Srirasthu Shubhamasthu: ದತ್ತನ ಸಾಂತ್ವನದ ಮಾತು ಕೇಳಿ ಸಂತೋಷಗೊಂಡ ಮಾಧವ

By Poorva

ಶ್ರೀ ರಸ್ತು ಶುಭ ಮಸ್ತು ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದೆ. ಇದೀಗ ಮಾಧವ ದತ್ತನ ಬಳಿ ಎಷ್ಟು ಕ್ಲೋಸ್ ಆಗಿದ್ದಾನೋ ಹಾಗೆಯೇ ಅವಿ ತುಳಸಿ ಜೊತೆ ಅಷ್ಟೇ ಕ್ಲೋಸ್ ಆಗಿದ್ದಾನೆ. ತುಳಸಿ ಪ್ರೀತಿ ಅವಿಗೆ ತನ್ನ ತಾಯಿಯನ್ನೇ ನೆನಪಿಸಿದೆ.

ಆತ ಬಹಳ ಬೇಸರ ಮಾಡಿಕೊಂಡಿರುತ್ತಿದ್ದ. ನನ್ನ ತಾಯಿ ಸಾವಿಗೆ ನನ್ನ ತಂದೆಯೇ ಕಾರಣ ಎಂದು ಚಿಕ್ಕ ವಯಸ್ಸಿನಿಂದಲೂ ಬಹಳ ದ್ವೇಷ ಮಾಡಿಕೊಂಡೆ ಬೆಳೆದ ಹುಡುಗ . ಆದರೆ ಇದೀಗ ತಾಯಿ ಕೊರತೆ ಸ್ವಲ್ಪ ಮಟ್ಟಿಗೆ ನೀಗಿತು ಎಂದು ಖುಷಿ ಪಡುತ್ತ ಇರುತ್ತಾನೆ .

srirasthu shubhamasthu

ಇನ್ನೂ ತುಳಸಿ ಯಾವತ್ತೂ ಟಿಫನ್ ನಲ್ಲಿ ಬಹಳ ವಿಶೇಷವಾದ ಅಡುಗೆ ಮಾಡಿಕೊಂಡು ಹೋಗಿ ಬಾಸ್ ಸ್ಟ್ಯಾಂಡ್ ನಲ್ಲಿ ನಿಂತು ಅವಿಗಾಗಿ ಕಾದು ಆ ಟಿಫನ್ ಬಾಕ್ಸ್ ಅನ್ನು ಕೊಟ್ಟು ಅಲ್ಲಿಂದ ಹೋಗುತ್ತಾರೆ. ಪ್ರತಿ ದಿನ ಕೂಡ ಹೀಗೆ ನಡೆಯುತ್ತಾ ಇರುತ್ತದೆ. ಆದರೆ ಎಂದು ಮಾತ್ರ ಅವಿ ಕಾರಿನಿಂದ ಬಹಳ ಖುಷಿಯಿಂದ ಇಳಿಯುತ್ತಾನೆ.

ಅವಿ ಕಂಡು ಖುಷಿ ಪಟ್ಟ ತುಳಸಿ

ಆತನ ಕೈಯಲ್ಲಿ ಒಂದು ಡಬ್ಬಿ ಕೂಡ ಇರುತ್ತದೆ. ತುಳಸಿ ಆತನಿಗೆ ತಾನು ತಂದ ಡಬ್ಬಿ ಕೊಡುತ್ತಾಳೆ. ಆದರೆ ಅವಿ ಕೂಡ ಹಾಗೆಯೇ ತುಳಸಿಗೆ ಡಬ್ಬಿ ತರುತ್ತಾನೆ. ಆತ ಮೆತ್ತಗೆ ತುಳಸಿಗೆ ತಾನು ತಂದ ಡಬ್ಬಿ ಕೊಟ್ಟು ಹೇಳುತ್ತಾನೆ ಅಮ್ಮ ನೀವು ನಿಮಗೆ ತಂದ ಡಬ್ಬಿಯನ್ನು ನನಗೆ ಕೊಡುತ್ತೀರಾ .. ಹಾಗೆಯೇ ನಾನು ಕೂಡ ನಿಮಗೆ ಡಬ್ಬಿ ಕೊಡುತ್ತಾ ಇದ್ದೇನೆ . ನೀವು ಮಧ್ಯಾಹ್ನ ಎನು ತಿನ್ನುತ್ತೀರಾ.. ನಿಮಗೂ ಊಟ ತಂದಿದ್ದಿನಿ ಆದರೆ ನಾನು ಅಡುಗೆ ಮಾಡಿದ್ದಲ್ಲ ನನ್ನ ಹೆಂಡತಿ ಅಡುಗೆ ಮಾಡಿದ್ದು ಎಂದು ಹೇಳುತ್ತಾನೆ.

