Srirasthu Shubhamasthu: ಅಪ್ಪನ ಕುತ್ತಿಗೆ ಪಟ್ಟಿ ಹಿಡಿದ ಅಭಿ; ಶಾರ್ವರಿ ನಾಟಕಕ್ಕೆ ಹೆದರಿದ ಮನೆ ಮಂದಿ
ಶ್ರೀ ರಸ್ತು ಶುಭ ಮಸ್ತು ಧಾರವಾಹಿ ಅಧುತವಾಗಿ ಮೂಡಿ ಬರುತ್ತಿದೆ. ಇದೀಗ ಮಾಧವ ಹಾಗೂ ತುಳಸಿ ಮದುವೆ ನಿರ್ವಿಘ್ನವಾಗಿ ನಡೆದು ಹೋಗಿದೆ. ತುಳಸಿಯನ್ನು ಕರೆದುಕೊಂಡು ಮಾಧವ ತನ್ನ ಮನೆಗೆ ಬಂದಿದ್ದಾನೆ . ಆದರೆ ದತ್ತ ಮಾತ್ರ ತುಳಸಿ ಇನ್ನೂ ನನ್ನ ಮನೆಗೆ ಬರುವುದಿಲ್ಲ ಆಕೆ ಇನ್ನೂ ಮಾಧವನ ಸ್ವತ್ತು ಎಂದೆಲ್ಲ ಅಂದುಕೊಂಡು ಇರುತ್ತಾನೆ.
ಇನ್ನೂ ದತ್ತ ಮಾತ್ರ ಬಹಳ ಬೇಸರ ಮಾಡಿಕೊಂಡು ಇರಬೇಕಾದರೆ ದತ್ತನಿಗೆ ಸೇಶು ಸಮಾಧಾನ ಮಾಡುತ್ತಾರೆ.. ಇನ್ನೂ ತುಳಸಿ ಹಾಗೂ ಮಾಧವಾಜನ್ನು ನೋಡಿದ ಅಭಿ ಮಾತ್ರ ಬಹಳ ಕೋಪಗೊಂಡು ಮಧವನನ್ನು ತಂದೆ ಎಂದು ನೋಡದೆ ಆತನ ಕಾಲರ್ ಪಟ್ಟಿ ಹಿಡಿದು ಎಳೆದಾಡುತ್ತಾ ಇರುತ್ತಾನೆ. ಇದನ್ನು ನೋಡಿದ ತುಳಸಿಗೆ ಒಂದು ಕಡೆ ಬಹಳ ಶಾಕ್ ಆದರೆ ಇನ್ನೊಂದು ಕಡೆ ಪೂರ್ಣಿಮಾ ಅಭಿಯನ್ನು ತಡೆಯುತ್ತಾರೆ..

ಮಾವ ಈ ಮನೆಯಲ್ಲಿ.ಇದ್ದಾರೆ ಅಷ್ಟೇ.. ಅವರಿಗೆ ಯಾರಾದರೂ ಬೆಲೆ ಕೊಡುತ್ತಾ ಇದ್ದೀರಾ ಅವರ ಮಾತು ಯಾರಾದರೂ ಕೇಳಿಸಿಕೊಳ್ಳಲು ರೆಡಿ ಇದ್ದೀರಾ.. ಎಲ್ಲವನ್ನೂ ನಿಮ್ಮ ಸ್ವಾರ್ಥಕ್ಕೆ ನೋಡುತ್ತಿರಾ.. ಅವರಿಗೂ ತನ್ನ ನೋವನ್ನು ಹಂಚಿಕೊಳ್ಳಲು ಒಂದು ಜೀವ ಬೇಕು ಎಂದು ಯಾರಿಗೂ ಅನ್ನಿಸಲೇ ಇಲ್ಲ.. ಅಭಿ ನಿನ್ನ ಮದುವೆಗೆ ಮಾವ ತನ್ನ ತನವನ್ನು ಬಿಟ್ಟು ಹೆಣ್ಣು ಕೇಳಲು ಹೋಗಿದ್ದರು .. ಎಲ್ಲದು ನಿಮಗೋಸ್ಕರ ಮಾಡುತ್ತಾ ಬಂದಿದ್ದಾರೆ ಇದೀಗ ಅವರ ಕಾಲರ್ ಹಿಡಿದು ಎಳೆದಾಡುವಷ್ಟು ಕ್ರೂರ ಮನಸ್ಥಿತಿ ಬರುತ್ತೀರಿ ಅಂದುಕೊಂಡು ಇರಲಿಲ್ಲ ಎಂದು ಹೇಳುತ್ತಾಳೆ.
