Srirasthu Shubhamasthu: ತುಳಸಿ ಮುಂದೆ ಮದುವೆ ಪ್ರಸ್ತಾಪ ಮಾಡಿದ ದತ್ತ; ಮಾವನ ಮಾತಿಗೆ ದಂಗಾದ ತುಳಸಿ
ಶ್ರೀ ರಸ್ತು ಶುಭ ಮಸ್ತು ಧಾರಾವಾಹಿ ಬಹಳ ಅದ್ಭುತವಾಗಿ ಮೂಡಿ ಬರುತ್ತಾ ಇದ್ದು ನೋಡುಗರ ಮನ ಸೆಳೆಯುವ ಹಾಗೆ ಮಾಡುತ್ತಿದೆ.ಇದೀಗ ದತ್ತ ಮಾಧವ ಹಾಗೂ ತುಳಸಿ ಮದುವೆ ಮಾಡಲು ಹೊರಟಿದ್ದಾರೆ. ಮಾಧವ ಮಾತ್ರ ತುಳಸಿಯನ್ನು ಇಷ್ಟ ಪಟ್ಟಿದ್ದು ಆದರೆ ಈ ವಿಚಾರ ತುಳಸಿಗೆ ತಿಳಿದೇ ಇಲ್ಲ . ಹಾಗೆಯೇ ತುಳಸಿ ಮಾತ್ರ ಮಾಧವಾನನ್ನು ಒಳ್ಳೆಯ ಗೆಳೆಯ ಎಂದಷ್ಟೇ ನಂಬಿದ್ದಾರೆ.
ಇನ್ನೂ ದತ್ತ ನಿಗೆ ಮಾತ್ರ ಬಹಳ ತಲೆಬಿಸಿ ಆಗಿದೆ. ಯಾಕೆಂದರೆ ತನ್ನ ಸೊಸೆಯನ್ನು ನನ್ನ ಕಾಲದ ನಂತರ ನನ್ನ ಹಾಗೆ ಯಾರು ನೋಡಿಕೊಳ್ಳುತ್ತಾರೆ. ಅದಕ್ಕೆ ನಾನು ಹೋಗುವ ಮುಂಚೆ ತುಳಸಿ ಗೆ ಹಾಗೂ ಮಾಧವ ನಿಗೆ ಮದುವೆ ಮಾಡಿದರೆ ಅವರಿಬ್ಬರೂ ಚೆನ್ನಾಗಿ ಇರುತ್ತಾರೆ ಎಂದು ಯೋಚನೆ ಮಾಡುತ್ತಾ ಇರುತ್ತಾನೆ. ಇನ್ನೂ ಮಾಧವನ ಅಭಿಪ್ರಾಯವನ್ನು ದತ್ತ ಕೇಳಿರುತ್ತಾನೆ ಆದರೆ ತುಳಸಿ ಅಭಿಪ್ರಾಯ ಕೇಳಲು ಕೊಂಚ ಹಿಂದೇಟು ಹಾಕುತ್ತ ಇರುತ್ತಾರೆ.

ಇನ್ನೂ ಮಾಧವಾಗೆ ಸಣ್ಣ ಅಳುಕು ಕೂಡ ಆಗುತ್ತದೆ. ತನ್ನ ನಂತರ ಯಾರು ನನ್ನ ಮಗಳಂತ ಸೊಸೆಯನ್ನು ಚ್2ನ್ನಾಗಿ ನೋಡಿಕೊಳ್ಳುವುದು ಮಗ ನೋಡಿದರೆ ಯಾರನ್ನೋ ಒಬ್ಬರನ್ನು ಕರೆದುಕೊಂಡು ಬಂದು ಮದುವೆ ಆಗುವುದಾಗಿ ಹೇಳುತ್ತಲೇ ಇರುತ್ತಾರೆ. ಆದರೆ ಇವನು ಯಾವತ್ತಾದರೂ ತುಳಸಿಯನ್ನು ಬಿಟ್ಟು ಬೇರೆ ಕಡೆ ಮದುವೆ ಆಗಿ ಹೋಗುವುದು ಖಂಡಿತ ಎಂದು ಯೋಚನೆ ಮಾಡುತ್ತಾ ಇರುತ್ತಾರೆ.
