Lakshana: ಕಿರುತೆರೆ ವೀಕ್ಷಕರ ನೆಚ್ಚಿನ 'ಲಕ್ಷಣ' ಧಾರಾವಾಹಿ ಶೀಘ್ರದಲ್ಲೇ ಅಂತ್ಯ?
ಲಕ್ಷಣ ಧಾರವಾಹಿ ನೋಡುಗರನ್ನು ಮೂಡಿ ಬರುತ್ತಿದೆ. ಕತೆಯಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಟ್ಟು ಧಾರಾವಾಹಿಯನ್ನು ನೋಡುವ ಅಭಿಮಾನಿಗಳಿಗೆ ಇನ್ನಷ್ಟು ಖುಷಿ ನೀಡಿದ್ದಾರೆ. ಹೌದು, ಇದೀಗ ಲಕ್ಷಣ ಧಾರವಾಹಿ ನೋಡಲು ಬಹಳ ಖುಷಿ ಆಗುತ್ತಿದೆ. ಬೇಸರದ ಸಂಗತಿ ಏನಂದ್ರೆ ಈ ಧಾರಾವಾಹಿಯನ್ನು ಇದೀಗ ಅರ್ಧಕ್ಕೆ ನಿಲ್ಲಿಸುತ್ತಾರೆ ಎನ್ನುವ ವದಂತಿ ಕೇಳಿ ಬರ್ತಿದೆ.
ಬಿಗ್ ಬಾಸ್ ಸೀಸನ್ 10 ರಿಯಾಲಿಟಿ ಶೋ ಶೀಘ್ರದಲ್ಲಿ ಪ್ರಸಾರ ಆಗಲಿದ್ದು ನೋಡುಗರ ಮನಸನ್ನು ಸೆಳೆಯಲು ರೆಡಿ ಆಗಿದೆ. ಆ ಕಾರಣದಿಂದ 'ಲಕ್ಷಣ' ಧಾರಾವಾಹಿಯನ್ನು ಅರ್ಧಕ್ಕೆ ಮೊಟಕುಗೊಳಿಸಲು ನೋಡುತ್ತಿದ್ದಾರೆ ಎನ್ನಲಾಗ್ತಿದೆ. ಇನ್ನೂ ಬಿಗ್ ಬಾಸ್ ಶೋಗೆ ಈ ವರ್ಷ ಯಾರೆಲ್ಲ ಬರ್ತಾರೆ? ಆಟ ಹೇಗಿರುತ್ತೆ? ಎನ್ನುವ ಕುತೂಹಲ ವೀಕ್ಷಕರಲ್ಲಿದೆ. ಆದರೆ ಸದ್ಯ ಪ್ರೋಮೊ ರಿಲೀಸ್ ಆಗಿ ಕುತೂಹಲ ಮೂಡಿಸಿದೆ.

