twitter
    For Quick Alerts
    ALLOW NOTIFICATIONS  
    For Daily Alerts

    ಸುಳ್ಳಿನ ಅರಮನೆ ಕಟ್ಟಿರುವ ಬಾಲ ದಿವ್ಯ ಕೈಗೆ ಸಿಕ್ಕಿ ಬೀಳುತ್ತಾನ?

    By ಪೂರ್ವ
    |

    ಸತ್ಯ ಧಾರವಾಹಿ ಸೀರಿಯಲ್ ಪ್ರೇಮಿಗಳ ಮನಗೆದ್ದಿದೆ. ಸತ್ಯ ಅಳುತ್ತಿರುವುದನ್ನು ನೋಡಿದ ಕಾರ್ತಿಕ್ ಹೇಳುತ್ತಾನೆ ತಗೋ ಕಣ್ಣು ಒರಿಸಿಕೊ ಎಂದು ಕರವಸ್ತ್ರ ನೀಡುತ್ತಾನೆ. ಇದನ್ನು ನೋಡಿದ ಸತ್ಯಗೆ ಆಶ್ಚರ್ಯ ಆಗುತ್ತದೆ. ಅದಕ್ಕೆ ಕಾರ್ತಿಕ್ ಹೇಳುತ್ತಾನೆ ಹಲೋ ಅಷ್ಟೊಂದು ಫೀಲ್ ಆಗೋ ಅವಶ್ಯಕತೆ ಇಲ್ಲ. ನನ್ನ ಮೊಬೈಲ್ ಮರೆತು ಹೋಗಿದ್ದೆ ತಗೊಂಡು ಹೋಗೋಣ ಅಂತ ಬಂದೆ. ನಿನಗೋಸ್ಕರ ಬಂದೆ ಅಂತೆಲ್ಲ ಕಥೆ ಕಟ್ಟಿಕೊಳ್ಳಬೇಡ ತಗೋ ಎಂದು ಕರ್ಚಿಪ್ ಕೊಡುತ್ತಾನೆ.

    ಬಳಿಕ ಹೇಳುತ್ತಾನೆ ಅಮ್ಮ ಭದ್ರ ಕಾಳಿ ನೀನು ಹಾಗಿದ್ರೇನೆ ಚಂದ ಈ ಅವತಾರದಲ್ಲಿ ನಿನ್ನ ನೋಡೋಕೆ ಆಗುತ್ತಿಲ್ಲ. ಎಂದು ಹೇಳಿ ಅಲ್ಲಿಂದ ಹೋಗುತ್ತಾನೆ. ಇತ್ತ ಬಾಲ ಹಾಗೂ ದಿವ್ಯಾಳದ್ದು ಬೇರೆಯದ್ದೇ ಪಜಿತಿಯಾಗಿದೆ. ಇತ್ತ ಬಾಲ ಊರಾಚೆ ಬಂದು ಚೋಟು ಬಳಿ ಮಾತನಾಡುತ್ತಾ ಇರುತ್ತಾನೆ ಲೋ ಚೋಟು ಏನೋ ಅದು ಎಮರ್ಜೆನ್ಸಿ ಎನ್ನುತ್ತಾನೆ ಅದಕ್ಕೆ ಚೋಟು ಹೇಳುತ್ತಾನೆ ಬಾಬಾಯ್ಯ ಒಂದು ಸಣ್ಣ ಎಡವಟ್ಟು ಆಗಿ ಹೋಗಿದೆ ಎಂದು ಹೇಳುತ್ತಾನೆ

    ಅದಕ್ಕೆ ಬಾಲ ಹೇಳುತ್ತಾನೆ ನನ್ನ ಲೈಫ್ ಎಡವಟ್ಟು ಆಗೋ ರೀತಿ ಕಾಣುತ್ತಿದೆ. ಅದರಲ್ಲಿ ನಿನ್ನದು ಒಂದು.. ನನಗೆ ಜಾಸ್ತಿ ಟೆನ್ಶನ್ ಕೊಡಬೇಡ ಎಂದು ಹೇಳುತ್ತಾನೆ ಅದಕ್ಕೆ ಚೋಟು 'ಗ್ರ್ಯಾಂಡ್ ಫಾದರ್ ಕ್ಯಾರೆಕ್ಟರ್' ಸಿಕ್ಕಿಲ್ಲ ಎಂದು ಹೇಳುತ್ತಾನೆ ಅದಕ್ಕೆ ಬಾಲ ಭಯ ಭೀತನಾಗಿ 'ಲೋ ಏನೋ ಹೇಳುತ್ತಿದ್ದಿಯಾ ಕಥೆಗೆ ಹಿರೋನೆ ಇಲ್ಲ ಅಂದ್ರೆ ಹೆಂಗೋ' ಎನ್ನುತ್ತಾನೆ ಅದಕ್ಕೆ ಚೋಟು ಹೇಳುತ್ತಾನೆ 'ಐ ನೋ ಬಾಬಯ್ಯಾ ತಾತ ಸಿಕ್ಕಿಲ್ಲ ಅಂದ್ರೆ ನಾನೇನು ಮಾಡಲಿ' ಎನ್ನುತ್ತಾನೆ.

