Srirasthu Shubhamasthu: ದತ್ತನ ಬಳಿ ಮನ ಬಿಚ್ಚಿ ಮಾತನಾಡಿದ ಮಾಧವ; ಮಾಧವನ ಮಾತು ಕೇಳಿ ಕೋಪಗೊಂಡ ಸಮರ್ಥ್
ಶ್ರೀ ರಸ್ತು ಶುಭ ಮಸ್ತು ಧಾರಾವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರ ಮನ ಸೆಳೆಯುತ್ತಿದೆ. ದತ್ತ ಮಾಧವನ ಬಳಿ ತುಳಸಿ ಬಗ್ಗೆ ಮಾತನಾಡಲು ಮಾಧವನ ಮನೆಗೆ ಹೋಗುತ್ತಾನೆ. ಆಗ ಮಾಧವನ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿತ್ತು. ಮಾಧವ ದತ್ತನನ್ನು ಕರೆದುಕೊಂಡು ಮಹಡಿ ಮೇಲೆ ಹೋಗುತ್ತಾನೆ ..
ದತ್ತ ನೇರವಾಗಿ ತುಳಸಿ ಬಗ್ಗೆ ಪ್ರಶ್ನೆ ಮಾಡಿದಾಗ ಮಾಧವ ಮೊದಲು ದತ್ತನ ಪ್ರಶ್ನೆಗೆ ಕೊಂಚ ಶಾಕ್ ಆದುದರಿಂದ ಆ ಬಳಿಕ ಎನು ಮಾತನಾಡದೆ ಸುಮ್ಮನೆ ದತ್ತನ ಬಳಿ ಮನ ಬಿಚ್ಚಿ ಮಾತನಾಡುತ್ತಾನೆ. ಮಾಧವ ಮೆತ್ತಗೆ ತುಳಸಿ ಬಗ್ಗೆ ಇರುವ ಭಾವನೆಗಳನ್ನು ದತ್ತನ ಮುಂದೆ ಒಪ್ಪಿಕೊಂಡು ಇರುತ್ತಾನೆ ಆದರೆ ತುಳಸಿಯದ್ದು ಎನು ತಪ್ಪು ಇಲ್ಲ.. ಆಕೆ ಎನು ತಪ್ಪು ಮಾಡಿಯೂ ಇಲ್ಲ ಎಲ್ಲರ ಜೊತೆ ತುಂಬಾ ಚೆನ್ನಾಗಿ ಇದ್ದಾರೆ..

ನನಗೆ ಮಾತ್ರ ತುಳಸಿ ನೋಡಿದಾಗ ಮಾತ್ರ ಮನದಲ್ಲಿ ಏನೋ ಸಂತೋಷ .. ನನ್ನನ್ನು ಕಾಳಜಿ ಮಾಡುವವರು ಇದ್ದಾರೆ ಎನ್ನುವ ಧೈರ್ಯ ಎಲ್ಲವೂ ಆಗುತ್ತದೆ. ಇದನ್ನ ನಾನು ತಪ್ಪು ಎಂದು ಅಂದುಕೊಳ್ಳುತ್ತಾ ಇಲ್ಲ.. ಹಾಗಂತ ತುಳಸಿ ಬಳಿ ನಾನು ಈ ವಿಚಾರ ಹೇಳಲು ಇಲ್ಲ. ಯಾಕೆಂದರೆ ನಮ್ಮ ಸ್ನೇಹಾ ಆ ಕಾರಣದಿಂದ ಹಾಳಾಗಬಾರದು ಎಂಬ ಕಾರಣಕ್ಕೆ ಎಂದು ಹೇಳುತ್ತಾನೆ..
ಇದಕ್ಕಿಂತ ಮುಂಚೆ ದತ್ತನಿಗೇ ಮೊಮ್ಮಗನ ಕರೆ ಬರುತ್ತದೆ. ಆಗ ದತ್ತ ಸಮರ್ಥ್ ಕಾಲ್ ರಿಸೀವ್ ಮಾಡದೇ ಫೋನ್ ಎತ್ತುತ್ತಾನೆ. ಆ ಬಳಿಕ ಕಿಸೆಗೆ ಹಾಕಿಕೊಂಡು ಮಾಧವನ ಬಳಿ ಮಾತನಾಡುತ್ತಾ ಇರುತ್ತಾನೆ. ಇನ್ನೂ ಮಾಧವ ಮಾತ್ರ ದತ್ತನ ಬಳಿ ಮಾತನಾಡುತ್ತಾ ಇರುತ್ತಾನೆ. ದತ್ತ ನಿಮ್ಮ ಬಳಿ ನಾನು ಇದೆಲ್ಲವನ್ನೂ ಹೇಳಕೊಳ್ಳಬಹುದಾಗಿತ್ತು. ಆದರೆ ನಾನು ನಿಮ್ಮ ಬಳಿ ಎನು ಹೇಳಲು ಇಲ್ಲ ಆದು..ಸಾಧ್ಯ ಕೂಡ ಆಗಲಿಲ್ಲ ಎಂದು ಹೇಳುತ್ತಾನೆ
ಇನ್ನೂ ಮಾಧವ ಹಾಗೂ ದತ್ತ ತನ್ನ ಅಮ್ಮನ ಬಗ್ಗೆ ಮಾತನಾಡುತ್ತಾ ಇರುವುದನ್ನು ಕೇಳಿಸಿಕೊಂಡ ಸಮರ್ಥ್ ಗೆ ಮಾತ್ರ ಬಹಳ ಕೋಪ ಬರುತ್ತದೆ. ತನ್ನ ತಾಯಿ ಮೇಲೆ ಬಹಳ ಕೋಪ ಮಾಡಿಕೊಂಡು ಇದ್ದ ಸಮರ್ಥ್ ಮಾತ್ರ ಇದೀಗ ಮಾಧವನ ಮೇಲೆ ಕೂಡ ಕೋಪ ಮಾಡಿಕೊಂಡು ಇರುತ್ತಾನೆ.
ಆತನ ಬೈಕ್ ಗೆ ಎರಡು ಪೆಟ್ಟು ಹೊಡೆದು ಅಲ್ಲಿಂದ ಹೊರಡುತ್ತಾನೆ ಸಮರ್ಥ್. ಇನ್ನು ದತ್ತ ಮಾತ್ರ ಇದೆಲ್ಲವನ್ನೂ ಮಾಧವನ ಬಳಿ ಯಾಕೆ ಕೇಳುತ್ತಿದ್ದಾನೆ ಎಂಬುವುದು ಧಾರವಾಹಿ ನೋಡುಗರ ಬಹುದೊಡ್ಡ ಪ್ರಶ್ನೆ ಆಗಿದೆ.
ಇದೀಗ ಶಾರ್ವರಿ ಮಾತ್ರ ದತ್ತ ಹಾಗೂ ಮಾಧವ ಇನ್ನೂ ರೂಮಲ್ಲಿ ಇದ್ದಾರೆ ಅವರಿಬ್ಬರೂ ಎನು ಮಾತನಾಡಬಹುದು ನಾನು ಇಲ್ಲಿಯೇ ಕುಳಿತುಕೊಂಡು ಇದ್ದರೆ ನನಗೆ ಯಾವ ವಿಚಾರವೂ ತಿಳಿಯುವುದಿಲ್ಲ ಎಂದುಕೊಂಡು ಇರುತ್ತಾಳೆ.


Click it and Unblock the Notifications











