಗಿ ಕಂಠಿ ಬಳಿ ಮಾತನಾಡದೆ ಮನೆಯಿಂದ ಹೋಗಲು ಹೇಳುತ್ತ ಇರುತ್ತಾರೆ. ಇದನ್ನು ನೋಡಿದ ಕಂಠಿ ಮಾತ್ರ ಸ್ನೇಹಾ ಜೊತೆ ಮಾತನಾಡಬೇಕು ಎನ್ನುವಷ್ಟ್ರಲ್ಲಿ ಸ್ನೇಹಾ ಕಂಠಿ ಜೊತೆ ನಿಷ್ಠುರವಾಗಿ ಮಾತನಾಡುತ್ತಾನೆ. ಇದನ್ನು ಕೇಳಿದ ಭುವನ್ ಮಾತ್ರ ಹೊರಗಿನಿಂದ ಬರುತ್ತಾನೆ.

ಭುವನ್ ಮಾತಿಗೆ ಸ್ನೇಹಾ ಗಲಿಬಿಲಿ
ಭುವನ್ನನ್ನು ನೋಡಿದ ಸ್ನೇಹಾ ಕೊಂಚ ಗಲಿ ಬಿಲಿ ಆಗುತ್ತಾಳೆ. ಆ ಬಳಿಕ ಕಂಠಿ, ಭುವನ್ಗೆ ಸಮಜಾಯಿಷಿ ಕೊಡುತ್ತಾನೆ. ಇತ್ತ ಕಂಠಿಗೆ ಭುವನ್ ಕಂಡರೆ ಸ್ವಲ್ಪನೂ ಇಷ್ಟ ಇಲ್ಲ. ಇಷ್ಟ ಇಲ್ಲದೇ ಇದ್ದರೂ ಸುಮ್ಮನೆ ನಾಟಕೀಯವಾಗಿ ಮಾತನಾಡುತ್ತಾ ಇರುತ್ತಾನೆ. ಇನ್ನು ಭುವನ್ ಹೊರಡಲು ಅನುವಾಗುತ್ತಾನೆ ಆಗ ಸ್ನೇಹಾ ಮೆತ್ತಗೆ ಭುವನ್ ಬಳಿ ಕೇಳುತ್ತಾಳೆ. ನೀವು ಕಾಲೇಜು ಕಡೆ ಹೋಗುತ್ತಾ ಇದ್ದಿರಿಯಲ್ವಾ ನಾನು ಅಲ್ಲಿ ತನಕ ಬರುತ್ತೇನೆ ಎಂದು ಭುವನ್ ಜೊತೆ ಹೋಗುತ್ತಾಳೆ.
ಸ್ನೇಹಾಳನ್ನು ಕಳೆದುಕೊಳ್ಳುವ ಭೀತಿಯಲ್ಲಿ ಕಂಠಿ
ಕಂಠಿಗೆ ಸ್ನೇಹಾ ತನ್ನನ್ನು ಅವಾಯ್ಡ್ ಮಾಡುತ್ತಿದ್ದಾಳೆ ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಇದೀಗ ಕಂಠಿ ಮಾತ್ರ ಬಹಳ ನೋವು ಆಗುತ್ತದೆ. ಆದರೆ ಪಟ್ಟು ಬಿಡದೆ ಸ್ನೇಹಾ ಜೊತೆ ಏನಾಯಿತು ಎಂದೆಲ್ಲ ಕೇಳೋಣ ಅಂದುಕೊಂಡು ಇರುತ್ತಾನೆ. ಇನ್ನೂ ಮುರಳಿ ಹಾಗೂ ಸಹನಾ ಪುಟ್ಟಕ್ಕನ ಮನೆಗೆ ಹೊರಟು ನಿಂತು ಇರುತ್ತಾನೆ. ಇತ್ತ ಕಿಟಕಿಯಲ್ಲಿ ತನ್ನ ತಂದೆಯ ಬಳಿ ಮನೆಗೆ ಹೋಗಿ ಬರುತ್ತೇವೆ. ಆಕೆಗೆ ತಾಯಿ ನೆನಪಾಗಿದೆ ಎಂದು ನೆಪ ಹೇಳಿ ಅಲ್ಲಿಂದ ಹೋಗುತ್ತಾರೆ.
ಪುಟ್ಟಕ್ಕನ ಮನೆಗೆ ಆಗಮಿಸಿದ ಸಹನಾ
ಇನ್ನು ಸಹನಾ ಮನೆಗೆ ಬಂದದ್ದೇ ತಡ ಪುಟ್ಟಕ್ಕನ ಮನೆಯಲ್ಲಿ ಸಂಭ್ರಮ ಉಕ್ಕಿ ಹರಿಯುತ್ತದೆ. ಈ ವೇಳೆ ಸಹನಾ ಮನದಲ್ಲಿ ಅಂದುಕೊಂಡು ಇರುತ್ತಾಳೆ. ಅಮ್ಮನ ಬಳಿ ವರದಕ್ಷಿಣೆ ಕೊಟ್ಟಿರುವ ಬಗ್ಗೆ ಕೇಳಬೇಕು ಎಂದು ಹೇಳುತ್ತ ಇರುತ್ತಾರೆ. ಇನ್ನು ಸ್ನೇಹಾ ಓದುತ್ತಾ ಇರುವ ವೇಳೆ ಸುಮಾಗೆ ಕಂಠಿ ಕರೆ ಮಾಡಿ ಸ್ನೇಹಾ ಬಗ್ಗೆ ವಿಚಾರಣೆ ಮಾಡಿದಾಗ ಸ್ನೇಹಾ ಮಾತ್ರ ಅಕ್ಕನ ಬಳಿ ಮಾತನಾಡಿ ಎಂದು ಫೋನ್ ಕೊಡುತ್ತಾಳೆ. ಆಗ ಸ್ನೇಹಾ ಸುಮನಾ ಕೈಯಲ್ಲಿ ಇದ್ದ ಫೋನ್ ಸ್ವೀಕಾರ ಮಾಡದೇ ಸೈಡ್ಗೆ ಇಟ್ಟು ಕಂಠಿ ಗೆ ಕೇಳಿಸುವ ಹಾಗೆ ಚುಚ್ಚಿ ಮಾತನಾಡುತ್ತಾಳೆ.
ಸ್ನೇಹಾ ಮಾತು ಕೇಳಿದ ಕಂಠಿಗೆ ಬಹಳ ಬೇಸರ ಆಗುತ್ತದೆ. ಕಂಠಿ ಮಾತ್ರ ಸಪ್ಪೆ ಮುಖ ಹಾಕಿರುವುದನ್ನು ನೋಡಿದ ಬಂಗಾರಮ್ಮ ಮಗನನ್ನು ಸಂತೈಸಲು ಬರುತ್ತಾಳೆ. ಆದರೆ ಸ್ನೇಹಾನಾ ಮದುವೆ ಆಗು ಎಂದು ನೆಪ ಮಾತ್ರಕ್ಕೆ ಹೇಳಿ ಪುಟ್ಟಕ್ಕನ ಬಳಿ ಬೇರೆಯದೇ ವರಸೆ ತೋರಿಸುತ್ತಾರೆ.


Click it and Unblock the Notifications











