Don't Miss!
- News
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರ ನಕಲಿ ಎಂದ ಸಿದ್ದರಾಮಯ್ಯ.! ಆ ಪತ್ರದಲ್ಲಿ ಏನಿದೆ.?
- Sports
IND-W vs SA-W T20 Tri-series Final: ಭಾರತ ವನಿತೆಯರ ವಿರುದ್ಧ ದಕ್ಷಿಣ ಆಫ್ರಿಕಾಗೆ ಜಯ
- Lifestyle
ಮಗುವಿಗೆ ತುಂಬಾ ಜ್ವರ ಇದ್ದಾಗ ಏನು ಮಾಡಬೇಕು?
- Finance
6 ತಿಂಗಳಲ್ಲಿ 2ನೇ ಬಾರಿಗೆ ಉದ್ಯೋಗಿಗಳನ್ನು ವಜಾಗೊಳಿಸಿದ Byju's: ಈ ಬಾರಿ ಎಷ್ಟು ನೌಕರರು?
- Automobiles
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Sathya: ಮನೆಯಿಂದ ಹೊರಹೋಗಲು ತೀರ್ಮಾನ ಮಾಡಿದ ದಿವ್ಯ?
ಮನೆಯಿಂದ ಹೊರ ಹೋಗಲು ದಿವ್ಯ ಎಲ್ಲಾ ಡ್ರೆಸ್ ಪ್ಯಾಕ್ ಮಾಡುತ್ತಾ ಇರುತ್ತಾಳೆ. ಇದನ್ನು ನೋಡಿದ ಬಾಲ ಯಾಕೆ ಏನಾಯಿತು ಎಲ್ಲಿಗೆ ಹೊರಟೆ ಎಂದು ಕೇಳುತ್ತಾನೆ. ದಿವ್ಯ ಬಹಳ ಕುಪಿತಗೊಳ್ಳುತ್ತಾ ಇರುತ್ತಾಳೆ. ನಾನು ಸುಡುಗಾಡುಗೆ ಹೋಗುತ್ತಾ ಇದ್ದೇನೆ ಎಂದು ಜೋರಾಗಿ ಹೇಳುತ್ತಾಳೆ. ಬಳಿಕ ನಿನ್ನ ಡ್ರಾಮಾ ನೋಡಿ ನೋಡಿ ಸಾಕಾಗಿ ಹೋಗಿದೆ, ಈ ಹಾಳು ಕೊಂಪೆಯಲ್ಲಿ ನನಗೆ ಬದುಕಲು ಆಗುವುದಿಲ್ಲ, ಉಸಿರು ಕಟ್ಟಿದ ಹಾಗೆ ಆಗುತ್ತಾ ಇದೆ ನಾನು ಹೋಗುತ್ತ ಇದ್ದೇನೆ ಎಂದು ಕೋಪದಲ್ಲಿ ಹೇಳುತ್ತಾಳೆ.
ಇದನ್ನು ಕೇಳಿದ ಬಾಲ ಮೆತ್ತಗೆ ಮಾತನಾಡು ಬೇಬಿ, ತಾತಾ ಕೇಳಿಸಿಕೊಂಡರೆ ಕಷ್ಟ ಎನ್ನುತ್ತಾನೆ. ಆದರೆ ದಿವ್ಯ ಮಾತ್ರ ಜೋರಾಗಿ ಕೇಳಿಸಿಕೊಂಡರೆ ಕೇಳಿಸಿಕೊಳ್ಳಲಿ ನಾನು ಮನೆ ಬಿಟ್ಟು ಹೋಗುತ್ತೇನೆ ಎಂದು ಹಠ ಮಾಡುತ್ತಾಳೆ. ಆದರೆ ಬಾಲ ದಿವ್ಯಳನ್ನು ತಡೆಯಲು ಹರಸಾಹಸ ಮಾಡುತ್ತಾನೆ. ಬಾಲ ಓವರ್ ಆಕ್ಟ್ ಮಾಡುವುದನ್ನು ನೋಡಿದ ಸತ್ಯ ಚುಚ್ಚಿ ಸಾಯಿಸಿಬಿಡುತ್ತೇನೆ ಎಂದು ಹೇಳಿ ಕೋಪಾಗೊಳ್ಳುತ್ತ ಇರುತ್ತಾ.ಳೆ ಬಳಿಕ ಬಾಲನನ್ನು ತಿವಿಯಲು ಬರುತ್ತಾಳೆ.
