Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಖಿ ಕಂಡು ಮೆಸ್ ನಿಂದ ಕಾಲ್ಕಿತ್ತ ಕಂಠಿ, ಮೇಷ್ಟ್ರು!
'ಪುಟ್ಟಕ್ಕನ ಮಕ್ಕಳು' ಧಾರವಾಹಿ ನೋಡುಗರ ಮನ ಸೆಳೆಯುತ್ತಿದೆ. ಇದೀಗ ಪುಟ್ಟಕ್ಕನ ಮನೆಯಲ್ಲಿ ರಾಖಿ ಹಬ್ಬದ ಖುಷಿ ರಂಗೆದ್ದಿದೆ. ಪುಟ್ಟಕ್ಕನ ಮೆಸ್ ಗೆ ಪುರುಷೋತ್ತಮ ಬಂದಿದ್ದಾನೆ. ಪುಟ್ಟಕ್ಕನ ಮೂವರು ಹೆಣ್ಣು ಮಕ್ಕಳಿಗೆ ಅಂದರೆ ಪುರುಷೋತ್ತಮನ ಮೂವರು ಅಕ್ಕ ತಂಗಿಯರಿಗೆ ರಾಖಿಯನ್ನು ಕಟ್ಟಿಸಿಕೊಳ್ಳಲು ಆಗಮಿಸಿದ್ದಾನೆ. ಇದನ್ನು ನೋಡಿದ ಪುಟ್ಟಕ್ಕನಿಗೆ ಬಹಳ ಖುಷಿ ಆಗುತ್ತದೆ.
ಸಹನಾ, ಸ್ನೇಹಾ, ಸುಮಾ ಮೂವರು ಪುರುಷೋತ್ತಮನನ್ನು ಕುಳ್ಳಿರಿಸಿ ಆರತಿಯನ್ನು ಎತ್ತಿ ಹಣೆಗೆ ಕುಂಕುಮ ಹಚ್ಚಿ ರಾಖಿಯನ್ನು ಕಟ್ಟುತ್ತಾನೆ. ರಾಖಿ ಕಟ್ಟಿಸಿ ಕೊಂಡ ಪುರುಷಿ ಹೇಳುತ್ತಾನೆ ರಾಖಿ ಕಟ್ಟಿ ಆದ ಮೇಲೆ ಏನಾದರು ಕೊಡಬೇಕಂತೆ ಎಂದು ಹೇಳಿ ಮೂವರಿಗೂ 500 ರೂ. ಕೊಡುತ್ತಾನೆ ಇದನ್ನು ನೋಡಿದ ಸುಮಾ ಹೇಳುತ್ತಾಳೆ ಏನೋ ಶ್ರೀಮಂತ ಆಗಿಬಿಟ್ಟಿದ್ದಿಯಾ ಎಂದಾಗ ಪುರುಷೋತ್ತಮ ಸುಮ್ಮನಾಗುತ್ತಾನೆ.
ಪುಟ್ಟಕ್ಕನ ಹೋಟೆಲ್ನಲ್ಲಿ ಹಣ ಕಳವು: ಕಳ್ಳಾಟ ಬೆಳಕಿಗೆ ಬರುತ್ತಾ?
ಬಳಿಕ ಪುಟ್ಟಕ್ಕನ ಮೆಸ್ ನಲ್ಲಿ ಕೆಲಸ ಮಾಡುವ ಮಂಜುಳಾ ಕದ್ದು ಯಾರಾದರೂ ಬರುತ್ತಾರಾ ಎಂದು ನೋಡುತ್ತಾ ರಾಜೇಶ್ವರಿಗೆ ಕರೆ ಮಾಡುತ್ತಾಳೆ. ರಾಜೇಶ್ವರಿ, ಮಂಜುಳಾ ಕರೆ ಮಾಡಿದ್ದನ್ನು ನೋಡಿ ಏನೋ ವಿಚಾರ ಇರಬೇಕು ಎಂದು ಫೋನ್ ರಿಸೀವ್ ಮಾಡುತ್ತಾಳೆ. ಆ ವೇಳೆ ಮಂಜಮ್ಮ ಪುರುಷೋತ್ತಮ ಮೆಸ್ ಗೆ ಬಂದು ರಾಖಿ ಕಟ್ಟಿಸಿಕೊಂಡ ವಿಚಾರವನ್ನು ಆಕೆಯ ಬಳಿ ಹೇಳಿದಾಗ ಕೆಂಡಾಮಂಡಲ ಆಗುತ್ತಾಳೆ ರಾಜೇಶ್ವರಿ. ಬಳಿಕ ಕಾಲ್ ಕಟ್ ಮಾಡಿ ನೇರ ಪುಟ್ಟಕ್ಕನ ಮೆಸ್ ನತ್ತ ತೆರಳುತ್ತಾಳೆ.
