Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಕನ್ನಡದ ಕೋಟ್ಯಧಿಪತಿ' ತಂಡದ ಈ ನಡೆ ನಿಜಕ್ಕೂ ಮನ ಮುಟ್ಟುವಂಥದ್ದು.!
ಕಷ್ಟ ಅಂದ್ರೆ ಈಗಿನ ಕಾಲದಲ್ಲಿ ಯಾರು ಸಹಾಯ ಮಾಡ್ತಾರೆ ಹೇಳಿ.? ಎಲ್ಲರಿಗೂ ಅವರವರ ಕಷ್ಟಗಳೇ ದೊಡ್ಡದು ಎನ್ನುವ ಈ ಯುಗದಲ್ಲಿ ಇನ್ನೊಬರಿಗೆ ಸಹಾಯ ಮಾಡುವ ಮನಃಸ್ಥಿತಿ ಹೊಂದಿರುವವರು, ಸಹಾಯ ಹಸ್ತ ಚಾಚುವವರು ತೀರಾ ಅಪರೂಪ. ಅಂತಹ ಅಪರೂಪದ ಘಟನೆಗೆ 'ಕನ್ನಡದ ಕೋಟ್ಯಧಿಪತಿ' ವೇದಿಕೆ ಸಾಕ್ಷಿ ಆಗಿದೆ.
ಹೌದು, 'ಕನ್ನಡದ ಕೋಟ್ಯಧಿಪತಿ-4' ಮುಗಿಯುವ ಹಂತ ತಲುಪಿದೆ. ಈ ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ವೀಕೆಂಡ್ ನಲ್ಲಿ ಒಂದು ಮನಮುಟ್ಟುವ ಕಾರ್ಯ ನಡೆಯಿತು.
ಇತ್ತೀಚೆಗಷ್ಟೇ 'ಕನ್ನಡದ ಕೋಟ್ಯಧಿಪತಿ' ಹಾಟ್ ಸೀಟ್ ಮೇಲೆ ಮೈಸೂರು ಮೂಲದ ಟೀಚರ್ ರಮ್ಯಾ ಎನ್ನುವವರು ಕೂತಿದ್ದರು. ಆಕೆಗೆ ಮೂರು ಲಕ್ಷ ರೂಪಾಯಿಯಷ್ಟು ಸಾಲ ಇದೆ. ಅವರ ಪತಿಗೆ ಕಿವಿ ಕೇಳಲ್ಲ, ಮಾತು ಬರಲ್ಲ. ಆರ್ಥಿಕ ಸಂಕಷ್ಟದಲ್ಲಿರುವ ರಮ್ಯಾ 'ಕನ್ನಡದ ಕೋಟ್ಯಧಿಪತಿ' ಕಾರ್ಯಕ್ರಮದಲ್ಲಿ ಗೆದ್ದದ್ದು 160,000 ರೂಪಾಯಿ.
ಟೀಚರ್ ಮಾಡಿದ ಎಡವಟ್ಟು: ಈಡೇರಲಿಲ್ಲ ವಿದ್ಯಾರ್ಥಿನಿ ವರಲಕ್ಷ್ಮಿ ಕನಸು.!
320,000 ರೂಪಾಯಿಯ ಪ್ರಶ್ನೆ ನೋಡಿ ಆಟ ಕ್ವಿಟ್ ಮಾಡಿದ್ದ ರಮ್ಯಾ ಅವರ ಕಷ್ಟಕ್ಕೆ ಸ್ಪಂದಿಸಲು ಇಡೀ 'ಕನ್ನಡದ ಕೋಟ್ಯಧಿಪತಿ' ತಂಡ ಕೈಜೋಡಿಸಿದೆ. 'ಕನ್ನಡದ ಕೋಟ್ಯಧಿಪತಿ' ಕಾರ್ಯಕ್ರಮದಲ್ಲಿ ಕೆಲಸ ಮಾಡುವ ತಂತ್ರಜ್ಞರೆಲ್ಲಾ ತಮಗೆ ಸಿಗುವ ಸಂಬಳದಲ್ಲಿ ರಮ್ಯಾ ಅವರಿಗೆ ಕೈಲಾದಷ್ಟು ಸಹಾಯ ಮಾಡಿದ್ದಾರೆ.
'ಮುಟ್ಟಾಳ ಅಲ್ಲ' ಅಂತ ತಂದೆಗೆ ಸಾಬೀತು ಪಡಿಸಿದ ಮನೋಜ್ ಗೆದ್ದ ಮೊತ್ತ ಎಷ್ಟು.?
ಹಾಗೆ ತಂತ್ರಜ್ಞರಿಂದೆಲ್ಲಾ ಒಟ್ಟಾಗಿ ಸೇರಿಸಿದ ಮೊತ್ತ 160,000 ರೂಪಾಯಿ. ಈ ಚೆಕ್ ನ ರಮ್ಯಾ ಅವರಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನೀಡಿದರು. ಆಗ ರಮ್ಯಾ ಅವರ ಹೃದಯ ತುಂಬಿ ಬಂತು. ತಮ್ಮ ಕಷ್ಟಕ್ಕೆ ಸ್ಪಂದಿಸಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳನ್ನ ರಮ್ಯಾ ಅರ್ಪಿಸಿದರು.
ನುಡಿದಂತೆ ನಡೆದ ತೇಜಸ್: 'ಕನ್ನಡದ ಕೋಟ್ಯಧಿಪತಿ'ಯಲ್ಲಿ ಗೆದ್ದ ಹಣ ಸರ್ಕಾರಿ ಶಾಲೆಗೆ.!
ಒಂದು
ಶೋ
ಅಂದ್ಮೇಲೆ
ಅಲ್ಲಿ
ನೂರಾರು
ಜನ
ಬರ್ತಾರೆ.
ತಮ್ಮ
ಕಷ್ಟಗಳನ್ನ
ಹೇಳಿಕೊಳ್ಳುತ್ತಾರೆ.
ಕೇವಲ
ಟಿ.ಆರ್.ಪಿಗಾಗಿ
ಜನರ
ಕಷ್ಟವನ್ನು
ತೋರಿಸದೆ,
ತಮ್ಮ
ಕೈಲಾದ
ಸಹಾಯವನ್ನೂ
ಮಾಡಿರುವ
'ಕನ್ನಡದ
ಕೋಟ್ಯಧಿಪತಿ'
ತಂಡದ
ಈ
ನಡೆ
ನಿಜಕ್ಕೂ
ಮೆಚ್ಚುವಂಥದ್ದು
ಅಲ್ವೇ.?
{ಚಿತ್ರಕೃಪೆ:
ಕಲರ್ಸ್
ಕನ್ನಡ/ವೂಟ್}