Puttakkana Makkalu: ಕಂಠಿ ಬಳಿ ಮಾತನಾಡದ ಸ್ನೇಹಾ; ಸ್ನೇಹಾಳನ್ನು ಪಡೆಯಲು ಕಂಠಿ ಪ್ರಯತ್ನ ಫಲಿಸುತ್ತಾ?
ಪುಟ್ಟಕ್ಕನ ಮಕ್ಕಳು ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದೆ. ಇದೀಗ ಮದುವೆ ಮುರಿದು ಬೀಳುವುದಕ್ಕೆ ಕಾರಣ ಕಂಠಿ ಎಂದು ಎಲ್ಲರ ಮನದಲ್ಲೂ ಬಂದಿದೆ. ಆದರೆ ಸ್ನೇಹಾ ತನ್ನ ಮೇಲೆ ಜೀವನೆ ಇಟ್ಟುಕೊಂಡಿರುವುದು ಕಂಠಿಗೆ ತಿಳಿದು ಹೋಗಿದೆ. ಆದರೂ ಕೂಡ ಸ್ನೇಹಾ ಕಂಠಿ ಎದುರು ಕಂಠಿ ಇಷ್ಟೇನೆ ಇರದ ಹಾಗೆ ನಟನೆ ಮಾಡುತ್ತಾ ಇರುತ್ತಾಳೆ.
ಇನ್ನು ಪುಟ್ಟಕ್ಕ ಮನೆಯಲ್ಲಿ ಜೋರಾಗಿ ಅಳುತ್ತಾ ಇರುತ್ತಾಳೆ. ಆದರೆ ನಂಜಮ್ಮ ಮಾತ್ರ ಈ ಮದುವೆ ನಡೆಯದೆ ಇದ್ದಿದ್ದು ಒಳ್ಳೆಯದು ಆಯಿತು ಎಂದು ಹೇಳುತ್ತ ಇರುತ್ತಾರೆ. ಆಗ ಪುಟ್ಟಕ್ಕನಿಗೆ ಬಹಳ ಕೋಪ ಬರುತ್ತಿತ್ತು. ಆದರೆ ನಂಜಮ್ಮನ ಬಳಿ ಹೆಚ್ಚಿಗೆ ಮಾತನಾಡದ ಹಾಗೆ ರಿಕ್ವೆಸ್ಟ್ ಮಾಡಿಕೊಂಡಿರುತ್ತಾಳೆ.

ಇನ್ನು ಸ್ನೇಹಾ ಬಹಳ ಬೇಸರ ಮಾಡಿಕೊಂಡಿರುತ್ತಾಳೆ. ತನ್ನ ಅವ್ವ ಬಹಳ ನೋವಿನಲ್ಲಿ ಇರುವುದನ್ನು ಕಂಡ ಸ್ನೇಹಾ ಸಮಾಧಾನ ಮಾಡುತ್ತಾ ಇರುತ್ತಾಳೆ. ಇನ್ನು ಸುಮಾ ಕೂಡ ಮದುವೆ ನಿಂತಿರುವುದು ನಮಗೆ ಬಹಳ ಖುಷಿ ನೀಡಿದೆ ಅನ್ನುವ ಹಾಗೆ ಮಾತನಾಡುತ್ತಾ ಇರುತ್ತಾಳೆ.
