Don't Miss!
- News ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಮೋದಿ; ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ: ಸಿದ್ದರಾಮಯ್ಯ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Finance Lok Sabha Election 2024: ಮತದಾನ ಮಾಡಿ ಹೋಟೆಲ್ಗಳಲ್ಲಿ ಫ್ರೀಯಾಗಿ, ರಿಯಾಯಿತಿಯಲ್ಲಿ ಟಿಫನ್ ತಿನ್ನಿ!
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Automobiles ಭರ್ಜರಿ ಸಿಹಿಸುದ್ದಿ: ಸ್ಕೋಡಾ ಕೊಡಿಯಾಕ್ ಎಸ್ಯುವಿಯ ಮೇಲೆ ಭರ್ಜರಿ ಡಿಸ್ಕೌಂಟ್
- Lifestyle ಖುಲಾಯಿಸಿತು ಅದೃಷ್ಟ: ಫ್ಯಾಂಟಸಿ ಗೇಮ್ನಲ್ಲಿ ₹1.5 ಕೋಟಿ ಗೆದ್ದ ಮೆಕ್ಯಾನಿಕ್..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಕನ್ನಡದ ಕೋಟ್ಯಧಿಪತಿ' : ಕಷ್ಟದಲ್ಲಿ ಇದ್ದಾಗ ಫ್ರೆಂಡ್ಸೆ ತಾನೇ ಬರೋದು
ಕಲರ್ಸ್ ಕನ್ನಡ ವಾಹಿನಿ ಮತ್ತೆ ತನ್ನ ಜನಪ್ರಿಯ ಕಾರ್ಯಕ್ರಮವನ್ನು ವೀಕ್ಷಕರ ಮುಂದೆ ತರುತ್ತಿದೆ. 'ಕನ್ನಡದ ಕೋಟ್ಯಧಿಪತಿ' ಕಾರ್ಯಕ್ರಮ ಈಗ ಮತ್ತೆ ಪ್ರಸಾರ ಆಗಲು ಸಿದ್ಧವಾಗಿದೆ.
'ಕನ್ನಡದ ಕೋಟ್ಯಧಿಪತಿ'ಯ ನಾಲ್ಕನೇ ಸರಣಿ ಇದಾಗಿದೆ. ಕಾರ್ಯಕ್ರಮದ ಮತ್ತೊಂದು ಪ್ರೊಮೋ ಬಿಡುಗಡೆಯಾಗಿದೆ. ತುಂಬಾನೇ ಚೆನ್ನಾಗಿ ಪ್ರಮೋವನ್ನು ಚಿತ್ರೀಕರಣ ಮಾಡಲಾಗಿದೆ.
ಶಾಲಾ ಬಾಲಕ ತನ್ನ ತಾಯಿ 'ಕನ್ನಡದ ಕೋಟ್ಯಧಿಪತಿ'ಗೆ ಹೋಗುಬೇಕಿರುತ್ತದೆ. ಆ ಹುಡುಗ ಆಗ ಶಿಕ್ಷಕರಿಗೆ ಫೋನೋ ಫ್ರೆಂಡ್ ಆಗುವಂತೆ ಕೇಳುತ್ತಾನೆ. ಕಾರ್ಯಕ್ರಮದಲ್ಲಿ ತಾಯಿಗೆ ಉತ್ತರ ಗೊತ್ತಿಗದೆ ಇದ್ದಾಗ ಶಿಕ್ಷಕ ಸರಿಯಾದ ಉತ್ತರ ಹೇಳುತ್ತಾರೆ. ಕೊನೆಗೆ ಪುನೀತ್ ''ಕಷ್ಟದಲ್ಲಿ ಫ್ರೆಂಡ್ಸೆ ಬರೋದು'' ಅಂತ ಹೇಳಿ ಮುಗುಳುನಗುತ್ತಾರೆ.
ಈ ರೀತಿ ಪ್ರೋಮೋ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ಕಾರ್ಯಕ್ರಮದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಕಳೆದ ಬಾರಿ ರಮೇಶ್ ಅರವಿಂದ್ ಈ ಕಾರ್ಯಕ್ರಮದ ನಿರೂಪಕರಾಗಿದ್ದು, ಈಗ ಮತ್ತೆ ಪುನೀತ್ ರಾಜ್ ಕುಮಾರ್ ಸಾರಥಿಯಾಗಿದ್ದಾರೆ.
ಸದ್ಯಕ್ಕೆ, 'ಕನ್ನಡದ ಕೋಟ್ಯಧಿಪತಿ' ಕಾರ್ಯಕ್ರಮದ ಪ್ರಸಾರ ದಿನಾಂಕ ಇನ್ನು ಬಹಿರಂಗ ಆಗಿಲ್ಲ. ಶೀಘ್ರದಲ್ಲೇ ಕಾರ್ಯಕ್ರಮದ ಶುರು ಆಗಲಿದೆ.