Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶ್ರೆಯಾ ಪಾಲಾಗಿರುವ ಅದೃಷ್ಟ ವೈದೇಹಿಯತ್ತ ತಿರುಗುತ್ತಾ
ವೈದೇಹಿ ಪರಿಣಯ ಧಾರವಾಹಿ ಜನರ ಮೋಡಿ ಮಾಡಿದೆ. ವೈದೇಹಿ, ದೇವಂಶನನ್ನು ತುಂಬಾ ಪ್ರೀತಿ ಮಾಡಿದ್ದಳು ಆದರೆ ವೈದೇಹಿಯ ಹೆಸರನ್ನು ಶ್ರಿಯಾ ಎಂದು ತಿಳಿದು ಇದೀಗ ದೇವಾಂಶನ ಕುಟುಂಬದವರು ಖುಷಿಯಾಗಿದ್ದಾರೆ. ಆದರೆ ಮುಂಬರುವ ದಿನಗಳಲ್ಲಿ ಪೇಚಿಗೆ ಸಿಲುಕುವುದಂತು ಸತ್ಯ.
ಇದೀಗ ದೇವಂಶ ಮನೆಯಲ್ಲಿ ಶ್ರಿಯಾ ಗೆ ಬಂಗಾರದ ಬಳೆಗಳನ್ನು ಕೊಡಲು ಕೈ ಅಳತೆ ತೆಗೆದುಕೊಳ್ಳುವ ನೆಪದಲ್ಲಿ ಅಜ್ಜಿ ವೈದೇಹಿ ಮನೆಯತ್ತ ಹೊರಟಿದ್ದಾರೆ. ಜೊತೆ ದೇವಂಶ ಅಜ್ಜಿಯನ್ನು ಕಳುಹಿಸಲು ಹೋಗುತ್ತಿದ್ದಾನೆ. ಇನ್ನೂ ದೇವಂಶ ತಾಯಿ ಬಳೆಗಳನ್ನು ಹಿಡಿದು ಕುಳಿತಿರುತ್ತಾಳೆ.
ಆಗ ದೇವಂಶನ ಅಮ್ಮನ ತಂಗಿ ಬಂದು ಹೇಳುತ್ತಾಳೆ ಎನು ಅಕ್ಕ ಯುದ್ಧಕ್ಕೆ ಹೋಗುವವರ ಕೈಗೆ ಖಡ್ಗ ಕೊಟ್ಟು ಕಳುಹಿಸುವ ಹಾಗೆ ಇಷ್ಟು ಉದ್ದ ಬಾಕ್ಸ್ ಇಟ್ಟುಕೊಂಡಿದ್ದಿಯಾ ಎನ್ನುತ್ತಾಳೆ. ಅದಕ್ಕೆ ದೇವಂಶ ತಾಯಿ ಹೇಳುತ್ತಾರೆ ಜಾನಕಿ ರಾಮ ಅವರ ಮನೆಗೆ ಅಮ್ಮ ಬಂಗಾರದ ಬಳೆ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಹೇಳುತ್ತಾಳೆ ಆಗ ದೇವಂಶ ಬರುತ್ತಾನೆ ಯಾಕೆ ಅಮ್ಮ ನೀನು ಬರುತ್ತಿಲ್ವಾ ಎಂದಾಗ ದೇವಂಶ ತಂದೆ ಬಂದು ಕೇಳುತ್ತಾರೆ ಅದಕ್ಕೆ ನೀನು ಹೋಗುತಿದ್ದಿಯಾ ಎಂದು ಆಗ ದೇವಂಶ ನಗುತ್ತಾನೆ .
ದೇವಂಶ, ಅತ್ತಿಗೆ ಬಂದು ಹೇಳುತ್ತಾಳೆ ಅದು ಯಾಕೆ ಹೋಗುತ್ತಾಳೆ. ಶಾಸ್ತ್ರ ಅಂದ್ರಲ್ವಾ ಎಂದು ಕೊಂಕಿನಿಂದ ಹೇಳುತ್ತಾಳೆ ಆಗ ಅಜ್ಜಿ ಬಂದು ಹೇಳುತ್ತಾರೆ. ನನ್ನ ಕರೆದುಕೊಂಡು ಹೋಗಿ ಬಿಡುತ್ತಾನೆ ಹೊರತು ಅವನನ್ನು ಒಳಗೆ ಕರೆದುಕೊಂಡು ಹೋಗಲು ಅನುಮತಿ ನೀಡಲ್ಲ ಎಂದು ಹೇಳುತ್ತಾರೆ. ಅದಕ್ಕೆ ದೇವಂಶನ ಅಣ್ಣ ಹೇಳುತ್ತಾರೆ ಅದಕ್ಕೆ ನೀನೇ ಹೋಗಬೇಕಾ ಬೇರೆ ಯಾರನ್ನಾದರೂ ಕಳುಹಿಸು ಎಂದು ಹೇಳುತ್ತಾನೆ .
