twitter
    For Quick Alerts
    ALLOW NOTIFICATIONS  
    For Daily Alerts

    ಮೋಸದ ಬಲೆಯಲ್ಲಿ ಬಿದ್ದ ದಿವ್ಯಾಳ ಕತೆ ಅಜ್ಜಿ ಮುಂದೆ ಬಯಲಾಗುತ್ತಾ?

    By ಪೂರ್ವ
    |

    ದಿವ್ಯಾ, ಬಾಲನಿಗೆ ಸಖತ್ ಆಗಿ ಕ್ಲಾಸ್ ತೆಗೆದುಕೊಳ್ಳುತ್ತಾ ಇದ್ದಾಳೆ. ಸುಳ್ಳಿನ ಅರಮನೆಯಲ್ಲಿ ದಿವ್ಯಾಳನ್ನು ತೇಲಾಡಿಸಿ ಇದೀಗ ದಿಢೀರ್ ಆಗಿ ಕೈ ಬಿಡುವ ಎಲ್ಲಾ ಲಕ್ಷಣ ಕಾಣುತ್ತಿದೆ. ಹಣದ ಮದವೇರಿದ ದಿವ್ಯಾಗೆ ಇದಾವುದೂ ತಿಳಿಯುತ್ತಿಲ್ಲ. ದಿವ್ಯಾಳ ಕೈ ಗೆ ಸಿಕ್ಕ ಬಾಲನ ಪಜೀತಿ ನೋಡಲು ಆಗುತ್ತಿಲ್ಲ. ಬಾಲನ ಬಳಿ ತಂದೆಯನ್ನು ನನಗೆ ಭೇಟಿ ಮಾಡಿಸು ಮತ್ತೆ ನಿಮ್ಮ ಹಳ್ಳಿಗೆ ನಾನು ಬರುವುದಿಲ್ಲ ಎಂದು ಬಾಲನಿಗೆ ಪದೇ ಪದೇ ಕ್ಲಾಸ್ ನೀಡುತ್ತಾ ಬಂದಿದ್ದಾಳೆ.

    ಇವಾಗ ಕೂಡ ಬಾಲನ ಬಳಿ ಹಳ್ಳಿಗೆ ನಾನು ಬರುವುದು ಇಲ್ಲ ಎಂದು ಹೇಳುತ್ತಾ ಇದ್ದಾಳೆ ಆದರೆ ಬಾಲ ಮಾತ್ರ ಏನೂ ಮಾಡಲಾಗದೆ ನಿಂತಿದ್ದಾನೆ. ಆದರೆ ದಿವ್ಯಾ ಹಳ್ಳಿಗೆ ಬರುವುದಿಲ್ಲ ಎಂದು ಹಠ ಹಿಡಿದಿದ್ದಕ್ಕೆ ಬಾಲ ಅಜ್ಜಿ ಬಳಿ ತನ್ನ ದುಃಖ ತೋಡಿಕೊಳ್ಳುತ್ತಾರೆ ಆದರೆ ಅಜ್ಜಿ ಮಾತ್ರ ದಿವ್ಯಾಳ ಬಳಿ ಆಕೆಯ ಜೀವನ ಸರಿ ಹೋಗಲಿ ಎಂದು ಬುದ್ಧಿ ಮಾತು ಹೇಳಿದರೆ ದಿವ್ಯಾ ಮಾತ್ರ ಅದಾವುದನ್ನೂ ಕೇಳಿಸಿ ಕೊಳ್ಳದೆ ಬೇಸರದಲ್ಲಿ ಇರುತ್ತಾಳೆ. ಬಳಿಕ ಬಾಲನ ಬುದ್ಧಿಗೆ ಕೋಪಗೊಂಡ ದಿವ್ಯಾ ಅಜ್ಜಿ ಬಳಿ ಹೇಳಿರುವುದು ಯಾಕೆ? ಬಾಲ ಯಾಕೆ ನೀನು ಈ ಥರ ಎಲ್ಲಾ ಮಾಡುತ್ತೀಯಾ? ನಿನಗೆ ನನ್ನ ಮನಸ್ಸು ಅರ್ಥ ಆಗುತ್ತಿಲ್ವ ನೋಡು ನಿನಗೆ ಆದರೆ ನನ್ನ ಮಾತು ಕೇಳಿ ಒಂದು ವೇಳೆ ನೀನೇ ನಿರ್ಧಾರ ಮಾಡುವುದು ಆದರೆ ಅದನ್ನು ನಾನು ಯಾವುದು ಕೇಳಲ್ಲ ಎಂದು ಖಡಕ್ ಆಗಿ ಬಾಲನಿಗೆ ಹೇಳಿ ಬಿಡುತ್ತಾಳೆ.

