Don't Miss!
- News ಕಾಂಗ್ರೆಸ್ ನೇತೃತ್ವದ ಒಕ್ಕೂಟಕ್ಕೆ ನಾಯಕನೇ ಇಲ್ಲ: ಪ್ರಧಾನಿ ಮೋದಿ!
- Sports IPL 2024: ಹೈದರಾಬಾದ್-ಡೆಲ್ಲಿ ನಡುವೆ ಮೆಗಾ ಫೈಟ್; ಟಾಸ್, ಆಡುವ 11ರ ಬಳಗದ ವರದಿ
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಿರುತೆರೆಯಲ್ಲಿ ಬರ್ತಿದೆ 'ಕಸ್ತೂರಿ ನಿವಾಸ' ಧಾರಾವಾಹಿ
ಕಸ್ತೂರಿ ನಿವಾಸ ಎಂದ ತಕ್ಷಣ ಡಾ ರಾಜ್ ಕುಮಾರ್ ಸಿನಿಮಾ ನೆನಪಿಗೆ ಬರುತ್ತಿದೆ. ಈಗ ಇದೇ ಹೆಸರಿನಲ್ಲಿ ಧಾರಾವಾಹಿ ಬರುತ್ತಿದೆ. ಒಂದು ವಿನೂತನ ವಿಚಾರದ ಕುರಿತು 'ಕಸ್ತೂರಿ ನಿವಾಸ' ಎಂಬ ಹೊಸ ಧಾರಾವಾಹಿಯನ್ನು ಉದಯ ಟಿವಿ ಇದೇ ಸೆಪ್ಟೆಂಬರ್ 9 ರಿಂದ ಸೋಮವಾರದಿಂದ ಶನಿವಾರದವರೆಗೆ ಸಂಜೆ 6.30ಕ್ಕೆ ಪ್ರಾರಂಬಿಸುತ್ತಿದೆ.
ಈಗಾಗಲೇ ನಂದಿನಿ, ಕಾವೇರಿ, ನಾಯಕಿ, ಕ್ಷಮಾ, ನಾನು ನನ್ನ ಕನಸು ಎಂಬ ವಿಭಿನ್ನ ಕಥೆಗಳ ಧಾರಾವಾಹಿಗಳನ್ನು ನೀಡುತ್ತಾ ಬಂದಿರುವ ಉದಯ ಟಿವಿ ಈಗ ಮತ್ತೊಂದು ವಿನೂತನ ಕಥೆಯ 'ಕಸ್ತೂರಿ ನಿವಾಸ'ಎಂಬ ಧಾರಾವಾಹಿಯನ್ನು ಪ್ರಾರಂಬಿಸುತ್ತಿದೆ. ಮನೆತನ, ಸಂಪ್ರಾದಾಯ , ಸಂಸ್ಕೃತಿ ಅಂತ ನಂಬಿರೋ ಪಾರ್ವತಿ ಒಂದ್ಕಡೆ ಆದ್ರೆ, ಕಟ್ಟು ಪಾಡುಗಳಲ್ಲಿ ನಂಬಿಕೆ ಇಲ್ಲದೆ, ಹಕ್ಕಿಯಂತೆ ಹಾರಾಡಬೇಕು ಅನ್ನೋ ಮೃದುಲಾ ಇನ್ನೋಂದ್ಕಡೆ. ಈ ಬೇರೆ ಬೇರೆ ಆಲೋಚನೆಗಳಿರೋ ಈ ಇಬ್ಬರನ್ನ ವಿಧಿ ಒಂದೆ ದಾರಿಯಲ್ಲಿ ನೆಡೆಯೋ ಹಾಗೆ ಮಾಡಿದರೆ ಹೇಗಿರುತ್ತದೆ ಎಂಬುದೆ ಈ ಧಾರಾವಾಹಿಯ ಕಥಾ ಹಂದರ.
