Don't Miss!
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- News ಮಂಡ್ಯದ ‘ಹಲವು ಸುಮಲತಾ’ ತಂತ್ರ ಬೆಂಗಳೂರು ಗ್ರಾಮಾಂತದಲ್ಲೂ ಬಂತಾ? ಮತ್ತೊಬ್ಬ ಡಾ ಸಿಎನ್ ಮಂಜುನಾಥ್ ಕಣಕ್ಕೆ!
- Sports IPL 2024: ರಾಜಸ್ಥಾನ್ ರಾಯಲ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ರೋಚಕ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Lifestyle ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮುಂದಿನ ಶನಿವಾರದಿಂದ ಕಿರುತೆರೆಯಲ್ಲಿ ಪುನೀತ್ ಕಮಾಲ್
Recommended Video
'ಫ್ಯಾಮಿಲಿ ಪವರ್' ನಂತರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತೆ ಕಿರುತೆರೆಗೆ ಮರಳಿದ್ದಾರೆ. ಈ ಬಾರಿ ಕನ್ನಡದ ಕೋಟ್ಯಧಿಪತಿ ಶೋನ ಸಾರಥಿಯಾಗಿ ಕಂಬ್ಯಾಕ್ ಮಾಡಿದ್ದಾರೆ. ಹೌದು, ಮೊದಲೆರಡು ಆವೃತ್ತಿ ನಿರೂಪಣೆ ಮಾಡಿದ್ದ ಅಪ್ಪು ಮೂರನೇ ಆವೃತ್ತಿಯಿಂದ ಹಿಂದೆ ಸರಿದಿದ್ದರು.
ಆಗ ಪುನೀತ್ ಬದಲು ನಟ ರಮೇಶ್ ಅರವಿಂದ್ ಕನ್ನಡದ ಕೋಟ್ಯಧಿಪತಿ ನಿರೂಪಣೆ ಮಾಡಿದ್ದರು. ಇದೀಗ, ನಾಲ್ಕನೇ ಆವೃತ್ತಿಗೆ ಮತ್ತೆ ಪುನೀತ್ ರಾಜ್ ಕುಮಾರ್ ವಾಪಸ್ ಆಗಿದ್ದು, ಮುಂದಿನ ಶನಿವಾರದಿಂದ ಶೋ ಪ್ರಸಾರವಾಗಲಿದೆ.
ನಟ ಅಶ್ವಥ್ ಮನೆಗೆ ಬಂದ ಪುನೀತ್: ಅಪ್ಪು ಬಗ್ಗೆ ಅಶ್ವಥ್ ಪುತ್ರ ಹೇಳಿದ್ದೇನು?
ಜೂನ್ 22 ರಿಂದ ಶನಿವಾರ ಮತ್ತು ಭಾನುವಾರ ರಾತ್ರಿ 8 ಗಂಟೆಗೆ ಕನ್ನಡದ ಕೋಟ್ಯಧಿಪತಿ ಆರಂಭವಾಗಲಿದೆ. ವಿಶೇಷ ಅಂದ್ರೆ ಇದೇ ಮೊದಲ ಸಲ ಕಲರ್ಸ್ ಕನ್ನಡ ವಾಹಿನಿಯಲ್ಲಿ ಈ ಶೋ ಮೂಡಿಬರ್ತಿದೆ.
ಕನ್ನಡದ ಕೋಟ್ಯಧಿಪತಿ 4ರ ಮೊದಲ ಪ್ರಶ್ನೆ ಮಿಸ್ ಮಾಡಿಕೊಳ್ಳಬೇಡಿ
ಇದಕ್ಕೂ ಮೊದಲು ಮೂರು ಶೋಗಳು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಟೆಲಿಕಾಸ್ಟ್ ಆಗುತ್ತಿತ್ತು. ಸದ್ಯ, ಪುನೀತ್ ರಾಜ್ ಕುಮಾರ್ ಹಾಗು ಕನ್ನಡದ ಕೋಟ್ಯಧಿಪತಿಯ ಕಾರ್ಯಕ್ರಮದ ಪ್ರೋಮೋಗಳು ಪ್ರಸಾರವಾಗುತ್ತಿದ್ದು, ಮಂದಿನ ವಾರದಿಂದ ಅಸಲಿ ಆಟ ನೋಡಬಹುದು.
ಮತ್ತೊಂದೆಡೆ ಯುವರತ್ನ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಅಪ್ಪ, ಈಗಾಗಲೇ ಕನ್ನಡದ ಕೋಟ್ಯಧಿಪತಿಯ ಹಲವು ಎಪಿಸೋಡ್ ಶೂಟ್ ಮಾಡಿದ್ದಾರೆ ಎನ್ನಲಾಗಿದೆ.