Don't Miss!
- News Mallikarjun Kharge: ಕಲಬುರಗಿ ಲೋಕಸಭಾ ಕ್ಷೇತ್ರ; ಅಳಿಯನ ಕಾಳಗದಲ್ಲಿ ಮಲ್ಲಿಕಾರ್ಜುನ ಖರ್ಗೆ ಪ್ರತಿಷ್ಠೆ
- Sports T20 World Cup 2024: ವೀರೇಂದ್ರ ಸೆಹ್ವಾಗ್ ಆಯ್ಕೆಯ ಭಾರತ ತಂಡದಲ್ಲಿ ಪ್ರಮುಖ ಆಟಗಾರರಿಗೆ ಸ್ಥಾನವಿಲ್ಲ!
- Technology Realme: ರಿಯಲ್ಮಿ ನಾರ್ಜೋ 70 5G, ನಾರ್ಜೋ 70x 5G ಸ್ಮಾರ್ಟ್ಫೋನ್ ಲಾಂಚ್! ಸಖತ್ ಫೀಚರ್ಸ್... ಬೆಲೆ ಎಷ್ಟು?
- Automobiles ಮೇಡ್ ಇನ್ ಇಂಡಿಯಾ ಈ ಕಾರಿಗೆ ಜಪಾನ್ನಲ್ಲಿ ಭಾರೀ ಬೇಡಿಕೆ: ವಿಶ್ವಗುರು ಭಾರತಕ್ಕೆ ಎಲ್ಲವೂ ಸಾಧ್ಯ!
- Lifestyle ವಿಕಲಚೇತನರಿಗೆ ಸ್ಕೂಟಿ ಗಿಫ್ಟ್..! ಮನೆ ಕಟ್ಟಿಕೊಡುವ ಭರವಸೆ ನೀಡಿದ ನಟ ಲಾರೆನ್ಸ್..!
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
Katheyondu Shuruvagide:ಹಸೆಮಣೆಯಲ್ಲಿ ಕೂತು ಯುವ ಕನಸು: ಕಾರಲ್ಲಿ ಕೂತ ಸಾಮ್ರಾಟ್ಗೆ ಖುಷಿ !
ಸಾಮ್ರಾಟ್ ಬಹಳ ಚಾಲಾಕಿ ಆಟ ಆಡುತ್ತಿದ್ದಾನೆ. ತನಗೇನೋ ವರ್ಣಿಕಾ ಮೇಲೆ ಬಹಳ ಪ್ರೀತಿ ಇದೆ ಎಂಬಂತೆ ಅವಳ ಮುಂದೆ ಶೋ ಮಾಡಿ, ಮಾಡಿನೇ ಅವಳನ್ನು ಮದುವೆ ಮನೆಯಿಂದ ಓಡಿಸಿಕೊಂಡು ಬಂದಿದ್ದಾನೆ. ಈಗ ಮದುವೆಯಾಗುವ ವಿಚಾರಕ್ಕೂ ಅವಳನ್ನು ಯಾಮಾರಿಸುತ್ತಾ ಇದ್ದಾನೆ.
ಮದುವೆ ಮನೆಯಲ್ಲಿ ಎಲ್ಲವೂ ಅಂದುಕೊಂಡಂತೆ ನಡೆಯುತ್ತಿಲ್ಲ. ಎಲ್ಲರಿಗೂ ಏನೋ ಒಂಥರ ಗಾಬರಿ. ಆ ಕಡೆ ಅಕ್ಕನನ್ನು ಹಸೆಮಣೆ ಮೇಲೆ ಕೂರಿಸಿ, ಮುಹೂರ್ತ ಮೀರುವುದರ ಒಳಗೆ ವರ್ಣಿಕಾಳನ್ನು ಕರೆ ತರುತ್ತೀನಿ ಅಂತ ಸಹನಾ, ಹುಡುಕಾಟ ನಡೆಸುತ್ತಿದ್ದಾಳೆ. ಆದರೆ ಆ ಪ್ರಯತ್ನ ವ್ಯರ್ಥವಾಗಿದೆ. ಯುವರಾಜ್, ಕೃತಿಗೆ ತಾಳಿ ಕಟ್ಟಿ ಆಗಿದೆ.
