Don't Miss!
- News ‘ಹೇಳಿ ಸಿದ್ದರಾಮಯ್ಯನವರೇ , ಹಿಂದುಳಿದ ವರ್ಗದ ಮೇಲೆ ನಿಮಗ್ಯಾಕೆ ಈ ಆಕ್ರೋಶ?’
- Sports IPL 2024: ಮತ್ತೊಂದು ರೋಚಕ ಪಂದ್ಯದಲ್ಲಿ SRH vs RCB ಕದನ; ಪಂದ್ಯದ ವಿವರ, ಸಂಭಾವ್ಯ ಆಡುವ 11ರ ಬಳಗ
- Finance ಆರ್ಬಿಐ ಡೆಪ್ಯುಟಿ ಗವರ್ನರ್ ರಬಿ ಶಂಕರ್ ಸೇವಾವಧಿ ವಿಸ್ತರಣೆ
- Automobiles Honda: ಹೊಸ ಮೈಲಿಗಲ್ಲು: ಈ ಭಾಗಗಳಲ್ಲಿ ಹೋಂಡಾ ದ್ವಿಚಕ್ರ ವಾಹನಗಳ ಅಬ್ಬರ
- Technology ರೆಡ್ಮಿ ಸಂಸ್ಥೆಯ ಈ ಅಗ್ಗದ ಫೋನಿನ ಆಫರ್ ಬೆಲೆ ತಿಳಿದ್ರೆ, ನೀವು ವಾವ್ ಅಂತೀರಾ!
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
Raksha Holla: ಕಿರುತೆರೆ ನಟಿ ರಕ್ಷಾ ಹೊಳ್ಳ ತಮಿಳಿಗೆ ಎಂಟ್ರಿ!
ರಕ್ಷಾ ಬೆಂಗಳೂರಿನ ಹುಡುಗಿ. ನಟನೆಯಲ್ಲಿ ಆಸಕ್ತಿ ಹೊಂದಿದ್ದ ರಕ್ಷಾ 22ನೇ ವಯಸ್ಸಿಗೆ ಬಣ್ಣದ ಲೋಕಕ್ಕೆ ಕಾಲಿಟ್ಟರು. ಸಿನಿಮಾಗಳಲ್ಲಿಯೂ ರಕ್ಷಾ ಕಾಣಿಸಿಕೊಂಡಿದ್ದಾರೆ. ನೆಗೆಟಿವ್, ಪಾಸಿಟಿವ್ ಈ ಎರಡೂ ಶೇಡ್ಗೂ ಜೀವ ತುಂಬುವ ಕಲಾವಿದೆ ಅವರು. ರಕ್ಷಾ ನಟನಾ ಲೋಕಕ್ಕೆ ಕಾಲಿಟ್ಟು ಹಲವು ವರ್ಷಗಳಾಯ್ತು. ಅಂದಿನಿಂದ ಇಂದಿನವರೆಗೂ ರಕ್ಷಾ ನಟನೆಯಲ್ಲಿ ಬ್ಯುಸಿಯಿದ್ದಾರೆ. 'ಮಿಲನ', 'ಕೋಗಿಲೆ', 'ಪಲ್ಲವಿ ಅನುಪಲ್ಲವಿ', 'ಹರ ಹರ ಮಹಾದೇವ', 'ಪುಟ್ಟಿಂಟಿ ಪಟ್ಟು ಚೀರ', 'ತಮಿಳು ಕಡವುಲ್ ಮುರುಗನ್', 'ವಂಶಂ' ಮುಂತಾದ ಧಾರಾವಾಹಿಗಳಲ್ಲಿ ರಕ್ಷಾ ನಟಿಸಿದ್ದಾರೆ. ರಕ್ಷಾ ಮದುವೆಯಾಗಿ 2 ವರ್ಷವಾಗುತ್ತ ಬಂತು. 10 ವರ್ಷಗಳ ಕಾಲ ಪರಿಚಯವಿದ್ದ ರಾಕಿ ಎಂಬುವವರನ್ನು ರಕ್ಷಾ ಮದುವೆಯಾಗಿದ್ದರು. ರಾಕೇಶ್ ಅವರ ಪೂರ್ಣ ಹೆಸರು.