ಇದನ್ನು ನೋಡಿದ ಬಾಲ ಹೆದರಿ ಕಂಗಾಲಾಗಿ ಹೋಗುತ್ತಾನೆ. ಇನ್ನು ಬಾಲನಿಗೆ ಒಂದು ದಿನದ ಗಡುವು ಕೊಡುತ್ತಾಳೆ. ತಂದೆ ತಾಯಿ ಬಳಿ ಕರೆದುಕೊಂಡು ಹೋಗದೆ ಇದ್ದರೆ ನಿನ್ನ ಪಾಡು ನಿನಗೆ ನನ್ನ ಪಾಡು ನನಗೆ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಬಾಲ ಏನು ಮಾಡಬೇಕು ತಿಳಿಯದೇ ಕಂಗಾಲಾಗಿದ್ದಾನೆ. ರಿತುವನ್ನು ಹುಡುಕಿಕೊಂಡು ಸತ್ಯ ಗೆಳೆಯ ಬಂದಿದ್ದಾನೆ.
ಟ್ಯೂಷನ್ ಕೊಡಲು ಬಂದಾತನನ್ನೆ ರಿತು ಅದೆಷ್ಟು ಪ್ರೀತಿ ಮಾಡು ಎಂದು ಹೇಳಿದರೂ ಆತ ಮಾತ್ರ ಒಪ್ಪದೇ ಇರುವುದೇ ರಿತುಗೆ ದೊಡ್ಡ ತಲೆನೋವು ಆಗುತ್ತದೆ. ಇನ್ನು ಅಲ್ಲಿಗೆ ಬಂದ ರಾಕೇಶ್ ಜೊತೆ ಇವತ್ತು ನನಗೆ ಟ್ಯೂಷನ್ ಬೇಡ ಎಂದು ರಿತು ಹೇಳುತ್ತಾಳೆ. ಇದನ್ನು ಕೇಳಿದ ರಾಕೇಶ್ ನೀನು ಆಗಲೇ ಹೇಳಿದ್ದರೆ ನಾನು ಇಷ್ಟು ದೂರ ಬಂದು ಟೈಮ್ ವೇಸ್ಟ್ ಮಾಡುತ್ತಾ ಇರಲಿಲ್ಲ ಎಂದು ಹೊರಡಲು ಮುಂದಾಗುತ್ತಾನೆ. ಈ ಸಮಯಕ್ಕೆ ರಿತು ರಾಕಿ ಕೈ ಹಿಡಿದು ನಿಲ್ಲು ರಾಕಿ ನನ್ನ ಬಳಿ ಮಾತನಾಡಲು ಇಷ್ಟ ಇಲ್ವಾ ಎಂದು ಕೈ ಹಿಡಿದು ಕೇಳುತ್ತಾಳೆ.

ರಾಕಿ ಕೈ ಹಿಡಿದ ರಿತು
ಇದನ್ನು ನೋಡಿದ ರಾಕಿ ಕೈ ಬಿಡಿಸಿಕೊಂಡು ಏನು ಮಾತನಾಡುತ್ತಾ ಇದ್ದೀಯಾ ಎನ್ನುತ್ತಾನೆ. ರಿತು ನಾನು ನಿನ್ನ ಇಷ್ಟ ಪಡುತ್ತಾ ಇದ್ದೇನೆ ಬಾವನೆಗಳಿಗೆ ಬೆಲೆ ಕೊಡು ಎಂದೆಲ್ಲ ಹೇಳುತ್ತಾಳೆ. ಇದನ್ನು ಕೇಳಿದ ರಾಕಿ ನೀನು ನನ್ನ ಗೆಳತಿ ಅದಕ್ಕಿಂತ ಹೆಚ್ಚು ಆಗುವುದು ಬೇಡ ಎಂದೆಲ್ಲ ಹೇಳಿದಾಗ ರಿತು ತಾಯಿ ಹಾಗೂ ದೊಡ್ಡಮ್ಮ ಮಾತನಾಡುತ್ತಾ ಇರುವ ವಿಚಾರವನ್ನು ಹಂಚಿಕೊಳ್ಳುತ್ತಾ ಇರುತ್ತಾಳೆ. ಇದನ್ನು ಕೇಳಿದ ರಾಕಿಗೂ ಶಾಕ್ ಆಗುತ್ತದೆ..

