twitter
    For Quick Alerts
    ALLOW NOTIFICATIONS  
    For Daily Alerts

    ದೇವೇಗೌಡರ ಗೂಡು ಸೇರಿದ ಟಿವಿ ನಟ ರವಿಕಿರಣ್

    By Rajendra
    |

    TV artist Ravikiran
    ಜಾತ್ಯಾತೀತ ಜನತಾದಳ (ಜೆಡಿಎಸ್) ಪಕ್ಷಕ್ಕೆ ಹೊಸ ನೀರು ಸೇರ್ಪಡೆಯಾಗುತ್ತಿದೆ. ಅದರಲ್ಲೂ ಸಿನೆಮಾ ತಾರೆಗಳು ಒಬ್ಬೊಬ್ಬರಾಗಿ ತೆನೆಹೊತ್ತ ಮಹಿಳೆಯ ಕೈಹಿಡಿಯುತ್ತಿದ್ದಾರೆ. ಪೂಜಾಗಾಂಧಿ, ಮಾಳವಿಕಾ, ಎಸ್. ನಾರಾಯಣ್ ಜೆಡಿಎಸ್ ಗೆ ಧುಮಿಕಿದ್ದಾಯಿತು. ಈಗ ಕಿರುತೆರೆ ಕಲಾವಿದ ರವಿಕಿರಣ್ ಅವರೂ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಗೂಡು ಸೇರಿದ್ದಾರೆ.

    ಆದರೆ ಅವರು ಜೆಡಿಎಸ್ ಪಕ್ಷಕ್ಕೆ ಇನ್ನೂ ಅಧಿಕೃತವಾಗಿ ಸೇರ್ಪಡೆಯಾಗಿಲ್ಲ. ಅವರು ದೇವೇಗೌಡರನ್ನು ಔಪಚಾರಿಕವಾಗಿ ಮಾತನಾಡಿಸಿಕೊಂಡು ಅವರ ಆಶೀರ್ವಾದ ಪಡೆದಿದ್ದಾರೆ ಅಷ್ಟೇ. ಇನ್ನೇನು ಆರು ತಿಂಗಳಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆಗಳು ನಡೆಯಲಿವೆ. ಅವರ ಇಂದಿನ ಭೇಟಿ ರಾಜಕೀಯ ಸೇರ್ಪಡೆಗೆ ಸೂಚನೆಯೇ?

    ಮುಂಬರುವ ಚುನಾವಣೆಯಲ್ಲಿ ಅವರು ಸ್ಪರ್ಧಿಸುತ್ತಾರೋ ಅಥವಾ ಜೆಡಿಎಸ್ ಪಕ್ಷದ ಕಾರ್ಯಕರ್ತರಾಗಿ ತಮ್ಮ ಕೈಲಾದ ಸಹಾಯ ಮಾಡುತ್ತಾರೋ ಗೊತ್ತಿಲ್ಲ. ಒಟ್ಟಿನಲ್ಲಿ ಅವರ ದಿಢೀರ್ ಭೇಟಿ ಕಿರುತೆರೆ ವಲಯದಲ್ಲಿ ಕುತೂಹಲ ಕೆರಳಿಸಿದೆ.

    ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಅಧ್ಯಕ್ಷರೂ ಆಗಿರುವ ಅವರು ಕಿರುತೆರೆ ಕ್ಷೇತ್ರಕ್ಕೆ ತಮ್ಮದೇ ಆದಂತಹ ಸೇವೆ ಸಲ್ಲಿಸಿದ್ದಾರೆ. ಸಮಾಜ ಸೇವೆಯಲ್ಲೂ ಗುರುತಿಸಿಕೊಂಡಿದ್ದಾರೆ. ಐದು ಸಾವಿರಕ್ಕೂ ಅಧಿಕ ಸದಸ್ಯರನ್ನೊಳಗೊಂಡ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಮೂಲಕ ಜೆಡಿಎಸ್ ಗೆ ಅವರ ಅಳಿಲು ಸೇವೆ ಸಿಗುತ್ತಾ? ಕಾದುನೋಡೋಣ.

    ರವಿಕಿರಣ್ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರು ಹಳೆಯ ಗೆಳೆಯ. ತೆಲುಗಿನ ಖ್ಯಾತ ನಟ ಎಸ್ ವಿ ರಂಗಾರಾವ್ ಅವರ ಮೊಮ್ಮಗ. ಕಿರುತೆರೆಯ ರವಿಚಂದ್ರನ್ ಎಂದೇ ಖ್ಯಾತರಾದವರು. ಕಿರುತೆರೆಯ ಕನಸುಗಾರ ಎಂದರೂ ತಪ್ಪಿಲ್ಲ. (ಒನ್ಇಂಡಿಯಾ ಕನ್ನಡ)

    English summary
    Kannada small screen dream merchant Ravikiran recently met JD(s) supremo HD Deve Gowda. Is he too joining Politics? Earlier Pooja Gandhi, Malavika, S Narayan have joined the JDs brigade
    Friday, September 21, 2012, 14:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X