ಮೌನ ವೃತವೆಂದು ಹೇಳಿ ಕಾಗೆ ಹಾರಿಸಿದ ಕಂಠಿ ಫ್ರೆಂಡು
ಇತ್ತ ಕಂಠಿ ಹಾಗೂ ಮುರಳಿ ಮೇಷ್ಟ್ರು ಇಲ್ಲಿಂದ ಹೇಗಾದರೂ ಹೋಗಬೇಕಲ್ಲ ಇಲ್ಲವಾದರೆ ರಾಖಿ ನಮಗೂ ಕಟ್ಟಿ ಬೀಡುತ್ತಾರಲ್ಲ ಎಂದು ಯೋಚನೆ ಮಾಡುತ್ತಿರುತ್ತಾರೆ. ಈ ವೇಳೆ ಕಂಠಿಯನ್ನು ಗಮನಿಸಿದ ಸ್ನೇಹಾ ಏನಾಯ್ತು ಶ್ರೀ ಎಂದು ಕೇಳುತ್ತಾಳೆ ಅದಕ್ಕೆ ಕಂಠಿ ಸುಮ್ಮನಿರುತ್ತಾರೆ. ಆತನ ಗೆಳೆಯ ಹೇಳುತ್ತಾನೆ ಇವತ್ತು ನನ್ನ ಗೆಳೆಯ ಮೌನ ವೃತ ಮಾಡುತ್ತಿದ್ದಾನೆ ಎಂದು ಹೇಳಿದಾಗ ಪುಟ್ಟಕ್ಕ ಮಾತ್ರ ಬಹಳ ಖುಷಿ ಪಟ್ಟಳು.
ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ಹೊರ ನಡೆದ ರಾಜಿ
ಈಗಿನ ಕಾಲದ ಹುಡುಗರು ಈ ರೀತಿ ಎಲ್ಲ ಮಾಡುವುದಿಲ್ಲ. ಬಹಳ ಅಪರೂಪದ ಸಂಗತಿ ಇದೆಲ್ಲ ಎಂದು ಕಂಠಿಯನ್ನು ಹೊಗಳುತ್ತಾರೆ. ಇದನ್ನು ಕೇಳಿಸಿಕೊಂಡ ಸ್ನೇಹಾ ಮಾತ್ರ ಕಂಠಿ ಗೆ ಮಾರು ಹೋಗದೆ ಇರಲ್ಲ. ಇದನ್ನೇ ಕಾಯುತ್ತಿದ್ದ ಮಂಜಮ್ಮ ಯೋಚನೆ ಮಾಡುತ್ತಾಳೆ ಇದೆ ಸರಿಯಾದ ಸಮಯ ಇವರಿಗೆ ಪ್ರೀತಿ ಇದಿಯೋ ಇಲ್ಲವೋ ಎಂದು ತಿಳಿದುಕೊಳ್ಳಲು ಎಂದು ಮನದಲ್ಲಿ ನೆನೆಯುತ್ತಾ ಬಳಿಕ ಜೋರಾಗಿ ಹೇಳುತ್ತಾಳೆ, ''ಸ್ನೇಹಾ ನೀನು ಶ್ರೀ ಗೆ ರಾಖಿ ಕಟ್ಟು, ಸಹನಾ ಮುರಳಿ ಮೇಷ್ಟ್ರಿಗೆ ರಾಖಿ ಕಟ್ಟಲಿ ಎಂದು ಹೇಳುತ್ತಾಳೆ. ಇದರಿಂದ ಶಾಕ್ ಆದ ಮುರಳಿ ಮೇಷ್ಟ್ರು ಹಾಗೂ ಕಂಠಿಗೆ ಏನು ಮಾಡುವುದು ಎಂದು ತಿಳಿಯದೇ ಪರದಾಡುತ್ತಾರೆ.
