Don't Miss!
- News ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಮೋದಿಗೆ ಬಿಜೆಪಿಯ ಹೊಸ ಸಂಗಾತಿಯನ್ನ ಕೇಳಿ ಎಂದು ಟಾಂಗ್ ಕೊಟ್ಟ ಸಿದ್ದರಾಮಯ್ಯ
- Automobiles XUV300: ಮಹೀಂದ್ರಾ ಎಕ್ಸ್ಯುವಿ300 ಕಾರನ್ನು ನಿಮ್ಮ ಮನೆಗೆ ತರಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- Finance ಲೋಕಸಭಾ ಚುನಾವಣೆ 2024: ಟಾಪ್ 10 ಶ್ರೀಮಂತ ಅಭ್ಯರ್ಥಿಗಳು ಇವರು
- Technology OnePlus: ಒನ್ಪ್ಲಸ್ ವಾಚ್ 2 ನಾರ್ಡಿಕ್ ಬ್ಲೂ ಆವೃತ್ತಿ ಲಾಂಚ್! ಬೆಲೆ ಎಷ್ಟು?
- Sports IPL 2024: ಮತ್ತೊಂದು ರೋಚಕ ಪಂದ್ಯದಲ್ಲಿ SRH vs RCB ಕದನ; ಪಂದ್ಯದ ವಿವರ, ಸಂಭಾವ್ಯ ಆಡುವ 11ರ ಬಳಗ
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
Puttakkana Makkalu: ಆಟೋ ಮಾರಿದ ಪುಟ್ಟಕ್ಕ; ಮಕ್ಕಳಿಂದ ಮುಚ್ಚಿಟ್ಟ ಗುಟ್ಟು ರಟ್ಟಾಗಿಬಿಡುತ್ತಾ?
ಮುರಳಿ ಮೇಷ್ಟ್ರ ಮನೆಯವರು ದಿಢೀರ್ ಆಗಿ ಹಣ ಕೇಳುತ್ತಾ ಇರುವುದರಿಂದ ಪುಟ್ಟಕ್ಕನ ತಲೆ ಬಿಸಿ ಹೆಚ್ಚಾಗಿದೆ. ಆ ಹಣವನ್ನು ಹೇಗೆ ಹೊಂದಿಸುವುದು, ಹಾಗೇ ಈ ವಿಚಾರ ಮಕ್ಕಳಿಗೆ ಗೊತ್ತಾದರೆ ಖಂಡಿತ ಈ ಮದುವೆ ನಡೆಯೋದಿಲ್ಲ ಎಂದು ಪುಟ್ಟಕ್ಕ ತಲೆ ಬಿಸಿ ಮಾಡಿಕೊಂಡು ಕುಳಿತುಕೊಂಡಿರುತ್ತಾಳೆ. ಹೇಗಾದರೂ ಮಾಡಿ ದುಡ್ಡು ಕೂಡಿ ಇಡಬೇಕು ಏನು ಮಾಡುವುದು ಎಂದು ತಿಳಿಯುತ್ತಿಲ್ಲ ಎಂದು ಯೋಚನೆ ಮಾಡುತ್ತಾ ಇರುತ್ತಾಳೆ. ಈ ವೇಳೆ ಅಲ್ಲಿಗೆ ಬಂದ ಸ್ನೇಹಾ ಈ ಸಮಯದಲ್ಲಿ ಇಲ್ಲಿ ಏನು ಮಾಡುತ್ತಾ ಇದ್ದೀಯಾ ಎಂದು ಕೇಳಿದಾಗ ದಿಗಿಲುಗೊಂಡ ಪುಟ್ಟಕ್ಕ ಸ್ನೇಹಾ ಬಳಿ ಸುಳ್ಳು ಹೇಳುತ್ತಾರೆ.
ಇದನ್ನು ನೋಡಿದ ಸ್ನೇಹಾ ಏನಾಯಿತು ಹೇಳ ಅಮ್ಮ ಎಂದಾಗ ಪುಟ್ಟಕ್ಕ ಏನು ಇಲ್ಲ ಎಂದರೂ ಬಿಡದ ಸ್ನೇಹಾ ಯಾಕಮ್ಮ ಏನಾಯಿತು, ಮದುವೆಯ ಬಗ್ಗೆ ಟೆನ್ಷನ್ ಮಾಡಿಕೊಂಡಿದ್ದೀಯ, ಹೆದರಬೇಡ ಏನೂ ಆಗುವುದಿಲ್ಲ, ಎಲ್ಲಾ ನಾವು ನೋಡಿಕೊಳ್ಳುತ್ತಾ ಇರುತ್ತೇವೆ ನೀನು ಆರಾಮ ಆಗಿ ಇರು ಎಂದು ಹೇಳಿ ಮನೆಯ ಒಳಗೆ ಕರೆದುಕೊಂಡು ಹೋಗಬೇಕು ಅನ್ನುವಷ್ಟರಲ್ಲಿ ಸ್ನೇಹಾಗೆ ಕರೆ ಬರುತ್ತದೆ. ಚಪ್ಪರ ಹಾಕಿಸಲು ಗೌಡರು ಕರೆ ಮಾಡಿದ್ದಾರೆ ಎಂದು ಮಾತನಾಡಲು ಹೋಗುತ್ತಾಳೆ.