ಇದನ್ನು ಕೇಳಿದ ತುಳಸಿ ಗೆ ನಗು ಉಮ್ಮಳಿಸಿ ಬರುತ್ತದೆ. ಮಾಧವ ದತ್ತ ನನ್ನು ನೋಡಿ ಶಾಕ್ ಆಗಿರುತ್ತಾನೆ. ಯಾಕೆಂದರೆ ಪೇಪರ್ ನಲ್ಲಿ ಬಂದು ಹಾಗೂ ತುಳಸಿ ಫೋಟೋ ಬಂದಿದ್ದಕ್ಕೆ ದತ್ತ ಕೋಪ ಮಾಡಿಕೊಂಡು ಇರಬಹುದು ಎಂದು ಅಂದುಕೊಂಡ ಮಾಧವ ಗೆ ಶಾಕ್ ಆಗುತ್ತದೆ.

ಆದರೆ ದತ್ತ ಒಂದೇ ಒಂದು ಪ್ರಶ್ನೆಯನ್ನು ಮಾಧವನ ಬಳಿ ಕೇಳಬೇಕು ಅನ್ನಿಸುತ್ತದೆ. ದತ್ತ ಮಾಧವನ ಬಳಿ ಪ್ರಶ್ನೆ ಕೇಳುತ್ತಾನೆ. ಚಪ್ಪಲಿ ಕಳ್ಳ ನಿನಗೆ ಯಾರಾದರೂ ಸಂಗಾತಿ ಬೇಕು ಎಂದು ಅನ್ನಿಸಲಿಲ್ವ . ಎಂದೆಲ್ಲ ಕೇಳಿದ ವೇಳೆ ದತ್ತನ ಬಳಿ ಮನ ಬಿಚ್ಚಿ ಮಾತನಾಡುತ್ತಾನೆ ಮಾಧವ. ದತ್ತ ಒಂದೊಂದು ಬಾರಿ ನನಗೆ ಅನ್ನಿಸುತ್ತದೆ.

ನನಗೆ ಸಂಗಾತಿ ಬೇಕು ಎಂದು ಆದರೆ ಎನು ಮಾಡುವುದು.. ನನ್ನ ಕಷ್ಟ ಸುಖದಲ್ಲಿ ಭಾಗು ಆಗುವವರು ಬೇಕು ಎನ್ನಿಸುತ್ತದೆ. ಮಗ ಸೊಸೆ ಇದ್ದಾರೆ ಆದರೆ ನನಗೆ ಮೀಸಲಿಡಲು ಅವರ ಬಳಿ ಹೆಚ್ಚು ಸಮಯ ಇರುವುದಿಲ್ಲ ಪ್ರೈವೆಸಿ ಬೇಕಾಗುತ್ತದೆ. ಆದರೆ ಆ ವೇಳೆ ನನಗೆ ಸದಾ ಒಂಟಿತನ ಕಾಡುತ್ತದೆ ಎಂದೆಲ್ಲ ಬಹಳ ಬೇಸರದಿಂದ ದತ್ತನ ಬಳಿ ಹೇಳಿದಾಗ ದತ್ತ ಸಮಾಧಾನ ಮಾಡುತ್ತಾನೆ ಬಳಿಕ ಮಾಧವನ ಬಳಿ ಹೇಳುತ್ತಾನೆ ಸಮಾಧಾನ ಮಾಡಿಕೋ ಚಪ್ಪಲಿ ಕಳ್ಳ. ಜನ ಏನೇ ನಿನ್ನ ಹಾಗೂ ತುಳಸಿ ಬಗ್ಗೆ ಹೇಳಿದರು ನಾನು ಮಾತ್ರ ಯಾವತ್ತೂ ಅದೆಲ್ಲವನ್ನೂ ತಲೆಗೆ ಹಾಕಿಕೊಳ್ಳುವುದು ಇಲ್ಲ..ಎಂದೆಲ್ಲ ಹೇಳಿ ಸಾಂತ್ವನ ಮಾಡುತ್ತಾರೆ.

More from Filmibeat

English summary
Kannada serial Srirastu Shubhamastu written update on 5th july
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X