Don't Miss!
- News ಆಕ್ಸಿಸ್ ಬ್ಯಾಂಕ್ಗೆ ಬರೋಬ್ಬರಿ 7,129 ಕೋಟಿ ರೂಪಾಯಿ ಲಾಭ!
- Sports IPL 2024: ಆರ್ಸಿಬಿಗೆ ವಿರಾಟ್, ಪಾಟಿದಾರ್ ಆಸರೆ: ಹೈದರಾಬಾದ್ಗೆ ಸವಾಲಿನ ಟಾರ್ಗೆಟ್
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವರ್ಷ ಪೂರೈಸಿದ ಕಸ್ತೂರಿ ನ್ಯೂಸ್, ನೀವೇನಂತೀರಾ?
ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಒಡೆತನದ 'ಕಸ್ತೂರಿ ನ್ಯೂಸ್ 24' ವಾಹಿನಿ ಏನೋ ಹೊಸದನ್ನು ಕೊಡುತ್ತದೆ ಎಂದು ನಿರೀಕ್ಷಿಸಿದ್ದ ವೀಕ್ಷಕರಿಗೆ ಭಾರಿ ಆಘಾತವನ್ನೇ ನೀಡಿದೆ. ವಿಭಿನ್ನ ಸುದ್ದಿಗಳಿಗಾಗಿ ಹಂಬಲಿಸುತ್ತಿದ್ದ ವೀಕ್ಷಕ ಬಳಗಕ್ಕೆ ತೀವ್ರ ನಿರಾಸೆ ಮೂಡಿಸಿದ್ದಂತೂ ನಿಜ.
"ಮುಕ್ತ ನಿರ್ಭೀತ ನ್ಯಾಯಸಮ್ಮತ" ಎಂಬ ಧ್ಯೇಯವಾಕ್ಯದೊಂದಿಗೆ ಆರಂಭವಾದ ಕಸ್ತೂರಿ ನ್ಯೂಸ್ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನಾಡಿನ ಗಣ್ಯರಿಂದ ಶುಭಹಾರೈಕೆಗಳ ಮಹಾಪೂರವೇ ಹರಿದುಬರುತ್ತಿದೆ. ಈ ವರ್ಷ ಟಿಆರ್ ಪಿ ರೇಟಿಂಗ್ ನಲ್ಲಿ ಕಸ್ತೂರಿ ಗಮನಾರ್ಹ ಸಾಧನೆಯೇನು ದಾಖಲಿಸಿಲ್ಲದಿರುವುದು ಮತ್ತೊಂದು ನಿರಾಶಾದಾಯಕ ಸಂಗತಿ.
ಕಸ್ತೂರಿ ನ್ಯೂಸ್ ವಾಹಿನಿಯನ್ನು ನೋಡಿದರೆ ಕ್ರಿಯೇಟೀವ್ ಹೆಡ್ ಗಳು, ಸಮರ್ಥ ಸಂಪಾದಕೀಯ ಬಳಗ, ನುರಿತ ತಂತ್ರಜ್ಞರ ಕೊರತೆ ಎದುರಿಸುತ್ತಿದೆ ಎಂಬ ಸಂದೇಹ ಬರುತ್ತದೆ. ಇನ್ನೂ ಒಂದು ವರ್ಷದ ಕೂಸಾಗಿರುವ 'ಕಸ್ತೂರಿ ನ್ಯೂಸ್' ಮುಂಬರುವ ದಿನಗಳಲ್ಲಿ ಕನ್ನಡಿಗರ ಮನ ಗೆದ್ದೇಗೆಲ್ಲುತ್ತೇವೆ ಎಂಬ ವಿಶ್ವಾಸದಲ್ಲಿದೆ. ಅವರ ವಿಶ್ವಾಸ ಆದಷ್ಟು ಬೇಗ ನಿಜವಾಗಲಿ ಎಂದು ಬಯಸೋಣ.
ಡಾಕ್ಟರ್ಸ್ ಕಾರ್ನರ್, ಕರ್ನಾಟಕ ಇಂದು, ಕಾಮಿಡಿ ಹಲ್ ಬಿಡಿ, ಐದೊಂದ್ಲ 5, ಇಂಡಿಯಾ ಟುಡೆ, ಗ್ರಹಣ ಗಂಡಾಂತರ, ಬೆಂಗಳೂರು ಸೆಂಟ್ರಲ್, ನಿಗೂಢ ವಿಸ್ಮಯ...ಮುಂತಾದ ಕಾರ್ಯಕ್ರಮಗಳು ದಿನೇ ದಿನೇ ವೀಕ್ಷಕರ ಬಳಗವನ್ನು ಹೆಚ್ಚಿಸಿಕೊಳ್ಳುತ್ತಿವೆ. "ಮುಕ್ತ ನಿರ್ಭೀತ ನ್ಯಾಯಸಮ್ಮತ" ಎಂಬ ಮಾತನ್ನು ಅಕ್ಷರಶಃ ಪಾಲಿಸಿದರೆ ನಿಜಕ್ಕೂ ಕಸ್ತೂರಿ ನ್ಯೂಸ್ ಗಮನಾರ್ಹ ಸಾಧನೆ ದಾಖಲಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ನೀವೇನಂತೀರಾ? (ಒನ್ಇಂಡಿಯಾ ಕನ್ನಡ)