ಇನ್ನೂ ತುಳಸಿ ತನ್ನ ಮಗ ಮಾಡಿದ ಘನ ಕಾರ್ಯವನ್ನು ಆಲೋಚನೆ ಮಾಡಿ ಬಹಳ ಬೇಸರ ಮಾಡಿಕೊಂಡು ಇರುತ್ತಾಳೆ..ತನ್ನ ಇಬ್ಬರು ಮಕ್ಕಳು ಒಂದಲ್ಲ ಒಂದು ತಲೆ ನೋವನ್ನು ತೊಂದರೆಯನ್ನು ತಂದು ಇಡುತ್ತಿದ್ದಾರೆ ಎಂದು ಬಹಳ ಬೇಸರ ಮಾಡಿಕೊಂಡು ಇರುತ್ತಾರೆ. ಇನ್ನೂ ಆ ವೇಳೆ ದತ್ತ ತುಳಸಿ ಬಳಿ ಮಾತನಾಡಲು ಬರುತ್ತಾರೆ. ತುಳಸಿ ನನಗೆ ಯಾಕೋ ನಿನ್ನ ಬಳಿ ಒಂದು ವಿಚಾರ ಮಾತನಾಡಬೇಕು ಎಂದು ಅನ್ನಿಸಿ ಬಿಟ್ಟಿತು ಎಂದು ಹೇಳುತ್ತಾರೆ
ಆಗ ತುಳಸಿ ನಿಂತು ಮಾವನ ಬಳಿ ಎನು ಎಂದು ಕೇಳುತ್ತಾಳೆ. ಆಗ ದತ್ತ ಹೇಳುತ್ತಾರೆ. ನಿನ್ನ ಮಕ್ಕಳು ಇಬ್ಬರು ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂಬ ಭರವಸೆ ನನಗೆ ಇಲ್ಲ. ಹಾಗೆಯೇ ನನಗೆ ನೀನು ನನ್ನ ಮಗಳ ಹಾಗೆ ನೀನು ಚೆನ್ನಾಗಿ ಇದ್ದರೆ ನಾನು ಚೆನ್ನಾಗಿ ಇರುತ್ತೇನೆ ಅದಕ್ಕೆ ನಿನ್ನನ್ನು ಯಾರು ಚೆನ್ನಾಗಿ ನೋಡಿಕೊಳ್ಳುತ್ತಾರೆ ಅವರ ಜೊತೆ ಮದುವೆ ಮಾಡಬೇಕು ಎಂದುಕೊಂಡು ಇದ್ದೇನೆ.. ಅದೆಲ್ಲ ಸರಿ ನಿನಗೆ ಮಾಧವನ ಕಂಡರೆ ಯಾವ ರೀತಿ ಒಪೀನಿಯನ್ ಇದೆ ಎಂದು ಕೇಳಿದಾಗ ತುಳಸಿ ದಂಗಾಗುತ್ತಾಳೆ.
ಬಳಿಕ ಮೆತ್ತಗೆ ಹೇಳುತ್ತಾಳೆ ನನಗೆ ಮಾಧವ ಅವರು ಉತ್ತಮ ಗೆಳೆಯ ಎಂದು ಹೇಳಿದಾಗ ದತ್ತ ಮೆತ್ತಗೆ ಹೇಳುತ್ತಾರೆ.. ತುಳಸಿ ನಿನನ್ನು ಮಾಧವನ ಹಾಗೆ ಯಾರು ನೋಡಿಕೊಳ್ಳಲು ಸಾಧ್ಯ ಇಲ್ಲ. ಮಾಧವ ಎಲ್ಲರೂ ಒಂಟಿಯಾಗಿ ಇದ್ದಾನೆ ಅವನ ಮನದ ಆಸೆ ಎನು ಗೊತ್ತಾ. ತುಳಸಿ ಮನದಲ್ಲಿ ಬಹಳ ಗಟ್ಟಿ ಆಗಿ ಇರುವವರು ಆದುದರಿಂದ ಅವರನ್ನು ಯಾರು ಮಣಿಸಲು ಸಾಧ್ಯ ಇಲ್ಲ. ಒಂದು ವೇಳೆ ಅವರಿಗೆ ಯಾರು ಇಲ್ಲ ಎಂದಾದಾಗ ನಾನು ಅವರನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಅದರ ಚಿಂತೆ ಬಿಡಿ ಎಂದು ತನಗೆ ಸಾಂತ್ವನ ಹೇಳಿದ್ದನ್ನು ದತ್ತ ಮನ ಬಿಚ್ಚಿ ಹೇಳುತ್ತಾನೆ. ಇದನ್ನು ಕೇಳಿದ ತುಳಸಿಗೆ ಶಾಕ್ ಆಗುತ್ತದೆ


Click it and Unblock the Notifications