ಆದರೆ ಅದಕ್ಕೆ ಅಡ್ಡ ಬಾಯಿ ಹಾಕಿದ ಮುರಳಿ ಬಾಯಿ ಮುಚ್ಚಿಸುತ್ತಾಳೆ ಸುಮಾ. ನಂಜವ್ವ ಕೂಡ ಪುಟ್ಟಕ್ಕಗೆ ಸಮಾಧಾನ ಮಾಡುತ್ತಾ ಇರುತ್ತಾಳೆ. ಇನ್ನು ಬಂಗಾರಮ್ಮ ಕೂಡ ರಾಧಾ ಇನ್ನೂ ಸಿಕ್ಕಿಲ್ಲ ಎಂದು ಚಡಪಡಿಸುತ್ತಾ ಇರುತ್ತಾರೆ. ಆ ಬಳಿಕ ಕಂಠಿಗೆ ಕರೆ ಮಾಡುತ್ತಾರೆ ಕಂಠಿಗೆ ರಾಧಾ ಹಾಗೂ ಕಾಳಿ ಎಲ್ಲಿದ್ದಾರೆ ಎಂದು ತಿಳಿದಿದೆ. ಆದರೆ ಅಮ್ಮನ ಬಳಿ ಹೇಳುವ ಹಾಗೆಯೇ ಇಲ್ಲ. ಕಂಠಿ ತಾಯಿಯ ಬಳಿ ಸುಳ್ಳು ಹೇಳುತ್ತಾನೆ . ಕಂಠಿಗೆ ಸ್ನೇಹಾ ತನ್ನನ್ನು ಪ್ರೀತಿ ಮಾಡುತ್ತಾ ಇದ್ದಾಳೆ ಎನ್ನುವ ವಿಚಾರ ತಿಳಿದದ್ದನ್ನು ಸಿದ್ದೇಶ್ ಬಳಿ ಹೇಳುತ್ತಾನೆ.
ಸಿದ್ದೇಶ್ ಬಳಿ ರಾಧಾ ಹಾಗೂ ಕಾಳಿಯನ್ನು ಕಿಡ್ನಾಪ್ ಮಾಡಲು ಹೇಳಿದ್ದು ತನ್ನ ತಂದೆ ಎಂದು ತಿಳಿದು ಹೋಗಿದೆ. ಕಂಠಿ ಈ ವಿಚಾರ ತಿಳಿದಿದ್ದು ನೋಡಿ ಸಿದ್ದೇಶ್ಗೆ ಶಾಕ್ ಆಗುತ್ತದೆ. ಇದಕ್ಕೂ ಮುಂಚೆ ಕಂಠಿ ಬಳಿ ಬಂದ ತಂದೆ ಹೇಳುತ್ತಾರೆ
ಈ ಮದುವೆ ಆದರೆ ನೀನು ಖಂಡಿತ ಚೆನ್ನಾಗಿರುವುದಿಲ್ಲ, ಅದಕ್ಕೇ ನೀನು ಮದುವೆ ಆಗಬೇಡ ಎಂದೆಲ್ಲ ಹೇಳಿ ಅಲ್ಲಿಂದ ಹೋಗಿರುವ ವಿಚಾರವನ್ನು ಕಂಠಿ ಸಿದ್ದೇಶ್ ಬಳಿ ಹೇಳುತ್ತಾನೆ. ಇನ್ನು ಕಂಠಿ ಮಾತಿಗೆ ಉತ್ತರ ಸಿದ್ದೇಶ್ಗೆ ಹಾಗೂ ಆತನ ಗೆಳೆಯನಿಗೆ ಕೂಡ ಶಾಕ್ ಆಗುತ್ತದೆ. ಇತ್ತ ರಾಜೇಶ್ವರಿ ತನ್ನ ತಮ್ಮ ಕಾಣುತ್ತಿಲ್ಲ ಎಂದು ಪೊಲೀಸ್ ಬಳಿಯೇ ಹೇಳುತ್ತ ಇರುವಾಗ ಗೋಪಾಲ ರಾಜಿಯನ್ನು ತೆಪ್ಪಗೆ ಇರುವಂತೆ ಹೇಳುತ್ತಾನೆ. ಇನ್ನು ಭುವನ್ ಕಂಠಿಯನ್ನು ಭೇಟಿ ಮಾಡಿ ಸ್ನೇಹಾ ತನ್ನನ್ನು ಪ್ರೀತಿ ಮಾಡುತ್ತಿಲ್ಲ, ನಿಮ್ಮನ್ನು ಪ್ರೀತಿ ಮಾಡುತ್ತಾ ಇದ್ದಾಳೆ ಆಕೆಯನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಹೇಳುತ್ತಾನೆ. ಇದನ್ನು ಕೇಳಿದ ಕಂಠಿಗೆ ಬಹಳ ಖುಷಿ ಆಗುತ್ತದೆ. ಮುಂದೇನು ಕಾದು ನೋಡಬೇಕಿದೆ


Click it and Unblock the Notifications