ಇನ್ನಾದರೂ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುತ್ತಾಳ ಸ್ನೇಹಾ
ಈ ವೇಳೆ ಸರಿಯಾದ ಸಮಯಕ್ಕೆ ರಾಜೇಶ್ವರಿ, ಪುಟ್ಟಕ್ಕನ ಮೆಸ್ ಬಳಿ ಬರುತ್ತಾಳೆ. ಕೋಪದಿಂದ ಕಿಡಿಕಾರುತ್ತಾ ಪುಟ್ಟಕ್ಕನ ಮೆಸ್ ಬಳಿ ಬರುತ್ತಾಳೆ. ಅಮ್ಮನನ್ನು ನೋಡಿದ ಪುರುಷೋತ್ತಮ ಹೇಳುತ್ತಾನೆ ನಾನು ಹೇಳಿದ್ದೇನೆ ಅಲ್ಲ ಸುಮಾ ಅಮ್ಮನ ಬಳಿ ಈ ಮೆಸ್ ನಲ್ಲಿ ಯಾರೋ ಹಾಕಿ ಕೊಡುತ್ತಿದ್ದಾರೆ ಎಂದು ಹೇಳುತ್ತಾನೆ ಬಳಿಕ ಪುಟ್ಟಕ್ಕನ ಮೆಸ್ನ ಒಳಗೆ ಅಡಗಿ ಕೊಳ್ಳುತ್ತಾನೆ. ಇನ್ನೂ ಮೆಸ್ ಒಳಗೆ ಬಂದ ರಾಜೇಶ್ವರಿ ನನ್ನ ಮಗ ಇಲ್ಲಿಗೆ ಬಂದಿದ್ನಾ ಎಂದು ಕೇಳುತ್ತಾಳೆ. ನಿಮ್ಮ ಮಗ ಇಲ್ಲಿಗೆ ಯಾಕೆ ಬರುತ್ತಾನೆ ಎಂದು ಎಷ್ಟೇ ಹೇಳಿದರೂ ರಾಜೇಶ್ವರಿ ಮಾತ್ರ ಯಾರ ಮಾತು ಕೇಳದೆ ಪುಟ್ಟಕ್ಕನ ಮೆಸ್ ಒಳಗೆ ಹೋಗುತ್ತಾಳೆ ಆಕೆಯನ್ನು ಸುಮಾ ತಡೆಯುತ್ತಾಳೆ. ಬಳಿಕ ಅಲ್ಲಿಂದ ತೆರಳುತ್ತಾಳೆ ರಾಜೇಶ್ವರಿ. ಈ ಎಲ್ಲಾ ಹೈ ಡ್ರಾಮಾದ ನಡುವೆ ಕಂಠಿ ಹಾಗೂ ಮುರಳಿ ಮೇಷ್ಟ್ರು ಅಲ್ಲಿಂದ ಮೆತ್ತಗೆ ತೆರಳುತ್ತಾರೆ. ಬಳಿಕ ಅಡಗಿ ಕುಳಿತಿದ್ದ ಪುರುಷೋತ್ತಮ ಬಂದು ಹೇಳುತ್ತಾನೆ ನಿಮ್ಮ ಮೆಸ್ ನಲ್ಲಿ ಯಾರೋ ನಮ್ಮ ಅಮ್ಮಾಗೆ ಎಲ್ಲಾ ರೀತಿಯ ಮಾಹಿತಿ ತಿಳಿಯುತ್ತಿದೆ. ನಿಮ್ಮಲ್ಲಿ ಯಾರೋ ಒಬ್ಬರು ಮಾಹಿತಿ ನೀಡುತ್ತಿದ್ದಾರೆ ಎಂದೆಲ್ಲ ಹೇಳಿ ಅಲ್ಲಿಂದ ತೆರಳುತ್ತಾನೆ. ಆತ ಹೋದ ಬಳಿಕ ಕಂಠಿ ಹಾಗೂ ಮುರಳಿ ಮೇಷ್ಟ್ರು ಕಾಣದ್ದನ್ನು ನೋಡಿ ಎಲ್ಲಿ ಹೋದರು ಎಂದು ಗೊತ್ತಾಗದೆ ಸುಮ್ಮನಾಗುತ್ತಾರೆ.
ಸ್ನೇಹಾ ಗೆ ರಾಖಿ ಕಟ್ಟಿದ ಅಕ್ಕ- ತಂಗಿ
ಬಳಿಕ ಸುಮಾ, ಸಹನಾ, ಸ್ನೇಹಾಗೆ ರಾಖಿ ಕಟ್ಟುತ್ತಾರೆ. ಕಾಳಿ ಹಾಗೂ ಆತನ ಗೆಳೆಯ ಮಾತನಾಡುವುದನ್ನು ಕೇಳಿಸಿಕೊಂಡ ರಾಜೇಶ್ವರಿ ಕೋಪದಿಂದ ಗುಡುಗುತ್ತಾಳೆ. ಹೇಯ್ ಕಾಳಿ ಎಂದು ಜೋರಾಗಿ ಹೇಳಿದಾಗ ಕಾಳಿಗೆ ಭಯವಾಗುತ್ತದೆ. ಬಳಿಕ ಪುಟ್ಟಕ್ಕನ ಕಾಲಿಗೆ ಬಿದ್ದ ವಿಚಾರವನ್ನು ತಿಳಿದುಕೊಂಡ ರಾಜೇಶ್ವರಿ ಗೆ ಇನ್ನಷ್ಟು ಕೋಪ ಬರುತ್ತದೆ. ಇತ್ತ ಮಗ ಮನೆಗೆ ಬಂದು ಅಮ್ಮನ ಬಳಿ ಇಲ್ಲ ಸಲ್ಲದ ಸುಳ್ಳುಗಳನ್ನು ಹೇಳಿ ಅಮ್ಮನ ಮನವನ್ನು ಒಲಿಸಿಕೊಳ್ಳುತ್ತಾನೆ. ಇದನ್ನು ನೋಡಿದ ರಾಜೇಶ್ವರಿ ಗಂಡನಿಗೆ ನಗು ಉಮ್ಮಳಿಸಿ ಬರುತ್ತದೆ. ಮುಂದೇನಾಗುತ್ತದೆ ಎಂಬುವುದನ್ನು ಕಾದು ನೋಡಬೇಕಿದೆ.