ಕಂಠಿ ಗೆಳೆಯರು ಕಂಠಿ ಬಳಿ ಅಣ್ಣ ಜಸ್ಟ್ ಮಿಸ್ ನಾವು ಈ ರೀತಿ ಕಳ್ಳಾಟ ಮಾಡಿ ಅಮ್ಮನ ಬಳಿಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾ ಇದ್ದೆವು, ನಮ್ಮ ಪುಣ್ಯ ಹಾಗೆ ಆಗಲಿಲ್ಲ ಎಂದು ಹೇಳುತ್ತಾರೆ. ಇದನ್ನು ಕೇಳಿದ ಕಂಠಿ ಮುಂಗುಸಿಗೆ ಸ್ನೇಹಾ ಮನೆ ಮುಂದೆ ಕುಡಿಯದಂತೆ ವಾರ್ನ್ ಮಾಡುತ್ತಾನೆ. ಆದರೆ ನಾಗ ಮತ್ತು ಮುಂಗುಸಿ ಇಬ್ಬರು ಇನ್ನೂ ಜಗಳ ಜೋರಾಗಿ ಆಡುತ್ತಾ ಇರುತ್ತಾರೆ. ಅದನ್ನು ನೋಡಿದ ಕಂಠಿ ಜೋರಾಗಿ ಬೈದು ಇಬ್ಬರ ಜಗಳ ನಿಲ್ಲಿಸಿ ನಾಳೆ ಸ್ನೇಹಾ ಬಳಿ ಎಲ್ಲಾ ಹೇಳಬೇಕು, ಇಲ್ಲವಾದರೆ ಕಷ್ಟ ಎಂದುಕೊಂಡು ಸ್ನೇಹಾಗೆ ಕರೆ ಮಾಡಿದಾಗ ವೈಟಿಂಗ್ ಬರುತ್ತದೆ. ಬೇರೆ ಕರೆ ಬರುತ್ತ ಇರುವುದನ್ನು ನೋಡಿದ ಸ್ನೇಹಾ ಯಾರು ಎಂದು ನೋಡುತ್ತಾಳೆ.
ಸ್ನೇಹಾ ಮಾತು ಕೇಳಿ ಕಂಠಿ ಶಾಕ್
ಶ್ರೀ ಕರೆ ಮಾಡಿರುವುದನ್ನು ನೋಡಿದ ಸ್ನೇಹಾ ಖುಷಿ ಪಡುತ್ತಾಳೆ. ಬಳಿಕ ಅವನಿಗೆ ಪುನಃ ಕರೆ ಮಾಡಿ ದೊರೆ ಕರೆ ಮಾಡಿದ್ದರು ಅದಕ್ಕೆ ಕರೆಯಲ್ಲಿ ಮಾತನಾಡುತ್ತಾ ಇದ್ದೆ, ಏನಾದರು ಸಹಾಯ ಬೇಕಾ ಎಂದೆಲ್ಲ ಕೇಳುತ್ತಿದ್ದರು ಎಂದು ಹೇಳಿದಾಗ ಕಂಠಿಗೆ ಶಾಕ್ ಆಗುತ್ತದೆ. ಬಳಿಕ ನಾಳೆ ಸೀರೆ ಖರೀದಿ ಇದೆ ನೀವು ಬರುತ್ತೀರಾ ಪಟ್ಟಣಕ್ಕೆ ಹೋಗಬೇಕು ಎಂದು ಹೇಳುತ್ತಾಳೆ. ಇದನ್ನು ಕೇಳಿದ ಕಂಠಿ ಹೂ ಎಂದು ಗೊಂದಲದಲ್ಲಿ ಹೇಳುತ್ತಾನೆ. ಕಾಲ್ ಕಟ್ ಆದ ಬಳಿಕ ಯಾರದು ದೊರೆ ತಿಳಿದುಕೊಳ್ಳಬೇಕು ಎಂದು ಯೋಚನೆ ಮಾಡುತ್ತಾ ಇರುತ್ತಾನೆ. ಅತ್ತ ಸ್ನೇಹಾ ಮಾತ್ರ ನಗುತ್ತಾ ಇರುತ್ತಾಳೆ.