    ದಿವ್ಯಾ ಸರಿಯಾಗಿ ಬೈಯುತ್ತಿರುವುದನ್ನು ಕಂಡು ಬಾಲ, 'ದಿವ್ಯಾ ಬೈಯ್ಯ ಬೇಡ ನನಗೆ ಬಹಳ ನೋವು ಆಗುತ್ತದೆ, ಎಂದಾಗ ಗರಂ ಆದ ದಿವ್ಯಾ ಹೇಳುತ್ತಾಳೆ, ಯಾಕೆ ಆದರೂ ನಿನ್ನ ಕಟ್ಟಿಕೊಂಡೆನೋ ಎಂದು ಮನದಲ್ಲಿ ಅನ್ನಿಸುತ್ತಿದೆ ಎಂದೆಲ್ಲ ಚೆನ್ನಾಗಿ ಬಾಲನಿಗೆ ಬೈಯುತ್ತಾಳೆ.

    ದಿವ್ಯಾ ಮನ ವೊಲಿಸಿದ ಬಾಲ

    ದಿವ್ಯಾ ಮನ ವೊಲಿಸಿದ ಬಾಲ

    ಬಳಿಕ ಬಾಲ ಹೇಗೋ ಚೆನ್ನಾಗಿ ಪುಂಗಿ ಊದಿ ಸಿಡುಕುತ್ತಿದ್ದ ದಿವ್ಯಾಳನ್ನು ಸಮಾಧಾನ ಮಾಡಿ ಊರಿನತ್ತ ಕರೆದುಕೊಂಡು ಹೋಗುವ ಎಲ್ಲಾ ಪ್ರಯತ್ನ ಮಾಡುತ್ತಾನೆ. ಇನ್ನು ಕೀರ್ತನಾ ತಾಯಿಯ ಗೆಳತಿಗೆ ಕಾಲ್ ಮಾಡಿ ಹಣದ ವಿಚಾರ ಮಾತನಾಡುತ್ತಾ ಇದ್ದಾಳೆ. ಲಿಡೀಸ್ ಕ್ಲಬ್‌ನಲ್ಲಿ ಸತ್ಯ ವಿಚಾರವಾಗಿ ಅಮ್ಮನಿಗೆ ಅವಮಾನ ಆಗಬೇಕು ಎಂದೆಲ್ಲ ಹೇಳಿ ಇರುತ್ತಾಳೆ ಆದರೆ ಆ ಕಾರ್ಯ ಕೈ ಗೂಡದೆ ಇರಬೇಕಾದರೆ ಆ ಹಣವನ್ನು ವಾಪಸ್ ನೀಡಬೇಕು ಎಂದು ಕೀರ್ತನಾ ಹೇಳುತ್ತಿರುವಾಗ ಸುಮನಾ ಬೆಚ್ಚಿ ಬಿದ್ದಿದ್ದಾರೆ.