ಆಗ ದೇವಂಶನ ಅತ್ತಿಗೆ ಕೊಂಕೀನಿಂದ ಹೇಳುತ್ತಾಳೆ. ನಿಮಗೆ ಯಾರಿಗೂ ಗೊತ್ತಿಲ್ವಾ ಶ್ರಿಯಾ ಸುತ್ತ ಮುತ್ತ ಇದ್ದರೆ ದೇವಂಶಗೇ ಅವನ ಸೇಂಟ್ ವಾಸನೆ ಗೊಟ್ಟಗತ್ತೆಂತ ಎಂದಾಗ ಅಣ್ಣ ಹೇಳುತ್ತಾನೆ ಹೀಗೂ ಇದ್ಯಾ ಎನ್ನುತ್ತಾನೆ. ಆಗ ದೇವಂಶ ಹೇಳುತ್ತಾನೆ ಎಸ್ ಬ್ರದರ್ ನಮ್ಮ ಊರಿನ ಮಣ್ಣಿನ ವಾಸನೆ ನಾನು ಇಷ್ಟ ಪಟ್ಟಿರುವ ಶ್ರಿಯಾ ಸೇಂಟ್ ನ ಭೂಮಿಲಿ ಎಲ್ಲೆ ಇದ್ದರೂ ಕಂಡು ಹಿಡಿಯುತ್ತೇನೆ. ಹಾ.. ಎಂದು ಹೊರಡೋಣ .. ಅಮ್ಮ ಹೋಗ್ ಬರುತ್ತೇವೆ, ಬಾ ಎಂದು ಬೇಗ ಎಂದು ಹೇಳುತ್ತಾನೆ. ಬಳಿಕ ಅಜ್ಜಿಯನ್ನು ಕರೆದುಕೊಂಡು ಹೋಗುತ್ತಾನೆ.
ಇನ್ನೂ ವೈದೇಹಿ ಮನೆಗೆ ಆಗಮಿಸಿದರು ಅಜ್ಜಿ . ಅಜ್ಜಿಯನ್ನು ಕಂಡು ವೈದೇಹಿ ಚಿಕ್ಕಮ್ಮ ಹೇಳುತ್ತಾರೆ ಇಷ್ಟು ಬೇಗ ಬರುತ್ತಿರಿ ಅಂದುಕೊಂಡಿರಲಿಲ್ಲ, ಸಂಜೆ ಬರುತ್ತಿರಿ ಅಂದುಕೊಂಡಿದ್ದೆ ಅದಕ್ಕೆ ವೈದೇಹಿ ತಮ್ಮ ಹೇಳುತ್ತಾನೆ ಅಜ್ಜಿ ಬೇಗ ಬಂದಿರುವುದು ಶ್ರಿಯಾ ಅಕ್ಕನ ಬಳಿ ಮಾತನಾಡೋಣ ಅಂತ ಇರಬೇಕು ಎನ್ನುತ್ತಾನೆ. ಆಗ ಅಜ್ಜಿ ಹೇಳುತ್ತಾರೆ ಬಾಯಿ ಮುಚ್ಚಿಕೊ ತಲೆಹರಟೆ ಎಳೆ ಬದನೇಕಾಯಿ ಎನ್ನುತ್ತಾಳೆ ನಗುತ್ತಾ.
ಅದಕ್ಕೆ ದೇವಂಶ ಅಜ್ಜಿ ಹೇಳುತ್ತಾರೆ ನಿಮ್ಮ ಮೊಮ್ಮಗ ಸರಿಯಾಗಿ ಹೇಳಿದ ಈ ಬಂಗಾರದ ಬಳೆನ ಶ್ರಿಯಾ ಗೆ ತೊಡಿಸಿ ಮಾತನಾಡಿಕೊಂಡು ಹೋಗೋಣ ಅಂತ ಬಂದೆ ಎಂದರು. ಆಗ ಶ್ರಿಯಾ ತಾಯಿ ಹೇಳುತ್ತಾರೆ ಅವಳಿನ್ನೂ ಮನೆಗೆ ಬಂದಿಲ್ಲ..ಎನ್ನುತ್ತಾರೆ ಅದಕ್ಕೆ ಅಜ್ಜಿ ಹೇಳುತ್ತಾರೆ ಅಂದ್ರೆ ಓದಿನ ಮೇಲೆ ತುಂಬಾ ಭಕ್ತಿ ಅವಳಿಗೆ. ಮದುವೆ ಆಗುತ್ತೇನೆ ಎಂದು ಗೊತ್ತಿದ್ದರೂ ಕಾಲೇಜಿಗೆ ಹೋಗಿ ಬರುತ್ತಾಳೆ ಅಂದರೆ ಸರಸ್ವತಿ ಅನುಗ್ರಹ ಎಷ್ಟಿದೆ ಅಂತ ಅರ್ಥ ಮಾಡಿಕೊಳ್ಳಿ ಎನ್ನುತ್ತಾರೆ. ಅದಕ್ಕೆ ದೇವಂಶ ಅಜ್ಜಿ ಹೇಳುತ್ತಾರೆ ಶ್ರಿಯಾ ಮನೇಲಿ ಇರುತ್ತಾಳೆ ಅದಕ್ಕೆ ಈ ಬಳೆ ಆದರೆ ಇನ್ನೂ ಬೇರೆ ಬೇರೆ ರೀತಿಯ ಬಳೆಗಳ ಆರ್ಡರ್ ಕೊಡಬಹುದು ಎಂದು ಬಂದೆ. ಎನ್ನುತ್ತಾರೆ..ಅದಕ್ಕೆ ಶ್ರಿಯಾ ತಾಯಿ ಹೇಳುತ್ತಾರೆ ನಿಮಗೆ ಬಳೆ ಅಳತೆ. ಬೇಕಾದರೆ ವೈದೇಹಿ ಕೈಗೆ ತೊಡಿಸಿ ಅವಳದ್ದು ಹಾಗೂ ಶ್ರಿಯಾದ್ದು ಒಂದೇ ಕೈ ಅಳತೆ ಎನ್ನುತ್ತಾರೆ. ಅದಕ್ಕೆ ವೈದೇಹಿ ಅಜ್ಜಿಗೆ ಹೆದರಿ ಬೇಡ ಎನ್ನುತ್ತಾಳೆ ಆದರೂ ಒತ್ತಾಯದಿಂದ ಆಕೆಯ ಕೈ ಅಳತೆ ತೆಗೆದುಕೊಳ್ಳುತ್ತಾರೆ.