Srirasthu Shubhamasthu: ಮಾಧವ ತುಳಸಿಗೆ ಕೂಡಿ ಬಂತು ಕಂಕಣ ಭಾಗ್ಯ; ಇಬ್ಬರ ಮದುವೆಗೆ ಅಡ್ಡಿಯಾಗುತ್ತಾರಾ ಮಕ್ಕಳು?
ಶ್ರೀ ರಸ್ತು ಶುಭ ಮಸ್ತು ಧಾರವಾಹಿ ಬಹಳ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರ ಮನ ಸೆಳೆಯುವ ಹಾಗೆ ಮಾಡುತ್ತಿದೆ. ಇದೀಗ ಮಾಧವ ಗೆ ತುಳಸಿ ಸಿಗುತ್ತಾಳೆ. ತುಳಸಿ ಗೆ ಬೇರೆ ಎಲ್ಲಾದರೂ ಒಂದು ಕಡೆ ಹೋಗಬೇಕು .. ಆ ತರ ಕೈ ಗೆ ಕೂಡ ಸಿಗದಷ್ಟು ದೂರ ಹೋಗ ಬೇಕು ಎಂದುಕೊಂಡು ಇರುತ್ತಾಳೆ. ಎಲ್ಲರೂ ತುಳಸಿಯನ್ನು ತಾತ್ಸಾರದಿಂದ ನೋಡುತ್ತಾ ಇರುತ್ತಾರೆ ಅದರಲ್ಲೂ ಆಕೆಯ ಮಕ್ಕಳಂತೂ ಬಹಳ ಅಮ್ಮನನ್ನು ಕೀಳಾಗಿ ಕಂಡಿರುತ್ತಾರೆ
ಇದೆಲ್ಲವನ್ನೂ ನೋಡಿದ ತುಳಸಿ ಯಾರಿಗೂ ಸಿಗದೆ ಮನೆ ಬಿಟ್ಟೆ ಹೋಗುತ್ತಾಳೆ. ಇನ್ನೂ ಮಾಧವನ ಮನೆಯಲ್ಲಿ ಮದುವೆ ಕಾರ್ಯಗಳು ಒಂದೊಂದು ಆಗಿ ಶುರುವಾಗಿ ಬಿಟ್ಟಿದೆ. ಮದುವೆಯ ಸಂಭ್ರಮದಲ್ಲಿ ಇದ್ದ ಮಾಧವ ಗೆ ಮಾತ್ರ ತುಳಸಿಯನ್ನೂ ಕಂಡು ಬಹಳ ಶಾಕ್ ಆಗುತ್ತದೆ. ಆ ಬಳಿಕ ದತ್ತ ಹೇಳಿದ ಕಡೆ ತುಳಸಿಯನ್ನು ಕರೆದುಕೊಂಡು ಬರುತ್ತಾನೆ ಮಾಧವ. ಇನ್ನೂ ಸಿರಿ ಮಾತ್ರ ಯಾರ ಬಳಿಯೂ ಮಾತನಾಡದೆ ಸುಮ್ಮನೆ ಇರುತ್ತಾಳೆ.

ಸಮರ್ಥ್ ಮಾತಿಗೆ ಕೂಡ ಯಾವುದೇ ರೀತಿಯ ಸ್ಪಂದನೆ ಕೊಡದೆ ಸುಮ್ಮನೆ ಇದ್ದು ಬಿಡುತ್ತಾಳೆ. ಸಮರ್ಥ್ ಮಾತ್ರ ಅಮ್ಮ ಎಲ್ಲಿ ಹೋದರೂ. ಎಲ್ಲಾದರೂ ಮಾಧವನ ಜೊತೆ ಹೋಗಿ ಬಿಟ್ಟಳ ಹೇಗೆ ಎಂದು ಯೋಚನೆ ಮಾಡುತ್ತಾ ಇರುತ್ತಾನೆ. ಅಮ್ಮ ಎಲ್ಲಿ ಹೋಗಿದ್ದಾರೆ ಎಂದು ತಿಳಿಯಲು ಬೇಕು ಎಂದು ಸಮರ್ಥ್ ಅಂದುಕೊಂಡರೆ ಇತ್ತ ಶಾರ್ವರಿ ಬಳಿ ಮನೆಯ ಕೆಲಸದಾಕೆ ಬಂದು ಎಲ್ಲಾ ವಿಚಾರ ಹೇಳಿ ಇರುತ್ತಾಳೆ..