Bettada Hoo:ಹೂವಿ ಮದುವೆ ಸತ್ಯ ತಿಳೀತು : ಗಂಡನನ್ನು ಬಚ್ಚಿಡೋದು ಹೇಗೆ ?
ಕೃತಿ ತಂದೆಗೆ ಸತ್ಯ ತಿಳಿದೇ ಬಿಡ್ತು
ಪುಷ್ಪ ಸಂಪ್ರದಾಯ, ಅದು ಇದು ಅಂತ ಹೇಳಿ ಮದುಮಗಳ ಮುಖ ಕಾಣದಂತೆ ಮಾಡಿ, ಹಸೆಮಣೆ ಮೇಲೆ ಕೂರಿಸಿದಾಗಲೇ, ಮನೆಯವರಿಗೆಲ್ಲಾ ಅನುಮಾನ ಮೂಡಿದೆ. ಕಡೆಗೂ ಪುಷ್ಪಾಳನ್ನು ಕೃತಿಯ ತಂದೆ ಪ್ರಶ್ನೆ ಮಾಡಿದ್ದಾರೆ. ಮುಚ್ಚಿಟ್ಟ ಸತ್ಯ ಏನು ಅಂತ ಹೇಳು ಎಂದು ದಬಾಯಿಸಿದಾಗ, ಪುಷ್ಪಾ ತನ್ನ ಗಂಡನ ಬಳಿ ಎಲ್ಲಾ ಸತ್ಯವನ್ನು ಒಪ್ಪಿಕೊಂಡಿದ್ದಾಳೆ. ಆಗ ಕೃತಿಯ ಜೀವನವನ್ನು ಹಾಳು ಮಾಡಲು ಬಿಡುವುದಿಲ್ಲ ಎಂದು ಸತ್ಯ ಹೇಳಲು ಹೊರಟ ಗಂಡನನ್ನು ಪುಷ್ಪಾ ತಡೆದಿದ್ದಾಳೆ. "ಈಗ ಸತ್ಯ ಹೇಳಿದರೆ ಕಷ್ಟವಾಗುತ್ತೆ. ಈ ತೀರ್ಮಾನ ಮಾಡದೆ ಹೋಗಿದ್ದರೆ ಮರ್ಯಾದೆ ಹೋಗುತ್ತಾ ಇತ್ತು" ಎಂದು ಸಮಾಧಾನ ಮಾಡಿದ್ದಾಳೆ.
ಯುವರಾಜ್ಗೆ ಕನಸು.. ಕೃತಿಗೆ ಹಿಂಸೆ..!
ಕೃತಿಯನ್ನು ಅಪ್ಪ ಅಮ್ಮ ಕನ್ಯಾದಾನ ಮಾಡಿಕೊಟ್ಟಾಯ್ತು. ಮುಂದಿನ ಶಾಸ್ತ್ರ ತಾಳಿ ಕಟ್ಟುವುದು. ಈ ಸುಸಂದರ್ಭಕ್ಕಾಗಿ ಯುವರಾಜ್ ತುಂಬಾನೇ ಕಾಯುತ್ತಾ ಇದ್ದ. ಆದರೆ ಪಕ್ಕದಲ್ಲಿರುವುದು ವರ್ಣಿಕಾ ಎಂದೇ ನಂಬಿದ್ದಾನೆ. ಹೀಗಾಗಿ ತನ್ನೆಲ್ಲಾ ಕನಸುಗಳನ್ನು ಹಸೆಮಣೆ ಮೇಲೆ ಕೂತು ಹೇಳುತ್ತಿದ್ದಾನೆ. "ನಾನು ಅವತ್ತು ಹೇಳಿದ್ದೆ, ನಿನ್ನ ಜೊತೆಗೆ ಹೀಗೆ ಕುಳಿತುಕೊಳ್ಳುತ್ತೇನೆ. ನಿನ್ನನ್ನು ಮದುವೆಯಾಗುತ್ತೇನೆ ಎಂದು" ಅಂತ ಸಂತಸ ವ್ಯಕ್ತಪಡಿಸಿದ್ದಾನೆ.
