Don't Miss!
- News
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರ ನಕಲಿ ಎಂದ ಸಿದ್ದರಾಮಯ್ಯ.! ಆ ಪತ್ರದಲ್ಲಿ ಏನಿದೆ.?
- Sports
IND-W vs SA-W T20 Tri-series Final: ಭಾರತ ವನಿತೆಯರ ವಿರುದ್ಧ ದಕ್ಷಿಣ ಆಫ್ರಿಕಾಗೆ ಜಯ
- Lifestyle
ಮಗುವಿಗೆ ತುಂಬಾ ಜ್ವರ ಇದ್ದಾಗ ಏನು ಮಾಡಬೇಕು?
- Finance
6 ತಿಂಗಳಲ್ಲಿ 2ನೇ ಬಾರಿಗೆ ಉದ್ಯೋಗಿಗಳನ್ನು ವಜಾಗೊಳಿಸಿದ Byju's: ಈ ಬಾರಿ ಎಷ್ಟು ನೌಕರರು?
- Automobiles
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Katheyondu Shuruvagide:ಹಸೆಮಣೆಯಲ್ಲಿ ಕೂತು ಯುವ ಕನಸು: ಕಾರಲ್ಲಿ ಕೂತ ಸಾಮ್ರಾಟ್ಗೆ ಖುಷಿ !
ಸಾಮ್ರಾಟ್ ಬಹಳ ಚಾಲಾಕಿ ಆಟ ಆಡುತ್ತಿದ್ದಾನೆ. ತನಗೇನೋ ವರ್ಣಿಕಾ ಮೇಲೆ ಬಹಳ ಪ್ರೀತಿ ಇದೆ ಎಂಬಂತೆ ಅವಳ ಮುಂದೆ ಶೋ ಮಾಡಿ, ಮಾಡಿನೇ ಅವಳನ್ನು ಮದುವೆ ಮನೆಯಿಂದ ಓಡಿಸಿಕೊಂಡು ಬಂದಿದ್ದಾನೆ. ಈಗ ಮದುವೆಯಾಗುವ ವಿಚಾರಕ್ಕೂ ಅವಳನ್ನು ಯಾಮಾರಿಸುತ್ತಾ ಇದ್ದಾನೆ.
ಮದುವೆ ಮನೆಯಲ್ಲಿ ಎಲ್ಲವೂ ಅಂದುಕೊಂಡಂತೆ ನಡೆಯುತ್ತಿಲ್ಲ. ಎಲ್ಲರಿಗೂ ಏನೋ ಒಂಥರ ಗಾಬರಿ. ಆ ಕಡೆ ಅಕ್ಕನನ್ನು ಹಸೆಮಣೆ ಮೇಲೆ ಕೂರಿಸಿ, ಮುಹೂರ್ತ ಮೀರುವುದರ ಒಳಗೆ ವರ್ಣಿಕಾಳನ್ನು ಕರೆ ತರುತ್ತೀನಿ ಅಂತ ಸಹನಾ, ಹುಡುಕಾಟ ನಡೆಸುತ್ತಿದ್ದಾಳೆ. ಆದರೆ ಆ ಪ್ರಯತ್ನ ವ್ಯರ್ಥವಾಗಿದೆ. ಯುವರಾಜ್, ಕೃತಿಗೆ ತಾಳಿ ಕಟ್ಟಿ ಆಗಿದೆ.
Bettada
Hoo:ಹೂವಿ
ಮದುವೆ
ಸತ್ಯ
ತಿಳೀತು
:
ಗಂಡನನ್ನು
ಬಚ್ಚಿಡೋದು
ಹೇಗೆ
?