ಇದರಿಂದ ಗೊಂದಲಕ್ಕೀಡಾದ ಶಾರ್ವರಿ ಮಾತ್ರ ಎನು ಮಾಡುವುದು ಎಂದು ತಿಳಿಯದೇ ಜನಾರ್ಧನ ನಿಗೆ ಕರೆ ಮಾಡಿ ಎಲ್ಲಾ ವಿಚಾರವನ್ನು ಹೇಳುತ್ತಾಳೆ. ಜನಾರ್ಧನ್ ಮ್ಮಾತ್ರ ಸರಿ ನಾನು ಏಳ ನೋಡಿಕೊಳ್ಳುತ್ತೇನೆ ಎಂದು ಫೋನ್ ಇಡುತ್ತಾನೆ. ಇತ್ತ ಮಾಧವ ತುಳಸಿ ಗೆ ತನ್ನ ಮನದಲ್ಲಿ ಇರುವ ಪ್ರೀತಿಯನ್ನು ಹೇಳುತ್ತಾನೆ. ಇದನ್ನು ಕೇಳಿದ ತುಳಸಿ ಗೆ ಸಿಡಿಲು ಬಡಿದ ಅನುಭವ ಆಗುತ್ತದೆ. ಯಾಕೆಂದರೆ ತುಳಸಿ ಆ ರೀತಿ ಅಂದುಕೊಂಡೆ ಇರಲಿಲ್ಲ.
ಪಾಪ ಆಕೆಗೆ ಆತನ ಮಾತನ್ನು ಅರಗಿಸಿಕೊಳ್ಳಲು ಕೂಡ ಸಾಧ್ಯ ಆಗುತ್ತಿಲ್ಲ ಎನು ಮಾಡುವುದು ಎಂದು ತಿಳಿಯದೇ ತನ್ನ ನೋವನ್ನು ಮನದಲ್ಲಿ ಅದುಮಿ ಇಟ್ಟುಕೊಂಡು ಇರುತ್ತಾರೆ. ದಾತ್ತನನ್ನು ನೋಡಿದ ತುಳಸಿ ಗೆ ಇನ್ನೂ ಶಾಕ್ ಆಗುತ್ತದೆ. ದತ್ತ ಹೇಳುತ್ತಾರೆ ಈ ಮದುವೆ ಎಂದು ನಡೆಯಲಿ ದೇವರಲ್ಲಿ ಬೇಡಿಕೋ... ಎಂದಾಗ ತುಳಸಿ ಮಾತ್ರ ನನಗೆ ಯಾವುದೇ ಮದುವೆ ಬೇಡ .. ನನಗೆ ಮದುವೆ ಆಗಲು ಇಷ್ಟ ಇಲ್ಲ ಎಂದು ದೂರ ಹೋದಾಗ ದೇವರ ತೇರು ಎದುರುಗಡೆ ಬರುತ್ತದೆ ಅದರಿಂದ ಒಬ್ಬ ಹೆಂಗಸು ಅರಶಿನ ಕುಂಕುಮವನ್ನೂ ಕೊಡುತ್ತಾರೆ.
ಇದನ್ನು ನೋಡಿದ ತುಳಸಿ ಗೆ ಇನ್ನೂ ಶಾಕ್ ಆಗುತ್ತದೆ ಆಕೆ ತಟ್ಟೆಯನ್ನು ಹಿಡಿದುಕೊಂಡು ನಿಂತು ಇರಬೇಕಾದರೆ ಸಮರ್ಥ್ ಕೂಡ ಅದೇ ದೇವಾಲಯಕ್ಕೆ ಬರುತ್ತಾನೆ .. ಸಮರ್ಥ್ ಗೆ ಒಂದೇ ಮನದಲ್ಲಿ ಇರೋದು ಮದುವೆ ನಡೆಯಲು ಬಿಡುವುದು ಬೇಡಾ ಎಂದು. ಇನ್ನೂ ದತ್ತ ಅದೇ ಮಾತನ್ನು ಹೇಳುತ್ತಾನೆ ನಾನು ಹೇಳಿದೆ ಅಲ್ವಾ ಈ ಮದುವೆ ಮಾಡಬೇಕು ಎಂದು ದೇವರು ನಿರ್ಣಯ ಮಾಡಿದ್ದಾರೆ ಎಂದು ಹೇಳಿದಾಗ ತುಳಸಿ ಸುಮ್ಮನೆ ಆಗುತ್ತಾಳೆ


Click it and Unblock the Notifications