    ಕೀರ್ತನ ಮಾತಿಗೆ ಬೆಚ್ಚಿ ಬಿದ್ದ ಸುಮನಾ

    ಕೀರ್ತನ ಮಾತಿಗೆ ಬೆಚ್ಚಿ ಬಿದ್ದ ಸುಮನಾ

    ಇನ್ನು ಸುಮನಾ ಬೆಚ್ಚಿ ಬೀಳುತ್ತಿರುವುದನ್ನು ನೋಡಿ ಕೀರ್ತನಾ ಜೋರಾಗಿ ನಗುತ್ತಾಳೆ ಬಳಿಕ ಸುಮನಾಗೆ ಸಮಾಧಾನ ಮಾಡುತ್ತಾಳೆ. ಇನ್ನು ಗೇಟ್ ಟುಗೆದರ್ ಪಾರ್ಟಿ ಇಟ್ಟುಕೊಂಡಿರುವ ಸುಮನಾ ಎಲ್ಲರನ್ನೂ ಮನೆಗೆ ಕರೆಯುತ್ತಾಳೆ. ಆದರೆ ಆ ಕಾರ್ಯಕ್ರಮದಲ್ಲಿ ಕೀರ್ತನಾ ಮಾಸ್ಟರ್ ಪ್ಲಾನ್ ಮಾಡಿದ್ದಾಳೆ. ಇನ್ನು ಸತ್ಯ ಸೀರೆ ಉಡಲು ಬಹಳ ಕಷ್ಟ ಪಡುತ್ತಾ ಇರುತ್ತಾಳೆ. ಇದನ್ನು ನೋಡಿದ ಕಾರ್ತಿಕ್‌ಗೆ ಬಹಳ ಬೇಸರ ಆಗುತ್ತದೆ.

    ಸತ್ಯಾಗೆ ಸಹಾಯ ಮಾಡಿದ ಕಾರ್ತಿಕ್

    ಸತ್ಯಾಗೆ ಸಹಾಯ ಮಾಡಿದ ಕಾರ್ತಿಕ್

    ಕೈಯಲ್ಲಿ ಗಾಯ ಆಗಿದ್ದ ಕಾರಣ ಸೀರೆಯ ನೆರಿಗೆ ಹಿಡಿಯಲು ಸತ್ಯ ಸಖತ್ ಕಷ್ಟ ಪಡುತ್ತಾ ಇರುತ್ತಾಳೆ ಇದನ್ನು ನೋಡಿದ ಕಾರ್ತಿಕ್, ಸತ್ಯ ಗೆ ಸಹಾಯ ಮಾಡುತ್ತಾನೆ. ದಿವ್ಯಾಗೆ ಅಮ್ಮ ಎಂಬ ಕೃತಜ್ಞತೆ ಯಿಲ್ಲದೆ ದಿವ್ಯಾ ಅಮ್ಮನನ್ನೆ ಬಾಯಿಗೆ ಬಂದ ಹಾಗೆ ಅನ್ನುತ್ತಾಳೆ. ಇದನ್ನು ನೋಡಿದ ಆಕೆಯ ತಾಯಿ ಮಾತ್ರ ಸುಮ್ಮನಾಗದೆ ದಿವ್ಯಾ ಏನು ಹೇಳುತ್ತ ಇದ್ದಳೊ ಅದರ ಪ್ರತಿಯಾಗಿ ಇನ್ನೊಂದು ಹೇಳುತ್ತಾಇರುತ್ತಾಳೆ.

    ತವರು ಮನೆ ಬಿಟ್ಟು ಹೊರ ನಡೆದ ದಿವ್ಯಾ

    ತವರು ಮನೆ ಬಿಟ್ಟು ಹೊರ ನಡೆದ ದಿವ್ಯಾ

    ಇನ್ನು ತವರು ಮನೆಯಿಂದ ಕಷ್ಟ ಪಟ್ಟು ಹೊರಟು ನಿಂತಿದ್ದಾಳೆ. ಇದನ್ನು ಕಂಡ ಎಲ್ಲರಿಗೂ ಖುಷಿ ಆಗಿದೆ. ಬಳಿಕ ಬಾಲ-ದಿವ್ಯಾ ಹಾಗೂ ಆಕೆಯ ತಾಯಿಯನ್ನು ಸಮಾಧಾನ ಮಾಡಿ ಅಲ್ಲಿಂದ ಹೊರಡುತ್ತಾನೆ. ದಿವ್ಯಾ ಹಾಗೂ ಬಾಲನನ್ನು ಗಿರಿಜಮ್ಮ ಹಿಂಬಾಲಿಸಿಕೊಂಡು ಹೋಗುತ್ತಾ ಇದ್ದಾರೆ. ಇನ್ನು ಮುಂದೆ ಏನಾಗುತ್ತೆ ಕಾದು ನೋಡಬೇಕಿದೆ.

    English summary
    Kannada serial Satya written updated on 21th November episode. Know more about it.
    Monday, November 21, 2022, 21:09
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X