ಆಫೀಸ್ಗೆ ಬಂದ ಸತ್ಯ
ಆದರೆ ರಿತು ಅಳುತ್ತಾ ನಾನು ಗಂಡನ ಸ್ಥಾನ ನಿನಗೆ ಕೊಟ್ಟಿದ್ದೇನೆ ನನಗೆ ನಿನ್ನ ಬಿಟ್ಟು ಬೇರೆ ಯಾರೂ ಬೇಡ ಎಂದು ಹೇಳುತ್ತಾಳೆ. ರಾಕಿಗೆ ಏನು ಹೇಳಬೇಕೋ ತಿಳಿಯದೇ ಸುಮ್ಮನೆ ಆಗುತ್ತಾನೆ . ಇತ್ತ ಕಾರ್ತಿಕ್ ಮತ್ತು ಆತನ ಗೆಳೆಯ ಆಫೀಸ್ ನಲ್ಲಿ ಮೊಬೈಲ್ ಗೇಮ್ ಆಡುತ್ತಾ ಇರುತ್ತಾರೆ. ಈ ವೇಳೆ ಸತ್ಯ ಕಾರ್ತಿಕ್ ಗೆ ಕರೆ ಮಾಡಿ ರಾತ್ರಿ ಏನಾದರು ತಪ್ಪು ಮಾತನಾಡಿದ್ನಾ ಎಂದು ಕೇಳುತ್ತಾಳೆ. ಅದಕ್ಕೆ ಕಾರ್ತಿಕ್ ಏನೇನೋ ಸಬೂಬು ಹೇಳುತ್ತಾನೆ.

ರಾಕಿಗೆ ರಿತು ಗಿಫ್ಟ್
ಇನ್ನು ಸತ್ಯ ಆಫೀಸ್ ಗೆ ಟಿಫನ್ ಹಿಡಿದುಕೊಂಡು ಬರುತ್ತಾಳೆ ಇ.ದನ್ನು ನೋಡಿದ ಕಾರ್ತಿಕ್ ಶಾಕ್ ಆಗುತ್ತಾನೆ ಸತ್ಯ. ಆಫೀಸ್ ಗೆ ಬಂದಿರುತ್ತಾಳೆ. ಇನ್ನೂ ರಾಕಿಗೆ ರಿತು ಗಿಫ್ಟ್ ಕೊಡುತ್ತಾಳೆ. ಇದನ್ನು ನೋಡಿದ ರಾಕಿ ಇದನ್ನು ತೆಗೆದುಕೊಳ್ಳಲು ಹಣ ಎಲ್ಲಿಂದ ಬಂತು ಎನ್ನುತ್ತಾನೆ. ಇದಕ್ಕೆ ಉತ್ತರಿಸುವ ರಿತು ಅಪ್ಪ ಹಣ ಕೊಟ್ಟರು ಎಂದು ಹೇಳುತ್ತಾಳೆ.

ರಿತುಗೆ ಬುದ್ದಿ ಹೇಳಿದ ರಾಕಿ
ನಮ್ಮ ಕಾಲ ಮೇಲೆ ನಿಲ್ಲುವವರೆಗೂ ಯಾರನ್ನು ಲವ್ ಮಾಡಬಾರದು ಎಂದು ಹೇಳುತ್ತಾನೆ. ನನಗೂ ನಿನಗೂ ಸೆಟ್ ಆಗಲ್ಲ ಎಂದು ಅರ್ಥ ಮಾಡಿಸುತ್ತಾನೆ. ತಂದೆ ತಾಯಿ ಕನಸಿಗೆ ಬೆಲೆ ಕೊಡಬೇಕು ಎಂದು ಬುದ್ದಿ ಮಾತು ಹೇಳುತ್ತಾನೆ. ಇನ್ನು ಗಿಫ್ಟ್ ತೆಗೆದುಕೊಳ್ಳಲು ರಾಕಿಗೆ ಇಷ್ಟ ಇಲ್ಲದೆ ಇದ್ದರೂ ಆಣೆ ಪ್ರಮಾಣ ಮಾಡಿ ಗಿಫ್ಟ್ ತೆಗೆದುಕೊಳ್ಳುವ ಹಾಗೆ ಮಾಡುತ್ತಾಳೆ ರಿತು. ಮುಂದೇನು ಎಂಬುವುದನ್ನು ಕಾದು ನೋಡಬೇಕಿದೆ..