ಕೃತಿ ತಂದೆಗೆ ಸತ್ಯ ತಿಳಿದೇ ಬಿಡ್ತು
ಪುಷ್ಪ ಸಂಪ್ರದಾಯ, ಅದು ಇದು ಅಂತ ಹೇಳಿ ಮದುಮಗಳ ಮುಖ ಕಾಣದಂತೆ ಮಾಡಿ, ಹಸೆಮಣೆ ಮೇಲೆ ಕೂರಿಸಿದಾಗಲೇ, ಮನೆಯವರಿಗೆಲ್ಲಾ ಅನುಮಾನ ಮೂಡಿದೆ. ಕಡೆಗೂ ಪುಷ್ಪಾಳನ್ನು ಕೃತಿಯ ತಂದೆ ಪ್ರಶ್ನೆ ಮಾಡಿದ್ದಾರೆ. ಮುಚ್ಚಿಟ್ಟ ಸತ್ಯ ಏನು ಅಂತ ಹೇಳು ಎಂದು ದಬಾಯಿಸಿದಾಗ, ಪುಷ್ಪಾ ತನ್ನ ಗಂಡನ ಬಳಿ ಎಲ್ಲಾ ಸತ್ಯವನ್ನು ಒಪ್ಪಿಕೊಂಡಿದ್ದಾಳೆ. ಆಗ ಕೃತಿಯ ಜೀವನವನ್ನು ಹಾಳು ಮಾಡಲು ಬಿಡುವುದಿಲ್ಲ ಎಂದು ಸತ್ಯ ಹೇಳಲು ಹೊರಟ ಗಂಡನನ್ನು ಪುಷ್ಪಾ ತಡೆದಿದ್ದಾಳೆ. "ಈಗ ಸತ್ಯ ಹೇಳಿದರೆ ಕಷ್ಟವಾಗುತ್ತೆ. ಈ ತೀರ್ಮಾನ ಮಾಡದೆ ಹೋಗಿದ್ದರೆ ಮರ್ಯಾದೆ ಹೋಗುತ್ತಾ ಇತ್ತು" ಎಂದು ಸಮಾಧಾನ ಮಾಡಿದ್ದಾಳೆ.

ಯುವರಾಜ್ಗೆ ಕನಸು.. ಕೃತಿಗೆ ಹಿಂಸೆ..!
ಕೃತಿಯನ್ನು ಅಪ್ಪ ಅಮ್ಮ ಕನ್ಯಾದಾನ ಮಾಡಿಕೊಟ್ಟಾಯ್ತು. ಮುಂದಿನ ಶಾಸ್ತ್ರ ತಾಳಿ ಕಟ್ಟುವುದು. ಈ ಸುಸಂದರ್ಭಕ್ಕಾಗಿ ಯುವರಾಜ್ ತುಂಬಾನೇ ಕಾಯುತ್ತಾ ಇದ್ದ. ಆದರೆ ಪಕ್ಕದಲ್ಲಿರುವುದು ವರ್ಣಿಕಾ ಎಂದೇ ನಂಬಿದ್ದಾನೆ. ಹೀಗಾಗಿ ತನ್ನೆಲ್ಲಾ ಕನಸುಗಳನ್ನು ಹಸೆಮಣೆ ಮೇಲೆ ಕೂತು ಹೇಳುತ್ತಿದ್ದಾನೆ. "ನಾನು ಅವತ್ತು ಹೇಳಿದ್ದೆ, ನಿನ್ನ ಜೊತೆಗೆ ಹೀಗೆ ಕುಳಿತುಕೊಳ್ಳುತ್ತೇನೆ. ನಿನ್ನನ್ನು ಮದುವೆಯಾಗುತ್ತೇನೆ ಎಂದು" ಅಂತ ಸಂತಸ ವ್ಯಕ್ತಪಡಿಸಿದ್ದಾನೆ.