ಶಕುಂತಲಾ ದೇವಿಗೆ ಶ್ವೇತ ಒಳ್ಳೆಯ ಪಾಠ ಕಲಿಸಿದ್ದಾಳೆ. ಯಾಕೆಂದರೆ ಇದೀಗ ಶಕುಂತಲಾ ದೇವಿಯನ್ನು ಮನೆಯಿಂದ ಹೊರಗೆ ಹಾಕಿದ ಶ್ವೇತಾ ಮನೆಯಲ್ಲಿ ಮೆರೆಯುತ್ತಿದ್ದಾಳೆ. ಶಕುಂತಲಾ ದೇವಿ ಮೊದಲು ಇದ್ದ ಸ್ಥಿತಿಗೆ ಇದೀಗ ತೋರಿಸುತ್ತಿರುವುದನ್ನು ನೋಡಿದ ಅಭಿಮಾನಿಗಳು ಮಾತ್ರ ಅಯ್ಯೋ ಪಾಪ ಎಂದು ಮರುಕ ಪಡುತ್ತಿದ್ದಾರೆ. ಇದೀಗ ನಕ್ಷತ್ರ ಎಷ್ಟು ಒಳ್ಳೆಯವಳು ಆಕೆ ಪಟ್ಟ ಕಷ್ಟ ಏನು ಅನ್ನೋದು ಶಕುಂತಲಾ ದೇವಿಗೆ ಅರ್ಥ ಆಗಿದೆ..
ತಪ್ಪಿಗೆ ಪ್ರಾಯಶ್ಚಿತ ಪಡುತ್ತಿರುವ ಶಕುಂತಲಾ
ತಾನು ತಪ್ಪು ಮಾಡಿಬಿಟ್ಟೆನಲ್ಲ, ಹಾವಿಗೆ ಹಾಲೆರೆದು ಬಿಟ್ಟೆನಲ್ಲ ಎಂದು ಬಹಳ ಬೇಸರ ಮಾಡಿಕೊಂಡು ಇರುತ್ತಾಳೆ. ಇನ್ನೂ ಚಂದ್ರಶೇಖರ್ಗೆ ತನ್ನ ಮಗಳನ್ನು ನೆನೆದು ಬಹಳ ಬೇಸರವಾಗ್ತಿದೆ. ಮಗಳಿಗೆ ಏನೇ ಸಹಾಯ ಮಾಡಲು ಬಂದರು ಅದ್ಯಾವುದನ್ನೂ ನಯವಾಗಿ ನಿರಾಕರಣೆ ಮಾಡಿದ ನಕ್ಷತ್ರ, ಶಕುಂತಲಾ ದೇವಿ ಮನದಲ್ಲಿ ಮಾತ್ರ ಬಹು ದೊಡ್ಡ ಸ್ಥಾನವನ್ನು ಪಡೆದುಕೊಳ್ಳುತ್ತಾ ಇರುತ್ತಾಳೆ.

ಮಗಳ ಸ್ಥಿತಿ ಕಂಡು ಕೊರಗಿದ ಚಂದ್ರಶೇಖರ್
ನಕ್ಷತ್ರ ಸ್ಥಿತಿ ಕಂಡು ಚಂದ್ರಶೇಖರ್ ಬೇಸರಪಡುತ್ತಿದ್ದಾನೆ. ಇನ್ನೂ ನಕ್ಷತ್ರ ತವರು ಮನೆಗೆ ಹೋಗಲಿ. ನಾನು ಮಾಡಿದ ತಪ್ಪಿಗೆ ನಾನು ಇಲ್ಲಿಯೇ ಇರುತ್ತೇನೆ ಎಂದು ಹೇಳುತ್ತಾಳೆ.
ಶಕುಂತಲಾ ಎದುರು ದೊಡ್ಡವಳಾದ ನಕ್ಷತ್ರ
ಇದನ್ನು ಕೇಳಿದ ನಕ್ಷತ್ರ ಸುಮ್ಮನೆ ಇರುತ್ತಾಳೆ. ಇನ್ನೂ ಮಾವ ಸಹಾಯ ಮಾಡುತ್ತೇನೆ ಎಂದು ಹೇಳಿದರು ಭೂಪತಿ ಮಾತ್ರ ಆ ಸಹಾಯವನ್ನು ಸ್ವೀಕಾರ ಮಾಡದೇ ಮಾವನಿಗೆ ಧನ್ಯವಾದ ಹೇಳುತ್ತಾನೆ.. ಇನ್ನೂ ಬಿಗ್ ಬಾಸ್ ರಿಯಾಲಿಟಿ ಶೋ ನಡೆಯುವ ವೇಳೆ ಈ ಧಾರಾವಾಹಿಯನ್ನು ಮುನ್ನಡೆಸುತ್ತಾರ.. ಅಥವಾ ಸ್ಥಗಿತಗೊಳಿಸುತ್ತಾರ ಎಂಬುವುದನ್ನು ಕಾದು ನೋಡಬೇಕಿದೆ


Click it and Unblock the Notifications











