Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತಂಬಾಕು ರಹಿತ ದಿನದ ಪ್ರಯುಕ್ತ ಕನ್ನಡ ಕಣ್ಮಣಿ ಮಕ್ಕಳಿಂದ ಬೀದಿ ನಾಟಕ
ಇಂದು ವಿಶ್ವ ತಂಬಾಕು ರಹಿತ ದಿನ. ಈ ಪ್ರಯುಕ್ತ ಜಿ ಕನ್ನಡ ವಾಹಿನಿಯೂ ಜನರಲ್ಲಿ ಜಾಗೃತಿ ಮೂಡಿಸಲು ಬೀದಿ ನಾಟಕ ಹಾಗೂ ಬೀದಿ ಭಾಷಣ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಕನ್ನಡ ಕನ್ನಡದ ಕಣ್ಮಣಿಗಳು ಕಾರ್ಯಕ್ರಮದ ಪುಟಾಣಿಗಳು ಮೊಟ್ಟ ಮೊದಲ ಬಾರಿಗೆ ಬೀದಿ ನಾಟಕವನ್ನು ಪ್ರದರ್ಶಿಸಿಸುವ ಮೂಲಕ ಜನರಲ್ಲಿ ಎಚ್ಚರಿಕೆ ಮೂಡಿಸಿದರು.
ತಂಬಾಕು ಸೇವನೆ ಮಾಡುವುದರಿಂದ ಉಂಟಾಗುವ ತೊಂದರೆಗಳು, ಧೂಮಪಾನ ಮಾಡುವವರಷ್ಟೇ ಅಲ್ಲದೇ ಅದರ ಹೊಗೆಯನ್ನು ಸೇವಿಸುವವರ ಆರೋಗ್ಯದ ಮೇಲೆಯೂ ಯಾವ ರೀತಿ ದುಷ್ಪರಿಣಾಮ ಉಂಟಾಗುತ್ತದೆ, ಮಕ್ಕಳ ಮುಂದೆಯೇ ದೊಡ್ಡವರು ಧೂಮಪಾನ ಮಾಡುವುದು, ಇತ್ತೀಚಿನ ದಿನಗಳಲ್ಲಿ ಹೆಣ್ಣುಮಕ್ಕಳು ಸಹ ಹೆಚ್ಚಾಗಿ ಧೂಮಪಾನ ಮಾಡಲು ಆರಂಭಿಸಿದ್ದಾರೆ.
ತಮಿಳು 'ಸರಿಗಮಪ'ಗೆ ಆಯ್ಕೆಯಾದ ಕನ್ನಡದ ಐಶ್ವರ್ಯ
ಇದರಿಂದ ಮುಂದೆ ಅವರ ಆರೋಗ್ಯ ಮೇಲಷ್ಟೇ ಅಲ್ಲದೇ, ಅವರಿಗೆ ಹುಟ್ಟುವ ಮಕ್ಕಳ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ ಎಂಬ ಸೂಕ್ಷ್ಮ ವಿಷಯಗಳನ್ನು ಬೀದಿ ನಾಟಕದ ಮೂಲಕ ಕಣ್ಣದ ಕಣ್ಮಣಿ ಮಕ್ಕಳು ತೋರ್ಪಡಿಸಿದರು.
ಸರ್ಕಾರ ಮನುಷ್ಯನ ಭವಿಷ್ಯದ ಬಗ್ಗೆ ಚಿ೦ತಿಸಿ ತ೦ಬಾಕು ನಿಷೇಧವನ್ನು ಮಾಡಬೇಕಿದೆ. ಹೊಗೆ ಸೊಪ್ಪು ಬೆಳೆಯುವ ರೈತರು ಬೇರೆ ದವಸ ಧಾನ್ಯ ಬೆಳೆಯುವಂತೆ ಸರ್ಕಾರ ಪ್ರೋತ್ಸಾಹಿಸಬೇಕು. ಹೊಗೆ ಸೊಪ್ಪು ಮೇಲಿರುವ ತೆರಿಗೆಯನ್ನು ಹೆಚ್ಚಿಸಬೇಕು, ಚಟಕ್ಕೆ ಬಿದ್ದಾಗ ಆ ಕ್ಷಣಕ್ಕೆ ಕಾಣುವ ಪ್ರಪಂಚದ ಹೊರತಾಗಿ ಬೇರೆ ಸುಂದರ ಪ್ರಪಂಚ ಇದೆ ಎಂಬ ಉತ್ತಮ ಸಂದೇಶವನ್ನು ಬೀದಿ ನಾಟಕದ ಮೂಲಕ ಹೇಳಿದರು.
ಇತ್ತೀಚಿನ ದಿನಗಳಲ್ಲಿ ವಯಸ್ಸಾದವರಿ೦ದ ಹಿಡಿದು ಹದಿಹರೆಯದವರೂ ಹೆಚ್ಚಾಗಿ ತ೦ಬಾಕು ಸೇವಿಸುತ್ತಿದ್ದಾರೆ. ಇದರಿ೦ದ ಆಗುವ ಹಾನಿ, ತೊ೦ದರೆಗಳನ್ನು ಅರ್ಥಮಾಡಿಸಿ ಈ ದಿನ ಮಾಡಿದ ಒ೦ದು ಪುಟ್ಟ ಪ್ರಯತ್ನದಿಂದ ಒಬ್ಬ ಮನುಷ್ಯ ಬದಲಾದರೂ ಸಾರ್ಥಕ ಎನ್ನುವ ಸದುದ್ದೇಶ ಜಿ ಕನ್ನಡ ವಾಹಿನಿಯದ್ದಾಗಿತ್ತು
ಕನ್ನಡದ ಕಣ್ಮಣಿಗಳು ಕಾರ್ಯಕ್ರಮದ ಮೂಲಕ ಸಮಾಜದ ಓರೆ ಕೋರೆಗಳನ್ನು ಮಕ್ಕಳ ಮೂಲಕ ತಿಳಿಪಡಿಸುವ ಹಾಗೂ ಕನ್ನಡ ಭಾಷಾಭಿಮಾನವನ್ನು ಮಕ್ಕಳಲ್ಲಿ ಜಾಗೃತಗೊಳಿಸುವ ವಿನೂತನ ಕಾರ್ಯಕ್ರಮ. ಇದೇ ದಿಸೆಯಲ್ಲಿ ಮುಂದುವರೆದು ಸಾಮಾಜಿಕ ಜವಾಬ್ದಾರಿ ಹಾಗೂ ಸಮಾಜದ ಹಿತ ಬಯಸುವ ಅನೇಕ ಸಂಚಿಕೆಗಳು ಕನ್ನಡದ ಕಣ್ಮಣಿಗಳು ಕಾರ್ಯಕ್ರಮದಲ್ಲಿ ಪ್ರಸಾರಗೊಂಡಿದ್ದವು.