Don't Miss!
- Lifestyle ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
- News ಲೋಕಸಭಾ ಚುನಾವಣೆ 2024: ಈ ಆರು ಜಿಲ್ಲೆಗಳಲ್ಲಿ ಬಹುತೇಕ ಶೂನ್ಯ ಮತದಾನ; ಕಾರಣವೇನು?
- Sports LSG vs CSK IPL 2024: ಮತ್ತೊಮ್ಮೆ ಧೋನಿ, ಜಡೇಜಾ ಅಬ್ಬರ; ಲಕ್ನೋ ತಂಡಕ್ಕೆ ಸವಾಲಿನ ಗುರಿ ನೀಡಿದ ಸಿಎಸ್ಕೆ
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶ್ರೀರಸ್ತು ಶುಭಮಸ್ತು: ತುಳಸಿ ಮಾಡಿದ ಪುಳಿಯೋಗರೆ ತಿಂದು ಹಳೆ ದಿನಗಳ ಮೆಲುಕು ಹಾಕಿದ ಮಾಧವ
ಸಿರಿ ತುಳಸಿ ಬಳಿ ಬಂದು ಎಲ್ಲಾ ರೆಡಿನಾ ಎಂದು ಕೇಳಿದಾಗ ತುಳಸಿ ಮಾತ್ರ ಆಕೆ ಬರುವ ಮೊದಲೇ ಪುಳಿಯೋಗರೆ ಮಾಡಿ ಇಟ್ಟಿರುತ್ತಾಳೆ. ಸಿರಿ ಅಮ್ಮನ ಬಳಿ ನಾನು ಪುಳಿಯೋಗರೆ ಮಾಡಿಕೊಂಡು ಬನ್ನಿ ಅಂದರೆ ಮೊಸರನ್ನ ಬೇರೆ ಮಾಡಿದ್ದೀರಿ ಅಲ್ವಾ ಎಂದಾಗ ತುಳಸಿ ಪುಳಿಯೋಗರೆ ಜೊತೆ ಮೊಸರನ್ನ ಕೂಡ ಒಳ್ಳೆಯದು ಎಂದು ಹೇಳುತ್ತಾಳೆ. ಇದನ್ನು ಕೇಳಿದ ಸಿರಿ ಸರಿ ಹಾಗಾದರೆ ನಾವು ಹೊರಡೋಣ ಎಂದು ಹೇಳುತ್ತಾಳೆ.
ಯಾಕೆ ಎಲ್ಲಿಗೆ ಎಂದು ಪೂರ್ಣಿಮಾ ಕೇಳಿದರೂ ಸಿರಿ ಏನೂ ಹೇಳದೇ ತುಳಸಿಯನ್ನು ಕರೆದುಕೊಂಡು ಮಾಧವನನ್ನು ಭೇಟಿ ಆಗಲು ಹೋಗುತ್ತಾಳೆ. ಅತ್ತ ಪಾಪಮ್ಮ ಪೂರ್ಣಿಮಾಗೆ ಬಿಸಿ ಬಿಸಿ ಸೂಪ್ ಮಾಡಿ ಕೊಡುತ್ತಾರೆ. ಸೂಪ್ ಕುಡಿಯುತ್ತಾ ಇರುವ ವೇಳೆ ಅಲ್ಲಿಗೆ ಅವಿನಾಶ್ ಬರುತ್ತಾನೆ. ಸದ್ಯ ಪೂರ್ಣಿಮಾ ಸೂಪ್ ಕುಡಿಯುತ್ತಾ ಇದ್ದಾಳೆ ಎಂದು ಖುಷಿ ಪಡುತ್ತಾನೆ. ನೀನು ಹೀಗೆ ಒಳ್ಳೆ ಊಟ ಮಾಡುತ್ತಾ ಇದ್ದರೆ ಬೇಗ ರಿಕವರ್ ಆಗುತ್ತಿಯಾ, ಆ ಬಳಿಕ ನಾವು ಎಲ್ಲಾದರೂ ಹೋಗೀ ಬರೋಣ ಎಂದು ಹೇಳುತ್ತಾನೆ.