ಇನ್ನೂ ಮಾಧವ ಹಾಗೂ ತುಳಸಿಯನ್ನು ಒಂದು ಮಾಡಿ ಮನೆಗೆ ತೆರಳಿದ ಸಿರಿ ಗೆ ಕೂಡ ಒಂದು ಆಘಾತ ಎದುರಾಗಿತ್ತು.. ಅಮ್ಮನ ಮದುವೆ ಮಾಡಿರುವುದು ಸಮರ್ಥ್ ಗೆ ಬಹಳ ಆಘಾತ ನೀಡಿದೆ.. ಆದರೆ ಅದಕ್ಕಾಗಿ ತನ್ನ ಹೆಂಡತಿಯನ್ನೇ ದೂರ ಮಾಡುವ ನಿರ್ಧಾರ ಮಾಡುತ್ತಾನೆ.
ಸಿರಿ ಬಳಿ ಜೋರಾಗಿ ಹೇಳುತ್ತಾನೆ.. ನನ್ನ ಮನಸ್ಸಿಗೆ ಪ್ರೀತಿಗೆ ನೀನು ದಕ್ಕೆ ಮಾಡಿದ್ದೀಯಾ .. ಅದನ್ನು ಉಳಿಸಿಕೊಂಡು ಹೋಗಲು ವಿಫಲ ಆಗಿದ್ದೀಯಾ ನನಗೆ ಡೈವರ್ಸ್ ಕೊಟ್ಟು ಹೋಗು ಎಂದು ಹೇಳುತ್ತಾನೆ. ಇದನ್ನು ಕೇಳಿದ ಆಕೆಗೆ ಬಹಳ ನೋವು ಆಗುತ್ತದೆ.. ಹಿಂದಿರುಗಿ ನೋಡುವಷ್ಟರಲ್ಲಿ ಆಕೆಯ ತಂದೆ ನಿಂತು ಇರುತ್ತಾರೆ.. ತಂದೆಯನ್ನು ಬಿಗಿದಪ್ಪಿ ಜೋರಾಗಿ ಅಳುತ್ತಾಳೆ.
ಇನ್ನೂ ಮಾಧವ ತುಳಸಿ ಇರುವಲ್ಲಿಗೆ ಜನಾರ್ಧನ್ ಬರುತ್ತಾನೆ.. ಜನಾರ್ಧನ್ ಮಾಧವ ತುಳಸಿ ಮದುವೆ ಆಗಿರುವುದನ್ನು ನೋಡಿ ಮನ ಬಂದಂತೆ ಬಯ್ಯುತ್ತಾ ಇರುತ್ತಾನೆ ಜೊತೆಗೆ ಮಗಳ ಮದುವೆಯನ್ನು ಅಭಿ ಜೊತೆ ಮಾಡಬಾರದು ಎಂದು ನಿರ್ಧಾರ ಮಾಡುತ್ತಾನೆ.. ಇದನ್ನೆಲ್ಲ ನೋಡಿ ಶಾರ್ವರಿ ತಲೆ ತಿರುಗಿ ಬೀಳುವ ನಾಟಕ ಬೇರೆ..ಇನ್ನೂ ತುಳಸಿ ಗೆ ಇದೆಲ್ಲವನ್ನೂ ನೋಡಿ ಬಹಳ ಭಯ ಪಟ್ಟುಕೊಂಡು ಇರುತ್ತಾಳೆ.. ಇದೇನಾಯ್ತಪ್ಪ ನಾನು ಎನಿದಿಕೊಂಡದ್ದು ಒಂದು ಆಗುತ್ತಿರುವುದು ಇನ್ನೊಂದು ಎಂದು ಹಣೆ ಚಚ್ಚಿಕೊಂಡ ಇರುತ್ತಾಳೆ. ಮುಂದೇನು ಕಾದು ನೋಡಬೇಕಿದೆ


Click it and Unblock the Notifications











