Sathya: ಸೀತಾ ಬೆನ್ನು ಬಿಡದ ಸತ್ಯ ಕಾರ್ತಿಕ್ ಮಾತಿಗೆ ಸೊಪ್ಪು ಹಾಕ್ತಿಲ್ಲ
ಸತ್ಯ ಧಾರಾವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರ ಮನ ಸೆಳೆಯುತ್ತಿದೆ. ಇದೀಗ ಅತ್ತೆಯ ಮನ ಗೆಲ್ಲಲು ಸತ್ಯ ನಾನಾ ರೀತಿಯ ಕಸರತ್ತು ಮಾಡುತ್ತಾ ಇರುತ್ತಾಳೆ. ಆದರೆ ಈ ಬಗ್ಗೆ ಸೀತಾಗೆ ಮಾತ್ರ ಬಹಳ ಕಿರಿ ಕಿರಿ ಆಗುತ್ತಾ ಇರುತ್ತದೆ. ಸೀತಾ ಎಣ್ಣೆ ಹಚ್ಚಲು ಊರ್ಮಿಳಾ ಬಳಿ ಹೇಳುತ್ತಾಳೆ. ಆದರೆ ಊರ್ಮಿಳಾ ಸತ್ಯಳನ್ನು ಸೀತಾ ತಲೆಗೆ ಎಣ್ಣೆ ಹಚ್ಚುವಂತೆ ಊರ್ಮಿಳಾ ಕಳುಹಿಸುತ್ತಾಳೆ .
ಹೀಗೆಯೇ ಅತ್ತೆ ಹಾಗೂ ಸೊಸೆಯನ್ನು ಬಹಳ ಹತ್ತಿರ ಮಾಡಲು ಮುಂದಾಗುತ್ತಾಳೆ. ಆದರೆ ಸತ್ಯ ತನ್ನ ತಲೆಗೆ ಎಣ್ಣೆ ಹಾಕುತ್ತ ಇದ್ದಾಳೆ ಎಂದು ಗೊತ್ತಾಗುತ್ತಾ ಇದ್ದ ಹಾಗೆಯೇ ಸೀತಾ ಯಾಕೆ ಏನು ಎತ್ತ ಎಂದು ಕೇಳದೆ ಸತ್ಯ ಹಾಗೂ ಉರ್ಮೀಳಳನ್ನು ತರಾಟೆಗೆ ತೆಗೆದುಕೊಂಡು ಬಿಡುತ್ತಾಳೆ.

ಇನ್ನು ಇದನ್ನೆಲ್ಲ ನೋಡಿದ ಕಾರ್ತಿಕ್ ಅಮ್ಮನಿಗೆ ಚೆನ್ನಾಗಿ ಬೈದು ತನ್ನ ಹೆಂಡತಿಯನ್ನು ಕರೆದುಕೊಂಡು ಹೋಗುತ್ತಾನೆ. ಇದೀಗ ಸತ್ಯ ಹಾಗೂ ಸೀತಾ ಜಗಳ ಮಧ್ಯೆ ಕಾರ್ತಿಕ್ ನನಗೆ ಟೀ ಬೇಕು ಎಂದು ಹಠ ಹಿಡಿಯುತ್ತ ಇರುತ್ತಾನೆ. ಸತ್ಯ ಬಗ್ಗೆ ಏನೇನೆಲ್ಲ ಸೀತಾ ಬೈದರೂ ಅದನ್ನೆಲ್ಲ ಕೇಳಿಸಿಕೊಂಡ ಸತ್ಯ ಯಾಕೆ ಹೀಗೆಲ್ಲ ಹೇಳುತ್ತ ಇದ್ದೀರಿ ಎಂದೆಲ್ಲ ಅತ್ತೆಯನ್ನು ಪ್ರಶ್ನೆ ಮಾಡುತ್ತಾಳೆ.
