ಗೂಂಡಾಗಳನ್ನು ನೋಡಿ ಭಯ ಪಟ್ಟ ರಿತು; ರಾಕೇಶ್ ಪರೀಕ್ಷೆಗೆ ಹೋಗದಂತೆ ತಡೆದವರು ಯಾರು?
ಸತ್ಯ ಹಾಗೂ ಕಾರ್ತಿಕ್ ಅವಾರ್ಡ್ ಕಾರ್ಯಕ್ರಮಕ್ಕೆ ಬರದಂತೆ ತಡೆಯುವುದೇ ಕೀರ್ತನ ಹಾಗೂ ಆಕೆಯ ಗಂಡನ ಪ್ಲಾನ್. ಅದಕ್ಕಾಗಿ ಏನು ಬೇಕಾದರೂ ಮಾಡಲು ಕೀರ್ತನ ರೆಡಿ ಆಗಿರುತ್ತಾಳೆ. ಕೀರ್ತನ ಅವಾರ್ಡ್ ಅನ್ನೂ ನಾನೇ ತೆಗೆದುಕೊಳ್ಳಬೇಕು ಎನ್ನುವ ದೃಷ್ಟಿಯಲ್ಲಿ ಸತ್ಯ ಹಾಗೂ ಕಾರ್ತಿಕ್ ಅವಾರ್ಡ್ ಕಾರ್ಯಕ್ರಮಕ್ಕೆ ಆಗಮಿಸದ ಹಾಗೆ ಮಾಸ್ಟರ್ ಪ್ಲಾನ್ ಮಾಡಿದ್ದರು. ಆದರೆ ಅದೆಲ್ಲವನ್ನೂ ಮೆಟ್ಟಿ ನಿಂತು ಅವಾರ್ಡ್ ಕಾರ್ಯಕ್ರಮಕ್ಕೆ ಹೋಗುತ್ತಾರೆ.
ಇನ್ನು ಕೀರ್ತನ ಅವಾರ್ಡ್ ಕಾರ್ಯಕ್ರಮಕ್ಕೆ ಹೋದಾಗ ಆಕೆಯ ಗಂಡ ಕೀರ್ತನಾಳನ್ನು ಭರ್ಜರಿ ಆಗಿ ವೆಲ್ ಕಮ್ ಮಾಡಿದ್ದನು. ಸುಹಾಸ್ ಹೇಳೋ ಮಾತುಗಳನ್ನು ಕೇಳಿದ ಕೀರ್ತನ ಸುಹಾಸ್ ನೀನು ನಾನು ಹೇಳಿದ ಹಾಗೆ ಮಾಡಿದ್ದೀಯಾ ಅಲ್ವಾ ಇದನ್ನು ನಾನು ನಂಬಬಹುದು ಅಲ್ವಾ ಎಂದು ಪದೇ ಪದೇ ಕೇಳುತ್ತಾ ಇರುತ್ತಾಳೆ.

ಸುಹಾಸ್ ನಿಜವಾಗಲೂ ನೀನು ಹೇಳಿದ ಹಾಗೆ ಮಾಡಿದ್ದೇನೆ ಎಂದು ಹೇಳುತ್ತಾನೆ. ಹೀಗೆ ಖುಷಿಯಲ್ಲಿ ಮಾತನಾಡುತ್ತಾ ಸುಹಾಸ್ ಕೀರ್ತನ ಹಿಂದೆ ನೋಡಿದಾಗ ಸತ್ಯ ಹಾಗೂ ಕಾರ್ತಿಕ್ ಅವಾರ್ಡ್ ಕಾರ್ಯಕ್ರಮಕ್ಕೆ ಹೋಗುತ್ತಾ ಇರುತ್ತಾರೆ. ಇದನ್ನು ನೋಡಿದ ಕೀರ್ತನ ಬಹಳ ಆಶ್ಚರ್ಯದಿಂದ ನೋಡುತ್ತಾ ಇರುತ್ತಾಳೆ. ಹಾಗೆಯೇ ಬಹಳ ಶಾಕ್ ಆಗುತ್ತಾರೆ. ಸತ್ಯ ಹಾಗೂ ಕಾರ್ತಿಕ್ ಇನ್ನು ಭರ್ಜರಿ ವೆಲ್ ಕಂ ಮಾಡುತ್ತಾರೆ
ಇದನ್ನು ನೋಡಿದ ಸತ್ಯಗೆ ಆಶ್ಚರ್ಯ ಆಗುತ್ತದೆ. ಆ ಬಳಿಕ ಕಾರ್ತಿಕ್ ಸತ್ಯ ಕೈ ಹಿಡಿದು ನಡೆದುಕೊಂಡು ಬರುತ್ತಾನೆ. ಸತ್ಯ ಟೆನ್ಶನ್ ಮಾಡಿಕೊಂಡಿರುವುದನ್ನು ನೋಡಿದ ಕಾರ್ತಿಕ್ ಸತ್ಯಾಳ ಬಳಿ ಯಾಕೆ ಇಷ್ಟು ಟೆನ್ಶನ್ ಆಗಿದ್ದೀಯಾ ಎಂದಾಗ ಸತ್ಯ ನನಗೆ ಬಹಳ ಭಯ ಆಗುತ್ತಿದೆ ಎಂದು ಹೇಳುತ್ತಾಳೆ.