ಕನ್ನಡ, ತಮಿಳು, ತೆಲುಗು ಮೂರೂ ಭಾಷೆಗಳ ಕಿರುತೆರೆಯಲ್ಲಿ ಹೆಸರು ಮಾಡಿರುವ ರಕ್ಷಾ ಹೊಳ್ಳ ಇದೀಗ ಮತ್ತೆ ಕನ್ನಡದಲ್ಲಿ ಬ್ಯುಸಿ ಆಗಿದ್ದಾರೆ. ಧಾರಾವಾಹಿ ಆಗಲಿ, ಸಿನಿಮಾ ಆಗಲಿ ನಾನು ನಟಿಸುತ್ತಲೇ ಇರಬೇಕೆಂಬ ಮಹದಾಸೆಯಂತೆ ರಕ್ಷಾ ಹೊಳ್ಳರದ್ದು. ಮಾಡೆಲಿಂಗ್ ಕ್ಷೇತ್ರದಿಂದ ಕನ್ನಡ ಕಿರುತೆರೆಗೆ ಅನೇಕ ಪ್ರತಿಭೆಗಳು ಬಂದಿದ್ದಾರೆ. ಧಾರಾವಾಹಿಗಳಲ್ಲಿ ಮಿಂಚುತ್ತಿರುವ ರಕ್ಷಾ ಹೊಳ್ಳ ಕೂಡಾ ಕಿರುತೆರೆಗೆ ಬರುವ ಮುನ್ನ ಮಾಡೆಲ್ ಆಗಿ ಫ್ಯಾಷನ್ ಶೋನಲ್ಲಿ ಕ್ಯಾಟ್ ವಾಕ್ ಮಾಡಿದ್ದಾರೆ. ಧಾರಾವಾಹಿ ಎಂಬುದು ನನ್ನ ಆಲ್ ಟೈಮ್ ಫೇವರೆಟ್ ಎನ್ನುತ್ತಾರೆ ರಕ್ಷಾ ಹೊಳ್ಳ.
Sathya Serial: ದೊಡ್ಡಪ್ಪನ ಬಳಿ ಸಿಕ್ಕಾಕೊಂಡಳು ದಿವ್ಯಾ: ಸತ್ಯ ಕಣ್ಣಿಗೆ ಬಿದ್ದ ಬಾಲ
ಹೊಳ್ಳ ಪದವಿ ಮುಗಿದದ್ದೇ ತಡ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟ ರಕ್ಷಾ ಹೊಳ್ಳ, ಸುಮಾರು ನೂರಕ್ಕೂ ಅಧಿಕ ವೇದಿಕೆಗಳಲ್ಲಿ ಕ್ಯಾಟ್ ವಾಕ್ ಮಾಡಿದ್ದಾರೆ. ನಂತರ ಕಿರುತೆರೆಯತ್ತ ಮುಖ ಮಾಡಿರುವ ಅವರು, ಬಿ. ಮಧುಸೂದನ್ ಅವರ 'ಪಲ್ಲವಿ ಅನುಪಲ್ಲವಿ' ಆಡಿಷನ್ಗೆ ಭಾಗವಹಿಸಿ ಆಯ್ಕೆಯಾದರು. ಮೊದಲ ಧಾರಾವಾಹಿಯಲ್ಲೇ ಹಠಮಾರಿ ಹುಡುಗಿಯ ಪಾತ್ರ ಮಾಡಿದ್ದ ರಕ್ಷಾ, ನಂತರ ಕೋಗಿಲೆ ಧಾರಾವಾಹಿಯಲ್ಲಿ ಅಭಿನಯಿಸಿದರು. 'ಮಿಲನಾ' ಧಾರಾವಾಹಿಯ ಐಶ್ವರ್ಯ ಆಗಿ ನಟಿಸಿದ ಈಕೆಗೆ ಆ ಪಾತ್ರ ಜನಪ್ರಿಯತೆ ತಂದುಕೊಟ್ಟಿತು. ಮಾತ್ರವಲ್ಲ ಉತ್ತಮ ಅಭಿನಯ ಪ್ರಶಸ್ತಿಯನ್ನು ಕೂಡಾ ತಮ್ಮ ಮುಡಿಗೇರಿಸಿಕೊಂಡರು.