'ಬಿಗ್ ಬಾಸ್' ವಿರುದ್ಧ ತಿರುಗಿಬಿದ್ದ ನಟಿ ಮೇಲೆ ಕೇಸ್ ದಾಖಲು
ಹಿಂದಿನ ಕಾಲದ ಆಲೋಚನೆಗಲಿಗೆ ಆಧುನಿಕತೆಯನ್ನು ಅಳವಡಿಸಿಕೊಂಡು ನಡೆಯುವದರಲ್ಲಿ ತಪ್ಪೇನಿದೆ ಎಂಬ ವಾದ ಧಾರಾವಾಹಿಯ ನಾಯಕಿ ಮೃದಲಾಳವಾದವಾದರೆ, ಹೆಣ್ಣು ಅಡುಗೆ ಮಾಡಬೇಕು, ತಗ್ಗಿ ಬಗ್ಗಿ ನಡೆಯಲೇಬೇಕು, ಮೈ ಮುಚ್ಚುವ ಹಾಗೆ ಉಡುಗೆ ತೊಡುಗೆಗಳನ್ನ ಧರಿಸ ಬೇಕು ಎಂಬುದು ಪಾರ್ವತಿಯವಾದ. ಇವರುಗಳ ಮಧ್ಯೆ ತನ್ನ ಅಮ್ಮನ ಮಾತನ್ನು ಮೀರೋಕಾಗ್ದೆ, ಫ್ಯಾಶನ್ ಡಿಸೈನರ್ ಆಗೋ ಕನಸು ಕಾಣ್ತಿರೋ ನಾಯಕ ತನ್ನ ಮನಸ್ಸಿನ ಮಾತನ್ನು ಧಿಕ್ಕರಿಸೊಕೆ ಆಗ್ದೆ ಒದ್ದಾಡ್ತಿರೋ ಕಥೆ 'ಕಸ್ತೂರಿ ನಿವಾಸ' ಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದಾರೆ ಮುಸ್ಸಂಜೆ ಮಹೇಶ್.
ನಾಯಕಿ ಮೃದಲಾ ಪಾತ್ರವನ್ನು ನಟಿ ವರ್ಷಾ ಮಾಡುತ್ತಿದ್ದಾರೆ. ಕಿರುತೆರೆ ಮತ್ತು ಹಿರಿತೆರೆಯ ಹೆಸರಾಂತ ನಟಿ ಆಶಾ ರಾಣಿ ಪಾರ್ವತಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ನಾಯಕ ನಟನಾಗಿ ದೀಲಿಪ್ ಶೆಟ್ಟಿ ಅಭಿನಯಿಸುತ್ತಿದ್ದಾರೆ. ಹಾಗೆಯೇ ಅಕ್ಷತಾ ದಿವಟೆ, ರಾಜಗೋಪಾಲ ಜೋಶಿ, ರುತು, ಶಿಲಶ್ರೀ, ಸಿತಾರಾ ಹೀಗೆ ಹಲವಾರು ಪ್ರತಿಭಾವಂತ ಕಲಾವಿದರ ತಂಡು ಈ ಧಾರಾವಾಹಿಯಲ್ಲಿದೆ.
ಬಹುಮುಖ್ಯ ಬದಲಾವಣೆ ಜೊತೆ ಬರ್ತಿದೆ 'ಬಿಗ್ ಬಾಸ್ ಕನ್ನಡ-7'
ದೇವಿ ಸ್ಟುಡಿಯೋಸ್ ಈ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದೆ. ಕಿರುತೆರೆಯ ಜನಪ್ರಿಯ ನಟಿ ಜಯಶ್ರೀ ಈ ಧಾರಾವಾಹಿಯನ್ನ ಉದಯ ಟಿವಿಯ ವೀಕ್ಷಕರಿಗೆ ಅರ್ಪಿಸುತ್ತಿದ್ದಾರೆ. ಮಾಣಿ ಛಾಯಾಗ್ರಹಣ ಮಾಡುತ್ತಿದ್ದಾರೆ. 'ಕಸ್ತೂರಿ ನಿವಾಸ' ಉದಯ ಟಿವಿಯಲ್ಲಿ ಇದೇ ಸೆಪ್ಟಂಬರ್ 09 ರಿಂದ ಸಂಜೆ 6.30ಕ್ಕೆ ಪ್ರಸಾರವಾಗಲಿದೆ.