ಇದನ್ನು ಕೇಳಿದ ಕಾರ್ತಿಕ್ ಭಯ ಪಡಬೇಡ ಎಂದು ಬುದ್ದಿ ಮಾತು ಹೇಳಿ ಸಮಾಧಾನ ಮಾಡುತ್ತಾನೆ. ಇನ್ನು ದಿವ್ಯ ಮಾತ್ರ ತನಗೆ ಮಗು ಬೇಕು ಎಂದೆಲ್ಲ ಹೇಳಿದ್ದು ನಾಟಕ ಎಂಬುವುದು ಚೆನ್ನಾಗಿ ತಿಳಿದಿದೆ. ನಾಟಕ ಆಡಿ ಹೇಗಾದರೂ ಮಾಡಿ ದಿವ್ಯ ಮನಸನ್ನು ಗೆಲ್ಲಬೇಕು ಆಕೆಯ ಜೊತೆ ಸೇರಬೇಕು ಎಂದೆಲ್ಲ ಕನಸು ಕಾಣುತ್ತಾ ಇರುವಾಗ ಅದಕ್ಕೆ ತುಪ್ಪ ಸುರಿಯುತ್ತಾಳೆ ದಿವ್ಯ.
ಮಗು ಬೇಕು ಎಂದೆಲ್ಲ ಹೇಳುವಾಗ ದಿವ್ಯ ಕೂಡ ಮೊದಮೊದಲಿಗೆ ಹು ಎಂದು ಹೇಳಿದರೂ ಆ ಬಳಿಕ ದಿವ್ಯ ಮಾಡುತ್ತಾ ಇರುವುದು ನಾಟಕ ಎಂದು ತಿಳಿಯುತ್ತದೆ. ಇದನ್ನು ನೋಡಿದ ದಿವ್ಯ ಮಾತ್ರ ತುಂಬಾ ಬೇಸರ ಪಟ್ಟುಕೊಂಡಿರುತ್ತಾಳೆ. ನನಗೆ ಮಗು ಬೇಕು ಎಂದೆಲ್ಲ ಬಾಲನ ಮನವೊಲಿಸಲು ಯತ್ನಿಸುತ್ತಾಳೆ.
ಮರುದಿನ ಬಾಲ ಎದ್ದಾಗ ತುಂಬಾ ತಲೆ ನೋವು ಆಗುತ್ತಿದೆ ಅಲ್ವಾ ಎಂದೆಲ್ಲ ಹೇಳುತ್ತ ಇರುತ್ತಾನೆ. ಇನ್ನು ದಿವ್ಯಾಳನ್ನು ನೋಡಿ ನಮ್ಮ ಮದುವೆ ಯಾವತ್ತೋ ನಡೆದು ಹೋಗಿದೆ ಆದರೆ ಫಸ್ಟ್ ನೈಟ್ ಮಾತ್ರ ಈಗ ನಡೆದು ಹೋಯಿತು ಪರವಾಗಿಲ್ಲ ಕೊಂಚ ಲೇಟ್ ಆದರೂ ಎಂದು ಯೋಚನೆ ಮಾಡುತ್ತಾ ಇರುತ್ತಾರೆ. ಆ ಬಳಿಕ ಬಾಲ ದಿವ್ಯನಿಗೆ ಒಂದು ಮುತ್ತ್ತುಕೊಡಲು ಬರುತ್ತಾನೆ. ಇದನ್ನು ನೋಡಿದ ದಿವ್ಯ ಏನಿದು ನಿನ್ನ ಶರ್ಟ್ ಎಲ್ಲಿ, ನಿನ್ನೆ ನಮ್ಮಿಬ್ಬರ ಪ್ರಸ್ತ ನಡೆಯಿತು ದಿವ್ಯ ಎಂದಾಗ ದಿವ್ಯಗೆ ಶಾಕ್ ಆಗುತ್ತದೆ. ಆಕೆಗೆ ತಿಳಿದಿದೆ ನಮ್ಮ ಮಧ್ಯೆ ಎನು ನಡೆದಿಲ್ಲ ಎಂಬುವುದು ಆದರೂ ಪ್ರಸ್ತ ಎಂದು ಹೇಳುತ್ತ ಇದ್ದಾನಲ್ಲ ಎಂದು ಯೋಚನೆ ಮಾಡುತ್ತಾ ಇರುತ್ತಾಳೆ. ಬಳಿಕ ದಿವ್ಯ ಮುನಿಸಿಕೊಂಡು ಹೊರಗೆ ಹೋಗುತ್ತಾಳೆ.
ದಿವ್ಯ ನಾನು ತಮಾಷೆ ಮಾಡಿದೆ ಬೇಸರ ಮಾಡಿಕೊಳ್ಳಬೇಡಿ ಎಂದೆಲ್ಲ ಹೇಳುತ್ತಾಳೆ. ಇನ್ನು ರಾಕೇಶ್ ಗೆ ಪರೀಕ್ಷೆ ಇರುತ್ತದೆ. ಅದಕ್ಕಾಗಿ ರಿತು ಹಾಗೂ ರಾಕೇಶ್ ಗೆಳೆಯರು ಮೊದಲು ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸುತ್ತಾರೆ. ಇನ್ನು ರಾಕೇಶ್ ಪರೀಕ್ಷೆಗೆ ಹೋಗದಂತೆ ತಡೆದವರು ಯಾರು ಎಂಬುವುದನ್ನು ಕಾದು ನೋಡಬೇಕಿದೆ.


Click it and Unblock the Notifications