    ತಾತನ ಕ್ಯಾರೆಕ್ಟರ್‌ ಸಿಗ್ತಿಲ್ಲ!

    ತಾತನ ಕ್ಯಾರೆಕ್ಟರ್‌ ಸಿಗ್ತಿಲ್ಲ!

    ಅದಕ್ಕೆ ಬಾಲ ಅವನಿಗೆ ಬೈದು, ಸಿಕ್ತಿಲ್ಲ ಅಂದ್ರೆ ಹೆಂಗೆ, ಕೇಳಿದಷ್ಟು ಹಣ ಕೊಟ್ಟಿಲ್ವಾ? ಒಬ್ಬ ತಾತನನ್ನು ಅರೇಂಜ್ ಮಾಡಕ್ಕೆ ಆಗಿಲ್ವಾ ನಿನಗೆ ಎನ್ನುತ್ತಾನೆ ಅದಕ್ಕೆ ಚೋಟು ಹೇಳುತ್ತಾನೆ ನಾನೇನು ಮಾಡಲಿ ಬಾಬಯ್ಯ ನಿನ್ನೆ ತಾನೇ ತಾತ ಒಪ್ಪಿಕೊಂಡು ಇದ್ದ. ಬೆಳಗ್ಗೆ ಹಾರ್ಟ್ ಪ್ರಾಬ್ಲಮ್ ಆಗಿ ಗೌರ್ಮೆಂಟ್ ಆಸ್ಪತ್ರೆಗೆ ಸೇರಿಕೊಂಡು ಬಿಟ್ಟಿದ್ದಾನೆ. ಅವನು ಬೇರೆ ಬರಕ್ಕೆ ಆಗಲ್ಲ ನನಗೆ ಬೇರೆ ಟೆನ್ಶನ್ ಆಗಿ ಬಿಟ್ಟಿತು. ಎನು ಮಾಡಲಿ ಎಂದು ಹೇಳುತ್ತಾನೆ.

    ತಾತನ ಪಾತ್ರಧಾರಿ ಬೇಕೇ ಬೇಕು ಎಂದಿರುವ ಬಾಲ

    ತಾತನ ಪಾತ್ರಧಾರಿ ಬೇಕೇ ಬೇಕು ಎಂದಿರುವ ಬಾಲ

    ಅದಕ್ಕೆ ಬಾಲ ಹೇಳುತ್ತಾನೆ ಅಲ್ಲಿ ನೋಡಿದ್ರೆ ದಿವ್ಯಾ ನಿಮ್ಮ ತಾತ ಎಲ್ಲಿ ನಿಮ್ಮ ತಾತ ಎಲ್ಲಿ ಎಂದು ಪ್ರಾಣ ಹಿಂಡುತ್ತಿದ್ದಾಳೆ. ನೀನು ನೋಡಿದ್ರೆ ತಾತನೆ ಸಿಕ್ಕಿಲ್ಲ ಅಂತಿದ್ದಿಯಾ ನಾನೇನಾದರೂ ತಾತನ ಕರೆದುಕೊಂಡು ಹೋಗಿ ಅಲ್ಲಿ ನಿಲ್ಲಿಸಿಲ್ಲ ಅಂದ್ರೆ ಎಲ್ಲಾ ಸೆಟಪ್ ವೆಸ್ಟ್ ಆಗಿ ಬಿಡುತ್ತೆ ಕಣೋ ಇದೆಲ್ಲ ಕಥೆ ಅಂತ ಅವಳಿಗೆ ಗೊತ್ತಾಗುತ್ತೆ ಕಣೋ ಹಂಗಾದರೆ ಪಿಕ್ಚರ್ ಶುರು ಆಗೋ ಮುಂಚೆನೇ ಎಂಡ್ ಆಗಿ ಹೋಗುತ್ತೆ ಕಣೋ ಎಂದು ಆತಂಕ ವ್ಯಕ್ತಪಡಿಸುತ್ತಾನೆ.