ಸತ್ಯ ರೌಡಿ ತರ ಮಾತನಾಡುವುದನ್ನು ನೋಡಿದ ಸೀತಾ ಊರ್ಮಿಳಾ ಬಳಿ ಏನು ಈಕೆ ಹೀಗೆಲ್ಲ ಮಾತನಾಡುತ್ತಾ ಇದ್ದಾಳಲ್ಲ ಎಂದೆಲ್ಲ ಬಹಳ ಬೇಸರ ಮಾಡಿಕೊಂಡು ಇರುವಾಗ ಸತ್ಯ ಏನಾಯಿತು ಸೀತಮ್ಮ, ಯಾಕೆ ಹೀಗೆ ಮಾಡುತ್ತ ಇದ್ದೀರಿ ನಾನೇನಾದರೂ ತಪ್ಪು ಮಾತನಾಡಿದೆನ ಎಂದೆಲ್ಲ ಹೇಳುತ್ತಾಳೆ.
ಇನ್ನು ಕಾರ್ತಿಕ್ ಬಂದು ಸತ್ಯ ನನಗೆ ಒಂದು ಗ್ಲಾಸ್ ಟೀ ಬೇಕು ಅಂದಾಗ ಸತ್ಯ ಕಾರ್ತಿಕ್ ಗೆ ಟೀ ಮಾಡಿ ಕೊಡಲು ಹಿಂದೇಟು ಹಾಕಿದ್ದನ್ನು ನೋಡಿ ಸೀತಾಗೆ ಬಹಳ ಕೋಪ ಬರುತ್ತದೆ. ಇನ್ನು ದಿವ್ಯ ಆಕೆಯ ದೊಡ್ಡಪ್ಪನ ಮಾತನ್ನು ಕೇಳಿ ಹಳ್ಳಕ್ಕೆ ಬೀಳುವ ಲಕ್ಷಣ ಎಲ್ಲಾ ಕಂಡು ಬರುತ್ತಿದೆ. ಆದೆ ಗತ್ತಿನಲ್ಲಿ ಮನೆಗೆ ಬಂದಾಗ ಮನೆ ಎಲ್ಲಾ ಬಹಳ ಶೆಕೆ ಇರುತ್ತದೆ.
ಆಗ ಅಮ್ಮ ನನಗೆ ಈ ಮನೆಗೊಂದು ಏಸಿ ಬೇಕು ಹಾಕಿಸಿ ಎಂದು ಕಂತೆ ಕಂತೆ ದುಡ್ಡನ್ನು ಬಿಸಾಡುತ್ತಾಳೆ. ಇದನ್ನು ನೋಡಿದ ದಿವ್ಯ ತಾಯಿಗೆ ಹಾಗೂ ಬಾಲನಿಗೆ ಕೂಡ ಬಹಳ ಶಾಕ್ ಆಗುತ್ತದೆ. ಬಾಲ ಮನದಲ್ಲಿ ದಿವ್ಯಗೆ ಹೇಗೆ ದುಡ್ಡು ಎಲ್ಲಿಂದ ಬರುತ್ತಿದೆ ಎಂದೆಲ್ಲ ಯೋಚನೆ ಮಾಡುತ್ತಾ ಇರುತ್ತಾನೆ.
ಸೀತಾ ಸತ್ಯ ಳನ್ನು ಈಕೆಯೇ ನಮ್ಮ ಕೋಟೆ ಮನೆಯ ಸೊಸೆ, ನನ್ನ ಮುದ್ದಿನ ಸೊಸೆ ಎಂದು ಹೇಳುವ ತನಕ ಆಕೆಯನ್ನು ಬಿಡುವ ಲಕ್ಷಣ ಕಾಣುತ್ತಿಲ್ಲ. ಇನ್ನು ಕಾರ್ತಿಕ್ ಮಾತ್ರ ಸತ್ಯ ಪ್ರೀತಿ ಸಿಗದೆ ಒದ್ದಾಡುತ್ತಾ ಇರುತ್ತಾನೆ.


Click it and Unblock the Notifications