ಬಂಗಾರಮ್ಮಗೆ ಕರೆ ಮಾಡಿದ ರಾಜಿ
ಇನ್ನು ರಾಜೀ ಮಂಜಮ್ಮ ಅವರನ್ನು ಕರೆದು ಬಂಗಾರಮ್ಮ ಬಳಿ ಮಾತನಾಡಲು ಹೇಳುತ್ತಾಳೆ. ಇದನ್ನು ಕೇಳಿದ ಮಂಜಮ್ಮಗೆ ಬಹಳ ಭಯ ಆಗುತ್ತದೆ. ಕರೆ ಮಾಡಿದ ಬಳಿಕ ಬಂಗಾರಮ್ಮ ಧ್ವನಿ ಕೇಳಿ ಮಂಜಮ್ಮ ನಡುಗುತ್ತಾಳೆ. ಬಂಗಾರಮ್ಮ ಅವರೇ ನಾನು ಯಾರು ಎನ್ನುವುದು ಬೇಡ ನಿಮ್ಮ ಮಗ, ನೀವು ಊರಿಗೆಲ್ಲ ಉಪದೇಶ ಕೊಡುತ್ತಾ ಇದ್ದಾರಲ್ಲ ಅದಕ್ಕೆ ಕರೆ ಮಾಡಿದೆ ಎಂದಾಗ ಬಂಗಾರಮ್ಮಗೆ ಬಹಳ ಕೋಪ ಬಂದು ಜೋರಾಗಿ ಮಾತನಾಡುತ್ತಾಳೆ.
ಭಯದಿಂದ ನಡುಗಿದ ಮಂಜಮ್ಮ
ಇದನ್ನು ಕೇಳಿದ ಮಂಜಮ್ಮ ಭಯದಲ್ಲಿ ನಿಮ್ಮ ಮಗ ಕಂಠಿ ಎಲ್ಲೆಲ್ಲೂ ಓಡಾಡುತ್ತಾ ಇದ್ದಾನೆ ಏನೇನು ಮಾಡುತ್ತಾ ಇದ್ದಾನೆ ಅಂತ ಗೊತ್ತಿದೆಯಾ ನಿಮಗೆ ಎಂದಾಗ ಕೋಪಗೊಂಡ ಬಂಗಾರಮ್ಮ ಯಾರೇ ನೀನು, ನೀನು ನಂಜಮ್ಮನ ಕಡೆಯವಳ ಅಂದಾಗ ಮಂಜಮ್ ನಿಮ್ಮ ಮಗನ ಮೇಲೆ ಕಣ್ಣಿಡಿ ಅವನು ಯಾವುದೋ ಹುಡುಗಿ ಜೊತೆ ಸುತ್ತಾಡುತ್ತಾ ಇದ್ದಾನೆ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಬಂಗಾರಮ್ಮ ಬಹಳ ಕೋಪಗೊಳ್ಳುತ್ತಾಳೆ. ಬಳಿಕ ಮಂಜಮ್ಮ ಕರೆ ಕಟ್ ಮಾಡಿ ರಾಜಿ ಬಳಿ ಇನ್ನೆಂದೂ ಬಂಗಾರಮ್ಮ ಬಳಿ ಮಾತನಾಡುವುದಿಲ್ಲ ಎಂದು ಹೇಳಿ ಅಲ್ಲಿಂದ ಓಡುತ್ತಾಳೆ.
ಪುಟ್ಟಕ್ಕನ ಮನದಲ್ಲಿ ದುಗುಡ
ಪುಟ್ಟಕ್ಕ ರಿಕ್ಷಾ ಹಿಡಿದುಕೊಂಡು ಒಬ್ಬಾತನ ಮನೆಗೆ ಬಂದು ನೀನು ಆಟೋ ಕೇಳಿದ್ದೆ ಅಲ್ವಾ ಇದೀಗ ನನಗೆ ದುಡ್ಡಿನ ಅವಶ್ಯಕತೆ ಇದೆ, ಅದಕ್ಕೆ ಆಟೋ ಮಾರಿ ಬಿಡೋಣ ಎಂದುಕೊಂಡು ಇದ್ದೇನೆ ಎಂದಾಗ ಆತ ಅಯ್ಯೋ ಆಟೋ ಮಾರುತ್ತ ಇದ್ದೀಯಾ ನಾವು ಸುಮ್ಮನೆ ತಮಾಷೆಗೆ ಹೇಳಿದ್ದು ಎಂದಾಗ ಪುಟ್ಟಕ್ಕ ನಾನು ಈ ಆಟೋ ಮಾರುತ್ತಾ ಇದ್ದೇನೆ ನೀನು ಎಷ್ಟು ಕೊಡುತ್ತಿಯಾ ಅಷ್ಟೇ ಕೊಡು ಎನ್ನುತ್ತಾಳೆ. ಆತ ಹಣ ಕೊಡುತ್ತಾನೆ ಆದರೆ ಆ ಆಟೋ ನೋಡಿ ಪುಟ್ಟಕ್ಕ ಕಣ್ಣೀರು ಇಡುತ್ತಾಳೆ. ಅತ್ತ ಮುರಳಿ ಮೇಷ್ಟ್ರು ಅಕ್ಕನ ಮೇಲೆ ಕೋಪ ಮಾಡಿಕೊಂಡು ತನ್ನ ಅಕ್ಕನಿಂದ ಇಷ್ಟೆಲ್ಲ ಆಯಿತು ಎಂದೆಲ್ಲ ಹೇಳುತ್ತಾನೆ. ಅಕ್ಕ ಬಂದಾಗ ಆಕೆಯನ್ನು ತರಾಟೆಗೆ ತೆಗೆದುಕೊಳ್ಳುತ್ತಾನೆ. ಮುಂದೇನು ಕಾದು ನೋಡಬೇಕಿದೆ.