Don't Miss!
- News Namma Metro Purple Line: ದೈನಂದಿನ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಇಳಿಕೆ, ಕಾರಣಗಳೇನು?
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Technology Tecno: ಬಹುನಿರೀಕ್ಷಿತ ಟೆಕ್ನೋ ಪೋವಾ 6 ಪ್ರೊ ಲಾಂಚ್! 12GB RAM.. 6000mAh ಬ್ಯಾಟರಿ.. ಬೆಲೆ ಎಷ್ಟು?
- Finance ಮೃತರ ಖಾತೆಯಲ್ಲಿರುವ ಹಣವನ್ನು ಕುಟುಂಬಸ್ಥರು ಡ್ರಾ ಮಾಡಬಹುದಾ, ಬ್ಯಾಂಕ್ ನಿಯಮಾವಳಿ ಏನು ಹೇಳುತ್ತೆ?
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Lifestyle ಬಾಯಲ್ಲಿ ನೀರು ತರಿಸುವ ಮಾವಿನ ಕಾಯಿ ಚಟ್ನಿ..! 5 ನಿಮಿಷದಲ್ಲಿ ರೆಡಿ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಸುಬ್ಬಲಕ್ಷ್ಮಿ' ಪತಿಗೆ ರಿಯಲ್ಲಾಗಿ ಮದುವೆ ಆಗೇಹೋಯ್ತು ಕಣ್ರೀ.!
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ 'ಸುಬ್ಬಲಕ್ಷ್ಮಿ ಸಂಸಾರ' ಧಾರಾವಾಹಿ ಮತ್ತು ಕಲರ್ಸ್ ಕನ್ನಡ ವಾಹಿನಿಯ 'ರಕ್ಷಾ ಬಂಧನ' ಸೀರಿಯಲ್ ನಲ್ಲಿ ಅಭಿನಯಿಸಿದ್ದ ಭವಾನಿ ಸಿಂಗ್ ವೈವಾಹಿಕ ಬದುಕಿಗೆ ನಾಂದಿ ಹಾಡಿದ್ದಾರೆ.
ತಮ್ಮ ಬಹುಕಾಲದ ಗೆಳತಿ ಪಂಕಜಾ ಶಿವಣ್ಣ ಜೊತೆಗೆ ಭವಾನಿ ಸಿಂಗ್ ಸಪ್ತಪದಿ ತುಳಿದಿದ್ದಾರೆ. ಭವಾನಿ ಸಿಂಗ್-ಪಂಕಜಾ ಶಿವಣ್ಣ ವಿವಾಹ ಮಹೋತ್ಸವಕ್ಕೆ ಕಿರುತೆರೆ ಲೋಕದ ಗಣ್ಯರು ಸಾಕ್ಷಿ ಆಗಿದ್ದರು.
ಹಾಗ್ನೋಡಿದ್ರೆ, ಭವಾನಿ ಸಿಂಗ್ ಮತ್ತು ಪಂಕಜಾ ಶಿವಣ್ಣ ರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಎರಡು ವರ್ಷಗಳಿಂದ ಕ್ಲೋಸ್ ಫ್ರೆಂಡ್ಸ್ ಆಗಿದ್ದ ಭವಾನಿ ಸಿಂಗ್ ಮತ್ತು ಪಂಕಜಾ ಸ್ನೇಹ ಇತ್ತೀಚೆಗಷ್ಟೇ ಪ್ರೀತಿಗೆ ತಿರುಗಿತ್ತು. ತಮ್ಮ ಪ್ರೀತಿಗೆ ಕುಟುಂಬದ ಸಮ್ಮತಿ ಪಡೆದು, ಮದುವೆ ಎಂಬ ಅಧಿಕೃತ ಮುದ್ರೆ ಹಾಕಿಸಿಕೊಂಡಿದ್ದಾರೆ ಈ ಜೋಡಿ.
ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಅಗ್ನಿಸಾಕ್ಷಿ' ಧಾರಾವಾಹಿ ಖ್ಯಾತಿಯ ನಟಿ ಮಾಯಾ
'ಕನ್ನಡದ ಕೋಟ್ಯಧಿಪತಿ' ಕಾರ್ಯಕ್ರಮದಲ್ಲಿ ಭವಾನಿ ಸಿಂಗ್ ಹಾಟ್ ಸೀಟ್ ಮೇಲೆ ಕೂತಾಗಲೂ, ಅವರನ್ನ ಸಪೋರ್ಟ್ ಮಾಡಲು ಪಂಕಜಾ ಆಗಮಿಸಿದ್ದರು.
ಚಿತ್ರಗಳು: ಹ್ಯಾಪಿ ಮ್ಯಾರೀಡ್ ಲೈಫ್ 'ಕುಲವಧು' ದೀಪಿಕಾ ಮತ್ತು ಆಕರ್ಷ್
ರಾಜಸ್ಥಾನ ಮೂಲದವರಾದರೂ ಭವಾನಿ ಸಿಂಗ್ ಬೆಂಗಳೂರಿನಲ್ಲಿ ಬಿಬಿಎಂ ಪದವಿ ಪಡೆದಿದ್ದಾರೆ. ಸ್ಪಷ್ಟವಾಗಿ ಕನ್ನಡ ಮಾತನಾಡುವ ಭವಾನಿ ಸಿಂಗ್ 'ಚರಣದಾಸಿ', 'ಸುಬ್ಬಲಕ್ಷ್ಮಿ ಸಂಸಾರ', 'ರಕ್ಷಾ ಬಂಧನ' ಸೀರಿಯಲ್ ಗಳಿಂದ ಖ್ಯಾತಿ ಗಳಿಸಿದರು. ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಭವಾನಿ ಸಿಂಗ್ ಗೆ ನಮ್ಮ ಕಡೆಯಿಂದಲೂ ಶುಭಾಶಯಗಳು.