ಆಗ ಪೂರ್ಣಿಮಾ ಸೂಪ್ ಕುಡಿದು ತಟ್ಟೆ ಇಡುತ್ತಾಳೆ. ಅದನ್ನು ಪಾಪಮ್ಮ ತೆಗೆದುಕೊಂಡು ಹೋಗಲು ಅನುವಾದಗ ಪೂರ್ಣಿಮಾ ಪಾಪಮ್ಮ ನೀವು ಇಲ್ಲಿಯೇ ಇರಿ, ಅವರು ಹೇಳುತ್ತ ಇದ್ದಾರೆ, ನಾನು ಅವರ ಬಳಿ ನಿನ್ನೆಯೇ ಮಾತನಾಡಿ ಆಗಿದೆ, ಅವರ ಬಳಿ ನನಗೆ ಏನು ಮಾತನಾಡಲು ಇಲ್ಲ ಎಂದಾಗ ಅವಿನಾಶ್ ಗೆ ಕೊಂಚ ಬೇಸರ ಆಗುತ್ತದೆ. ಬಳಿಕ ಅಲ್ಲಿಂದ ಹೋಗುತ್ತಾನೆ. ಆದರೆ ಪಾಪಮ್ಮ ಯಾಕೆ ಹಾಗೆ ಮಾತನಾಡಿದೆ ಪೂರ್ಣಿಮಾ ಚಿಕ್ಕ ಯಜಮಾನರಿಗೆ ಬೇಸರ ಆಯಿತು ಎಂದು ಹೇಳುತ್ತಾಳೆ.
ಸೋಫಾದ ಮೇಲೆ ನಿದ್ದೆ ಹೋದ ದತ್ತ
ಆದರೆ ಪೂರ್ಣಿಮಾ ಏನು ಮಾತನಾಡುವುದಿಲ್ಲ. ಆಕೆಗೆ ಬೇಸರ ಆಗುತ್ತದೆ. ಇನ್ನು ದತ್ತ ಟಿವಿ ಆನ್ ಮಾಡಿ ಸೋಫಾದಲ್ಲಿ ನಿದ್ದೆ ಮಾಡುತ್ತಾ ಇರುತ್ತಾರೆ. ತಾತನಿಗೆ ಹೇಳಿ ಹೋಗೋಣ ಎಂದರೆ ಅವರು ನಿದ್ದೆ ಮಾಡುತ್ತಾ ಇದ್ದಾರೆ, ನಾವು ಬೇಗ ಹೋಗಿ ಬರೋಣ ಎಂದು ಹೇಳಿ ತುಳಸಿ ಸಿರಿ ಹೊರಡುತ್ತಾರೆ. ಆಗ ದತ್ತನಿಗೆ ಎಚ್ಚರ ಆಗುತ್ತದೆ. ಅವರು ನಿದ್ದೆ ಕಣ್ಣಲ್ಲಿಯೆ ನೋಡಿ ಹಾಗೆಯೇ ಮಲಗಿ ಬಿಡುತ್ತಾರೆ.
ಚಿಕ್ಕಪ್ಪನ ಬಳಿ ದುಃಖ ತೋಡಿಕೊಂಡ ಅವಿನಾಶ್
ಅವಿ ಚಿಕ್ಕಪ್ಪನ ಬಳಿ ಬಂದು ತನ್ನ ಮನದ ಮಾತನ್ನು ಹೇಳುತ್ತ ಇರುತ್ತಾನೆ.. ನಿಮ್ಮ ಅಣ್ಣ ನಿಮ್ಮನ್ನು ಈ ಪರಿಸ್ಥಿತಿ ಗೆ ತಂದು ಬಿಟ್ಟರು , ಮೊನ್ನೆ ಪೂರ್ಣಿಮಾಳನ್ನು ಕಾರಲ್ಲಿ ಕರೆದುಕೊಂಡು ಹೋಗಿ ಏನೇನು ಅವಾಂತರ ಮಾಡಿದರುಎಂದೆಲ್ಲ ಹೇಳುವಾಗ ಅಲ್ಲಿಗೆ ಶರ್ವಾರಿ ಬರುತ್ತಾಳೆ. ಶಾರ್ವರಿ ಅವಿ ಬಳಿ ನೈಸ್ ಆಗಿ ಮಾತನಾಡಿ ಆತನ ಎದೆಗೆ ಚೂರಿ ಹಾಕುವ ಕೆಲಸ ಮಾಡುತ್ತಾ ಇರುತ್ತಾಳೆ.