ಮೀಡಿಯಾದವರನ್ನು ಕರೆಸಿದ್ದು ಸಾಮ್ರಾಟ್
ಸಾಮ್ರಾಟ್ ಕೇವಲ ಅಣ್ಣನಿಗೆ ಸಿಗುವ ಎಲ್ಲಾ ವಸ್ತು, ವ್ಯಕ್ತಿ ತನಗೆ ಮೊದಲು ಸಿಗಬೇಕೆಂದು ಬಯಸುತ್ತಾನೆ. ಅದಕ್ಕಾಗಿಯೇ ವರ್ಷಿಕಾಳನ್ನು ಪ್ರೀತಿ ಮಾಡಿ, ಮದುವೆ ಮನೆಯಿಂದ ಓಡಿಸಿಕೊಂಡು ಹೋಗಿದ್ದಾನೆ ಎಂದುಕೊಂಡೆವು. ಆದರೆ ಮದುವೆ ಮನೆಯಲ್ಲಿ ನಡೆಯುವ ಅವಾಂತರವನ್ನೆಲ್ಲಾ ಟೆಲಿಕಾಸ್ಟ್ ಮಾಡಲು ಮೀಡಿಯಾದವರನ್ನು ಇದೇ ಸಾಮ್ರಾಟ್ ಕಳುಹಿಸಿದ್ದಾನೆ. ಮದುವೆಯ ಹೆಣ್ಣು ಹಸೆಮಣೆ ಮೇಲೆ ಇರುವುದಿಲ್ಲ ಎಂದು ಸುದ್ದಿಕೊಟ್ಟಿದ್ದ ಸಾಮ್ರಾಟ್. ಆದ್ರೆ ಅದೆಲ್ಲವೂ ಉಲ್ಟಾ ಆಗಿದೆ. ಇದನ್ನ ಸಾಮ್ರಾಟ್ಗೆ ತಿಳಿಸಲು ಕಾಲ್ ಮಾಡಿದ್ರೆ ಕರೆಗೆ ನೋ ರೆಸ್ಪಾನ್ಸ್.

ಸಾಮ್ರಾಟ್ ಪ್ಲ್ಯಾನ್ ಆದರೂ ಏನು..?
ವರ್ಣಿಕಾ, ಸಾಮ್ರಾಟ್ ನನ್ನು ಸಂಪೂರ್ಣವಾಗಿ ನಂಬಿ ಬಂದಿದ್ದಾಳೆ. ಅವನಿಗಾಗಿ ಫ್ಯೂಚರ್ ಪ್ಲ್ಯಾನ್ ಅಂತ ಒಡವೆ, ಸೀರೆಯನ್ನೆಲ್ಲಾ ಒತ್ತುಕೊಂಡು ಬಂದಿದ್ದಾಳೆ. ಅದನ್ನು ಸಾಮ್ರಾಟ್ಗೆ ಕೂಡ ಹೇಳಿದ್ದಾಳೆ. ಆಗ ಸಾಮ್ರಾಟ್ ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆದ ಖುಷಿಯಲ್ಲಿದ್ದಾನೆ. ತಾನು ಒಡವೆಯನ್ನೆಲ್ಲಾ ಎತ್ತಿಕೊಂಡು ಹೋಗಬೇಕು ಎಂಬ ಪ್ಲ್ಯಾನ್ ಮಾಡಿದ್ದಾನೆ. ವರ್ಣಿಕಾ ಮದುವೆ ಬಗ್ಗೆ ಕೇಳಿದಾಗ, "ನನ್ನ ಡ್ರೀಮ್ ದೊಡ್ಡದು. ನಿನ್ನನ್ನು ಗ್ರ್ಯಾಂಡ್ ಆಗಿ ಎಲ್ಲರಿಗೂ ಪರಿಚಯ ಮಾಡಿಕೊಡಬೇಕು. ಮೊದಲು ಎಲ್ಲಾ ತಣ್ಣಗಾಗಲಿ. ಬಳಿಕ ಬಂದು ಎಲ್ಲರೊಟ್ಟಿಗೆ ಸತ್ಯ ಹೇಳೋಣಾ. ಆಗ ಎಲ್ಲ ಒಪ್ಪಿಕೊಳ್ಳುತ್ತಾರೆ ಅಂತ" ಸುಳ್ಳು ಹೇಳಿ ಯಾಮಾರಿಸಿದ್ದಾನೆ.