ಚೆಲುವೆ, ಹರಹರ ಮಹಾದೇವ ಪೌರಾಣಿಕ ಧಾರಾವಾಹಿಯಲ್ಲಿ ಮಧುರೈ ಮೀನಾಕ್ಷಿಯಾಗಿ ಬಣ್ಣ ಹಚ್ಚಿದ ರಕ್ಷಾ, ಕಡಿಮೆ ಅವಧಿಯಲ್ಲಿ ಜನರ ಮನ ಸೆಳೆದರು. ಅದೇ ಕಾರಣದಿಂದ ಪಾತ್ರ ಸಣ್ಣದಾಗಿದ್ದರೂ ವೀಕ್ಷಕರ ಮನದಲ್ಲಿ ಶಾಶ್ವತ ಸ್ಥಾನ ಪಡೆದಿದ್ದರು ರಕ್ಷಾ. ಮಿಲನ ಧಾರಾವಾಹಿ ನಂತರ ಕನ್ನಡ ಧಾರಾವಾಹಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳದ ರಕ್ಷಾ, ತೆಲುಗು ಕಿರುತೆರೆಯಲ್ಲಿ ಬ್ಯುಸಿಯಾದರು. ತೆಲುಗಿನ 'ಪುಟ್ಟಿಂಟಿ ಪಟ್ಟು ಚೀರ' ಧಾರಾವಾಹಿಯಲ್ಲಿ ಗೋಧಾವರಿ ಎಂಬ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ರಕ್ಷಾ ಅಲ್ಲಿಂದ ತಮಿಳು ಕಿರುತೆರೆಗೂ ಹೋದರು.
ಆರಂಭ ತಮಿಳಿನ 'ಕಡವುಳ್ ಮುರುಘನ್' ಧಾರಾವಾಹಿಯಲ್ಲಿ ರಕ್ಷಾ ಅಜಮುಖಿಯಾಗಿ ಗಮನ ಸೆಳೆದರು. ಅದು ನೆಗೆಟಿವ್ ಪಾತ್ರ. ರಾಕ್ಷಸಿಯಾಗಿ ತಮಿಳು ಕಿರುತೆರೆಯಲ್ಲಿ ಕಾಣಿಸಿಕೊಂಡ ರಕ್ಷಾ ಅಲ್ಲೂ ಯಶಸ್ವಿಯಾದರು. ಮತ್ತೊಂದು ತಮಿಳು ಧಾರಾವಾಹಿ, 'ನಾಮ್ ಇರುವರ್ ನಮಕ್ ಇರುವರ್' ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ರಕ್ಷಾ ನಟಿಸಿದ್ದಾರೆ.
ಅಷ್ಟರಲ್ಲಿ ಆಕೆಗೆ ಮತ್ತೆ ಕನ್ನಡ ಕಿರುತೆರೆಯಿಂದ ಆಫರ್ ಬಂದಿತು. ಅದನ್ನು ಒಲ್ಲೆ ಎನ್ನದ ಚೆಲುವೆ ಇತ್ತ ಬಂದರು. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಬಯಸದೆ ಬಳಿ ಬಂದೆ' ಧಾರಾವಾಹಿಯಲ್ಲಿ ನಾಯಕಿ ಕಾವ್ಯಾ ಆಗಿ ಅಭಿನಯಿಸಿದ್ದ ರಕ್ಷಾಗೆ ಸೀರಿಯಲ್ ಆಗಲಿ, ಸಿನಿಮಾ ಆಗಲಿ ಯಾವಾಗಲೂ ಅಭಿನಯಿಸುತ್ತಲೇ ಇರಬೇಕು ಎಂಬ ಆಸೆಯಂತೆ.