ಕೆಫೆಗೆ ಬಂದ ತುಳಸಿ
ಮಾಧವ ಬಳಿ ಮ್ಯಾಗಿ ಸರ್ ನೀವು ಕೆಫೆಯಲ್ಲಿ ಮಲಗುವುದು ನಮಗೆ ಇಷ್ಟ ಆಗುತ್ತಿಲ್ಲ, ನಮ್ಮ ಮನೆಗೆ ಆದರೂ ಬರಬಹುದು ಆಗಿತ್ತು ಎನ್ನುತ್ತಾಳೆ. ಇದನ್ನು ಕೇಳಿದ ಮಾಧವ ನನಗೆ ಇಲ್ಲಿಯೇ ಖುಷಿ ಇದೆ ನಾನಿಲ್ಲಿ ಇರುತ್ತೇನೆ ಎಲ್ಲಾದರೂ ಬರಬೇಕು ಅನ್ನಿಸಿದರೆ ಖಂಡಿತ ಬರುತ್ತೇನೆ ಎಂದು ಹೇಳುತ್ತಾನೆ. ಅಷ್ಟೊತ್ತಿಗೆ ಅಲ್ಲಿಗೆ ತುಳಸಿ ಬರುತ್ತಾಳೆ. ಆ ವೇಳೆ ಅಲ್ಲಿಗೆ ಸಿರಿ ಬಂದಿದ್ದನ್ನು ಕಂಡು ಮಾಧಾವಗೆ ಇನ್ನೂ ಖುಷಿ ಆಗುತ್ತದೆ.
ಮಾವನಿಗೆ ಬೈದ ಪೂಜಾ
ಇನ್ನೂ ಪೂಜಾ ಮನೆಯವರೆಲ್ಲ ಪೂಜಾನ ಗಂಡಿನ ಕಡೆಯವರ ಮನೆ ನೋಡಲು ನಡೆದುಕೊಂಡು ಹೋಗುತ್ತಾರೆ. ಆಗ ಪೂಜಾ ಪ್ರಿಯಾಂಕ ಅವರ ಅಪ್ಪನಿಗೆ ಬೈಯುತ್ತಾಳೆ. ದುಡ್ಡು ಉಳಿಸಲು ಈ ತರ ನಡೆದುಕೊಂಡು ಹೋಗುತ್ತಾ ಇದ್ದೀಯಾ, ಒಂದು ಟ್ಯಾಕ್ಸಿಯಲ್ಲಿ ಆದರೂ ಹೋಗಬಹುದಿತ್ತು ಎಂದಾಗ ಆ ಜುಗ್ಗ ಏನೇನೋ ಹೇಳಿ ಹುಡುಗನ ಮನೆಗೆ ಕರೆದುಕೊಂಡು ಹೋಗುತ್ತಾನೆ. ಇನ್ನು ಮಾಧವನ ಬಳಿ ಸಿರಿ ನೀವು ಹುಡುಕುತ್ತಾ ಇದ್ದ ಫೇಮಸ್ ಪುಳಿಯೋಗರೆ ಮಾಡಿದವರು ಇವರೇ ಎಂದು ಪುಳಿಯೋಗರೆ ಡಬ್ಬ ಮಾಧವನ ಕೈಗೆ ಕೊಡುತ್ತಾಳೆ. ಇದನ್ನು ನೋಡಿದ ಮಾಧವ ಅವರಿಗೆ ಖುಷಿ ಆಗುತ್ತದೆ, ಸರ್ಪ್ರೈಸ್ ಆಗುತ್ತದೆ. ಆಗ ಸಿರಿಗೆ ಒಂದು ಕರೆ ಬರುತ್ತದೆ. ಬಳಿಕ ತರಾತುರಿಯಲ್ಲಿ ಬುಕ್ ಅಂಗಡಿಗೆ ಹೋಗುತ್ತಾಳೆ. ಸಮರ್ಥ್ ಮನೆಗೆ ಬರುವ ವೇಳೆ ತಾತ ಎದ್ದಿರುತ್ತಾರೆ. ಬಳಿಕ ಬಾಗಿಲು ತೆಗೆದು ತುಳಸಿ ನನಗೆ ಕಷಾಯ ಕೊಡಮ್ಮ ಎಂದು ಕೇಳುತ್ತಾರೆ. ಇದನ್ನು ಕೇಳಿದ ಸಮರ್ಥ್ ಅವರು ಮನೆಯಲ್ಲಿ ಇಲ್ಲ ಎಲ್ಲಾ ಹೊರಗೆ ಹೋಗಿದ್ದಾರೆ ಎಂದಾಗ ತಾತ ಕೊಂಚ ಕೋಪ ಮಾಡಿಕೊಳ್ತಾರೆ. ಇನ್ನೂ ಮುಂದೆ ಕಾದು ನೋಡಬೇಕಿದೆ.