ಮೀಡಿಯಾದವರನ್ನು ಕರೆಸಿದ್ದು ಸಾಮ್ರಾಟ್
ಸಾಮ್ರಾಟ್ ಕೇವಲ ಅಣ್ಣನಿಗೆ ಸಿಗುವ ಎಲ್ಲಾ ವಸ್ತು, ವ್ಯಕ್ತಿ ತನಗೆ ಮೊದಲು ಸಿಗಬೇಕೆಂದು ಬಯಸುತ್ತಾನೆ. ಅದಕ್ಕಾಗಿಯೇ ವರ್ಷಿಕಾಳನ್ನು ಪ್ರೀತಿ ಮಾಡಿ, ಮದುವೆ ಮನೆಯಿಂದ ಓಡಿಸಿಕೊಂಡು ಹೋಗಿದ್ದಾನೆ ಎಂದುಕೊಂಡೆವು. ಆದರೆ ಮದುವೆ ಮನೆಯಲ್ಲಿ ನಡೆಯುವ ಅವಾಂತರವನ್ನೆಲ್ಲಾ ಟೆಲಿಕಾಸ್ಟ್ ಮಾಡಲು ಮೀಡಿಯಾದವರನ್ನು ಇದೇ ಸಾಮ್ರಾಟ್ ಕಳುಹಿಸಿದ್ದಾನೆ. ಮದುವೆಯ ಹೆಣ್ಣು ಹಸೆಮಣೆ ಮೇಲೆ ಇರುವುದಿಲ್ಲ ಎಂದು ಸುದ್ದಿಕೊಟ್ಟಿದ್ದ ಸಾಮ್ರಾಟ್. ಆದ್ರೆ ಅದೆಲ್ಲವೂ ಉಲ್ಟಾ ಆಗಿದೆ. ಇದನ್ನ ಸಾಮ್ರಾಟ್ಗೆ ತಿಳಿಸಲು ಕಾಲ್ ಮಾಡಿದ್ರೆ ಕರೆಗೆ ನೋ ರೆಸ್ಪಾನ್ಸ್.
ಸಾಮ್ರಾಟ್ ಪ್ಲ್ಯಾನ್ ಆದರೂ ಏನು..?
ವರ್ಣಿಕಾ, ಸಾಮ್ರಾಟ್ ನನ್ನು ಸಂಪೂರ್ಣವಾಗಿ ನಂಬಿ ಬಂದಿದ್ದಾಳೆ. ಅವನಿಗಾಗಿ ಫ್ಯೂಚರ್ ಪ್ಲ್ಯಾನ್ ಅಂತ ಒಡವೆ, ಸೀರೆಯನ್ನೆಲ್ಲಾ ಒತ್ತುಕೊಂಡು ಬಂದಿದ್ದಾಳೆ. ಅದನ್ನು ಸಾಮ್ರಾಟ್ಗೆ ಕೂಡ ಹೇಳಿದ್ದಾಳೆ. ಆಗ ಸಾಮ್ರಾಟ್ ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆದ ಖುಷಿಯಲ್ಲಿದ್ದಾನೆ. ತಾನು ಒಡವೆಯನ್ನೆಲ್ಲಾ ಎತ್ತಿಕೊಂಡು ಹೋಗಬೇಕು ಎಂಬ ಪ್ಲ್ಯಾನ್ ಮಾಡಿದ್ದಾನೆ. ವರ್ಣಿಕಾ ಮದುವೆ ಬಗ್ಗೆ ಕೇಳಿದಾಗ, "ನನ್ನ ಡ್ರೀಮ್ ದೊಡ್ಡದು. ನಿನ್ನನ್ನು ಗ್ರ್ಯಾಂಡ್ ಆಗಿ ಎಲ್ಲರಿಗೂ ಪರಿಚಯ ಮಾಡಿಕೊಡಬೇಕು. ಮೊದಲು ಎಲ್ಲಾ ತಣ್ಣಗಾಗಲಿ. ಬಳಿಕ ಬಂದು ಎಲ್ಲರೊಟ್ಟಿಗೆ ಸತ್ಯ ಹೇಳೋಣಾ. ಆಗ ಎಲ್ಲ ಒಪ್ಪಿಕೊಳ್ಳುತ್ತಾರೆ ಅಂತ" ಸುಳ್ಳು ಹೇಳಿ ಯಾಮಾರಿಸಿದ್ದಾನೆ.