    ತಾತನೇ ಮೇನ್ ಲೀಡ್ ಎನ್ನುವ ಬಾಲ

    ತಾತನೇ ಮೇನ್ ಲೀಡ್ ಎನ್ನುವ ಬಾಲ

    ಅದಕ್ಕೆ ಚೋಟು, ''ಛೇ ಛೇ ಆಥರ ಎಲ್ಲಾ ಆಗಬಾರದು. ತಾತ ಏನಾದ್ರು ಮೇಲಕ್ಕೆ ಹೋದ್ರು ಎಂದು ಹೇಳಿ ಮ್ಯಾನೇಜ್ ಮಾಡಿ ಬಿಡೋಣ ಬಾಬಯ್ಯ' ಎಂದಾಗ ಬಾಲ ಹೇಳುತ್ತಾನೆ ಬಿಟ್ಟ ಅಂದ್ರೆ ಅವಳನ್ನು ಬಫೂನ್ ಎಂದುಕೊಂಡಿದ್ದಿಯಾ ಅವಳನ್ನು ನಂಬಿಸೋದು ಅಷ್ಟೊಂದು ಸುಲಭ ಅಲ್ಲ ಕಣೋ ಎನ್ನುತ್ತಾನೆ ಅದಕ್ಕೆ ಚೋಟು ಹೇಳುತ್ತಾನೆ ಮತ್ತೆ ಇನ್ನೇನು ಮಾಡಕೆ ಆಗಲ್ವಾ ಎನ್ನುತ್ತಾನೆ ಅದಕ್ಕೆ ಬಾಲ ಹೇಳುತ್ತಾನೆ ಎನು ಮಾಡಬೇಕು ಎಂದು ನನ್ನನ್ನೇ ಕೇಳುತ್ತಿದ್ದಿಯಾ. ನೀನೇ ಹೇಳಬೇಕು ಕಣೋ ಅದುನ್ನಾ. ತಾತ ಮೈನ್ ಲೀಡ್ ಕಣೋ' ಎಂದು ಹೇಳುತ್ತಾನೆ.

    ಐಡಿಯಾ ಮಾಡುತ್ತಿರುವ ಬಾಲ

    ಐಡಿಯಾ ಮಾಡುತ್ತಿರುವ ಬಾಲ

    ಅವರಿಲ್ಲದೆ ಏನೋ ಮ್ಯಾನೇಜ್ ಮಾಡಕ್ಕೆ ಆಗಲ್ಲಾ ತಾತಾನೆ ಹೋದ್ರು ಎಂದು ಹೇಳಿದರೆ ಅವಳು ಸೀದಾ ಇಲ್ಲಿ ಬಂದು ದಿವ್ಯಾನ ಮುಗಿಸಿ ಬಿಡುತ್ತಾರೆ ಅಷ್ಟೇ ಎಂದಾಗ ಚೋಟು ಹೇಳುತ್ತಾನೆ ಲೋ ಬಾಬಯ್ಯ ನಿನ್ನ ಅಪ್ಪ ಗಾನ್ ಆಗಿದ್ದರಲ್ಲೋ ಅವರೆಗೂ ಬರುತ್ತಾರೆ ಎಂದಾಗ ಬಾಲ ಹೇಳುತ್ತಾನೆ ಡಬ್ಬ ನನ್ನ ಮಗನೇ ಅವರು ನನ್ನ ಸ್ಟೋರಿಲಿ ಬರೋ ಅಪ್ಪನ ಕ್ಯಾರೆಕ್ಟರ್ ಕಣೋ ಎಂದಾಗ ಚೋಟು ಹೇಳುತ್ತಾನೆ ಪ್ಯಾಟೆಗೆ ಹೋದ ಮೇಲೆ ಬಾರಿ ಚಂದ ಕಥೆ ಕಟ್ಟೋದನ್ನು ಕಲ್ತಿದ್ದಿಯಾ ಬಿಡು ಆ ಸ್ಟೋರಿ ಏನೆಲ್ಲಾ ಇದೆ ಎಲ್ಲಾ ಹೇಳಿಬಿಡು ಎಂದು ಚೋಟು ಹೇಳುತ್ತಾನೆ ಇತ್ತ ಬಾಲ ಲೋ ಚೋಟು ಹೆಂಗದ್ರು ಮಾಡಿ ತಾತನ ಹುಡುಕಿ ಕೊಡು ಎಂದು ಬೇಡಿಕೊಳ್ಳುತ್ತಾನೆ. ಇನ್ನೂ ಚೋಟು ಒಂದು ಐಡಿಯಾ ನು ಕೊಡುತ್ತಾನೆ ಆ ಐಡಿಯಾ ಎಷ್ಟರವರೆಗು ಕ್ಲಿಕ್ ಆಗುತ್ತದೆ ಎಂಬುವುದನ್ನು ಕಾದು ನೋಡಬೇಕಿದೆ.

    English summary
    Kannada serial Satya written updated on 15th August. Know more about the episode.
    Tuesday, August 16, 2022, 23:14
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X