'ಕನ್ನಡದ ಕೋಟ್ಯಧಿಪತಿ' : ಕಷ್ಟದಲ್ಲಿ ಇದ್ದಾಗ ಫ್ರೆಂಡ್ಸೆ ತಾನೇ ಬರೋದು
ಕಲರ್ಸ್ ಕನ್ನಡ ವಾಹಿನಿ ಮತ್ತೆ ತನ್ನ ಜನಪ್ರಿಯ ಕಾರ್ಯಕ್ರಮವನ್ನು ವೀಕ್ಷಕರ ಮುಂದೆ ತರುತ್ತಿದೆ. 'ಕನ್ನಡದ ಕೋಟ್ಯಧಿಪತಿ' ಕಾರ್ಯಕ್ರಮ ಈಗ ಮತ್ತೆ ಪ್ರಸಾರ ಆಗಲು ಸಿದ್ಧವಾಗಿದೆ.
'ಕನ್ನಡದ ಕೋಟ್ಯಧಿಪತಿ'ಯ ನಾಲ್ಕನೇ ಸರಣಿ ಇದಾಗಿದೆ. ಕಾರ್ಯಕ್ರಮದ ಮತ್ತೊಂದು ಪ್ರೊಮೋ ಬಿಡುಗಡೆಯಾಗಿದೆ. ತುಂಬಾನೇ ಚೆನ್ನಾಗಿ ಪ್ರಮೋವನ್ನು ಚಿತ್ರೀಕರಣ ಮಾಡಲಾಗಿದೆ.

ಶಾಲಾ ಬಾಲಕ ತನ್ನ ತಾಯಿ 'ಕನ್ನಡದ ಕೋಟ್ಯಧಿಪತಿ'ಗೆ ಹೋಗುಬೇಕಿರುತ್ತದೆ. ಆ ಹುಡುಗ ಆಗ ಶಿಕ್ಷಕರಿಗೆ ಫೋನೋ ಫ್ರೆಂಡ್ ಆಗುವಂತೆ ಕೇಳುತ್ತಾನೆ. ಕಾರ್ಯಕ್ರಮದಲ್ಲಿ ತಾಯಿಗೆ ಉತ್ತರ ಗೊತ್ತಿಗದೆ ಇದ್ದಾಗ ಶಿಕ್ಷಕ ಸರಿಯಾದ ಉತ್ತರ ಹೇಳುತ್ತಾರೆ. ಕೊನೆಗೆ ಪುನೀತ್ ''ಕಷ್ಟದಲ್ಲಿ ಫ್ರೆಂಡ್ಸೆ ಬರೋದು'' ಅಂತ ಹೇಳಿ ಮುಗುಳುನಗುತ್ತಾರೆ.
ಈ ರೀತಿ ಪ್ರೋಮೋ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ಕಾರ್ಯಕ್ರಮದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಕಳೆದ ಬಾರಿ ರಮೇಶ್ ಅರವಿಂದ್ ಈ ಕಾರ್ಯಕ್ರಮದ ನಿರೂಪಕರಾಗಿದ್ದು, ಈಗ ಮತ್ತೆ ಪುನೀತ್ ರಾಜ್ ಕುಮಾರ್ ಸಾರಥಿಯಾಗಿದ್ದಾರೆ.
ಸದ್ಯಕ್ಕೆ, 'ಕನ್ನಡದ ಕೋಟ್ಯಧಿಪತಿ' ಕಾರ್ಯಕ್ರಮದ ಪ್ರಸಾರ ದಿನಾಂಕ ಇನ್ನು ಬಹಿರಂಗ ಆಗಿಲ್ಲ. ಶೀಘ್ರದಲ್ಲೇ ಕಾರ್ಯಕ್ರಮದ ಶುರು ಆಗಲಿದೆ.


Click it and Unblock the Notifications











